ನಿಮದೇ ನೆನಪು ದಿನವೂ ಮನದಲ್ಲಿ…


Team Udayavani, Jan 1, 2019, 12:30 AM IST

8.jpg

ನಿಮ್ಮನ್ನೇ ಜೀವದಂತೆ ಹಚ್ಚಿಕೊಂಡಿದ್ದ ನನಗಿಲ್ಲ ತುಂಬಾ ಕಷ್ಟವಾಗುತ್ತಿದೆ. ನಿಮ್ಮ ನೆನಪು ದಿನವೂ ಕಾಡುತ್ತಿದೆ. ನೀವೀಗ ಎಲ್ಲಿದ್ದೀರಿ, ಹೇಗಿದ್ದೀರಿ, ಏನು ಮಾಡುತ್ತಿದ್ದೀರಿ? ನಿಮ್ಮ ಫೋನ್‌ ಕೂಡ ಸ್ವಿಚ್‌ಆಫ್ ಆಗಿ ಆರು ತಿಂಗಳಾಗಿದೆ. ಯಾರಾದರೂ ಗೂಬೆ ಎಂದರೆ ಸಾಕು; ನಿಮ್ಮದೇ ನೆನಪಾಗಿ ಕಣ್ತುಂಬುತ್ತದೆ.

ಹಾಯ್‌ ಸೀನಿಯರ್‌ ಪಿಲ್ಲು
ತುಂಬಾ ದಿನಗಳಿಂದ ನಿಮ್ಮ ನೆನಪು ಬಹಳ ಕಾಡುತ್ತಿದೆ. ಆದರೆ, ನಿಮ್ಮನ್ನು ಸಂಪರ್ಕಿಸಲು ಯಾವ ಮಾರ್ಗವೂ ಇಲ್ಲದೆ ಈ ಪತ್ರ ಬರೆಯುತ್ತಿದ್ದೇನೆ.  ನಿಮಗೆ ನೆನಪಿದೆಯಾ? ಗಂಗೋತ್ರಿಯ ಕ್ಯಾಂಪಸ್‌ಗೆ ಮೊದಲು ಬಂದಾಗ, ಅವತ್ತು ಫ್ರೆಶರ್ ಪಾರ್ಟಿ ನಡೆಯುತ್ತಿತ್ತು. ನೀವು ನೂರಾರು ಜೂನಿಯರ್‌ಗಳ ನಡುವೆ, ಎಲ್ಲರನ್ನೂ ಬಿಟ್ಟು ನನಗೆ ಹೂಗುತ್ಛ ನೀಡಿ ಸ್ವಾಗತಿಸಿದ್ರಿ. ಅದು ನನ್ನ ಅದೃಷ್ಟವೋ, ದುರದೃಷ್ಟವೋ ಗೊತ್ತಿಲ್ಲ. ಸೀನಿಯರ್‌ಗಳು ನನಗೆ, ನಿಮಗೆ ಪ್ರಪೋಸ್‌ ಮಾಡುವ ಟಾಸ್ಕ್ ನೀಡಿದಾಗ, ಕೈ-ಕಾಲು ನಡುಗಿಸುತ್ತಾ ಅದೆಷ್ಟು ಗಲಿಬಿಲಿಗೊಂಡೆನೊ. ಆದರೆ, ನೀವು ಲಿಪ್‌ಸ್ಟಿಕ್‌ ರಂಗಿನ ತುಟಿಯಲ್ಲಿ ಮುಗುಳುನಗುತ್ತಾ, ಕಾಜಲ್‌ ಹಚ್ಚಿದ ಕಣ್ಣುಗಳಲ್ಲಿ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ರಿ. ಇದ್ದಬದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡು, “ಐ ಲವ್‌ ಯೂ ಸೀನಿಯರ್‌’ ಅಂದುಬಿಟ್ಟೆ! ನೀವು ನಯವಾಗಿ ಒಪ್ಪಿದಿರಿ. ಆಗ ನನ್ನ ಹೃದಯದ ಬಡಿತ ಸ್ಟೆತಾಸ್ಕೋಪ್‌ನಲ್ಲಿ ಕೇಳುವಂತೆ ಜೋರಾಗಿ ಕೇಳಿಸುತ್ತಿತ್ತು. 

