ಗುರುವಿಗೇ ಗೃಹಬಂಧನ


Team Udayavani, Dec 5, 2017, 1:38 PM IST

guruvige-gruha.jpg

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿಪರೀತ ಅನ್ನುವಷ್ಟು ಕುತೂಹಲವಿರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಕೆಟ್ಟ ಕುತೂಹಲ ಇರುತ್ತದೆ. ಹುಡುಗು ಬುದ್ಧಿ ಕೆಲವೊಮ್ಮೆ ಅನಾಹುತಗಳಿಗೂ ದಾರಿ ಮಾಡುವುದುಂಟು. ಅಂಥದ್ದೊಂದು ಸಂದರ್ಭದ ವಿವರಣೆ ಇಲ್ಲಿದೆ. ಒಮ್ಮೆ ನಮ್ಮ ಶಿಕ್ಷಕಿ ಮತ್ತು ಶಿಕ್ಷಕ ಇಬ್ಬರೂ ಯಾವುದೋ ಪಾಠದ ಬಗ್ಗೆ ಚರ್ಚಿಸುತ್ತಾ ಇದ್ದರು.

ನಾವು ಅವರನ್ನು ಅನುಮಾನದಿಂದ ನೋಡಿ, ಎಲ್ಲಾ ವಿದ್ಯಾರ್ಥಿಗಳು ಒಟ್ಟುಗೂಡಿ ಅವರಿದ್ದ ಕ್ಲಾಸ್‌ ರೂಮ್‌ಗೆ ಬೀಗ ಹಾಕಿಬಿಟ್ಟೆವು. ನಂತರ ಊರ ಜನರೆಲ್ಲರನ್ನೂ ಸೇರಿಸಿ ಅವರಿಗೆ ಛೀಮಾರಿ ಹಾಕಿಸಿದೆವು. ಆದರೆ, ಅವರು ನಮ್ಮ ಮೇಲೆ ಯಾವ ರೀತಿಯ ಕೋಪವನ್ನೂ ತೋರಿಸಲಿಲ್ಲ. ಎಂದಿನಂತೆ ತರಗತಿಯ ಪಾಠಗಳನ್ನು ಮಂದುವರಿಸಿದರು. ಆಗ ನಮಗೆ, ನಾವು ಮಾಡಿದ್ದು ತಪ್ಪು ಅನ್ನಿಸಿ, ಪಶ್ಚಾತ್ತಾಪವಾಯಿತು. 

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದು ಆ ಗುರುಗಳೇ ಹೇಳಿ ಕೊಟ್ಟಿದ್ದರು. ಅದನ್ನು ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಟ್ಟು, ಗುರುಗಳಿಗೇ ಅವಮಾನ ಆಗುವಂಥ ಸಂದರ್ಭ ಸೃಷ್ಟಿಸಿದ್ದೆವು. ಆ ಮೂಲಕ ಗುರುಗಳು ನಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡೆವು. ಸ್ವಲ್ವ ದಿನಗಳ ನಂತರ ಗುರುಗಳು ಬೇರೂಂದು ಊರಿಗೆ ವರ್ಗಾವಣೆ ಮಾಡಿಸಿಕೊಂಡರು.

ಅವರ ಜಾಗಕ್ಕೆ ಬೇರೊಬ್ಬರು ಬಂದರೂ ಸಹ ಅವರು ನಮ್ಮನ್ನು ಮೊದಲಿನವರಂತೆ ಪ್ರೀತಿ-ಆದರಗಳಿಂದ ಕಾಣುತ್ತಿರಲಿಲ್ಲ. ಸರಿಯಾಗಿ ಪಾಠ ಮಾಡುತ್ತಿರಲಿಲ್ಲ. ಪರಿಣಾಮವಾಗಿ ನಾವು ಓದಿನಲ್ಲಿ ಹಿಂದೆ ಬಿದ್ದೆವು. ಆಗ ನಮಗೆ ನಮ್ಮ ತಪ್ಪಿನ ಅರಿವು ಇನ್ನೂ ಚೆನ್ನಾಗಾಯ್ತು. ಈಗಲೂ ನಮ್ಮ ಹಳೆಯ ಶಿಕ್ಷಕರು ಎಲ್ಲಿಯೇ ಸಿಕ್ಕಿದರೂ ತುಂಬಾ ಆತ್ಮೀಯವಾಗಿ, ಪ್ರೀತಿಯಿಂದ ಮಾತನಾಡಿಸುತ್ತಾರೆ.

ಹಳೆಯದನ್ನೆಲ್ಲಾ ಅವರು ಮರೆತುಬಿಟ್ಟಿದ್ದಾರೆ. ಆದರೆ, ಅವರನ್ನು ನೋಡಿದಾಗಲೆಲ್ಲ ನಮ್ಮ ಸಣ್ಣತನದ ನೆನಪಾಗಿ ಪಾಪಪ್ರಜ್ಞೆ ಕಾಡುತ್ತದೆ. ತಾಯಿಯಾದವಳು ಮಕ್ಕಳು ಏನೇ ಮಾಡಿದರೂ ಕ್ಷಮಿಸುತ್ತಾಳೆ. ಹಾಗೆಯೇ ಗುರುಗಳು ನಮ್ಮನ್ನು ಸ್ವಂತ ಮಕ್ಕಳಂತೆ ಕಂಡು ಕ್ಷಮಿಸಿದ್ದಾರೆ. ಆದರೂ ಅವರಲ್ಲಿ ಮತ್ತೂಮ್ಮೆ, ಮಗದೊಮ್ಮೆ, “ನಮ್ಮ ತಪ್ಪನ್ನು ಕ್ಷಮಿಸಿಬಿಡಿ ಗುರುಗಳೇ’ ಎಂದು ಕೇಳಿಕೊಳ್ಳಬೇಕು ಅನಿಸುತ್ತದೆ.

ಅವರನ್ನು ಪ್ರತ್ಯಕ್ಷ ಕಂಡಾಗ ಮಾತುಗಳೇ ಹೊರಡುವುದಿಲ್ಲ. ಅದಕ್ಕೆಂದೇ ಈ ಬರಹದಲ್ಲಿ ನನ್ನ ಭಾವನೆಗಳನ್ನೆಲ್ಲಾ ಹೇಳಿಕೊಂಡಿದ್ದೇನೆ. ನನ್ನ ಗುರುಗಳು ಖಂಡಿತಾ ಇದನ್ನು ಗಮನಿಸುತ್ತಾರೆ ಎಂದು ತಿಳಿದೇ ಕೇಳಿಕೊಳ್ಳುತ್ತಿದ್ದೇನೆ : “ಸಾರ್‌, ದುಡುಕಿನಿಂದ ನಾವು ತಪ್ಪು ಮಾಡಿಬಿಟ್ವಿ. ದಯವಿಟ್ಟು ಕ್ಷಮಿಸಿ…’

* ನಿರ್ಮಲಾ ಟಿ., ಹೊಸದುರ್ಗ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.