ಮೌನವೇ ಎಲ್ಲವನ್ನೂ ಹೇಳಬಲ್ಲದು


Team Udayavani, Jun 17, 2019, 5:53 AM IST

mouna

ಪ್ರತಿದಿನ ನೀವು ಅಂದುಕೊಂಡ ಹಾಗೇ ಇರಬೇಕು ಎಂದೇನಿಲ್ಲ. ಒಂದು ದಿನ ಬೇಸರ ಅತಿಯಾಗಿ ಕಾಡಬಹುದು, ಕೆಲವೊಮ್ಮೆ ಕಾರಣವಿಲ್ಲದೆ ಮನಸ್ಸು ಚಂಚಲವಾಗಬಹುದು, ಖುಷಿ, ಸಂತೊಷಗಳಿರಬಹುದು. ಕಾರಣವನ್ನು ಹುಡುಕಿದರೂ ಅಲ್ಲೆಲ್ಲಾ ಕೇವಲ ನಮಗೇ ಅರ್ಥವಾಗದ ಶೂನ್ಯಗಳು, ಮೌನವಾದ ಕೆಲವು ದನಿಗಳೇ ಗೋಚರವಾಗಬಹುದು. ಇನ್ನೂ ತಾರ್ಕಿಕವಾಗಿ ಕೆದಕುತ್ತಾ ಹೋದರೆ ದಿವ್ಯ ಮೌನದೊಳಗಿನ ನೀರವತೆ ನಮ್ಮ ಈ ಭಾವನೆೆಗೆ ಕಾರಣವನ್ನು, ಸುಪ್ತ ಮನಸ್ಸಿನ ಪ್ರಶಾಂತತೆ ಮತ್ತು ಅಶಾಂತಿಯನ್ನು ನಮ್ಮ ಎದುರು ತೆರೆದಿಡುವ ಕೆಲಸವನ್ನು ಮಾಡುತ್ತದೆ.

ಒಂದೊಮ್ಮೆ ಕೋಪ ಬರಬಹುದು. ಆತುರದ ನಿರ್ಧಾರಗಳ ಮೂಲಕ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿಕೊಳ್ಳುವ ಸಂದರ್ಭಗಳೂ ನಮ್ಮೆದುರು ತಲೆದೋರಬಹುದು. ಕೋಪ ಕರಗಿದ ಮೇಲೆ ನಮ್ಮ ತಪ್ಪು ಒಪ್ಪುಗಳ ಸಣ್ಣ ಚಿತ್ರಣವೊಂದು ನಮ್ಮ ಕಣ್ಣ ಮುಂದೆ ಹಾಗೇ ಸುಳಿದು ಹೋಗುತ್ತದೆ. ಆಗ ನಮಗೆ ಅರಿವಾಗುತ್ತದೆ ನಮ್ಮ ಆತುರದ ಬುದ್ಧಿಯಿಂದ ನಾವು ಕಳೆದುಕೊಂಡದ್ದೆಷ್ಟು, ನಮ್ಮಲ್ಲಿ ಉಳಿಸಿಕೊಂಡದ್ದು ಎಷ್ಟು ಎಂದು. ಹೀಗೆ ಆತುರದ ಆಂತರ್ಯವನ್ನು ಬಗೆಯುವುದಕ್ಕಿಂತ, ನಮ್ಮ ಸುಪ್ತ ಮನಸ್ಸಿನ ಆಂತರ್ಯವನ್ನು ಅರಿಯುವುದನ್ನು ಆ ಕ್ಷಣಕ್ಕಾದರೂ ರೂಢಿಸಿಕೊಂಡಲ್ಲಿ ನಾವು ಉಳಿಸಿಕೊಳ್ಳುವುದರ ಮೌಲ್ಯ ಹೆಚ್ಚಾಗಬಹುದಲ್ಲವೇ ಎಂದು.

ಇದಕ್ಕೆ ಬೇಕಿರುವುದು ತಾಳ್ಮೆ. ಒಂದು ಸಮಸ್ಯೆಯಿಂದ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುವ ಬದಲು ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗ್ಗೆ ಒಂದಷ್ಟು ತಾಳ್ಮೆಯನ್ನು ಹೊಂದಿ ಯೋಚಿಸಿದಲ್ಲಿ ಅದೆಷ್ಟು ಬಾಂಧವ್ಯಗಳು ಗಟ್ಟಿಗೊಳ್ಳುವುದು ಸಾಧ್ಯ ಅಲ್ಲವೆ. ಸಮಯ ಎಲ್ಲವನ್ನೂ ಸರಿ ಪಡಿಸುತ್ತದೆ ಎನ್ನುವ ಕಾಯುವಿಕೆಯ ಗುಣವೇ ಗೌಣವಾದಲ್ಲಿ ಮಾತ್ರ ಬದುಕು ಬಲು ಕಷ್ಟ. ಹಾಗಾಗಿ ಮೌನ ಎಂಬ ನಿರಾಭರಣ ಸೌಂದರ್ಯವನ್ನು ತೊಟ್ಟುಕೊಂಡು ಜೀವಿಸುವುದನ್ನು ಕಲಿತಲ್ಲಿ ಸಾವೇ ನಮ್ಮ ಮುಂದೆ ಬಂದರೂ ಅದನ್ನು ನಗುತ್ತಲೆ ಸ್ವೀಕರಿಸುವ ಧೈರ್ಯ ನಮ್ಮದಾಗುತ್ತದೆ. ಮಾತು ಬೆಳ್ಳಿ ಮೌನ ಬಂಗಾರ. ಇದನ್ನು ಅರಿತು ನಡೆದಲ್ಲಿ ಬದುಕೇ ಶೃಂಗಾರ.

-  ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.