ಅಲೀಶಾವಾಸ್ಯಮ್‌


Team Udayavani, Oct 5, 2018, 6:00 AM IST

s-13.jpg

ಅಲೀಶಾ ಖಾನ್‌ ಎಂಬ ನಟಿಯ ನೆನಪಿದೆಯೇ? ಮೂರು ವರ್ಷದ ಹಿಂದೆ ದಿಲ್ಲಿಯ ಬೀದಿಗಳಲ್ಲಿ ಅನಾಥಳಾಗಿ ಅಲೆಯುತ್ತಿದ್ದ ಈ ಮಾಡೆಲ್‌ ಕಮ್‌ ನಟಿಯ ಬದುಕೇ ಒಂದು ದುರಂತ ಸಿನೆಮಾದಂತಿದೆ. ಸಿನೆಮಾಕ್ಕಿಂತಲೂ ಹೆಚ್ಚಾಗಿ ಖಾಸಗಿ ಬದುಕಿನಲ್ಲಿ ಮಾಡಿಕೊಂಡ ವಿವಾದಗಳಿಂದಲೇ ಹೆಚ್ಚು ಜನಪ್ರಿಯಳಾದ ನಟಿ ಅಲೀಶಾ ಖಾನ್‌. ಉತ್ತರ ಪ್ರದೇಶದ ಘಾಜಿಯಾಬಾದ್‌ ಜಿಲ್ಲೆಗೆ ಆ ಹೆಸರು ಬರಲು ಕಾರಣವಾದ ಘಾಜಿ ಎಂಬ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಕಡೆಗೆ ಸ್ವಯಂಕೃತ ಅಪರಾಧಗಳಿಂದಾಗಿ ಬೀದಿ ಪಾಲಾಗಿದ್ದ ಅಲೀಶಾ ಖಾನ್‌ ಮರಳಿ ಬದುಕು ಕಟ್ಟಿಕೊಂಡಿದ್ದಾಳೆ. 

ಇದೀಗ ಬೆನ್ನುಬೆನ್ನಿಗೆ ಅವಳ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮೂರು ವರ್ಷದ ಹಿಂದೆ ಪ್ರಿಯತಮ ಖಾಸಗಿ ಕ್ಷಣಗಳ ಎಂಎಂಎಸ್‌ ಕ್ಲಿಪ್ಪಿಂಗ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ ಬಳಿಕ ಅಲೀಶಾಳ ದುರ್ದಿನಗಳು ಪ್ರಾರಂಭವಾಗಿದ್ದವು. ಇದನ್ನು ನೋಡಿ ತಾಯಿ ಮತ್ತು ಸಹೋದರ ಮನೆಯಿಂದ ಹೊರಗೆ ಹಾಕಿದ ಬಳಿಕ ಅಲೀಶಾ ನಿರ್ಗತಿಕಳಂತೆ ದಿಲ್ಲಿಯ ಬೀದಿ ಸುತ್ತುತ್ತಿದ್ದಳು. ದೇವಸ್ಥಾನ, ಮಸೀದಿ, ಸ್ನೇಹಿತರ ಮನೆಗಳೆಂದು ಸಿಕ್ಕಿದೆಡೆಗಳಲ್ಲಿ ಆಶ್ರಯಪಡೆದುಕೊಂಡಿದ್ದ ಅಲೀಶಾ ಮುಂಬಯಿಗೆ  ಬಂದ ಬಳಿಕ ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಇದೀಗ ಮಾತೃ ಎಂಬ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಿಗೆ ದ ಡಾರ್ಕ್‌ ಸೈಡ್‌ ಅಫ್ ಲೈಫ್ : ಮುಂಬಯಿ ಸಿಟಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದರಲ್ಲಿ ನಿರ್ದೇಶಕ ಮಹೇಶ್‌ ಭಟ್‌ ಕೂಡಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸುತ್ತಿರುವುದೊಂದು ವಿಶೇಷತೆ. ಇಮ್ರಾನ್‌ ಹಶ್ಮಿಯ ಮೈ ಹಸºಂಡ್ಸ್‌ ವೈಫ್ ಮತ್ತು ಆಯಿನಾ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದ ಅಲೀಶಾ 2016ರ ಡೇರ್‌ ಯೂ ಚಿತ್ರದ ಬಳಿಕ ಚಿತ್ರರಂಗದಿಂದ ತುಸು ದೂರವಾಗಿದ್ದಳು. ಇಷ್ಟರ ತನಕ ಅಲೀಶಾಳಿಗೆ ಸಿಕ್ಕಿರುವುದೆಲ್ಲ ಡಾರ್ಕ್‌ ಪಾತ್ರಗಳು. ಅಂದರೆ, ವಾಸ್ತವಕ್ಕೆ ಹತ್ತಿರವಾಗಿರುವ ಹಸಿಹಸಿ ಪಾತ್ರಗಳು. ಇಂಥ ಪಾತ್ರಗಳೇ ತನಗಿಷ್ಟ ಎನ್ನುವ ಅಲೀಶಾ ಮಾತ್‌ೃ ಮತ್ತು ದ ಡಾರ್ಕ್‌ ಸೈಡ್‌ ಆಫ್ ಲೈಫ್ : ಮುಂಬಯಿ ಸಿಟಿಯಲ್ಲೂ ಅದೇ ಮಾದರಿಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾಳೆ. ಕಡೆಗೂ ಬದುಕಿನಲ್ಲೊಂದು ನೆಲೆ ಕಂಡುಕೊಂಡ ಖುಷಿಯಲ್ಲಿರುವ ಅಲೀಶಾ ಸದ್ಯದಲ್ಲೇ ತಮಿಳಿಗೂ ಹೋಗಲಿದ್ದಾಳಂತೆ.  

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.