ಒಂದು ಮಗು ಹುಟ್ಟಿದಾಗ ಒಬ್ಬ ಅಪ್ಪ ಹುಟ್ಟುತ್ತಾನೆ !


Team Udayavani, Jul 27, 2018, 6:00 AM IST

11.jpg

ಅಪ್ಪ ಎಂದರೆ ಆಕಾಶ’- ಈ ಮಾತು ನೂರಕ್ಕೆ ನೂರು ನಿಜ. ಎಲ್ಲರಿಗೂ ಅಪ್ಪ ಎಂದರೆ ಇಷ್ಟ . ಹೆಣ್ಣುಮಕ್ಕಳಿಗಂತೂ ಕೇಳುವುದೇ ಬೇಡ. “ಒಂದು ಮಗು ಹುಟ್ಟಿದಾಗ ಒಬ್ಬ ಅಪ್ಪ ಹುಟ್ಟುತ್ತಾನೆ’ ಎಂದು ಹೇಳುವುದು ನಿಜ. ಅಪ್ಪನಿಗೆ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳ ಮೇಲೆ ಪ್ರೀತಿ ಹೆಚ್ಚು. ಮಗು ಹುಟ್ಟಿದಾಗ ಅದೆಷ್ಟೋ ಅಪ್ಪಂದಿರು ಕುಣಿದು ಕುಪ್ಪಳಿಸುತ್ತಾರೆ. ತನ್ನ ಮಗುವನ್ನು ನೋಡುವ ಆತುರದಿಂದ “ಹೆರಿಗೆ ಆಯ್ತಾ’ ಎಂದು ಡಾಕ್ಟರ್‌ ಹತ್ರ ಕೇಳ್ತಾ ಇರುತ್ತಾರೆ. ಅಷ್ಟೊಂದು ಆತುರ ಅವರಲ್ಲಿ ಮಗುವನ್ನು ನೋಡಲು!

ಆದರೆ, ನನ್ನ ಜೀವನದಲ್ಲಿ ಹಾಗೆ ಆಗಲಿಲ್ಲ. ನಾನು ಹುಟ್ಟಿದಾಗ ನನ್ನ ಅಪ್ಪ ನನ್ನನ್ನು ನೋಡಲೇ ಇಲ್ಲ. ನಾನು ಹುಟ್ಟಿ ನಾಲ್ಕು ದಿವಸವಾದರೂ ನನ್ನಪ್ಪ , “ಮಗು ಹೇಗಿದೆ? ಹೆಣ್ಣು ಮಗುವಾ? ಗಂಡು ಮಗುವಾ?’ ಅಂತಲೂ ಕೇಳಲೇ ಇಲ್ಲ. ಹೀಗೆ ಕೇಳದಿರಲೂ ಒಂದು ಕಾರಣವಿದೆ. ಅದೇನೆಂದರೆ, ನಾನು ಹುಟ್ಟುವ ಮೊದಲು ವೈದ್ಯರು ಹೇಳಿದ್ದರು, “ಒಂದೋ ಮಗು ಉಳಿಯುತ್ತೆ, ಇಲ್ಲಾಂದ್ರೆ ತಾಯಿ’ ಅಂತ. ಹೀಗಿರುವಾಗ ನಾನು ಹುಟ್ಟಿದಾಗ ನನ್ನನ್ನು ಮೊದಲು ವೈದ್ಯರು ಹೊರಗೆ ತಂದು ಮನೆಯವರಿಗೆ ತೋರಿಸಿ, ನನ್ನ ಅಮ್ಮನನ್ನು ಮಾತ್ರ ನೋಡಲು ಬಿಡಲಿಲ್ಲವಂತೆ. ಹಾಗಾಗಿ, ನನ್ನನ್ನು ಅಪ್ಪ ನೋಡಲಿಲ್ಲ ಅಂತ ಅನ್ನಿಸುತ್ತದೆ. ಅಮ್ಮನಿಗೆ ಹುಷಾರಿಲ್ಲದ ಕಾರಣ ಐಸಿಯುನಲ್ಲಿ ಇಟ್ಟಿದ್ದರಿಂದ ಅಮ್ಮನನ್ನು ತೋರಿಸಲಿಲ್ಲ. ಮತ್ತೆ ಅಮ್ಮ ಹುಷಾರಾದಾಗ ಎಲ್ಲವೂ ಸರಿ ಹೋಯಿತು. ಅಪ್ಪ ನನ್ನನ್ನು ನೋಡಿ ಖುಷಿ ಪಟ್ಟರು. ನನ್ನ ಅಪ್ಪನಿಗೆ ನಾನು ಮೂರನೆಯ ಮಗು. ನನಗೆ ಇಬ್ಬರು ಅಕ್ಕಂದಿರಿದ್ದಾರೆ. ನಾವು ಮೂವರೂ ಹೆಣ್ಣುಮಕ್ಕಳು. ಆದರೆ ಅಪ್ಪ ಎಂದೂ ಹೆಣ್ಣುಮಕ್ಕಳೆಂದು ಬೇಸರಿಸಿದವರಲ್ಲ. ನಮ್ಮನ್ನು ಗಂಡುಮಕ್ಕಳಂತೆಯೇ ಬೆಳೆಸಿದ್ದಾರೆ.

