ಚಾರ್ಮಾಡಿಯ ಮಡಿಲಲ್ಲಿ


Team Udayavani, Mar 16, 2018, 7:30 AM IST

a-12.jpg

ಅದು 2018ರ ಮೊದಲ ತಿಂಗಳ ಕೊನೆಯ ದಿನ. ಅದೆಷ್ಟೋ ದಿನಗಳಿಂದ ಕಾದಿದ್ದ ದಿನ ಅಂತಾನೇ ಹೇಳಬಹುದು. ಈ ಸುತ್ತಾಟ, ಅಲೆದಾಟ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ! ಅದ್ರಲ್ಲೂ ದಿನವಿಡೀ ಲೆಕ್ಚರ್‌ ಕೇಳಿ, ಅದೇ ಕ್ಲಾಸು, ಅದೇ ಮನೆ, ಅದೇ ದಿನಚರಿ ಅಂದ್ರೆ ಬೋರ್‌ ಆಗೇ ಆಗುತ್ತೆ. ಇಂತಹ ಬೋರಿಂಗ್‌ ಟೈಮ್‌ಗೆ ಬ್ರೇಕ್‌ ಕೊಟ್ಟು ಹಿಂದೆಂದೂ ನೋಡಿರದೇ ಇದ್ದ ಜಾಗಕ್ಕೆ “ಟ್ರೆಕ್ಕಿಂಗ್‌’ ಎಂಬ ಶೀರ್ಷಿಕೆ ಕೊಟ್ಟು ನಾವು ನಡೆದಿದ್ದು ಚಾರ್ಮಾಡಿಯ ಮಡಿಲಿಗೆ. 

ಸರಿಸುಮಾರು 39 ವಿದ್ಯಾರ್ಥಿಗಳು ಜೊತೆಗೆ ಮೂವರು ಉಪನ್ಯಾಸಕರು ಮಾತ್ರವಲ್ಲದೇ 75ರ ಹರೆಯದಲ್ಲೂ ಲವಲವಿಕೆಯಿಂದ ಕೂಡಿರುವ ಹಿರಿಯ ಭಾಷಾಂತರಕಾರ ಶ್ರೀಕರ್‌,  ಎಲ್‌. ಭಂಡಾರ್ಕರ್‌, ದಿನೇಶ್‌ ಹೊಳ್ಳರವರ ಮಾರ್ಗದರ್ಶನದಲ್ಲಿ ನಮ್ಮ ಟ್ರೆಕ್ಕಿಂಗ್‌ನ ಪಯಣವನ್ನು ಪ್ರಾರಂಭಿಸಿದೆವು. ಆರಂಭದಲ್ಲಿ ಎಲ್ಲರೂ ಲವಲವಿಕೆಯಿಂದ ಕಿರಿದಾದ ಕಾಲುದಾರಿ, ಏರು-ತಗ್ಗಿನ ಪ್ರದೇಶದಲ್ಲಿ ಜಾರುತ್ತಾ, ಕಲ್ಲುಗಳಿಂದ ಎಡವಿ ಹಾಗೋ ಹೀಗೋ ಸಾಗುತ್ತಿ¨ªೆವು. ಸುಮಾರು ಒಂದು ಗಂಟೆ ಕಳೆಯುವಷ್ಟರಲ್ಲಿ ನಾವು ತಲುಪಿದ್ದ ಸ್ಥಳ “ಕೊಡೆ ಕಲ್ಲು’ ಎನ್ನುವ ಶಿಖರ. ಕೊಡೆಯಾಕಾರದ ಬೃಹತ್‌ ಬಂಡೆಕಲ್ಲೊಂದು ಇರುವ ಸ್ಥಳವಾದ್ದರಿಂದ ಆ ಪ್ರದೇಶವನ್ನು ಕೊಡೆ ಕಲ್ಲು ಎಂದೇ ಕರೆಯುತ್ತಾರೆ. ಅಲ್ಲಿಯವರೆಗೂ ಬಿಸಿಲಿನಲ್ಲಿ ಸಾಗಿಬಂದ ನಮಗೆ ಆ ಸ್ಥಳವನ್ನು ತಲುಪಿದಾಕ್ಷಣ ಒಮ್ಮೆ ನಿಟ್ಟುಸಿರು ಬಿಡುವಂತಾಯ್ತು. ಆ ಕ್ಷಣ ಮರುಭೂಮಿಯಲ್ಲಿ ಓಯಸಿಸ್‌ ಸಿಕ್ಕಂಥ ಅನುಭವವಾಗಿದ್ದಂತೂ ನಿಜ. ಆ ಪ್ರದೇಶದಲ್ಲಿ ಸ್ವಲ್ಪ ದಣಿವಾರಿಸಿಕೊಂಡು, ನೆನಪಿನ ದಾಖಲೆಗೆ ಒಂದಷ್ಟು ಫೊಟೋಗಳನ್ನು ಕ್ಲಿಕ್ಕಿಸಿಕೊಂಡು ಮುಂದೆ ಸಾಗಿದೆವು. ಅಲ್ಲೊಮ್ಮೆ-ಇಲ್ಲೊಮ್ಮೆ ಆಯಾಸದಿಂದ ದಣಿವಾರಿಸಿಕೊಳ್ಳಲು ನಿಂತಾಗ ಮಾರ್ಗದರ್ಶಕರು ಕಾಡು, ಅದರ ಮಹತ್ವ, ಈಗ ಅವುಗಳು ಎದುರಿಸುತ್ತಿರುವ ಸಮಸ್ಯೆಗಳು, ಕಾಡಿನ ಸಂರಕ್ಷಣೆಯಲ್ಲಿ ನಮ್ಮ ಪಾತ್ರಗಳ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಹಾಗೂ ಸರಳವಾಗಿ ತಿಳಿಸುತ್ತಿದ್ದರು. 

