ಶತಮಾನಗಳೇ ಕಳೆದರೂ ಭರತನಾಟ್ಯ ಚಿರನೂತನ: ಪ್ರತಿಭಾ ಸಾಮಗ


Team Udayavani, Mar 5, 2020, 5:28 AM IST

ಶತಮಾನಗಳೇ ಕಳೆದರೂ ಭರತನಾಟ್ಯ ಚಿರನೂತನ: ಪ್ರತಿಭಾ ಸಾಮಗ

ಪ್ರತಿಯೊಂದು ಕಲೆಗಳನ್ನು ಅಪ್ಪಿ ಆರಾಧಿಸುವ ಈ ನಾಡಿನಲ್ಲಿ ಭರತನಾಟ್ಯವೂ ತನ್ನದೇ ಸ್ಥಾನವನ್ನು ಸಂಪಾದಿಸಿಕೊಂಡು ಈ ಮಣ್ಣಿನ ಕಲೆಯಾಗಿ ಬೆಳೆದು ಬಂದಿದೆ. ಇಂತಹ ಕಲೆಯನ್ನೇ ಜೀವವನ್ನಾಗಿಸಿಕೊಂಡವರು ಪ್ರತಿಭಾ ಎಲ್‌ ಸಾಮಗ. ಕಲಾಸಕ್ತರಿಗೆ, ಓದುಗರಿಗೆ ಇವರ ಹೆಸರು ಚಿರ ಪರಿಚಿತ. ಪ್ರತಿಭಾ ಅವರಿಗೆ ತಾಯಿಯೇ ಸಂಗೀತದ ಮೊದಲ ಗುರು. ಸಂಗೀತದಲ್ಲಿ ಸೀನಿಯರ್‌, ವಯೊಲಿನ್‌ ವಾದನದ ಕಲಿಕೆ, ಸಂಸ್ಕೃತ ಕೋವಿದ ಪದವಿ, ಬಿ.ಎಸ್ಸಿ, ಬಿ.ಎಡ್‌ ಪದವಿ ಮುಗಿಸಿ ಅಧ್ಯಾಪನ ವೃತ್ತಿಯನ್ನು ಪ್ರಾರಂಭಿಸಿ 26 ವರ್ಷ ಅಧ್ಯಾಪಿಕೆಯಾಗಿ, ನಂತರ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಪಡೆದವರು. ಕಲೆ ಎನ್ನುವುದು ಒಂದು ಧ್ಯಾನ, ಮುಪ್ಪಿನ ಬದುಕನ್ನು ಮತ್ತಷ್ಟು ಖುಷಿಯಾಗಿ, ನೆಮ್ಮದಿಯಾಗಿ ಕಳೆಯಲು ನಮ್ಮ ಶಾಸ್ತ್ರೀಯ ಕಲೆ ಉತ್ತಮ ಜತೆಗಾರ್ತಿ ಅನ್ನುವ ಇವರು ಭರತಾಟ್ಯ ನೃತ್ಯದ ಕುರಿತು ಸುದಿನದ ” ಮಾತು ಮಂದಾರ ‘ ಅಂಕಣದೊಂದಿಗೆ ಮಾತನಾಡಿದ್ದಾರೆ

 ಭಾರತೀಯ ನೃತ್ಯ ಶೈಲಿಯಲ್ಲಿ ಸಮಕಾಲೀನ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಕಲೆ ಎಂಬುದು ನಿಂತ ನೀರಲ್ಲ ಅಂತ ಹೇಳುತ್ತಾರೆ ಅದು ಒಪ್ಪಿಕೊಳ್ಳುವ ವಿಷಯ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ನೋಡುವುದಾದರೆ ಭರತನಾಟ್ಯ ನೃತ್ಯ ಪ್ರಕಾರದಲ್ಲಿ ವಿಕೃತವಾದ ಬದಲಾವಣೆ ಆಗಿದೆ. ಹಿಂದಿನ ಕಾಲದಲ್ಲಿ ಭಕ್ತಿ ಪ್ರಧಾನವಾಗಿ ದೇವರಿಗೆ ಸಮರ್ಪಣೆ ಎಂದು ಮಾಡುತ್ತಿದ್ದ ಕಲೆ ಇಂದು ಉದ್ಯಮ-ವ್ಯಾವಹಾರಿಕವಾಗಿ ಬೆಳೆಯುತ್ತಿದೆ. ಹಿಮೇಳ ಕಣ್ಮರೆಯಾಗುತ್ತಿದ್ದು, ರೆಕಾಂರ್ಡಿಂಗ್‌ ಸಿಡಿಗಳ ಮೊರೆ ಹೋಗುತ್ತಿದ್ದಾರೆ. ಇದು ತಪ್ಪು ಅಂತ ಹೇಳುವುದಿಲ.É ಏಕೆಂದರೆ ಬದಲಾವಣೆ ಎಂಬುದು ಜಗದ ನಿಯಮ ಆದರೆ ಶಾಸ್ತ್ರೀಯ ನೃತ್ಯ ಕಲಿತಾಗ ಅದಕ್ಕೆ ಬೇಕಾದ ಮೂಲ ಅಂಶಗಳನ್ನು ಬಿಡಲೇ ಬಾರದು.

