ರಜೆ ಇದ್ದರೇ ಒಳ್ಳೆಯದು


Team Udayavani, Sep 13, 2017, 8:00 AM IST

raje.jpg

ರಜೆ ಇಲ್ಲದೆಯೂ ಆಕೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲಳಾದರೂ ಇಲ್ಲಿ ಎಲ್ಲರ ಆತಂಕವೂ ಒಂದೇ ಸಮನಾಗಿರುವುದಿಲ್ಲ. ಒಬ್ಬೊಬ್ಬರದೂ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ. 

ಹೆಂಗಸರಿಗೆ ಋತುಸ್ರಾವದ ಆ ದಿನಗಳಲ್ಲಿ, ಅದೂ ಉದ್ಯೋಗದಲ್ಲಿರುವವರಿಗೆ ಕೊಂಚ ವಿಶ್ರಾಂತಿ ಬೇಕೇ ಬೇಕು. ಇತ್ತೀಚಿನ ದಿನಗಳಲ್ಲಿ ಈ ನಿಯಮವೇನೂ ಜಾರಿಗೆ ಬರದೆ ಆ ನೋವಿನ ದಿನಗಳಲ್ಲೂ ಸಹ್ಯವೋ, ಅಸಹ್ಯವೋ, ಮನೆಯ ಒಳ ಹೊರಗೆ ದುಡಿಯುತ್ತಲೇ ಬಂದಿದ್ದಾಳಾದರೂ ಇತ್ತೀಚಿನ ದಿನಗಳಲ್ಲಿ ಇದಕ್ಕಾಗಿ ರಜೆ ಇದ್ದರೆ ಒಳ್ಳೆಯದೆಂಬುದು ನನ್ನ ಅಭಿಪ್ರಾಯ. ಒಂದು ರೀತಿ ಇದರಿಂದ ಅವರ ಆ ದಿನಗಳು ಜಗಜಾjಹೀರಾಗುವುದು ದಿಟವಾದರೂ ಈ ವಿಷಯದಲ್ಲಿ ಮಕ್ಕಳ ಕುತೂಹಲವನ್ನೂ ಹೆಚ್ಚಿಸಬಹುದಾದರೂ ಅಂದಿನ ಆ ದಿನದಲ್ಲಿ ದಣಿದ ಮನಕ್ಕೆ ವಿಶ್ರಾಂತಿ ಅವಶ್ಯಕ ಎನಿಸುತ್ತೆ.

ರಜೆ ಇಲ್ಲದೆಯೂ ಆಕೆ ತನ್ನ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬಲ್ಲಳಾದರೂ ಇಲ್ಲಿ ಎಲ್ಲರ ಆತಂಕವೂ ಒಂದೇ ಸಮನಾಗಿರುವುದಿಲ್ಲ. ಒಬ್ಬೊಬ್ಬರದೂ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ. ಕೆಲವರಿಗೆ ವಿಪರೀತ ಸ್ರಾವವಾಗಿ ಕಷ್ಟವಾದರೆ, ಇನ್ನು ಕೆಲವರು ಆ ದಿನಗಳನ್ನು ಆರಾಮದಿಂದಲೇ ಕಳೆಯುತ್ತಾರೆ. ಕೆಲವರಿಗೆ ಈ ಮೊದಲನೆಯ ದಿನವೆಂಬುದು ಯಮಯಾತನೆಯ ಪರಿಸ್ಥಿತಿ. ಯಾರಲ್ಲೂ ಹೇಳಿಕೊಳ್ಳಲಾಗದಂಥದ್ದು. 

