ಬೊಟ್ಟು ಬೆಳದಿಂಗಳು, ಮೂಗ್‌ನಲ್ಲಿ ಬೊಟ್‌ ಮಾತಾಡುತ್ತೆ!


Team Udayavani, Nov 15, 2017, 6:00 AM IST

fashion.jpg

ಹೂವು, ಸೂರ್ಯ, ಚಂದ್ರ, ನಕ್ಷತ್ರದಂಥ ಆಕೃತಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೂಗುತಿ ಇದೀಗ ಅಕ್ಷರಗಳು ಮತ್ತು ಪದಗಳ ಆಕೃತಿಯಲ್ಲೂ ಮಾರುಕಟ್ಟೆಯಲ್ಲಿ ಲಭ್ಯವಿದೆ…

ಅನಾದಿ ಕಾಲದಿಂದಲೂ ಹೆಣ್ಣು ಮಕ್ಕಳು ಮೂಗುತಿ ಧರಿಸುತ್ತಿ¨ªಾರೆ. ವಜ್ರ, ಚಿನ್ನ, ಬೆಳ್ಳಿ, ಮುತ್ತು, ಹವಳ, ರತ್ನಗಳಿಗೆ ಸೀಮಿತವಾಗದೆ ಈ ಒಡವೆ, ಪ್ಲಾಸ್ಟಿಕ್‌, ಗಾಜು, ತಾಮ್ರ, ಕಂಚು ಹಾಗೂ ಮರದ ತುಂಡಿನಿಂದಲೂ ತಯಾರಿಸಲ್ಪಡುತ್ತದೆ. ಹೂವು, ಸೂರ್ಯ, ಚಂದ್ರ, ನಕ್ಷತ್ರದಂಥ ಆಕೃತಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೂಗುತಿ ಇದೀಗ ಅಕ್ಷರಗಳು ಮತ್ತು ಪದಗಳ ಆಕೃತಿಯಲ್ಲೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಾಗಿ ಅಮ್ಮ, ಅಜ್ಜಿ ಮದುವೆಗೆ ತೊಟ್ಟ ನತ್ತು ಅಥವಾ ಮೂಗುತಿ ಮತ್ತೆ ಫ್ಯಾಷನ್‌ನ ಲೋಕಕ್ಕೆ ಮರಳಿ ಬಂದಿವೆ.

ಮೂಗುತಿ ಬರಹ
ನಿಮ್ಮ ಹೆಸರು, ಮಗುವಿನ ಅಥವಾ ಪ್ರೀತಿಪಾತ್ರರ ಹೆಸರು, ಜನ್ಮ ದಿನಾಂಕ, ಶ್ರೀ, ಓಂ, ಸ್ವಸ್ತಿಕ್‌, ಶಿಲುಬೆಯ ಆಕೃತಿ ಮುಂತಾದವುಗಳನ್ನು ತೊಟ್ಟು ಮಹಿಳೆಯರು ತಮ್ಮ ಮೂಗಿನ ಅಂದವನ್ನು ಹೆಚ್ಚಿಸುತ್ತಿ¨ªಾರೆ. ಮಹಿಳೆಯರು ಇಂಥದ್ದೇ ಅಕ್ಷರ ಅಥವಾ ಪದಗಳುಳ್ಳ ವಿನ್ಯಾಸದ ಮೂಗುತಿ ಬೇಕು ಎಂದು ಸೋನಾಗಾರರಲ್ಲಿ ಬೇಡಿಕೆ ಇಡುತ್ತಿ¨ªಾರೆ. ಈ ಫ್ಯಾಷನ್‌ನ ಪ್ರಭಾವ ಮದುವೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಎತ್ನಿಕ್‌ ಡೇಯಂಥ ಸಮಾರಂಭ, ಹಬ್ಬ ಮತ್ತು ಪೂಜೆಗಳ ದಿನ ಕಾಣಸಿಗುತ್ತದೆ. 

ಸದ್ದನ್ನೂ ಮಾಡುತ್ತೆ…
ಗೆಜ್ಜೆಗಳು ಸದ್ದು ಮಾಡುತ್ತವೆ ಎಂದು ಎಲ್ಲರಿಗೂ ಗೊತ್ತು. ಈಗ ಸದ್ದು ಮಾಡುವ ಮೂಗುತಿಯೂ ಸಿಗುತ್ತೆ. ಅದು ಹ್ಯಾಂಗಿಂಗÕ… ಮತ್ತು ಟ್ಯಾಸೆಲ್ಸ… ಇರುವ ಮೂಗುತಿ. ಪುಟ್ಟದಾದ ಮಗುವಿನ ಪಾದದ ಆಕೃತಿಯ ಮೂಗುತಿಯನ್ನು ಗರ್ಭಿಣಿಯರು ತೊಡುತ್ತಿ¨ªಾರೆ. ನಿಶ್ಚಿತಾರ್ಥವಾಗಿರೋ ಮಹಿಳೆಯರು, ಮದುವೆ ಆಗಲಿರೋ ಗಂಡಿನ ಹೆಸರನ್ನು ಅಥವಾ ಅವನ ಪೆಟ್‌ ನೇಮ್‌ ಅನ್ನು ಮೂಗುತಿಯಾಗಿ ತೊಡುತ್ತಿ¨ªಾರೆ. ತಮ್ಮ ಸಾಕು ಪ್ರಾಣಿಗಳ ಹೆಸರನ್ನು ಮೂಗುತಿಯಲ್ಲಿ ಅರಳಿಸಿಕೊಂಡವರೂ ಇದ್ದಾರೆ. ಶ್ವಾನಪ್ರಿಯರ ಮೂಗಿನ ಮೇಲೆ ನಾಯಿಯ ಆಕೃತಿಯಿದ್ದರೆ, ಬೆಕ್ಕನ್ನು ಇಷ್ಟ ಪಡುವವರು ಬೆಕ್ಕನ್ನು ಮೂಗಿನ ಮೇಲೇರಿಸಿಕೊಳ್ಳುತ್ತಾರೆ. ಇಂಥ ಭಿನ್ನ ಭಿನ್ನ ಆಕೃತಿಯ ಕಿವಿಯೋಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 