 ಕಲೆಗಳು ವ್ಯಕ್ತಿಯ ಮನಸ್ಸು ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳುತ್ತಾರೆ. ಈ ಒಂದು ಅಂಶ ನಿಮ್ಮ ಬದುಕಿನಲ್ಲಿ ನಿಜವಾಗಿದೆಯೇ ?
ಖಂಡಿತವಾಗಿಯೂ ಕಲೆ ನನ್ನ ಬದುಕನ್ನು ತುಂಬಾ ಬದಲಾಯಿಸಿ ಬಿಟ್ಟಿದೆ. ಅದರಲ್ಲೂ ವಯಸ್ಸಾದ ಮೇಲಂತೂ ಕಲೆಯೇ ನನ್ನ ಸರ್ವಸ್ವವಾಗಿದೆ. ಕಲೆ ಎಂಬುದು ಧ್ಯಾನ ಇದ್ದ ಹಾಗೆ. ಒಮ್ಮೆ ನೀವು ಅದನ್ನು ನಂಬಿದರೆ ಅದು ನಿಮ್ಮನ್ನು ಎಂದೂ ಕೈ ಬಿಡುವುದಿಲ್ಲ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಒಂದು ಕಲೆ ನಮ್ಮ ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಉತ್ತಮ ಜೀವನ ಕಟ್ಟಿಕೊಳ್ಳಲು ಬೇಕಾಗುವಂತಹ ಶಿಸ್ತು, ಸಂಸ್ಕಾರ, ಏಕಾಗ್ರತೆ ಮುಂತಾದ ಜೀವನ ಮೌಲ್ಯಗಳಿಗೆ ಭದ್ರ ಬುನಾದಿ ಹಾಕುತ್ತದೆ. ಕಲೆಯನ್ನು ಒಮ್ಮೆ ಪ್ರೀತಿಸಿದರೆ ಸಾಕು ಸಮಾಜ ನಿಮ್ಮನ್ನು ಪ್ರೀತಿಸುವಷ್ಟು ಗೌರವವನ್ನು ತಂದು ಕೊಡುತ್ತದೆ.

 ಭಾರತೀಯ ನೃತ್ಯ ಪರಂಪರೆಯಲ್ಲಿ ಭರತನಾಟ್ಯಕ್ಕೆ ಯಾವ ಸ್ಥಾನಮಾನ ಇದೆ ?
ಪ್ರತಿಯೊಂದು ನೃತ್ಯ ಪ್ರಕಾರಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ಆದರೆ ಅವೆಲ್ಲವನ್ನೂ ಒಂದು ತಕ್ಕಡಿಯಲ್ಲಿಟ್ಟು ತೂಗುವುದಾದರೆ ನಮ್ಮ ಶಾಸ್ತ್ರೀಯ ನೃತ್ಯವಾದ ಭರನಾಟ್ಯ ಶ್ರೀಮಂತವಾದ ಕಲೆ. ತನ್ನ ಸಾತ್ವಿಕ ಗುಣದಿಂದಲೇ ಜನರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದಕ್ಕಿದೆ. ಮನೋಧರ್ಮಕ್ಕೆ ವಿಪುಲ ಅವಕಾಶವನ್ನು ಕಟ್ಟಿ ಕೊಡುವ, ಪ್ರತಿನಿಧಿಸುವ ಈ ಕಲೆ ಅಭಿನಯ, ಭಾವ, ರಾಗ ಸರಳತೆಯನ್ನು ಎತ್ತಿ ಹಿಡಿಯುತ್ತದೆ. ದಶಕಗಳು ಅಲ್ಲ ಶತಮಾನ ಕಳೆದರೂ ಭಾರತೀಯ ನೃತ್ಯ ಪರಂಪರೆಯಲ್ಲಿ ಭರತನಾಟ್ಯಕ್ಕೆ ಇರುವ ಪೂಜನೀಯ ಸ್ಥಾನ-ಮಾನ ಎಂದಿಗೂ ಬದಲಾಗುವುದಿಲ್ಲ.

 ಕಲಾನುಭೂತಿ ಎಂದರೇನು ?
ನೋಡಿ ಈ ಒಂದು ಅಂಶ ಪ್ರೇಕ್ಷಕ ಮತ್ತು ಕಲಾವಿದ ಇಬ್ಬರಿಗೂ ಅನ್ವಯವಾಗುತ್ತದೆ. ಕಲಾವಿದ ತನ್ನ ಕಲೆಯನ್ನು ಅನುಭವಿಸಿಕೊಂಡು ಪ್ರೇಕ್ಷಕನ ಮುಂದೆ ಪ್ರಸ್ತುತ ಪಡಿಸಿದಾಗ ಮಾತ್ರ ಅದರ ಅನುಭವ ಅನುಭಾವ ಪ್ರೇಕ್ಷಕನಿಗೆ ಸಿಗುತ್ತದೆ. ಅಂತೆಯೇ ಪ್ರೇಕ್ಷ ಕನಲ್ಲೂ ಕಲೆ ಯನ್ನು ಅನು ಭ ವಿ ಸುವ ಮನೋ ಧರ್ಮ ಇರ ಬೇಕು.

