ಮಹಿಳಾ ರಕ್ಷಣೆಗೆ “ಕೂಟ್‌’ ಯೋಜನೆ: ಮೊಬೈಲ್‌ ಆ್ಯಪ್‌ ಸಿದ್ಧ

ವಿಧವೆ ಸಹಿತ ದಿಕ್ಕಿಲ್ಲದ ಮಹಿಳೆಯರಿಗೆ ಸಹಾಯ ಉದ್ದೇಶ

Team Udayavani, Mar 5, 2020, 6:30 AM IST

ಮಹಿಳಾ ರಕ್ಷಣೆಗೆ “ಕೂಟ್‌’ ಯೋಜನೆ: ಮೊಬೈಲ್‌ ಆ್ಯಪ್‌ ಸಿದ್ಧ

ಕಾಸರಗೋಡು: ಜಿಲ್ಲೆಯಲ್ಲಿ ವಿಧವೆಯರ ಸಹಿತ ದಿಕ್ಕಿಲ್ಲದ ಮಹಿಳೆಯರ ಜೀವನ ಸುಧಾರಿತಗೊಳಿಸುವ ಮತ್ತು ಸಂರಕ್ಷಣೆ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಮಹಿಳಾ ಸಂರಕ್ಷಣೆ ವಿಭಾಗ ವತಿಯಿಂದ ರಚಿಸಲಾದ “ಕೂಟ್‌(ಜತೆಗಾರ)’ ಯೋಜನೆಯ ಅಂಗವಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಮೊಬೈಲ್‌ ಅಪ್ಲಿಕೇಷನ್‌ ಸಿದ್ಧವಾಗಿದೆ.

ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ
ಪತಿ ಮೃತ ಪಟ್ಟವರು, ಪತಿಯಿಂದ ವಿಚ್ಛೇದನ ಪಡೆದವರು, ಪತಿ ನಾಪತ್ತೆ ಯಾದವರು ಮೊದಲಾದವರ ಆಶ್ರಯವಿಲ್ಲದ ಮಹಿಳೆಯರಿಗೆ ಸಹಾಯ ಒದಗಿಸುವ ಯೋಜನೆ ಇದಾಗಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌, ನಗರಸಭೆಗಳಲ್ಲಿ ವಾರ್ಡ್‌ ಮಟ್ಟದಲ್ಲಿ ಈ ಆ್ಯಪ್‌ ಬಳಸಿ ಸಮೀಕ್ಷೆ ನಡೆಸಲು ಆಶಾ ಕಾರ್ಯಕರ್ತೆಯರಿಗೆ ಹೊಣೆ ನೀಡಲಾಗಿದೆ. ಇಂಥಾ ಮಹಿಳೆಯರ ವ್ಯಕ್ತಿಗತ ಮಾಹಿತಿಗಳು, ಕುಟುಂಬ, ಶಿಕ್ಷಣಾರ್ಹತೆ, ಆರೋಗ್ಯದ ಮಟ್ಟ, ಪುನರ್‌ ವಿವಾಹ ಬಗ್ಗೆ ಆಸಕ್ತಿ ಸಹಿತ ಮಾಹಿತಿಗಳು ಸಮೀಪಕ್ಷೆಯಲ್ಲಿ ಸಂಗ್ರಹಿಸಲಾಗುವುದು. ಒಂದು ತಿಂಗಳ ಅವ ಧಿಯಲ್ಲಿ ಫೈನೆಕ್ಸ್‌ಸ್ಟ್‌ ಇನ್ನವೇಷನ್‌ ಎಂಬ ಸ್ಟಾರ್ಟ್‌ ಅಪ್‌ ಇಷನ್‌ನ ಸಹಾಯದೊಂದಿಗೆ ಕೂಟ್‌ ಯೋಜನೆ ಅಂಗವಾಗಿ ಮೊಬೈಲ್‌ ಆ್ಯಪ್‌ ತಯಾರಾಗಿದೆ. ಕನ್ನಡ, ಇಂಗ್ಲಿಷ್‌, ಮಲೆಯಾಳಂ ಭಾಷೆಗಳು ಆ್ಯಪ್‌ ನಲ್ಲಿವೆ.

