ಟೇಕ್‌ ಇಟ್‌ ಈಜಿ ಪಾಲಿಸಿ


Team Udayavani, Feb 11, 2019, 12:30 AM IST

take-it-easy-policy.jpg

ಸಾಮಾನ್ಯವಾಗಿ ಜನರು ವಿಮಾ ಹೂಡಿಕೆ ಸಂಬಂಧ ಏಜಂಟರ ಮಾತಿಗೇ ಹೆಚ್ಚು ಬೆಲೆ ಕೊಡುವುದನ್ನು ನಾವು ನೋಡುತ್ತೇವೆ. ಆದರೆ ಏಜೆಂಟರು ತಮಗೆ ಲಾಭದಾಯಕ ಕಮಿಷನ್‌ ಇರುವ ಸ್ಕೀಮುಗಳನ್ನೇ ತಮ್ಮಲ್ಲಿಗೆ ಬರುವ ವಿಮಾ ಆಕಾಂಕ್ಷಿಗಳಿಗೆ ಸೂಚಿಸುತ್ತಾರೆ. ಯುಲಿಪ್‌ ಕೇಳಿದರೆ ಎಂಡೋಮೆಂಟ್‌ ಪಾಲಿಸಿಯೇ  ನಿಮಗೆ ಹೆಚ್ಚು ಒಳ್ಳೆಯದು ಲಾಭದಾಯಕ ಎಂದೆಲ್ಲ ಹೇಳಿ ತಮಗೆ ಲಾಭದಾಯಕವಾಗಿರುವ ಸ್ಕೀಮುಗಳಿಗೇ ನೋಂದಾಯಿಸಿ ಬಿಡುತ್ತಾರೆ. 

ದೀರ್ಘಾವಧಿಯ ಎಲ್ಲ ಹೂಡಿಕೆ ಯೋಜನೆಗಳು ಲಾಭದಾಯಕ ಎನ್ನುವ ಅಭಿಪ್ರಾಯ ಜನಸಾಮಾನ್ಯರಲ್ಲಿರುವುದು ಸಹಜ. ಆದರೂ ವಾಸ್ತವ ಮಾತ್ರ ಬೇರೆಯೇ ಇರುತ್ತದೆ ಎನ್ನುವುದಕ್ಕೆ ಇನುರೆನ್ಸನ್ಸ್‌ ಪ್ಲಾನ್‌ಗಳೇ ಒಳ್ಳೆಯ ಉದಾಹರಣೆ. ಏಕೆಂದರೆ,  ದೀರ್ಘಾವಧಿ ಹೂಡಿಕೆಯಲ್ಲಿ ಹಣ ಹಲವು ಪಟ್ಟು ವೃದ್ದಿಸುವುದಕ್ಕೆ ಸಾಕಷ್ಟು  ಅವಕಾಶಗಳು, ಕಾಲಾವಧಿ ಇರುತ್ತವೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ವಾಸ್ತವದಲ್ಲಿ ಹಾಗೇನು ಆಗಬೇಕೆಂದೇನು ಇಲ್ಲ.  ದೀರ್ಘಾವಧಿಯ ಲೆಕ್ಕಾಚಾರಗಳು ಎಷ್ಟೋ ವೇಳೆ ತಲೆಕೆಳಗಾಗುವುದಿದೆ.

ಹಾಗಾಗಿ, ನಾವು ದೀರ್ಘಾವಧಿಯಲ್ಲಿ ಹಣ ಕಳೆದುಕೊಂಡೆವೋ, ಲಾಭ ಮಾಡಿದೆವೋ, ಹಣದುಬ್ಬರದಿಂದ ಕೊರೆದು ಹೋಗುವಷ್ಟು ಹಣದ ಮೌಲ್ಯವನ್ನು ನಾವು ಲಾಭದಾಯಕತೆಯಲ್ಲಿ ಸರಿಗಟ್ಟಿದೆವೋ ಎಂಬಿತ್ಯಾದಿ ಸಂಗತಿಗಳು ನಮ್ಮ ಲೆಕ್ಕಕ್ಕೆ ಸಿಗುವುದಿಲ್ಲ..

