ಬೆಟ್ಟದಷ್ಟು ಪ್ರೀತಿಯನು ಪುಟ್ಟ ಹೃದಯದಲ್ಲಿ ಬಚ್ಚಿಟ್ಟಿದ್ದೆ!


Team Udayavani, Apr 4, 2017, 5:30 PM IST

04-JOSH-8.jpg

ಪ್ರೀತಿ ಎಂದರೆ ಕೇವಲ ಪಡೆದುಕೊಳ್ಳುವುದಲ್ಲ. ತ್ಯಾಗವೂ ಪ್ರೇಮಕತೆ ಒಂದು ಬಗೆಯ ಪ್ರೀತಿಯೇ. ನೀನು ನನ್ನನ್ನು ಇಷ್ಟ ಪಡುತ್ತಿದ್ದೀಯಾ ಎಂದು ನಿನ್ನ ಕಣ್ಣುಗಳೇ ಹೇಳುತ್ತಿವೆ. ಅಷ್ಟು ಸಾಕು ಬಿಡು…

ಕಾಲೇಜಿಗೆ ಕಾಲಿಟ್ಟಾಗ ಮೊದಲು ಪರಿಚಿತಳಾದವಳು ನೀನು. ಮೊದಲ ಭೇಟಿಯ ಮಧುರ ಕ್ಷಣಗಳನ್ನು ಮರೆಯೋಕೆ ನನ್ನಿಂದ
ಸಾಧ್ಯವಾಗುತ್ತಿಲ್ಲ. ನೀನು ಒಬ್ಬಳೆ ಅವತ್ತು ಕ್ಲಾಸಿಗೆ ಬಂದಿದ್ದೆ, ಅಂದು ಕ್ಲಾಸಿನ ಮೊದಲ ದಿನವಾಗಿತ್ತು. ನನಗೆ ಸಿಲಬಸ್‌ ಕೂಡಾ ಗೊತ್ತಿರಲಿಲ್ಲ. ಆಗ ನಾನು ನಿನ್ನನ್ನು ಸಿಲಬಸ್‌ ಕಾಪಿ ಕೇಳಿದೆ, ನೀನು ಕೊಡಲು ನಿರಾಕರಿಸಿದೆ. ಕೊನೆಗೆ ನನ್ನ ಸೋತ
ಮುಖವನ್ನು ನೋಡಲಾರದೆ ಬೆಂಚಿನ ಮೇಲೆ ಕಾಪಿಯನ್ನು ಇಟ್ಟುಹೋದೆ. ಆಗ ನನ್ನ ಮನಸ್ಸಿಗೆ ಆದ ಸಂತೋಷವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ.

ಇಡೀ ಕ್ಲಾಸಿನಲ್ಲಿ ಎಲ್ಲ ಹುಡುಗರನ್ನು ಬಿಟ್ಟು ನನ್ನ ಸ್ನೇಹವನ್ನು ಬಯಸಿ ಬಂದ ಕ್ಷಣದಿಂದ ನನ್ನ ಹೃದಯದ ತುಂಬಾ ನೀನಾದೆ. ನಮ್ಮ
ಸ್ನೇಹ ಪರ್ವತದಂತೆ ಬೆಳೆಯತೊಡಗಿತು. ನೀನು ಆ ದಿನ ನನ್ನ ಭುಜಕ್ಕೊರಗಿ ಮಲಗಿದ ಗಳಿಗೆಯನ್ನು ನನ್ನಿಂದ ಮರೆಯಲಾಗದು ನೀನು ತೋರಿಸುತ್ತಿದ್ದ ಮಗುವಿನ ಪ್ರೀತಿ ನನ್ನೆದೆಯ ತುಂಬಾ ಆವರಿಸಿತು. ಯಾವುದನ್ನೂ ನೀನು ನನ್ನಿಂದ ಮುಚ್ಚಿಡುತ್ತಿರಲಿಲ್ಲ. ಅಂತರಾಳದ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ. ನನ್ನ ಜೊತೆ ಮನಬಿಚ್ಚಿ ಮಾತನಾಡುತ್ತಿದ್ದೆ. ನಮ್ಮ ಸಂಬಂಧದ ಬಗ್ಗೆ ಊರೆಲ್ಲಾ ಮಾತನಾಡಿದರೂ ಯಾವುದರ ಬಗ್ಗೆಯೂ ನೀನು ತಲೆ ಕೆಡಿಸಿಕೊಳ್ಳದೆ ಇದ್ದದ್ದು ನನಗೆ ನಿನ್ನಲ್ಲಿನ ಪ್ರೀತಿಯನ್ನು ಹೆಚ್ಚಿಸಿತು.