ಎಲ್ಲ ಯೋಜನೆಗಳ ಮಾಹಿತಿಯೂ ಈ ಒಂದೇ ಆ್ಯಪ್‌ ನಲ್ಲಿರುವುದು ತುಂಬ ಆರೋಗ್ಯಕರ ಬೆಳವಣಿಗೆ. ಸಮೀಕ್ಷೆ ಪೂರ್ತಿಗೊಂಡು ಲಭಿಸಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ವಿವಿಧ ವಿಭಾಗಗಳ ನಿರ್ಗತಿಕ ಮಹಿಳೆಯರಿಗೆ ಕೇಂದ್ರ-ರಾಜ್ಯಸರಕಾರಗಳ ವ್ಯಾಪ್ತಿಯಲ್ಲಿ ಲಭಿಸಬೇಕಾದ ಸೌಲಭ್ಯ ಲಭ್ಯತೆಗೆ ಬೇಕಾದ ಕ್ರಮಕೈಗೊಳ್ಳಲಾಗುವುದು. ಜಾರಿಯಲ್ಲಿ ಸರಕಾರಿ ಯೋಜನೆಗಳಲ್ಲದೆ ವಿಧವಾ ಸಂರಕ್ಷಣೆ ಸಮಿತಿ ಮತ್ತು ಯೋಜನೆಯೊಂದಿಗೆ ಸಹಕರಿಸಲು ಸಿದ್ಧರಿರುವ ಸಂಘಟನೆಗಳ, ಎನ್‌.ಜಿ.ಒ.ಗಳ ಸಹಕಾರವನ್ನು ಕೋರಲಾಗುವುದು.

ಜಾರಿಯಲ್ಲಿರುವ ವಿವಿಧ ಸರಕಾರಿ ಯೋಜನೆಗಳ ವ್ಯಾಪ್ತಿಯಲ್ಲಿ ನೌಕರಿ, ಪರಿಣತಿ, ತರಬೇತು ಒದಗಿಸಿ ವಿಧವೆಯರನ್ನು ಸ್ವಾವಲಂಬಿಯಾಗಿಸುವ ಯತ್ನ ನಡೆಸಲಾಗುವುದು. ಜತೆಗೆ ಸ್ವಂತ ಉದ್ದಿಮೆ ಆರಂಭಿಸುವ ಇತ್ಯಾದಿ ಉದ್ದೇಶಗಳಿಗೆ ಬ್ಯಾಂಕ್‌ ಸಾಲ ಒದಗಿಸುವ ಕ್ರಮ ನಡೆಸಲಾಗುವುದು. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ನಡೆಸುವ ವಿವಿಧ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಕ್ರಮವೂ ಈ ನಿಟ್ಟಿನಲ್ಲಿ ನಡೆಸಲಾಗುವುದು. ಪುನರ್‌ ವಿವಾಹದ ಬಗ್ಗೆ ಆಸಕ್ತಿಹೊಂದಿರುವ ಮಹಿಳೆಯರಿಗೆ ಬೇಕಾದ ಸಹಾಯವನ್ನೂ ಒದಗಿಸಲಾಗುವುದು.

ಈ ಸಂಬಂಧ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ “ಕೂಟ್‌’ ಅಪ್ಲಿಕೇಷನ್‌ ತರಬೇತಿ ಕಾರ್ಯಕ್ರಮ ಅಂಗವಾಗಿ “ಶ್ರದ್ಧಾ’ ಜನಜಾಗೃತಿ ವಿಚಾರ ಸಂಕಿರಣ ಜರಗಿತು. ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್‌ ಬಾಬು ಉದ್ಘಾಟಿಸಿದರು. ಫೆನ್ನೆಕ್ಸ್‌ಟ್‌ ಸಂಸ್ಥೆಯ ಪ್ರತಿನಿಧಿ  ಅಭಿಲಾಷ್‌ ಸತ್ಯನ್‌ ನೇತೃತ್ವ ನೀಡಿದರು. ಮಹಿಳಾ ಕಲ್ಯಾಣ ಅ ಧಿಕಾರಿ ಎಂ.ವಿ. ಸುನಿತಾ, ಪಿ. ಶಶಿಕಂತ್‌ ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.