ಎಷ್ಟೋ ಮಂದಿ ಹೆತ್ತವರು, ಮಕ್ಕಳ ಉಜ್ವಲ ಭವಿಷ್ಯಕ್ಕೆಂದು ವಿಮಾ ಪಾಲಿಸಿಗಳನ್ನು ಖರೀದಿಸಿಡುತ್ತಾರೆ. ದೀರ್ಘಾವಧಿಯಲ್ಲಿ ಈ ಪಾಲಿಸಿಗಳು ಮಗು ಪ್ರಬುದ್ಧವಾಗುವ ಹೊತ್ತಿಗೆ ದೊಡ್ಡ ಹಣದ ಗಂಟನ್ನು ಕೊಡುತ್ತದೆ ಎಂದು ನಂಬಿರುತ್ತಾರೆ.  ಹೀಗಾಗಿ, ಸಹಜವಾಗಿಯೇ ಚೈಲ್ಡ್‌ ಯುಲಿಪ್‌ ಅಥವಾ ಎಂಡೋಮೆಂಟ್‌ ಪಾಲಿಸಿಗಳನ್ನು ಖರೀದಿಸುವ ಆಯ್ಕೆಯನ್ನು ಪರಿಗಣಿಸುತ್ತಾರೆ. ವಿಮಾ ಪಾಲಿಸಿಗಳ ಬಗ್ಗೆ ಜನ ಸಾಮಾನ್ಯರಲ್ಲಿ ಹಿಂದಿನಿಂದಲೂ ಒಂದು ಗೌರವದ ಮತ್ತು ಪ್ರಶ್ನಾತೀತವಾದ ಅಭಿಪ್ರಾಯವಿದೆ. ಅದೆಂದರೆ, ಈ ಪಾಲಿಸಿಗಳು ನಮ್ಮ ಪಾಲಿನ ಆಪದ್ಭಾಂಧವ ಎಂಬುದು ! 

ಹೂಡಿಕೆ ತಜ್ಞರು ಮತ್ತು ಪರಿಣತರ ಪ್ರಕಾರ, ವಿಮಾ ಪಾಲಿಸಿಗಳು ಹೂಡಿಕೆಯ ದೃಷ್ಟಿಯಿಂದ ಏನೇನೂ ಲಾಭದಾಯಕವಲ್ಲ. ವಿಮೆಯ ಉದ್ದೇಶದಲ್ಲಿ ಲಾಭದಾಯಕ ಹೂಡಿಕೆಯ ಅಂಶ ಅಡಕವಾಗಿರುವುದೇ ಇಲ್ಲ ಎಂಬುದನ್ನು ಜನರು ಅರಿಯದಾಗಿರುತ್ತಾರೆ. 

ಆರ್ಥಿಕ ಪರಿಣಿತರು ಹೇಳುವ ಪ್ರಕಾರ, ವಿಮಾ ಹೂಡಿಕೆ ಅತ್ಯಂತ ನಿಕೃಷ್ಟ ಇಳುವರಿಯನ್ನು ತರುತ್ತದೆ. ಇವುಗಳಿಂದ ಸಿಗುವ ವಾರ್ಷಿಕ ಇಳುವರಿ ಅಥವಾ ರಿಟರ್ನ್ ಶೇ.4 ರಿಂದ 6 ಅಥವಾ ಅದಕ್ಕಿಂತ ಕಡಿಮೆ ಎಂದರೆ ಇವು ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆ ಮೌಲ್ಯವನ್ನು ಕೂಡ ಖಾತರಿಪಡಿಸುವುದಿಲ್ಲ. 

