ಹಿರಿಯರನ್ನು ಪ್ರೀತಿಸಿ…


Team Udayavani, Sep 7, 2018, 6:00 AM IST

14.jpg

ನಮ್ಮಜ್ಜಿ ಹೇಳಿದ್ದನ್ನೇ ಹೇಳ್ತಾ ಇರ್ತಾರೆ. ವಟಗುಟ್ಟದೆ ಸುಮ್ನೆ ಇರೋಕೇ ಬರೋಲ್ಲ ಅವ್ರಿಗೆ’, “ಅತ್ತೆ ಜೊತೆ ಅಡ್ಜಸ್ಟ್‌ ಮಾಡ್ಕೊಳ್ಳೋಕೆ ಆಗ್ತಾ ಇಲ್ಲ. ಅದಕ್ಕೇ ಬೇರೆ ಮನೆ ಮಾಡ್ತಾ ಇದೀವಿ’ ಹೆಂಗಸರು ಹೀಗೆ ಹೇಳ್ಳೋದನ್ನು ಕೇಳಿದ್ದೇವೆ ಅಥವಾ ನಮ್ಮ ಮನೆಯಲ್ಲೇ ಇಂಥ ಪ್ರಸಂಗಗಳು ನಡೆಯುತ್ತವೆ. ವಯಸ್ಸಾಯ್ತು ಅಂತ ಮೂಲೆಗೆ ತಳ್ಳಲ್ಪಟ್ಟ ಹಿರಿಜೀವಗಳು ಬಹುತೇಕ ಮನೆಗಳಲ್ಲಿದ್ದಾರೆ. 

ಸಮಯ ನೀಡಿ…
ಮಗ, ಸೊಸೆ ಅಥವಾ ಮಗಳು-ಅಳಿಯ ನೌಕರಿಯೆಂದು ದಿನವೂ ಬಿಜಿ ಇದ್ದರೆ, ಮೊಮ್ಮಕ್ಕಳು ಶಾಲೆ, ಕಾಲೇಜು, ಫ್ರೆಂಡ್ಸ್‌ ಅಂತ ತಮ್ಮದೇ ಲೋಕದಲ್ಲಿರುತ್ತಾರೆ. ಆಗ ಹಿರಿಜೀವಗಳಿಗೆ ಒಂಟಿತನ ಕಾಡುವುದು ಸಹಜ. ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಕಳೆಯುವ ಅವರಿಗೆ ನಿಮ್ಮ ದಿನದ ಒಂದೆರಡು ಗಂಟೆಯನ್ನು ಮೀಸಲಿಡಿ. ಆಫೀಸಿನಿಂದ, ಶಾಲೆಯಿಂದ ಬಂದಮೇಲೆ ಅವರ ಜೊತೆ ಕುಳಿತು ಮಾತನಾಡಿ.

ತಾಳ್ಮೆಯಿಂದ ಆಲಿಸಿ…
ವಯಸ್ಸಾದವರು ಹೇಳಿದ್ದನ್ನೇ ಪದೇ ಪದೇ ಹೇಳುತ್ತಿ ರುತ್ತಾರೆ. ವೃದ್ಧಾಪ್ಯಕ್ಕೆ ಮರೆವು ಜೊತೆಯಾಗುವುದರಿಂದ ಹೀಗಾಗುತ್ತದೆ. ಹೇಳಿದ್ದನ್ನೇ ಹೇಳುತ್ತಾರಲ್ಲ ; ಅದರಿಂದ ನಿಮಗೆ ಕಿರಿಕಿರಿಯಾಗಬಹುದು. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ತಾಳ್ಮೆಯಿಂದ ವರ್ತಿಸಿ.

ಆರೋಗ್ಯ ತಪಾಸಣೆ ಮಾಡಿ… 
“ನನಗೇನಾಗಿದೆ? ಚೆನ್ನಾಗಿಯೇ ಇದ್ದೇನಲ್ಲಾ…?’ ಇದು ವೃದ್ಧರು ಹೇಳುವ ಮಾತು. ಈಗಲೂ ಕೆಲಸ ಮಾಡುತ್ತೇನೆ, ಬೆಳಗ್ಗೆ ವಾಕ್‌ ಹೋಗುತ್ತೇನೆ, ಬಿಪಿ-ಶುಗರ್‌ ಇಲ್ಲ ಅಂತೆಲ್ಲ ಹೇಳಿ ಆಸ್ಪತ್ರೆಗೆ ಹೋಗುವುದಿಲ್ಲ, ಅವರ ಮನವೊಲಿಸಿ, ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಕರೆದೊಯ್ಯಿರಿ.

ಸಮವಯಸ್ಕರೊಡನೆ ಬೆರೆಯಲು ಬಿಡಿ…
ತಮ್ಮದೇ ವಯಸ್ಸಿನವರೊಂದಿಗೆ ಹರಟೆ ಹೊಡೆಯುವುದ ರಿಂದ ಹಿರಿಯರಿಗೆ ಖುಷಿ ಸಿಗುತ್ತದೆ. ಸಮವಯಸ್ಕರ ಕ್ಲಬ್‌, ಸಂಘಟನೆ ಅಥವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರ್ಬಂಧ ಹೇರಬೇಡಿ. 

ರಿಮೋಟ್‌ ಅವರಿಗೂ ಸಿಗಲಿ
ಹಿರಿಯರಿಗೆ ಯೋಗ, ಪೌರಾಣಿಕ ಸಿನೆಮಾ, ಅಧ್ಯಾತ್ಮ ಪ್ರವಚನದಂಥ ಕಾರ್ಯಕ್ರಮಗಳು ಇಷ್ಟವಾಗುತ್ತವೆ. ಟಿವಿ ನೋಡುವ ಸಮಯದಲ್ಲಿ ಕೆಲಹೊತ್ತು ಅವರಿಗೂ ಆಯ್ಕೆಯ ಸ್ವಾತಂತ್ರ್ಯ ನೀಡಿ.

ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯಿರಿ… 
ದೇವಾಲಯಕ್ಕೆ ಅಧ್ಯಾತ್ಮ ಕೇಂದ್ರಗಳಿಗೆ ಭೇಟಿ ನೀಡಿದರೆ ವೃದ್ಧರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೀವನದ ಇಳಿಸಂಜೆಯಲ್ಲಿ ಅವರ ಒಲವು ಅಧ್ಯಾತ್ಮದ ಕಡೆ ವಾಲುವುದು ಸಾಮಾನ್ಯ. ಹಾಗಾಗಿ ಪ್ರಯಾಣಕ್ಕೆ ಆಯಾಸದಾಯಕವಲ್ಲದ ಧಾರ್ಮಿಕ ಕ್ಷೇತ್ರಗಳಿಗೆ ಅವರೊಂದಿಗೆ ಭೇಟಿ ಕೊಡಿ.

ಹಿರಿಯರನ್ನು ನಿರ್ಲಕ್ಷಿಸಬೇಡಿ…
ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವಾಗ, ವಯಸ್ಸಾಗಿದೆ ಎಂಬ ಕಾರಣ ನೀಡಿ ಹಿರಿಯರನ್ನು ನಿರ್ಲಕ್ಷಿಸಬೇಡಿ. ಬದಲಿಗೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರಲ್ಲಿ ಸಲಹೆ ಕೇಳಿ. ಅವರ ಅನುಭವಕ್ಕೆ ಬೆಲೆ ಕೊಡಿ.

ಮಾಲಾ ಮ. ಅಕ್ಕಿಶೆಟ್ಟಿ

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.