ಲಡಾಖ್‌ಗೆ ಬೈಕ್‌ನಲ್ಲೇ ರೋಮಾಂಚನ ಯಾನ!


Team Udayavani, Apr 4, 2017, 4:50 PM IST

04-JOSH-3.jpg

ಸಮುದ್ರ ಮಟ್ಟದಿಂದ 18,288 ಅಡಿ ಎತ್ತರದಲ್ಲಿರುವ ಅದ್ಭುತ ದಾರಿಯಲ್ಲಿ ನಮ್ಮ ಬೈಕ್‌ ಮುಂದೋಡುತ್ತಿತ್ತು. ಸುದೀರ್ಘ‌ ಬೈಕ್‌ ಟ್ರಿಪ್‌
ಆಗಿದ್ದರಿಂದ ಎಂತಹುದೇ ಅವಘಡಗಳಿಗೆ ನಾವು ಸಿದ್ದರಿರಬೇಕಿತ್ತು. ನಿರ್ಜನ ಪ್ರದೇಶಗಳನ್ನು ಹಾದು ಹೋಗಬೇಕಿದ್ದರಿಂದ ಬೈಕ್‌ ಕೆಟ್ಟರೆ ಸಣ್ಣಪುಟ್ಟ ರಿಪೇರಿ ಮಾಡುವುದನ್ನು ಕಲಿತೇ ನಾವು ಹೊರಟಿದ್ದು! 

ಲಡಾಖ್‌ ಪಯಣ ಜೀವನದ ದೊಡ್ಡ ಅನುಭವ. ಕಾರ್ಕಳ ಅನ್ನುವ ಪುಟ್ಟ ಊರಿನಿಂದ ಲಡಾಖ್‌ ತಲುಪಲು 7 ದಿನ ಬೇಕಾಯಿತು. ಮಹಾರಾಷ್ಟ್ರದಿಂದ ಗುಜರಾತ್‌, ರಾಜಸ್ಥಾನ, ಹರಿಯಾಣ, ಚಂಡೀಗಡ್‌, ಹಿಮಾಚಲ ಪ್ರದೇಶ, ಅಲ್ಲಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹೋದ ಅನುಭವ ಅದ್ಬುತ. ನಾವು ದಿನಕ್ಕೆ 1000 ಕಿ.ಮೀ ನಂತೆ ದಿನಕ್ಕೊಂದು ರಾಜ್ಯವನ್ನು ಹಾಯುತ್ತಿದ್ದೆವು. ಹಿಮಾಚಲದ 
ಮನಾಲಿಗೆ 5ನೇ ದಿನ ತಲುಪಿದೆವು. ಮನಾಲಿಯಲ್ಲಿ ಒಂದು ದಿನ ರೆಸ್ಟ್‌ ಮಾಡಿ ಅಲ್ಲಿಂದ ಲಡಾಖ್‌ನ 600 ಕಿ.ಮೀ.ನ ಗುಡ್ಡ ತಲುಪಲು ಇಡೀ ಒಂದು ದಿನ ತಗುಲಿದೆ. ಈ ಸಮಯದಲ್ಲಿ ನಮಗೆ ತುಂಬಾ ಅನಾರೋಗ್ಯ ಸಮಸ್ಯೆ ಕಾಡಿತು. 