ಮಕ್ಕಳ ಶ್ರೆಯೋಭಿವೃದ್ಧಿಗೆಂದೇ ರೂಪಿಸಲ್ಪಟ್ಟಿರುವುದಾಗಿ ಹೇಳಲ್ಪಡುವ ವಿಮಾ ಯೋಜನೆಗಳು ಮಕ್ಕಳಿಗಾಗಲೀ, ದೊಡ್ಡವರಿಗಾಗಲೀ ಲಾಭದಾಯಕವಾಗಲಾರವು.  ಏಕೆಂದರೆ, ಇವುಗಳನ್ನು ಕೊಂಡ ಬಳಿಕದಲ್ಲಿ  ತಿಂಗಳು ತಿಂಗಳೂ ಪಾವತಿಸುವ ಪ್ರೀಮಿಯಂಗಳು ಪಾವತಿದಾರರ ಮಟ್ಟಿಗೆ ತುಟ್ಟಿಯಾಗೇ ಪರಿಣಮಿಸುತ್ತದೆ.

ನಿಜಕ್ಕೂ ವಿಮೆ ಬೇಕಿರುವುದು ಮಕ್ಕಳಿಗಲ್ಲ; ದೊಡ್ಡವರಿಗೆ ಎಂಬುದನ್ನು ಕೂಡ ಎಷ್ಟೋ ಹೆತ್ತವರು ಹೂಡಿಕೆ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗಿದ್ದರೂ, ವಿಮಾ ಪಾಲಿಸಿಗಳ ಮೊತ್ತ ತುಂಬ ಕಡಿಮೆ ಇದ್ದು ಅವು ಕಾಲಕ್ರಮದಲ್ಲಿ ಅಥವಾ ಮೆಚ್ಯುರಿಟಿ ಸಮಯದಲ್ಲಿ ಆಗಿನ ಹಣದ ಮೌಲ್ಯದೆದುರು ನಗಣ್ಯವಾಗಿರುತ್ತವೆ.

ಒಂದೊಮ್ಮೆ ಹೆತ್ತವರು ವಿಮಾ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಟರ್ಮ್ ಕವರ್‌ ಮತ್ತು ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯ ಅವಕಾಶಗಳು ಪರಸ್ಪರ ಅಂತರ್ಗತವಾಗಿರುವ ಸ್ಕೀಮುಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಲೇಸು. ಈ ರೀತಿಯ ಅವಳಿ ಲಾಭದ ಮ್ಯೂಚುವಲ್‌ ಫ‌ಂಡ್‌ ಸ್ಕೀಮುಗಳು ಅತ್ಯಧಿಕ ಇಳುವರಿ (ರಿಟರ್ನ್) ಕೊಡುತ್ತವೆ; ಹೂಡಿಕೆಯ ಮಟ್ಟಿಗೆ ಹೆಚ್ಚು ಪಾರದರ್ಶಕವಾಗಿರುತ್ತವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶಿಕ್ಷಣ ವೆಚ್ಚ ಮತ್ತು ಶೇ.10ರ ವರೆಗೂ ಹೋಗಬಹುದಾದ ಹಣದುಬ್ಬರ ಪ್ರಮಾಣ, ಇವನ್ನು ಸಂಭಾಳಿಸುವಷ್ಟು ಮಟ್ಟಿಗಿನ ಲಾಭ ಮ್ಯೂಚುವಲ್‌ ಫ‌ಂಡ್‌  ಹೂಡಿಕೆಯಲ್ಲಿ ಇರುತ್ತದೆ ಎನ್ನುವುದು ಗಮನಾರ್ಹ. 

