ಒಂದು ರೂ.ಗೆ ಒಂದು ಇಡ್ಲಿ ಹತ್ತು ರೂ.ಗೆ ಚಿತ್ರಾನ್ನ !


Team Udayavani, Sep 10, 2018, 9:23 PM IST

11.jpg

ಹುಣಸೂರಿಗೆ ಬಂದರೆ ಒಂಟೆ ಪಾಳ್ಯಬೋರೆ ಅನ್ನೋ ಏರಿಯಾ ಕಡೆ ಹೋಗುವುದನ್ನು ಮರೆಯಬೇಡಿ. ಏಕೆಂದರೆ ಇಲ್ಲಿ ಬಿಸಿ ಬಿಸಿ ಇಡ್ಲಿ ಸಿಗುತ್ತದೆ. 

ಹೆಸರು ಸಾವಿತ್ರಮ್ಮನ ಹೋಟೆಲ್‌. ಹಾಗಂತ ಬೋಡೇìನೂ ಹಾಕಿಲ್ಲ.  ಪಟ್ಟಣದ ಜನರ ಮನಸ್ಸಲ್ಲಿ, ಬಾಯಲ್ಲೇ ಈ ಹೋಟೆಲ್‌ ಹೆಸರು ಇದೆ.  ಹೋಟೆಲ್‌ ಏನು ದೊಡ್ಡದಲ್ಲ. ಮನೆಯ ಮುಂದಿನ ರೂಮ್‌ ಅನ್ನೇ ಹೋಟೆಲ್‌ ಆಗಿ ಬದಲಿಸಿಕೊಳ್ಳಲಾಗಿದೆ.  ಈ  ಹೋಟೆಲ್‌ ತೆರೆಯುವುದು ಬೆಳಗ್ಗೆ ಐದು ಗಂಟೆಗೆ. 6-7 ಗಂಟೆಯಿಂದಲೇ ಬಿಸಿ ಬಿಸಿ ಚಿತ್ರಾನ್ನ, ವಡೆ ಕೂಡ ಸಿಗುತ್ತದೆ. ಇಡ್ಲಿಗೆ ಈ ಹೋಟೆಲಿನವರು ಕೊಡುವ ಹುರಿಗಡಲೆ ಚಟ್ನಿ ಚಂದದ ಕಾಂಬಿನೇಷನ್‌. 

ಒಂದು ಸಾರಿ ತಿಂದರೆ ಮತ್ತೆ ತಿನ್ನಬೇಕು ಅನಿಸುವಷ್ಟು ರುಚಿ ಇದೆ. ಸಾವಿತ್ರಮ್ಮನವರ ಹೋಟೆಲ್‌ ತಿಂಡಿಗಳ ಬೇಲೆ ಕೇಳಿದರೆ ಅಚ್ಚರಿಯಾಗುವುದು ಗ್ಯಾರಂಟಿ. ಕಾರಣ ಒಂದು ಇಡ್ಲಿಗೆ  ಒಂದು ರೂ. ಚಿತ್ರಾನ್ನ 10ರೂ. ಕಡಲೇ ಬೇಳೆ ವಡೆ 2ರೂ. ಇದು ಇಂದಿನ ಬೆಲೆ. ಈ ಹೋಟೆಲ್‌ ಶುರುವಾದಾಗ, ಒಂದು ಇಡ್ಲಿಗೆ 30 ಪೈಸೆ ಇತ್ತು. ಆಮೇಲೆ 50 ಪೈಸೆ ಆಯಿತು. ಈಗ ಒಂದು ರೂ.ಗೆ ಬಂದು ನಿಂತಿದೆ.  ಇಲ್ಲಿಗೆ ಬರುವ ಗ್ರಾಹಕರೂ ಕೂಡ ಹೊಟ್ಟತುಂಬ ತಿಂದು ಖುಷಿಯಿಂದಲೇ  ತೆರಳುತ್ತಾರೆ. ಏಕೆಂದರೆ, ಬೆಲೆ ಕಡಿಮೆ ಇದ್ದರೂ ತಿಂಡಿಯ ಗುಣಮಟ್ಟ ಚೆನ್ನಾಗಿದೆ.   