ಚುಚ್ಚಿಸಿಕೊಳ್ಳಬೇಕಿಲ್ಲ…
ಮೂಗು ಚುಚ್ಚಿಸಿಕೊಳ್ಳಲು ಇಷ್ಟವಿಲ್ಲದೇ ಇರುವವರೂ ಈ ಫ್ಯಾಷನ್‌ ಫಾಲೋ ಮಾಡಬಹುದು. ಇಂಥ ಮೂಗುತಿಗಳು ಕ್ಲಿಪ್‌ ಅಥವಾ ಹುಕ್‌ ರೂಪದಲ್ಲೂ ಸಿಗುತ್ತವೆ. ಹಾಗಾಗಿ ಮೂಗು ಚುಚ್ಚಿಸಿಕೊಳ್ಳುವ ತಾಪತ್ರಯವಿಲ್ಲ. ಮೂಗುತಿಯನ್ನು ಸಿಕ್ಕಿಸಿಕೊಳ್ಳಬಹುದು ಕೂಡ. ಉಟ್ಟ ಉಡುಪಿಗೆ ಹೋಲುವ ಮೂಗುತಿ ತೊಡಬೇಕಿದ್ದರೆ ಹುಕ್‌ ಅಥವಾ ಕ್ಲಿಪ್‌ ಮೂಗುತಿ ಉತ್ತಮ. ಉಟ್ಟ ಉಡುಪಿನಲ್ಲಿ ಕಮಲದ ಚಿಹ್ನೆ ಇದ್ದರೆ, ಅದೇ ಆಕೃತಿಯ ಮೂಗಿನ ಬೊಟ್ಟು ಹಾಕಿಕೊಳ್ಳಬಹುದು. 

ನಾನಾ ಆಕಾರ
ಹೃದಯದಾಕಾರದ, ಮನೆಯ ಚಿತ್ರದ, ಜನ್ಮರಾಶಿ ಚಿಹ್ನೆಯ, ಹಾವು, ಮಿಂಚಿನ ಆಕೃತಿ, ಬಲ್ಬ…, ಬಲೂನ್‌, ಬೀಗ, ಕೀಲಿಕೈ, ಪಾದರಕ್ಷೆ… ಹೀಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಆಯ್ಕೆಗಳು ಇವೆ. ಇಂಥ ಮುದ್ರೆಗಳು ಆನ್‌ಲೈನ್‌ನಲ್ಲೂ ಲಭ್ಯವಿವೆ. ಪರ್ಸನಲೈÓx… ಅಥವಾ ಕಸ್ಟಮೈÓx… ಮೂಗಿನ ಬೊಟ್ಟು ಮಾಡಿಕೊಡುವ ಅಂಗಡಿ ಮತ್ತು ಆನ್‌ಲೈನ್‌ ಸರ್ವಿಸ್‌ಗಳು ಲಭ್ಯ ಇರುವ ಕಾರಣ ಮೂಗುತಿಯನ್ನು ಉಡುಗೊರೆಯಾಗಿಯೂ ನೀಡಬಹುದು!

ಒಂದು ವೇಳೆ ನಿಮ್ಮ ಬಳಿ ಚಿನ್ನ ಅಥವಾ ಬೆಳ್ಳಿಯ ಮೂಗುತಿ ಈಗಾಗಲೇ ಇದ್ದರೆ, ಅದಕ್ಕೆ ಬೇಕಾದ ಹೊಸ ವಿನ್ಯಾಸ, ಆಕೃತಿ ನೀಡಿ ಹೊಸ ಲುಕ್‌ ಪಡೆಯಬಹುದು.ಆಗ ಮೂಗಿನ ಬೊಟ್ಟು ತೊಡುವುದು ಬೋರಿಂಗ್‌ ಎನಿಸಲಾರದು. ಮತ್ಯಾಕೆ ತಡ? ಸಾಂಪ್ರದಾಯಿಕ ಮೂಗುತಿಗೆ ಹೊಸ ಟ್ವಿÓr… ನೀಡಿ ಅದನ್ನು ತೊಟ್ಟು ಮಿಂಚಿರಿ!

– ಅದಿತಿ ಮಾನಸ ಟಿ.ಎಸ್‌. 

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.