ಸಾಮಾನ್ಯವಾಗಿ ಜನರು ವಿಮಾ ಹೂಡಿಕೆ ಸಂಬಂಧ ಏಜಂಟರ ಮಾತಿಗೇ ಹೆಚ್ಚು ಬೆಲೆ ಕೊಡುವುದನ್ನು ನಾವು ನೋಡುತ್ತೇವೆ. ಆದರೆ ಏಜೆಂಟರು ತಮಗೆ ಲಾಭದಾಯಕ ಕಮಿಷನ್‌ ಇರುವ ಸ್ಕೀಮುಗಳನ್ನೇ ತಮ್ಮಲ್ಲಿಗೆ ಬರುವ ವಿಮಾ ಆಕಾಂಕ್ಷಿಗಳಿಗೆ ಸೂಚಿಸುತ್ತಾರೆ. ಯುಲಿಪ್‌ ಕೇಳಿದರೆ ಎಂಡೋಮೆಂಟ್‌ ಪಾಲಿಸಿಯೇ  ನಿಮಗೆ ಹೆಚ್ಚು ಒಳ್ಳೆಯದು ಲಾಭದಾಯಕ ಎಂದೆಲ್ಲ ಹೇಳಿ ತಮಗೆ ಲಾಭದಾಯಕವಾಗಿರುವ ಸ್ಕೀಮುಗಳಿಗೇ ನೋಂದಾಯಿಸಿ ಬಿಡುತ್ತಾರೆ. 

ಇದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ, ತಿಳಿವಳಿಕೆ, ಎಚ್ಚರಿಕೆ ಇಲ್ಲದಿರುವುದರಿಂದ ಅವರು ಸುಲಭದಲ್ಲಿ ಎಂಡೋಮೆಂಟ್‌ ಸ್ಕೀಮುಗಳಲ್ಲಿ ಏಜಂಟರ ಕುಟಿಲತೆಯಿಂದಾಗಿ ಸಿಲುಕಿಕೊಳ್ಳುತ್ತಾರೆ. ಮನಿ ಬ್ಯಾಕ್‌ ಪಾಲಿಸಿಗಳು ಆಕರ್ಷಕವೆಂಬ ಭಾವನೆ, ನಂಬಿಕೆ ಜನರಲ್ಲಿರುವುದು ಸಹಜವೇ. ಆದರೆ ಮನಿ ಬ್ಯಾಕ್‌ ಪಾಲಿಸಿಗಳಡಿ ಜನರ ಕೈಗೆ ಕಾಲಕಾಲಕ್ಕೆ ಬರುವ ಹಣ ಹಾಗೆಯೇ ಕರಗಿ ಹೋಗಿ ಪಾಲಿಸಿ ಮೆಚೂರ್‌ ಆದಾಗ ದೊಡ್ಡ ಮೊತ್ತ ಕೈಗೆ ಬರುವುದರಿಂದ ವಂಚಿತರಾಗುತ್ತಾರೆ. 

ಎಂಡೋಮೆಂಟ್‌ ಪಾನ್‌ಗಿಂತ ಯುಲಿಪ್‌ ಎಷ್ಟೋ ಮೇಲು ಎಂಬುದನ್ನು ನಾವು ಈ ಕೆಳಗಿನ ಸಂಕ್ಷಿಪ್ತ ವಿಶ್ಲೇಷಣೆಯಲ್ಲಿ ಅರಿಯಬಹುದಾಗಿದೆ.
ಮೊದಲಾಗಿ ಯುಲಿಪ್‌ ಸ್ಕೀಮನ್ನು ನೋಡೋಣ : 
1. ರಿಟರ್ನ್: ಮ್ಯೂಚುವಲ್‌ ಫ‌ಂಡ್‌ ಜತೆ ತುಲನೆ ಮಾಡುವಷ್ಟು ಅತ್ಯಧಿಕ ರಿಟರ್ನ್ ಇರುತ್ತದೆ.
2. ತೆರಿಗೆ ಲಾಭ : ಸೆ.80ಸಿ ಅಡಿ 1.5 ಲಕ್ಷ ರೂ. ತನಕದ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ; ಮೆಚ್ಯುರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
3. ನಗದೀಕರಣ : ಐದು ವರ್ಷಗಳ ಲಾಕ್‌ ಇನ್‌ ಪಿರಿಯಡ್‌ ಇರುತ್ತದೆ. ಐದು ವರ್ಷಗಳ ಅನಂತರ ಸರೆಂಡರ್‌ ಚಾರ್ಜ್‌ ಇರುವುದಿಲ್ಲ.
4. ಹಣ ಹಿಂಪಡೆಯುವಿಕೆ : ಐದು ವರ್ಷಗಳ ಬಳಿಕ ಶೇ.20 ಮೀರದಿರುವ ಮೊತ್ತದ ಹಣ ಹಿಂಪಡೆಯುವಿಕೆಗೆ ಅವಕಾಶ ಇರುತ್ತದೆ. 
5. ಹೂಡಿಕೆ ಬದಲಾಯಿಸುವ ಅವಕಾಶ : ರಿಸ್ಕ್ ಪೊ›ಫೈಲ್‌ಗೆ ಅನುಗುಣವಾಗಿ ಈಕ್ವಿಟಿ – ಡೆಟ್‌ ಹಣ ಹೂಡಿಕೆ ಪ್ರಮಾಣವನ್ನು ಬದಲಾಯಿಸುವುದಕ್ಕೆ ಅವಕಾಶ ಇರುತ್ತದೆ. 