ಮುಂದೆ ನಮ್ಮ ಪಯಣ ಸಾಗಿದ್ದು ಬಾಳೆಕಲ್‌ ಗುಡ್ಡಕ್ಕೆ. ಸುಡುಬಿಸಿಲಿನಲ್ಲಿ, ಬಯಲುಗಾಡಿನಲ್ಲಿ, ಏಕಪಥೀಯವಾಗಿ ಹೋಗುವುದೆಂದರೆ ಸುಲಭದ ಮಾತಲ್ಲ, ಸ್ವಲ್ಪ ಆಯ ತಪ್ಪಿದರೂ ಶಿಖರವನ್ನು ಏರುತ್ತಿರುವವರು ತಪ್ಪಲಿನಲ್ಲಿರಬೇಕಾಗುತ್ತದೆ. ಹಾಗಾಗಿ, ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಮುಂದೆ ಹೆಜ್ಜೆ ಹಾಕುತ್ತಿದ್ದೆವು. ಎರಡು ಗಂಟೆಯ ಸತತ ನಡಿಗೆಯ ನಂತರ ನಾವು ತಲುಪಿದ ಸ್ಥಳ ಬಾಳೇಕಲ್‌ ಗುಡ್ಡ. ಆ ಸ್ಥಳ ತಲುಪಿದಾಕ್ಷಣ ಒಮ್ಮೆ ಏದುಸಿರು ಬಿಟ್ಟು ಸುತ್ತಲೂ ಕಣ್ಣು ಹಾಯಿಸುವಷ್ಟರೊಳಗೆ ಅಷ್ಟು ದೂರ ಸಾಗಿಬಂದ ಆಯಾಸವೆಲ್ಲ ಮಾಯವಾಗಿತ್ತು. ಸುತ್ತೆಲ್ಲ ನೋಡಿದರೆ ಪರ್ವತಗಳ ಸಾಲು, ಹಚ್ಚಹಸಿರಿನಿಂದ ಕೂಡಿರುವ ನಿತ್ಯ ಹರಿದ್ವರ್ಣದ ಕಾಡು, ಬಿಸಿಲ ಬೇಗೆಯನ್ನು ನಿವಾರಿಸುವಂತಹ ತಂಪಾದ ಗಾಳಿ, ಲೋಕದ ಜಂಜಾಟದಿಂದ ಬಳಲಿರುವ ಮನಸಿಗೆ ಶಾಂತಿ, ನೆಮ್ಮದಿಯ ಸ್ಪರ್ಶ ಸಿಕ್ಕಂತಹ ಅನುಭವ ಆಗಿದ್ದಂತೂ ನಿಜ.

