ರಾಮ ದುರ್ಗದ ಶಿವ 


Team Udayavani, Mar 2, 2019, 5:07 AM IST

shiva-1.jpg

ನಾಳೆ ಅಲ್ಲ, ನಾಳಿದ್ದೇ ಶಿವರಾತ್ರಿ. ಈ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿ, ಶಿವಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ಜಾಗರಣೆ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರರಾಗುವ ಶುಭದಿನ.
ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ರಾತ್ರಿಯಿಡಿ ಶಿವನಾಮ ಪಠಿಸುತ್ತಾ ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ ವಿವಾಹವಾದಳೆಂಬುದು ಪ್ರತೀತಿ.

ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಸವದತ್ತಿ ಮಾರ್ಗ ಮಧ್ಯದಲ್ಲಿರುವ ಮುಳ್ಳೂರು ಗುಡ್ಡದಲ್ಲಿರುವ ಬೃಹತ್‌ ಶಿವನ ಮೂರ್ತಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮುರುಡೇಶ್ವರ ಮಾದರಿಯಲ್ಲಿ ಅಂದಾಜು ಒಂದೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 76 ಅಡಿ ಎತ್ತರದ ಗಂಗಾ ಸ್ವರೂಪಿಯಾದ ಶಿವನಮೂರ್ತಿಯು ಪ್ರವಾಸಿಗರನ್ನು ಸೆಳೆಯುತ್ತಿದೆ.

ಈ ಮೂರ್ತಿಯ ಶಿಲ್ಪಿಗಾರರು ಶ್ರೀಧರ ಮೂರ್ತಿ ಮತ್ತು ಕುಟುಂಬದವರು. ಮುರುಡೇಶ್ವರದಲ್ಲಿ ಶಿವನನ್ನು ನಿರ್ಮಿಸಿರುವವರೂ ಇವರೇ. ಮುಳ್ಳೂರ ಗುಡ್ಡದಲ್ಲಿರುವ ಶಿವನ ಮೂರ್ತಿಯ ಕೆಳಗಡೆ ಏಕಶಿಲೆಯ ಲಿಂಗವನ್ನು ಕಾಣಬಹುದು. ಈ ವಿಶಿಷ್ಟವಾದ ಲಿಂಗವನ್ನು ಮಧ್ಯಪ್ರದೇಶದ ಓಂಕಾರೇಶ್ವರದಿಂದ ತಂದು ಪ್ರತಿಷ್ಠಾಪನೆ
ಮಾಡಲಾಗಿದೆ. ಅಲ್ಲದೇ ಚಂಡಿಕೇಶ್ವರ ಹಾಗೂ ನಂದಿ ಮೂರ್ತಿಗಳೂ ಇಲ್ಲಿವೆ.

ಸುತ್ತಲೂ ಅರ್ಧನಾರೀಶ್ವರ, ರಾವಣ, ಬೇಡರಕಣ್ಣಪ್ಪ ಮುಂತಾದ ಒಂಭತ್ತು ಮೂರ್ತಿಗಳನ್ನೂ ನಿರ್ಮಾಣ ಮಾಡಿರುವುದು ವಿಶೇಷ. ಮಹಾ ಶಿವರಾತ್ರಿ ಪ್ರಯುಕ್ತ, ಶಿವನ ದೇವಾಲಯದಲ್ಲಿ ಈಗ ಸಂಭ್ರಮದ ವಾತಾವರಣ. 76 ಅಡಿ ಎತ್ತರದ ಧ್ಯಾನಸ್ಥ ಶಿವನ ವಿಗ್ರಹದಿಂದ ಪ್ರಸಿದಿಯಾಗಿರುವ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಅದ್ದೂರಿ ಕಾರ್ಯಕ್ರಮಗಳು ಜರುಗಲಿವೆ. ಪ್ರತಿ ಸೋಮವಾರ ಶಿವ ಪ್ರತಿಷ್ಠಾನ ಸೇವಾ ಸಮಿತಿಯಿಂದ ಅನ್ನ ಸಂತರ್ಪಣೆಯೂ ನಡೆಯುತ್ತದೆ.

ಮಳ್ಳೂರು ಗುಡ್ಡ ಒಂದು ರಮಣೀಯ ಪ್ರವಾಸಿ ಕ್ಷೇತ್ರ. ಇಲ್ಲಿಗೆ ಬಂದವರು ಪ್ರವಾಸಿ ತಾಣವನ್ನು ಮಾತ್ರವಲ್ಲ, ದೇವರ ದರ್ಶನವನ್ನೂ ಮಾಡಿದಂತಾಗಬೇಕು ಎಂದು ಕನಸು ಕಂಡ ಮಾಜಿ ಶಾಸಕ ಅಶೋಕ ಪಟ್ಟಣ, ತಮ್ಮ ತಂದೆ-ತಾಯಿಯ ಇಚ್ಚೆಯಂತೆ ಮುಳ್ಳೂರ ಕಣಿವೆಯ 32 ಎಕರೆಗಳ ವಿಶಾಲವಾದ ಪ್ರದೇಶದಲಿ ಈ ಬೃಹತ್‌ ಶಿವನ ಮೂರ್ತಿಯನ್ನು ಸ್ಥಾಪಿಸಿದ್ದಾರೆ.

ಈ ವಿಶಿಷ್ಟ ಧಾರ್ಮಿಕ ಹಾಗೂ ಪ್ರವಾಸಿ ತಾಣವು ಸವದತ್ತಿ, ಎಲ್ಲಮ್ಮ, ಬದಾಮಿಯ ಬನಶಂಕರಿ, ಗೊಡಚಿ ವೀರಭದ್ರೇಶ್ವರ ಕ್ಷೇತ್ರಗಳ ಮಧ್ಯೆ ಇರುವುದು ಇನ್ನೊಂದು ವಿಶೇಷ. ಹೀಗಾಗಿ ಮಳ್ಳೂರಿಗೆ ಬಂದವರು ಈ ಎಲ್ಲಾ ಕ್ಷೇತ್ರಕ್ಕೆ ಭೇಟಿ ಕೊಡಬಹುದು. ಶಿವ ದೇವಾಲಯದ ಸಮೀಪದಲ್ಲಿಯೇ ಸಾಯಿ ದೇವಸ್ಥಾನವೂ ಬಿಳಿ ಶಿಲೆಯಲ್ಲಿ
ನಿರ್ಮಾಣವಾಗುತ್ತಿದೆ.

ಸುರೇಶ ಗುದಗನವರ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.