ಎಂಡೋಮೆಂಟ್‌ ಪ್ಲಾನ್‌ : 
1. ರಿಟರ್ನ್ ಶೇ.4ರಿಂದ 6
2. ತೆರಿಗೆ ಲಾಭ : ಯೂಲಿಪ್‌ ಹಾಗೇ ಇರುತ್ತದೆ.
3. ನಗದೀಕರಣ ಸೌಕರ್ಯ : ಕೆಲವು ವಿಮಾ ಕಂಪೆನಿಗಳು ಪಾಲಿಸಿ ಮೇಲೆ ಶೇ.8-9ರ ಬಡ್ಡಿಗೆ ಸಾಲ ನೀಡುತ್ತವೆ.
4. ಹಣ ಹಿಂಪಡೆಯುವಿಕೆ : 10 ವರ್ಷಗಳ ವಿಮಾ ಸ್ಕೀಮಿನಡಿ ಎರಡು ಅಥವಾ ಮೂರು ವರ್ಷ ಪ್ರೀಮಿಯಂ ಕಟ್ಟಿದ್ದಲ್ಲಿ  ಮಾತ್ರವೇ ನಿಮಗೆ ಸರೆಂಡರ್‌ ವ್ಯಾಲ್ಯೂ ಸಿಗುತ್ತದೆ.
 5. ಹೂಡಿಕೆ ಸ್ವರೂಪದಲ್ಲಿನ ಬದಲಾವಣೆ : ಯಾವುದೇ ಆಯ್ಕೆ ಇರುವುದಿಲ್ಲ.
ಮಕ್ಕಳ ಉಜ್ವಲ ಭವಿಷ್ಯದ ಹೂಡಿಕೆ ಆಯ್ಕೆಗಳನ್ನು ಪರಿಶೀಲಿಸುವ ಪ್ರಶ್ನೆ ಬಂದಾಗ ವಿಮಾ ಹೂಡಿಕೆ ಅಷ್ಟೇನೂ ಆಕರ್ಷಕವೂ ಲಾಭದಾಯಕವೂ ಅಲ್ಲ ಎಂಬುದನ್ನು ಅರಿಯದ ಜನಸಾಮಾನ್ಯರಿಂದಾಗಿ ವಿಮಾ ಏಜೆಂಟರು ಲಾಭ ಮಾಡಿಕೊಳ್ಳುತ್ತಾರೆ ಎನ್ನುವುದು ಇಂದಿನ ವಾಸ್ತವ.

– ಸತೀಶ್‌ ಮಲ್ಯ

ಟಾಪ್ ನ್ಯೂಸ್

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.