ಒಂಟೆಪಾಳ್ಯಬೋರೆಯ ಮಂದಿ ಮಾತ್ರವಲ್ಲದೆ, ಅಕ್ಕಪಕ್ಕದ ಬಡಾವಣೆಯವರು ಸಹ ಬೆಳಗ್ಗೆಯೇ ಇಡ್ಲಿಗಾಗಿ ಈ ಹೋಟೆಲಿನ ಮುಂದೆ  ಕ್ಯೂ ನಿಲ್ಲುತ್ತಾರೆ. ಮನೆಗಳವರೂ ಪಾರ್ಸೆಲ್‌ ಒಯ್ಯುತ್ತಾರೆ. ಇಲ್ಲಿ ಪಾರ್ಸೆಲ್‌ ಎಂದರೆ ಪೇಪರ್‌, ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಸಮಸ್ಯೆ ಕಾಡುವುದಿಲ್ಲ. ಏಕೆಂದರೆ, ಪಾರ್ಸೆಲ್‌ ಬೇಕಾದಲ್ಲಿ ಕ್ಯಾರಿಯರ್‌ ತರಲೇಬೇಕು, ಇದು ಇಲ್ಲಿನ ಪಾಲಿಸಿ.

ಇದೆಲ್ಲ ಹೇಗೆ ಸಾಧ್ಯ?
ಮೊದಲು ಸಾವಿತ್ರಮ್ಮನವರ ಬದುಕಿನ ಕಥೆ ಕೇಳಿ. ಈ ಹೋಟೆಲ್‌ ಶುರುವಾಗುವುದಕ್ಕೆ ಅವರ ಪತಿಯೇ ಕಾರಣ.  20 ವರ್ಷಗಳ ಹಿಂದೆಯೇ ಸಾವಿತ್ರಮ್ಮನವರ ಪತಿ ದೂರವಾದರು. ಅವರು ಗಾರೆ ಕೆಲಸ ಮಾಡುತ್ತಿದ್ದರು. ಈ ಕಷ್ಟದ ಸಂದರ್ಭದಲ್ಲಿ  ಸಾವಿತ್ರಮ್ಮ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳಲಿಲ್ಲ. ಹೇಗಾದರೂ ಮಾಡಿ ಬದುಕಬೇಕು ಅಂತ ಅಪ್ಪನ ಮನೆಗೆ ಬಂದರು. ಮನೆಯ ಮುಂದಿನ ರೂಮ್‌ನಲ್ಲಿ ಒಂದು ಕೈ ನೋಡೋಣ ಅಂತ ಶುರುಮಾಡಿದ್ದೇ ಈ ಹೋಟೆಲ್‌. 

ಈ ಪುಟ್ಟ ಹೋಟೆಲ್‌ನಿಂದ ಬಂದ ಲಾಭದಲ್ಲೇ ಮಗಳ ಮದುವೆಯನ್ನೂ ಮಾಡಿರುವುದು ಸಾವಿತ್ರಮ್ಮ ಅವರ ಹೆಗ್ಗಳಿಕೆ. ಅಂದಹಾಗೆ, ತಿಂಡಿಯನ್ನು ಇಷ್ಟು ಕಡಿಮೆ ಬೆಲೆಗೆ ಹೇಗೆ ಕೊಡುತ್ತಾರೆ ಅಂತ ಕೇಳಿದರೆ- ದಿನಸಿ ಪದಾರ್ಥಗಳನ್ನು ನೇರವಾಗಿ ರೈತರಿಂದ ಖರೀದಿಸುವುದರಿಂದ ಇಟ್ಟ ಬೆಲೆಯಲ್ಲೇ ಲಾಭ ಬರುತ್ತಿದೆ. “ನನಗೆ ಲಾಭ ಜಾಸ್ತಿ ಬೇಡ. ನೆಮ್ಮದಿ ಜೀವನ ಬೇಕು. ಈ ಕಾರಣಕ್ಕಾಗಿಯೇ ಹೆಚ್ಚು ಬೆಲೆ ಇಟ್ಟಿಲ್ಲ’ ಎನ್ನುತ್ತಾರೆ ಸಾವಿತ್ರಮ್ಮ. 

ಸಂಪತ್‌ಕುಮಾರ್‌ ಹುಣಸೂರು

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.