ಶರಾರಾ ಸುಂದರಿ


Team Udayavani, Sep 12, 2018, 6:00 AM IST

6.jpg

“ಬೆಂಕಿಯ ಕಿಡಿ’ ಎಂಬ ಹೆಸರನ್ನು ಪಡೆದ ದಿರಿಸಿನ ಬಗ್ಗೆ ಗೊತ್ತಾ? ಇದನ್ನು ಧರಿಸಿದ ಹೆಣ್ಮಗಳು ನೋಡುಗರ ಕಣ್ಣಲ್ಲಿ ಮಿಂಚು ಹರಿಸುವುದರಿಂದ ಈ ಹೆಸರನ್ನು ಇಟ್ಟಿದ್ದಾರೋ ಎಂಬ ಅನುಮಾನ ಬಂದರೆ ತಪ್ಪೇನಿಲ್ಲ…

ಶುಭ ಸಮಾರಂಭ ನಡೆಯುವ, ಹೊಸ ಹೊಸ ದಿರಿಸುಗಳನ್ನುಟ್ಟು ತಯಾರಾದ ಹೆಣ್ಮಕ್ಕಳಿಗೆ ಹಿರಿಯರು ಹೇಳುವ ಕಿವಿಮಾತು “ದೀಪ, ಹಣತೆಗಳಿಂದ ದೂರವಿರಿ’ ಎಂದು. ಹಬ್ಬ ಹರಿದಿನಗಳ ಸಮಯದಲ್ಲಿ ಧರಿಸುವ ಬಹುತೇಕ ಸಾಂಪ್ರದಾಯಿಕ ದಿರಿಸುಗಳು ನೆಲ ತಾಗುವಂತಿರುವುದರಿಂದ ಈ ಎಚ್ಚರಿಕೆಯನ್ನು ಹಿರಿಯರು ಸಾಮಾನ್ಯವಾಗಿ ನೀಡುತ್ತಾರೆ. ಆದರೆ, “ಬೆಂಕಿಯ ಕಿಡಿ’ ಎಂಬ ಹೆಸರನ್ನು ಹೊತ್ತ ದಿರಿಸಿನ ಬಗ್ಗೆ ಗೊತ್ತಾ? ನಿಮ್ಮಲ್ಲಿ ಕೆಲವರಿಗೆ “ಶರಾರಾ’ ಎಂದರೆ ಗೊತ್ತಾಗಬಹುದು. ಶರಾರಾ ಎಂಬುದರ ಅರ್ಥ “ಕಿಡಿ’. ಅಷ್ಟುಮಾತ್ರಕ್ಕೆ ಅದಕ್ಕೆ ಬೆಂಕಿ ತಾಕುವುದಿಲ್ಲ ಎಂದು ತಿಳಿಯಬೇಡಿ!

ಲಂಗವೂ ಅಲ್ಲ, ಪ್ಯಾಂಟೂ ಅಲ್ಲ
ಅತ್ತ ಪ್ಯಾಂಟು ಕೂಡಾ ಅಲ್ಲದ, ಇತ್ತ ಪೂರ್ತಿ ಲಂಗದ ಹಾಗೂ ಇಲ್ಲದ ಶರಾರಾವನ್ನು ಕುರ್ತಿ, ದುಪಟ್ಟಾ ಮತ್ತಿತರ ಟಾಪ್‌ಗ್ಳ ಜೊತೆ ತೊಡಬಹುದು. ಮಂಡಿಯ ತನಕ ಪ್ಯಾಂಟನ್ನೇ ಹೋಲುತ್ತದೆ. ಮಂಡಿಯಿಂದ ಕೆಳಗೆ ಕೊಡೆಯ ಹಾಗೆ ತೆರೆದುಕೊಳ್ಳುತ್ತದೆ. ಹೀಗಾಗಿ ಇದನ್ನು “ಅಂಬ್ರೆಲ್ಲಾ ಪ್ಯಾಂಟ್‌’ ಅಂತಲೂ ಕರೆಯುವುದಿದೆ. ಇದು 3 ಪೀಸ್‌ ಸೂಟ್‌ ಜೊತೆಗೆ ಬರುವಂಥದ್ದು. ಟಾಪ್‌ ಆಗಿ ನಿಮಗಿಷ್ಟವಾಗುವ, ಶರಾರಾಗೆ ಸರಿಹೊಂದುವ ಯಾವುದೇ ದಿರಿಸನ್ನು ಬಳಸಬಹುದು. ಇದರ ಜೊತೆಗೆ, ಒಂದು ವೇಲ್‌ ತೊಟ್ಟರೆ ಅಲ್ಲಿಗೆ ಒಂದು ಪರಿಪೂರ್ಣ ಲುಕ್‌ ದೊರೆತಂತಾಗುತ್ತದೆ. 