ಆ ಒಂದು ದಿನ ರಸ್ತೆ ದಾಟುತ್ತಿರುವಾಗ ಸುಂದರ ಹುಡುಗಿಯನ್ನು ನೋಡುತ್ತಾ ನಿಂತಾಗ ನೀನು ನನ್ನ ತಲೆಗೆ ಹೊಡೆದು
ನಡೆ ಎಂದು ಸಿಟ್ಟಿನಿಂದ ಕರೆದುಕೊಂಡು ಹೋದೆ. ನಾನು ಬೇರೆ ಹುಡುಗಿಯರ ಬಗ್ಗೆ ಮಾತನಾಡುತ್ತಿರುವಾಗ ನಿನಗೆ
ಸಹಿಸಿಕೊಳ್ಳಲಾಗದಷ್ಟು ಕೋಪ ಬರುತ್ತಿತ್ತು. ದುಃಖದಿಂದ ಕಣ್ಣುಗಳಲ್ಲಿ ನೀರು ತಂದುಕೊಳ್ಳುತ್ತಿದ್ದೆ. ಆಮೇಲೆ ನಾನೇ ಸಾರಿ ಕೇಳಿದ ಮೇಲಷ್ಟೆ ಸರಿಹೋಗುತ್ತಿದ್ದೆ. ನೀನು ಕೇಳುತ್ತಿದ್ದೆ; ನಿನ್ನ ಮನದ ಹುಡುಗಿ ಹೇಗಿರಬೇಕೆಂದು. ಆಗ ನಾನು ಹೇಳುತ್ತಿದ್ದೆ, ಸುಂದರವಾಗಿ ಇರದಿದ್ದರೂ ಪರವಾಗಿಲ್ಲ, ಗುಣದಲ್ಲಿ ಸೀತೆಯಂತೆ, ಜ್ಞಾನದಲ್ಲಿ ಸರಸ್ವತಿಯಂತೆ ಇದ್ದರೆ ಸಾಕೆಂದು. ಒಂದು ದಿನ ಒಬ್ಬಳು ಹುಡುಗಿಯ
ಜೊತೆ ಮಾತನಾಡುತ್ತಿರುವಾಗ ನೀನು ಕೋಪದಿಂದ ಕೆಂಡಾಮಂಡಲವಾಗಿದ್ದೆ. ನನ್ನ ಜೊತೆ ಎರಡು ದಿನ ಮಾತೇ ಆಡಿರಲಿಲ್ಲ.
ನಾನು ಕಾರಣ ಕೇಳಿದಾಗ ಗೊತ್ತಿಲ್ಲವೆಂದು ಸನ್ನೆ ಮಾಡಿ ಸುಮ್ಮನಾದೆ. ಆವತ್ತು ಒಂದು ವಿಚಾರ ಅರ್ಥವಾಯಿತು. ಮನದಲ್ಲಿ
ಪ್ರೀತಿ ತುಂಬಿಕೊಂಡಿದ್ದರೂ ನೀನು ನನ್ನ ಬಳಿ ಹೇಳಿಕೊಳ್ಳಲಾಗದೆ ಪರದಾಡುತ್ತಿದ್ದೀಯಾ ಅಂತ. ನನಗೂ ನಿನ್ನ ಮೇಲೆ ಬೆಟ್ಟದಷ್ಟು
ಪ್ರೀತಿಯಿದೆ. ಆದರೆ, ಹೇಗೆ ಹೇಳಲಿ? ಒಂದು ವೇಳೆ ನನ್ನ ಪ್ರೀತಿಯನ್ನು ನೀನು ನಿರಾಕರಿಸಿದರೆ ಎಂಬ ಭಯ ನನ್ನನ್ನು ಕಾಡುತ್ತಿದೆ.

ನಿನ್ನನ್ನು ನೋಡದೆ ಇದ್ದರೆ ಒಂದೊಂದು ಕ್ಷಣವೂ ಒಂದೊಂದು ವರ್ಷದಂತೆ ಅನಿಸುತ್ತದೆ. ನನ್ನ ಸ್ನೇಹವನ್ನು ದುರುಪಯೋಗ
ಮಾಡಿಕೊಂಡು ಬಿಟ್ಟೆ ಎಂದು ಹೇಳಿಬಿಟ್ಟರೆ ಎಂಬ ಆತಂಕ ಮನದಲ್ಲಿ ಕಾಡುತ್ತಿದೆ. ಈ ಪ್ರೀತಿ ಎಂದರೆ ಕೇವಲ ಪಡೆದುಕೊಳ್ಳುವುದಲ್ಲ. ತ್ಯಾಗವೂ ಒಂದು ಬಗೆಯ ಪ್ರೀತಿಯೇ. ಪ್ರೀತಿ ಮಧುರ, ತ್ಯಾಗ ಅಮರ ಎಂಬ ಪ್ರಸಿದಟಛಿ ಮಾತಿನಂತೆ, ನನ್ನ ನಿನ್ನ ಪ್ರೀತಿ
ಅಮರವಾಗಿರಲಿ ಗೆಳತಿ. ನೀನು ನನ್ನನ್ನು ಇಷ್ಟ ಪಡುತ್ತಿದ್ದೀಯಾ ಎಂದು ನಿನ್ನ ಕಣ್ಣುಗಳೇ ಹೇಳುತ್ತಿವೆ. ಆದರೆ ಅದನ್ನು ಹೇಗೆ ಹೇಳಲಿ
ಎಂಬ ಸಂದಿಗ್ದತೆಯಲ್ಲಿ ಸಿಕ್ಕಿಕೊಂಡಿದ್ದೇನೆ.

ಆರೀಫ್ ವಾಲಿಕಾರ, ಬೆಳಗಾವಿ

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.