ಒಂದು ಕ್ಷಣ ಮಂಪರು, ತಲೆಸುತ್ತುವಿಕೆ ಇವೆಲ್ಲವೂ ಕಾಡಿ ಅರೆಕ್ಷಣ ತಬ್ಬಿಬ್ಟಾದೆವು. ವಾತಾವರಣವೂ ತುಂಬಾ ವಿಚಿತ್ರವಾಗಿದ್ದರಿಂದ ಅನಾರೋಗ್ಯದ ಸಮಸ್ಯೆಯೂ ಎದುರಾಯಿತು. ಈ ಸಮಯದಲ್ಲಿ ನಮ್ಮ ಸಹಾಯಕ್ಕೆ ಬಂದವರು ಮಿಲಿಟರಿ ಕ್ಯಾಂಪ್‌ನ ಯೋಧರು. ಅವರು ಎಷ್ಟೊಂದು ಸಹಾಯ ಮಾಡಿದರೆಂದರೆ ಊಟ ತಿಂಡಿ, ಸಣ್ಣ ಸಣ್ಣ ಚಿಕಿತ್ಸೆ, ಪ್ರೀತಿ ಎಲ್ಲವನ್ನೂ ನಮಗೊದಗಿಸಿದ್ದು ನಮ್ಮ
ಪುಣ್ಯ.ಅವರೇ ತಿನ್ನುವ ಊಟವನ್ನೂ ನಮಗೆ ಕೊಟ್ಟದ್ದು ಮಧುರ ಅನುಭವ. ಅದರಲ್ಲೂ ಕರ್ನಾಟಕದ ಪುಟ್ಟ ಜಾಗದಿಂದ ಬಂದ ನಮ್ಮಂಥವರಿಗೂ ಅವರು ಆತಿಥ್ಯ ನೀಡುವುದನ್ನು ಕಂಡು ಅವರ ಬಗ್ಗೆ ಅಪಾರ ಗೌರವ ಉಂಟಾಯಿತು.

ಲಡಾಖ್‌ ನಮ್ಮ ಪಯಣದ ಗುರಿಯಾಗಿತ್ತು ಒಂದು ದಿನ ಲಡಾಖ್‌ನ ಸಂತೆ ಸುತ್ತಿದೆವು. ಅಲ್ಲಿರುವ ಎಲ್ಲಾ ದೇವಾಲಯ ಸೇರಿದಂತೆ ಸುತ್ತಲಿನ ಪ್ರದೇಶಗಳನ್ನು ಸುತ್ತಿದೆವು. ಸಮುದ್ರ ಮಟ್ಟದಿಂದ 18,288 ಅಡಿ ಎತ್ತರದಲ್ಲಿರುವ ಅದ್ಭುತ ದಾರಿಯಲ್ಲಿ ನಡೆದೆವು. ಲಡಾಖ್‌ನಲ್ಲಿ ಏನೇನು ನೋಡಲು ಸಾಧ್ಯವೋ ಅವೆಲ್ಲವನ್ನೂ ನೋಡಿದೆವು. ಇಲ್ಲಿ ಒಂದು ವಿಷಯವನ್ನು ಹೇಳಲೇಬೇಕು. ಸುದೀರ್ಘ‌ ಬೈಕ್‌ ಟ್ರಿಪ್‌ ಆಗಿದ್ದರಿಂದ ಎಂತಹುದೇ ಅವಘಡಗಳಿಗೆ ನಾವು ಸಿದಟಛಿರಿರಬೇಕಿತ್ತು. ನಿರ್ಜನ  ಪ್ರದೇಶಗಳನ್ನು ಹಾದು ಹೋಗಬೇಕಿದ್ದರಿಂದ ಬೈಕ್‌ ಕೆಟ್ಟರೆ ಸಣ್ಣಪುಟ್ಟ ರಿಪೇರಿ ಮಾಡುವುದನ್ನು ಕಲಿತೇ ನಾವು ಹೊರಟಿದ್ದು. ಒಂದು ವೇಳೆ ಬೈಕ್‌ 
ಹಾಳಾದರೂ ನಾವೇ ಮೆಕ್ಯಾನಿಕ್‌ಗಳಾಗುವ ಅನಿವಾರ್ಯತೆ ಇತ್ತು. ಒಂದು ತಿಂಗಳ ಮೊದಲೇ ರೋಡ್‌ ಪ್ಲಾನ್‌ ಸಿದಟಛಿ ಪಡಿಸಿಕೊಂಡಿದ್ದೆವು. ಲಡಾಖ್‌ ಪ್ರಯಣದಲ್ಲಿ ನಾವು ಮೂವರು ಗೆಳೆಯರೂ ಕೂಡ ವಿಭಿನ್ನ ಅನುಭವವನ್ನು ನಮ್ಮದಾಗಿಸಿಕೊಂಡೆವು.