ಇಂಟರ್ನೆಟ್‌, ಟಿ.ವಿ., ನೆಟ್‌ವರ್ಕ್‌, ಸೋಶಿಯಲ್‌ ಮೀಡಿಯಾ… ಇಂತಹ ತಂತ್ರಜ್ಞಾನಗಳು ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂದು ನಮ್ಮೆಲ್ಲರಿಗೂ ಗೊತ್ತೇ ಇದೆ. ಆದರೆ ಇದ್ಯಾವುದರ ಸಂಪರ್ಕವಿಲ್ಲದೆ ತಾಂತ್ರಿಕ ಜೀವನದಿಂದ ಸಂಪೂರ್ಣವಾಗಿ ದೂರವಾಗಿ ಜೀವಿಸುತ್ತಿರುವ ಜನರೂ ಇ¨ªಾರೆ. ಇಂತಹ ಜನರಿರುವ ಪ್ರದೇಶಕ್ಕೆ ಸಾಗಿತ್ತು ನಮ್ಮ ಟ್ರೆಕ್ಕಿಂಗ್‌ ಟೀಮ್‌. ಕೇವಲ ಮೂರ್‍ನಾಲ್ಕು ಮನೆಗಳಿರುವ ಈ ಹಳ್ಳಿಯ ಹೆಸರು “ಬಿದಿರುತಳ’. ಇಲ್ಲಿಯ ಜನರ ಜೀವನವೇ ತುಂಬಾ ಭಿನ್ನ. ದೇಶದಲ್ಲಿ ನಡೆಯುತ್ತಿರುವ ವಿಷಯಗಳನ್ನು ತಿಳಿಯಲು ಇವರಿಗಿರುವ ಏಕೈಕ ಮೂಲವೆಂದರೆ ರೇಡಿಯೊ. ಜಗತ್ತಿನ ಆಗು-ಹೋಗುಗಳ ಅರಿವಿಲ್ಲದೆ ತಮ್ಮಷ್ಟಕ್ಕೆ ತಾವು ಬದುಕುತ್ತಿರುವ ಜನರವರು. ತಮ್ಮ ದಿನನಿತ್ಯದ ಬಳಕೆಯ ವಸ್ತುಗಳನ್ನು ಖರೀದಿಸಲು ಅದೆಷ್ಟೋ ದೂರ ನಡೆದು ಹೋಗಬೇಕಾದ ಪರಿಸ್ಥಿತಿ ಅವರದ್ದು. ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಪಡೆಯದಿದ್ದರೂ ಕೂಡ ಇರುವುದರಲ್ಲಿಯೇ ನೆಮ್ಮದಿಯ ಜೀವನವನ್ನು ಕಳೆಯುತ್ತಿರುವ ಅವರನ್ನು ಕಂಡಾಗ ಸಂತೋಷದ ಜೊತೆಗೆ ಆಶ್ಚರ್ಯವೂ ಆಗಿತ್ತು.

ಬೆಳಗ್ಗೆಯಿಂದ ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಮುಂದೆ ಮುಂದೆ ಸಾಗುತ್ತಿದ್ದ ನಮ್ಮ ಕಾಲುಗಳು ಹಿಂತಿರುಗಿ ನಡೆಯುವ ಸಮಯ ಬಂದಿತ್ತು. ಪ್ರಕೃತಿಯ ಮಡಿಲಲ್ಲಿ ಕಳೆದ ಆ ದಿನ ಅನೇಕ ಅನುಭವದ ಜೊತೆಗೆ ಪಾಠವನ್ನೂ ಕಲಿಸಿತ್ತು. ಆ ದಿನ ಪೂರ್ತಿ ನಮ್ಮನ್ನು ತನ್ನಲ್ಲಿ ಇರಿಸಿಕೊಂಡಿದ್ದ ಪ್ರಕೃತಿ ಮಾತೆ ತಾಯಿಮಡಿಲ ಸುಖ ಸ್ಪರ್ಶವನ್ನು ನೀಡಿದ್ದಳು. 

ಭಾವನಾ ಜೈನ್‌  ಆಳ್ವಾಸ್‌ ಕಾಲೇಜು, ಮೂಡಬಿದ್ರಿ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.