ನಾನು ಪಿಯುಸಿ ಓದುತ್ತಿರುವಾಗ ಅಪ್ಪ ಬಾಂಬೆಗೆ ಹೋಗಿದ್ದರು. ಅದೇ ಸಮಯದಲ್ಲಿ ನನ್ನ ಕೆಮೆಸ್ಟ್ರಿ ಪರೀಕ್ಷೆ ಮೂರು ಮೂರು ಬಾರಿ ಮುಂದೆ ಹೋದಾಗ ನಾನು ತುಂಬಾ ಧೈರ್ಯ ಕಳೆದುಕೊಂಡೆ. ಆಗ ಅಪ್ಪ ಬಾಂಬೆಯಿಂದ ನನಗೆ ಆಗಾಗ ಫೋನ್‌ ಮಾಡ್ತಾನೆ ಇದ್ದರು. ನನಗೆ ಧೈರ್ಯ ಹೇಳಿ ಸಮಾಧಾನ ಮಾಡುತ್ತಿದ್ದರು. “ಎಲ್ಲ ಒಳ್ಳೆಯದೇ ಆಗುತ್ತದೆ, ಬೇಸರ ಮಾಡಬೇಡ’ ಎನ್ನುತ್ತಿದ್ದರು. ನನ್ನಪ್ಪ ನನಗೆ ಅಷ್ಟೊಂದು ಧೈರ್ಯ ಹೇಳದಿದ್ದರೆ ಆವಾಗ ನನ್ನ ಪರಿಸ್ಥಿತಿ ಹೇಗಿರುತ್ತಿತ್ತು ಅಂತ ನನಗೆ ಎಣಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮನ್ನು ದೊಡ್ಡವರನ್ನಾಗಿ ಮಾಡಲು ನಮ್ಮಪ್ಪ ತುಂಬಾ ಕಷ್ಟಪಟ್ಟಿದ್ದಾರೆ. ಅದರಲ್ಲೂ ನಾವು ಮೂವರೂ ಹೆಣ್ಣು ಮಕ್ಕಳಾದ್ದರಿಂದ, ನಮ್ಮ ಕುಟುಂಬದವರೇ ನಮ್ಮನ್ನು ದೂರ ಇಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ನಮ್ಮ ಅಪ್ಪ ನಮ್ಮನ್ನು ಚೆನ್ನಾಗಿ ಓದಿಸಿದ್ದಾರೆ. ನನ್ನ ಅಕ್ಕಂದಿರೂ ವಿದ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸದಲ್ಲಿದ್ದಾರೆ. ಇದಕ್ಕೆಲ್ಲ ನಮ್ಮಪ್ಪನೇ ಕಾರಣ. ಹೀಗೆ ಹೇಳಲು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನನ್ನಪ್ಪ ನನ್ನ ಜೀವನದ ನಿಜವಾದ ಹೀರೋ.

ಸೌಮ್ಯಾ, ಎಂಜಿಎಂ ಕಾಲೇಜು, ಕುಂಜಿಬೆಟ್ಟು , ಉಡುಪಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.