ಅಮ್ಮ ನಕ್ಕ ದಿನ ನನ್ನ ಜನ್ಮ ದಿನ


Team Udayavani, Feb 22, 2019, 12:30 AM IST

12.jpg

ಅಬ್ದುಲ್‌ ಕಲಾಂ ಅವರು ತಾಯಿಯ ಕೊಡುಗೆ ಮತ್ತು ತನ್ನ  ಜನ್ಮದ ಕುರಿತು ಹೀಗೆ ಹೇಳಿದ್ದಾರೆ- ತನ್ನ ಮಗು ಅತ್ತಾಗ ತಾಯಿ ನಕ್ಕ ಮೊದಲ ದಿನವೇ ತನ್ನ ಜನ್ಮ ದಿನ !

    ನನ್ನ ಪಾಲಿಗೆ ನನ್ನ ಅಮ್ಮನೇ ನಿಜವಾದ ಹೀರೋಯಿನ್‌! ಅವಳಿಂದ ನಾನು ಪಡೆದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಮಾನವ ಹುಟ್ಟಿದಾಗ ವಿಶ್ವ ಮಾನವ, ಬೆಳೆಯುತ್ತ ಬೆಳೆಯುತ್ತ ಅಲ್ಪಮಾನವನಾಗುತ್ತಾನೆ- ಎಂದು ಕುವೆಂಪು ಅವರ ಒಂದು ಮಾತಿದೆ. ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆಯೋ ಅವುಗಳು ಹಾಗೆಯೇ ಬೆಳೆಯುತ್ತವೆ ಎಂಬುದು ವಾಸ್ತವ ಸಂಗತಿ. ಮನೆಯೇ ವೆ‌ೂದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಜೀವನದಲ್ಲಿ ತಾಯಿಯ ಪ್ರೀತಿಯನ್ನು ಜಗತ್ತಿನಲ್ಲಿ ಬೇರಾರೂ ನೀಡಲು ಸಾಧ್ಯವೇ ಇಲ್ಲ. ನನ್ನ ತಾಯಿ ಕಷ್ಟ ಎಂಬ ಪದಕ್ಕೆ ಸಡ್ಡು ಹೊಡೆದು ತನ್ನ ಇಬ್ಬರು ಮಕ್ಕಳನ್ನು ದಡ ಸೇರಿಸಲು ತುಂಬಾ ಕಷ್ಟ ಪಟ್ಟವಳು. ತಂದೆಯನ್ನು ಕಳೆದುಕೊಂಡ ನಾವುಗಳು ಎಂದೂ ಕೊರಗಬಾರದು, ಯಾವ ಕೊರತೆಯೂ ಅವರಿಗೆ ಉಂಟಾಗಬಾರದೆಂದು ಕೆಲಸಕ್ಕೆ ಹೋಗಲು ಶುರು ಮಾಡಿದಾಗ ನನ್ನ ತಾಯಿಗೆ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಒದಗಿದಾಗಲೂ ಎಂದೂ ಕೊರಗದೆ ನಮ್ಮನ್ನು ದಡ ಸೇರಿಸಬೇಕೆಂದು ಜೀವವನ್ನೇ ತನ್ನ ಮಕ್ಕಳಿಗಾಗಿ ಪಣವಾಗಿಟ್ಟಳು. ತಾಯಿ ಎಂಬ ಕರುಳಿನ ಭಾಂದವ್ಯವೇ ಹಾಗೇ ಅಲ್ಲವೆ, ಯಾವತ್ತೂ ತನ್ನ ಮಕ್ಕಳಿಗಾಗಿ ಮಿಡಿಯುವ ಪ್ರೇರಕವಾದ ಶಕ್ತಿಯವಳು. ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಎಂದಿಗೂ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂಬ ಮಾತನ್ನು ತುಂಬ ಸಲ ಕೇಳಿದ್ದೇವೆ. 

ಖ್ಯಾತ ಮಾನವತಾವಾದಿ ಬಾಬಾ ಆಮ್ಟೆಯವರ ತಾಯಿ ಹೆಚ್ಚು ಓದಿದವರಲ್ಲ. ಆದರೆ, ಬಹಳ ಬುದ್ಧಿಶಾಲಿಯಾಗಿದ್ದರು. ಯಾವ ವಿಷಯವನ್ನಾದರೂ ಬಹಳ ಚೆನ್ನಾಗಿ ಮನಸ್ಸಿಗೆ ನಾಟುವಂತೆ ತಿಳಿಸುತ್ತಿದ್ದರು. ಒಮ್ಮೆ ಬಾಬಾ ಆಮ್ಟೆಗೆ ಒಂದು ಜಪಾನ್‌ ಬೊಂಬೆಯನ್ನು ಖರೀದಿಸಿ ತಂದು ಕೊಟ್ಟರು. ಅದು ಬಿದ್ದಷ್ಟೂ ಎದ್ದು ನಿಲ್ಲುತ್ತಿತ್ತು. “ಮಗ, ಈ ಬೊಂಬೆಯನ್ನು ನೀನು ಬೀಳಿಸುತ್ತಾ ಬೀಳಿಸುತ್ತಾ ನೀನು ಸುಸ್ತಾಗುವಿಯಷ್ಟೇ, ಆದರೆ ಅದು ಪ್ರತಿಸಲವೂ ಎದ್ದು ನಿಲ್ಲುತ್ತದೆ’ ಎಂದು ತಾಯಿ. “ಈ ಬೊಂಬೆಯ ರೀತಿಯಲ್ಲೇ ನೀನು ಸಹ ಜೀವನದಲ್ಲಿ ಅನೇಕ ಸಲ ಬೀಳಬೇಕಾಗಬಹುದು. ಬಿದ್ದರೂ ಸಹ ತಕ್ಷಣ ಏಳುವುದರಲ್ಲಿ ಜಿನವಾದ ಘನತೆಯಿದೆ. ಸೋತರೂ ಸಹ ಸೋಲಿನಿಂದ ಕುಗ್ಗದಿರುವುದೇ ಬದುಕಿನ ಇನ್ನೊಂದು ಹೆಸರು’ ಎಂದರು ತಾಯಿ. ತಾಯಿಯ ಈ ಸಲಹೆಯನ್ನು ಚೆನ್ನಾಗಿ ಗ್ರಹಿಸಿದ ಅಮ್ಟೆ ಈ ಮಾತನ್ನು ಆದರ್ಶವಾಗಿಟ್ಟುಕೊಂಡು, ಅನೇಕ ಕಷ್ಟ-ವಿಪತ್ತುಗಳು ಬಂದರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ, ಅವರು ಭಾರತದ ಉದ್ದಗಲಕ್ಕೂ ಓಡಾಡಿ ಕುಷ್ಠ ರೋಗಿಗಳ ಸೇವೆಯಲ್ಲಿ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಶ್ರುತಿ ಸಂದೇಶ್‌ ನೆರಿಯ
ಅಂತಿಮ ಬಿ.ಎ, ಶ್ರೀ ಧ. ಮಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.