ಪಯಣದಲ್ಲಿ ಏಳುಬೀಳು ಸಹಜ. ಹೊರಟಾಗ ಪುಟಿಯುತ್ತಿದ್ದ ನಮ್ಮ ಉತ್ಸಾಹ ಮುಂದುವರಿಯುತ್ತಿದ್ದಂತೆ ಕಡಿಮೆಯಾಗುತ್ತಿತ್ತು.
ಎಂದೂ ಮುಗಿಯದ ಹಾದಿಯಲ್ಲಿ ಸಾಗಿ ಸಾಗಿ ಮನಸ್ಸಿಗೆ ಮಂಕು ಹಿಡಿಯುತ್ತಿತ್ತು. ಬೆಳಗ್ಗೆ 4 ಗಂಟೆಗೆ ಬೈಕನ್ನೇರಿದರೆ ರಾತ್ರಿ 1 ಗಂಟೆಯವರೆಗೆ ನಮ್ಮ ಪಯಣ ಸಾಗುತ್ತಿತ್ತು. ಒಟ್ಟಾರೆ ದಿನಕ್ಕೆ 14 ಗಂಟೆ ಪಯಣ. ಒಂದು ಬೈಕ್‌ನಲ್ಲಿ ಇಬ್ಬಿಬ್ಬರಂತೆ ಒಟ್ಟು ನಾಲ್ಕು ಜನ ಇದ್ದೆವು. ಪಯಣದ ನಡುವೆ ನಿದ್ದೆ ಬಂದರೆ ನಿಂತಲ್ಲೇ ಮಲಗುತ್ತಿದ್ದೆವು. ಯಾಕೆಂದರೆ ನಿದ್ದೆ ಮಾಡಿದರೆ ನಮ್ಮ ಕನಸು ನನಸಾಗುತ್ತಿರಲಿಲ್ಲ. ಹಾಗಾಗಿ ಪಯಣ ನಿರಂತರವಾಗಿತ್ತು. ಒಟ್ಟಾರೆ ಇದೊಂದು ಚೆಂದದ ಅನುಭವ. ಬರೀ ಗೂಗಲ್‌ನಲ್ಲಿ ಜಗತ್ತು
ನೋಡುವುದಕ್ಕಿಂತ ವಾಸ್ತವದಲ್ಲಿ ಪಯಣ ಮಾಡಬೇಕು. ಅದರ ಗಮ್ಮತ್ತೇ ಬೇರೆ. ಲಡಾಖ್‌ನಂತಹ ಕಣಿವೆ ಪ್ರದೇಶದಲ್ಲಿ ಪಯಣ ಮಾಡುವುದು ಕೂಡ ಸಖತ್‌ ಥ್ರಿಲ್‌ ಕೊಡುತ್ತದೆ ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿರುತ್ತದೆ. ಆದರೆ ಅದರ ಅನುಭವ ಪದಗಳಿಗೆ ನಿಲುಕದ್ದು. ಮುಂದೆಯೂ ಬೈಕ್‌ ಟ್ರಿಪ್‌ ಹೊರಡುವ ಯೋಚನೆ ಇದೆ. ಯಾವಾಗ? ಎಲ್ಲಿಗೆ? ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಊರಿನಲ್ಲಿ ಸಮಾನ ಮನಸ್ಕ ಗೆಳೆಯರ ದೊಡ್ಡ ತಂಡ ಕಟ್ಟಿ ಮುಂದಿನ ದಿನಗಳಲ್ಲಿ ಪಯಣಕ್ಕೆ, ಮತ್ತೂಂದು ಸಾಹಸಕ್ಕೆ ಸಿದ್ದರಾಗುತ್ತೇವೆ.

ರಜತ್‌ ಶೆಣೈ, ಕಾರ್ಕಳ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.