ಕಾಲೇಜಿನಲ್ಲಿ ಮೊದಲು ಪರಿಚಯವಾಗಿದ್ದು ನಿಮ್ಮದೇ. ದಿನ ಕಳೆದಂತೆ, ನಿಮ್ಮ ಒಳ್ಳೆಯತನ, ಮಾತು, ಸಲುಗೆ, ಸಹಾಯ, ಕಾಳಜಿ ಎಲ್ಲವೂ ಇಷ್ಟವಾಯಿತು. ಬರುಬರುತ್ತಾ ನೀವೂ ನನ್ನನ್ನು ತುಂಬಾ ಹಚ್ಚಿಕೊಂಡಿರಿ. ನೀವು ವåಧ್ಯಾಹ್ನ ತರುತ್ತಿದ್ದ ಟಿಫಿನ್‌ ಬಾಕ್ಸ್‌ಅನ್ನು ಅದೆಷ್ಟು ಸಾರಿ ಕದ್ದು ತಿಂದಿದ್ದೇನೋ ಲೆಕ್ಕವಿಲ್ಲ. ಪ್ರತಿದಿನ ನೀವು ನನಗಾಗಿ ಚಾಕೊಲೇಟ್‌ ತರುತ್ತಿದ್ದಿರಿ. ನಿಮ್ಮ ಬ್ಯಾಗ್‌ನಲ್ಲಿರುವ ಚಾಕ್‌ಲೇಟ್‌ ಹಾಗೇ ಇದ್ದರೆ, ಮರುದಿನ ನೀವೇ ಬಂದು, “ಯಾಕೋ ಗೂಬೆ ಚಾಕೊಲೇಟ್‌ ತಿಂದಿಲ್ಲ ನಿನ್ನೆ’ ಎಂದು ಬಯ್ಯುತ್ತಿದ್ದಿರಿ. ಪ್ರತಿದಿನ “ಐ ಲವ್‌ ಯೂ ಸೀನಿಯರ್‌’ ಎಂದು ತಪ್ಪದೇ ಹೇಳುತ್ತಿದ್ದೆ. ಆಗ ನೀವು, “ಹೋಗೋ ಗೂಬೆ, ಬರೀ ಇದೇ ಆಯ್ತು ನಿಂದು’ ಎಂದು ಮುನಿಸಿಕೊಳ್ಳುತ್ತಿದ್ರಿ. ನಿಜಕ್ಕೂ ನಿಮ್ಮಂಥ ಸೀನಿಯರ್‌ ಸಿಕ್ಕಿದ್ದು ಪುಣ್ಯವೇ ಸರಿ. ಆದರೆ, ಬೀಳ್ಕೊಡುಗೆ ಸಮಾರಂಭದಲ್ಲಿ ನೀವು ನನ್ನನ್ನು ಅಪ್ಪಿ, ಕಣ್ಣೀರು ಸುರಿಸಿದ್ದನ್ನು ಕಂಡು ಗಾಬರಿಯಾಗಿಬಿಟ್ಟಿತ್ತು. ಅಯ್ಯೋ, ನಾಳೆಯಿಂದ ನೀವು ಕಾಲೇಜಿಗೆ ಬರುವುದಿಲ್ಲವಲ್ಲ ಎಂದು ದುಃಖ ತಡೆಯಲಾರದೇ ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. ಆಗ ನೀವು, ಕೈಗೊಂದು ಗಿಫ್ಟ್ ಕೊಟ್ಟು, ಚಾಕ್‌ಲೇಟ್‌ ತಿನ್ನಿಸಿ, ನಡೆದುಬಿಟ್ಟಿರಿ.

ಅಷ್ಟೊಂದು ಪ್ರೀತಿಸುತ್ತಿದ್ದ ನೀವು, ಅಂದಿನಿಂದ ಇಂದಿನವರೆಗೆ ಒಂದೇ ಒಂದು ಕರೆ ಮಾಡಿಲ್ಲ, ಮೆಸೇಜ್‌ ಕೂಡಾ ಇಲ್ಲ. ನಿಮ್ಮನ್ನೇ ಜೀವದಂತೆ ಹಚ್ಚಿಕೊಂಡಿದ್ದ ನನಗಿಲ್ಲ ತುಂಬಾ ಕಷ್ಟವಾಗುತ್ತಿದೆ. ನಿಮ್ಮ ನೆನಪು ದಿನವೂ ಕಾಡುತ್ತಿದೆ. ನೀವೀಗ ಎಲ್ಲಿದ್ದೀರಿ, ಹೇಗಿದ್ದೀರಿ, ಏನು ಮಾಡುತ್ತಿದ್ದೀರಿ? ನಿಮ್ಮ ಫೋನ್‌ ಕೂಡ ಸ್ವಿಚ್‌ಆಫ್ ಆಗಿ ಆರು ತಿಂಗಳಾಗಿದೆ. ಯಾರಾದರೂ ಗೂಬೆ ಎಂದರೆ ಸಾಕು; ನಿಮ್ಮದೇ ನೆನಪಾಗಿ ಕಣ್ತುಂಬುತ್ತದೆ. ಆದರೆ, ಎಲ್ಲೇ ಇರಿ, ಹೇಗೆ ಇರಿ, ಯಾವಾಗಲೂ ನಗ್‌ ನಗ್ತಾ ಸದಾ ಖುಷಿಯಾಗಿರಿ. 

ನಿಮ್ಮದೇ ನೆನಪಲ್ಲಿ ಸದಾ ನಿಮ್ಮನ್ನೇ ಪ್ರೀತಿಸುವ 

ಇಂತಿ ನಿಮ್ಮ ಗೂಬೆ

ಸುನೀಲ ಗದೆಪ್ಪಗೋಳ

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.