 ಕಲಾ ಪ್ರೇಕ್ಷಕ ತನ್ನಲ್ಲಿನ ಸೌಂದರ್ಯ ಪ್ರಜ್ಞೆಯನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳು ವುದು ಹೇಗೆ?
ಮೊದಲು ಆತನಿಗೆ ಯಾವ ಕಲೆಯ ಬಗ್ಗೆ ಅಪಾರ ಆಸಕ್ತಿ ಇದೆ ಎಂಬುದನ್ನು ಮೊದಲು ತಿಳಿ ದುಕೊಳ್ಳಬೇಕು. ಉದಾ : ಒಬ್ಬ ಕಲಾವಿದನಿಗೆ ಭರನಾಟ್ಯ ಇಷ್ಟ ಅಂತಾದರೆ ಅವನು ಮೊದಲು ಆ ಕಲೆಯ ಬಗ್ಗೆ ಕಿಂಚಿತ್ತಾದರೂ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ಆಗ ಮಾತ್ರ ಆತ ಕಲೆಯ ಸತ್ವವನ್ನು , ಚಂದವನ್ನು ಆನಂದಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ತಿರುಳೇ ಗೊತ್ತಿಲ್ಲದೇ ಕಲೆಯ ಆಳವನ್ನು ಆಸ್ವಾದಿಸುವ ಪ್ರಜ್ಞೆಯನ್ನು ಉತ್ಕೃಷ್ಟಗೊಳಿಸಿ ಕೊಳ್ಳಲಾಗುವುದಿಲ್ಲ.

 ಶಾಸ್ತ್ರೀಯ ನೃತ್ಯ ಪರಂಪರೆಯನ್ನು ಜನಪ್ರಿಯಗೊಳಿಸಲು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಿಕೊಳ್ಳಬಹುದು?
ನನ್ನ ಪ್ರಕಾರ ಇದರ ಹೊಣೆಗಾರಿಕೆ ಮಾಧ್ಯಮದವರಾದ ನಿಮ್ಮ ಮೇಲಿದೆ. ಈ ಯೂಟ್ಯೂಬ್‌, ಫೇಸ್‌ಬುಕ್‌, ವಾಟ್ಸಪ್‌ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಕಲೆ ಕುರಿತು ಎಷ್ಟೇ ಮಾಹಿತಿಯನ್ನು ಪಸರಿಸಿದರು ಅದರ ಮೂಲ ತತ್ವ- ಸತ್ವ, ಗುಣ ಯಾವುದು ಸಮಾಜಕ್ಕೆ ತಲುಪುವುದಿಲ್ಲ. ಅದೇ ಇದರ ಬದಲಾಗಿ ದೈನಿಕಗಳ ಮೂಲ ಕ ಕಲೆ ಕುರಿತು, ನೃತ್ಯ ಪ್ರಕಾರಗಳ ಮಾಹಿತಿ ಒಳಗೊಂಡ ಪ್ರಶ್ನೆ ಟಿಪ್ಪಣಿಗಳನ್ನು ಬಿತ್ತರಿಸಿದರೆ ಸಮಾಜದ ಎಲ್ಲೆಡೆಗೂ ಅದರ ಪರಿಪೂರ್ಣತೆಯ ವಿಚಾರ ತಲುಪುತ್ತದೆ. ಆ ಮೂಲಕ ನಮ್ಮ ಭಾರತೀಯ ನೃತ್ಯ ಪರಂಪರೆಯನ್ನು ಉಳಿಸಬಹುದು.

1980ರಲ್ಲಿ ಉಡುಪಿಯಲ್ಲಿ ನೃತ್ಯ ತರಗತಿಗಳನ್ನು ಆರಂಭಿಸಿ ಆಸಕ್ತರಿಗೆ ತನ್ನ ವಿದ್ಯೆಯನ್ನು ಧಾರೆಯೆರೆದಿದ್ದಾರೆ. ಇವಲ್ಲದೆ, ನೃತ್ಯ ಕಮ್ಮಟ, ಪ್ರಾತ್ಯಕ್ಷಿಕೆಗಳ ನಿರ್ವಹಣೆ, ನೃತ್ಯ ಪರೀಕ್ಷೆಗಳ ಪರೀಕ್ಷಕಿ, ಸಂಗೀತ – ನೃತ್ಯ ಸ್ಪರ್ಧೆಗಳಿಗೆ ತೀರ್ಪುಗಾರಿಕೆ ಮೊದಲಾದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಪ್ರತಿಭಾರವರ ಸಂಗೀತ, ನೃತ್ಯ, ಯಕ್ಷಗಾನ ಕುರಿತಾದ ಆಳವಾದ ಅವಲೋಕನ, ವಿಮರ್ಶೆ, ಮುಂತಾದ ಬರವಣಿಗೆಗಳು ಪ್ರಕಟಗೊಂಡಿವೆ.

ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.