ಬಂದಿದ್ದೆಲ್ಲಿಂದ?
ಶರಾರಾ ಭಾರತಕ್ಕೆ ಪರಿಚಯವಾಗಿದ್ದು ಮೊಘಲರ ಕಾಲದಲ್ಲಿ. ಆ ಸಮಯದಲ್ಲಿ ಅದನ್ನು ರಾಜಮನೆತನದವರು, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ಮಾತ್ರವೇ ಧರಿಸುತ್ತಿದ್ದರಂತೆ. ಅಂದಹಾಗೆ 70, 80ರ ದಶಕದ ಬಾಲಿವುಡ್‌ ಸಿನಿಮಾಗಳು ಶರಾರಾಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟವು. ನಂತರವೇ ಉತ್ತರಭಾರತದ ಮನೆ ಮನೆಗಳಲ್ಲಿ ಶರಾರಾ ಜಾಗ ಕಂಡುಕೊಂಡಿದ್ದು. ಬಾಲಿವುಡ್‌ ಸಿನಿಮಾವೊಂದರಲ್ಲಿ “ಶರಾರಾ ಶರಾರಾ’ ಎಂಬ ಹಾಡೇ ತಯಾರಾಗಿತ್ತು. ಆ ಹಾಡಿಗೂ, ಶರಾರಾ ದಿರಿಸಿಗೂ ಸಂಬಂಧವಿಲ್ಲ. ಶಮಿತಾ ಶೆಟ್ಟಿ ಕುಣಿದಿದ್ದ ಆ ಹಾಡಿನಲ್ಲಿ, ಶರಾರಾ ಪದದ ಅರ್ಥ “ಬೆಂಕಿ ಕಿಡಿ’.

ವಿಶೇಷ ಸಂದರ್ಭಗಳಿಗೆ ಮಾತ್ರ…
ಕಸೂತಿ ಕೆಲಸ, ಮುತ್ತುಗಳ ಅಲಂಕಾರ ಮುಂತಾದವುಗಳಿಂದ ಗ್ರ್ಯಾಂಡ್‌ ಲುಕ್ಕನ್ನು ನೀಡುವುದರಿಂದ ಶರಾರಾವನ್ನು ದಿನನಿತ್ಯ ಬಳಸಲಾಗದು. ವಿಶೇಷ ಸಂದರ್ಭದಲ್ಲಿ ಮಾತ್ರವೇ ಹೆಚ್ಚಿನವರು ಇದನ್ನು ಬಳಸುತ್ತಾರೆ. ಇದರದ್ದೇ ಸಿಂಪಲ್‌ ವರ್ಷನ್‌ ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲಿ ಹೆಚ್ಚಿನ ಕಸೂತಿ ಮತ್ತು ಮುತ್ತುಗಳ ಅಲಂಕಾರ ಇರುವುದಿಲ್ಲ. ಹೀಗಾಗಿ ಅವುಗಳನ್ನು ದಿನನಿತ್ಯದ ಸಂದರ್ಭಗಳಿಗೆ ಬಳಸಬಹುದು. ಶರಾರಾ ಅನೇಕ ಪ್ರಯೋಗ, ಮಾರ್ಪಾಡುಗಳಿಗೆ ಒಳಪಡುತ್ತಲೇ ಇದೆ. ವಸ್ತ್ರ ವಿನ್ಯಾಸಕಾರರು ಶರಾರಾಗೆ ಇನ್ನಷ್ಟು ಭಾರತೀಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಮುತ್ತಿನ ಕೊಡೆ
ಶರಾರಾದ ಕೆಳಗಿನ, ಅಂಬ್ರೆಲಾ ಎಂದು ಕರೆಯಲ್ಪಡುವ ಭಾಗ ಸಾಮಾನ್ಯವಾಗಿ ಝರಿ, ಗಾಢವಾದ ಕಸೂತಿ ವಿನ್ಯಾಸಗಳು, ಮಣಿ ಮುಂತಾದವುಗಳಿಂದ ಅಲಂಕೃತಗೊಂಡಿರುತ್ತದೆ. ಹೀಗಾಗಿ, ಶರಾರಾದಲ್ಲಿ ಕೊಡೆಯ ಭಾಗವೇ ಹೆಚ್ಚು ಆಕರ್ಷಕವಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನು ಮುತ್ತಿನ ಕೊಡೆ ಎಂದು ಕರೆದರೂ ತಪ್ಪಿಲ್ಲ ಎನ್ನಿ!

ಮದುಮಗಳ ದಿರಿಸಿದು
ಅದ್ಧೂರಿತನವನ್ನು ತೋರ್ಪಡಿಸುವುದರಿಂದ ಉತ್ತರಭಾರತದಲ್ಲಿ ಶರಾರಾವನ್ನು ಬಹುತೇಕ ಹೆಣ್ಮಕ್ಕಳು ಮದುವೆಯ ಸಂದರ್ಭದಲ್ಲಿ ಧರಿಸುತ್ತಾರೆ. ಮೆಹಂದಿ, ಆರತಕ್ಷತೆ… ಹೀಗೆ ವಿವಾಹಕ್ಕೆ ಸಂಬಂಧಿಸಿದ ಆಚರಣೆಗಳಲ್ಲಿ ಎಲ್ಲರ ಕಣ್ಣು ತಮ್ಮ ಮೇಲೆ ಬೀಳಲಿ ಎಂದು ಮದುಮಗಳು ಆಶಿಸುವುದು ಸಹಜವೇ. ಈ ಆಸೆಯನ್ನು ಪೂರೈಸಲು ಶರಾರಾ ಸೂಕ್ತವಾದ ಆಯ್ಕೆ. 

ಹವನ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.