ಮೊದಲು ನಮ್ಮ ಕಾಲದಲ್ಲಿ ಆ ದಿನಗಳಲ್ಲಿ ನಾವು ಬಹಿಷ್ಠೆಯರಾಗಿದ್ದು ಹಿರಿಕಿರಿಯರೆಲ್ಲರಿಗೂ ತಿಳಿದಿರುತ್ತಿತ್ತು. ಎಲ್ಲರ ಮುಂದೆ ಚಾಪೆ ಚೊಂಬಿನ ಜೊತೆ ಮೂಲೆ ಹಿಡಿದು ಕುಳಿತರೂ ಏನೂ ಅನಿಸುತ್ತಿರಲಿಲ್ಲ. ನಂತರದ ದಿನಗಳಲ್ಲಿ ಅದು ಗುಟ್ಟಾಗಿ ಹೋಯಿತು. ಹೊರಗೆ ಕೂಡದೆ, ಒಳಗಡೆ ಇದ್ದು ಹಿರಿಯರ ದೃಷ್ಟಿಯಲ್ಲಿ ಅಪರಾಧಿಯಾದರೂ ನಾಚಿಕೆಯಿಂದ ಸುಮ್ಮನೆ ಒಳಗಿದ್ದು ಬಿಡುತ್ತಿದ್ದರು. ಆದರೀಗ ಈ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚು. ಅದರೊಡನೆ ಕೆಲಸದ ಒತ್ತಡವೂ ಸೇರಿ ಮಾನಸಿಕವಾಗಿ ದೈಹಿಕವಾಗಿ ಅವರಿಗೆ ಮತ್ತಷ್ಟು ಇರಿಸುಮುರಿಸು ಉಂಟು ಮಾಡುತ್ತೆ. ಅಂಥದ್ದರಲ್ಲಿ ಮುಟ್ಟಿನ ದಿನ ನೋವೂ ಜೊತೆಯಾದರೆ ಅವರು ಸಿಡಿಮಿಡಿಗೊಳ್ಳುವುದು ಸಹಜ.

ಮೊದಲಿನವರು ಮಾಡಿದ್ದ ಎಲ್ಲಾ ನಿರ್ಧಾರಗಳೂ ವೈಜಾnನಿಕ ದೃಷ್ಟಿಯಿಂದ ಸರಿಯಾಗಿತ್ತು. ಆ ದಿನಗಳಲ್ಲಿ ಅವರು ಸುಮ್ಮನೆ ಕುಳಿತೋ, ಅಥವ ಮಲಗಿಯೋ ಆ ಮೂರು ದಿನಗಳನ್ನು ಕಳೆಯಬಹುದಿತ್ತು. ಆದರೀಗ ಹಾಗಾಗುವುದಿಲ್ಲ. ಮೊದಲಿನಂತೆ ಈಗ ಅವಿಭಕ್ತ ಕುಟುಂಬಗಳೂ ಇಲ್ಲ. ಇಲ್ಲಿ ಎಲ್ಲವನ್ನೂ ಮನೆಯೊಡತಿಯೇ ನಿಭಾಯಿಸಬೇಕಾಗುತ್ತದೆ. ಬೇರೆ ದೇಶಗಳ ಹೆಂಗಸರ ಬಗೆಗಿನ ಈ ರೀತಿಯ ಔದಾರ್ಯ ಸರಿಯಾಗಿದೆ. ನಮ್ಮ ದೇಶದಲ್ಲೂ ಇದೇ ನೀತಿಯನ್ನು ಜಾರಿಗೆ ತಂದರೆ ಒಳ್ಳೆಯದು. ಆ ದಿನಗಳಲ್ಲಿ ಅವರಿಗೆ ಕಡೆಯ ಪಕ್ಷ ಒಂದು ದಿನದ ಮಟ್ಟಿಗಾದರೂ ರಜೆ ದೊರೆತರೆ ಒಳ್ಳೆಯದೆಂದು ನನ್ನ ಅಭಿಪ್ರಾಯ.

– ಸುಜಲಾ ಘೋರ್ಪಡೆ, ನ್ಯಾನಪ್ಪನಹಳ್ಳಿ, ಬೆಂಗಳೂರು

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.