ವಿಶಾಖಪಟ್ಟಣಂನಲ್ಲಿ ರೋಹಿತ್ – ರಾಹುಲ್ ಶತಕದಬ್ಬರ : ಇಂಡೀಸ್ ಬೌಲರ್ ಗಳು ನಿರುತ್ತರ
ಸಿಡಿದ ಶ್ರೇಯಸ್ ಅಯ್ಯರ್ – ರಿಷಭ್ ಪಂತ್ ; ವಿಂಡೀಸ್ ಗೆಲುವಿಗೆ 388 ರನ್ ಗುರಿ
Team Udayavani, Dec 18, 2019, 5:36 PM IST
ವಿಶಾಖಪಟ್ಟಣಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ರನ್ ರಾಶಿಯನ್ನೇ ಪೇರಿಸಿದೆ.
ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (159) ಮತ್ತು ಕನ್ನಡಿಗ ಕೆ.ಎಲ್. ರಾಹುಲ್ (102) ಅವರ ಶತಕದಬ್ಬರ ಮತ್ತು ಮಧ್ಯಮ ಕ್ರಮಾಂಕದಲ್ಲಿ ಯುವ ಬ್ಯಾಟ್ಸ್ ಮನ್ ಗಳಾದ ಶ್ರೇಯಸ್ ಅಯ್ಯರ್ (53) ಹಾಗೂ ರಿಷಭ್ ಪಂತ್ (39) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ನಿಗದಿತ 50 ಓವರುಗಳಲ್ಲಿ 05 ವಿಕೆಟ್ ಕಳೆದುಕೊಂಡು 387 ರನ್ ಕಲೆ ಹಾಕಿದೆ ಮತ್ತು ಈ ಮೂಲಕ ಕೆರಿಬಿಯನ್ನರ ಗೆಲುವಿಗೆ 388 ರನ್ ಗಳ ಬೃಹತ್ ಗುರಿಯನ್ನು ನಿಗದಿ ಮಾಡಿದೆ.
ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಂತೆಯೇ ಟಾಸ್ ಗೆದ್ದ ಪೊಲಾರ್ಡ್ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಚೆನ್ನೈನಲ್ಲಾದಂತೆ ಇಲ್ಲೂ ಭಾರತೀಯ ಬ್ಯಾಟ್ಸ್ ಮನ್ ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಯೋಚನೆ ಪೊಲಾರ್ಡ್ ಗಿತ್ತು.
ಆದರೆ ಇಲ್ಲಿ ಭಾರತೀಯ ಆರಂಭಿಕ ಜೋಡಿ ಬ್ಯಾಟ್ ಬೀಸಿದ ರೀತಿಗೆ ಇಂಡೀಸ್ ಬೌಲರ್ ಗಳು ತತ್ತರಿಸಿಹೋದರು. ಅದರಲ್ಲೂ ರೋಹಿತ್ ಶರ್ಮಾ ಅವರಂತೂ ಈ ಅಂಗಣದಲ್ಲಿ ರನ್ ಮಳೆಯನ್ನೇ ಹರಿಸಿದರು. 44ನೇ ಓವರಿನವರೆಗೆ ಕ್ರೀಸ್ ಆಕ್ರಮಿಸಿಕೊಂಡ ರೋಹಿತ್ ತನ್ನ ಭರ್ಜರಿ ಇನ್ನಿಂಗ್ಸ್ ನಲ್ಲಿ 17 ಬೌಂಡರಿ ಮತ್ತು 05 ಸಿಕ್ಸರ್ ಸಿಡಿಸಿ 159 ರನ್ ಬಾರಿಸಿದರು. ಇದು ರೋಹಿತ್ ಏಕದಿನ ವೃತ್ತಿಬದುಕಿನ 27ನೇ ಶತಕವಾಗಿದೆ.
ಇತ್ತ ಒಂದು ಬದಿಯಿಂದ ರೋಹಿತ್ ಶರ್ಮಾ ಅಬ್ಬರಿಸುತ್ತಿದ್ದರೆ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಶರ್ಮಾ ಅವರಿಗೆ ಉತ್ತಮ ಬೆಂಬಲ ನೀಡಿದರು. ರೋಹಿತ್ ಅಬ್ಬರದ ನಡುವೆಯೇ ರಾಹುಲ್ ಅವರು ಶತಕ ದಾಖಲಿಸಿ ಮಿಂಚಿದರು. ರಾಹುಲ್ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 104 ಎಸೆತೆಗಳಲ್ಲಿ 102 ರನ್ ದಾಖಲಿಸಿದರು. ಶರ್ಮಾ – ರಾಹುಲ್ ಜೋಡಿ 36.6 ಓವರ್ ಗಳವರೆಗೆ ಕ್ರೀಸ್ ಆಕ್ರಮಿಸಿಕೊಂಡು 227 ರನ್ ಗಳ ಭರ್ಜರಿ ಜೊತೆಯಾಟವನ್ನು ದಾಖಲಿಸಿತು.
ರಾಹುಲ್ ಔಟಾದೊಡನೆ ಕ್ರೀಸಿಗೆ ಬಂದ ನಾಯಕ ಕೊಹ್ಲಿ (0) ಒಂದೇ ಎಸೆತಕ್ಕೆ ಆಟ ಮುಗಿಸಿದರು. ಈ ಹಂತದಲ್ಲಿ ಶರ್ಮಾ ಅವರಿಗೆ ಜೊತೆಯಾದ ಶ್ರೇಯಸ್ ಅಯ್ಯರ್ ತಾನೂ ಸಿಡಿಲಾರಂಭಿಸಿದರು. 32 ಎಸೆತೆಗಳಲ್ಲಿ 53 ರನ್ ದಾಖಲಿಸುವ ಮೂಲಕ ಅಯ್ಯರ್ ತನ್ನ ಬ್ಯಾಟಿಂಗ್ ತಾಕತ್ತನ್ನು ಪ್ರದರ್ಶಿಸಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಶೇಷ ಗಮನ ಸೆಳೆದದ್ದು ರಿಷಭ್ ಪಂತ್ (39) ಅವರ ಸ್ಪೋಟಕ ಬ್ಯಾಟಿಂಗ್. ಇಂಡೀಸ್ ಬೌಲರ್ ಗಳ ಮೇಲೆ ದಂಡೆತ್ತಿ ಹೋದ ಪಂತ್ ಕೇವಲ 16 ಎಸೆತಗಳಲ್ಲಿ 39 ರನ್ ಬಾರಿಸಿದರು. ಇದರಲ್ಲಿ 03 ಬೌಂಡರಿ ಮತ್ತು 04 ಭರ್ಜರಿ ಸಿಕ್ಸರ್ ಒಳಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