ಕಠಿನ ಸಾಧನೆಯ ಅನಾವರಣ ಅನೀಶ್‌ ಕಛೇರಿ


Team Udayavani, Dec 8, 2017, 4:22 PM IST

08-39.jpg

ಪುತ್ತೂರಿನ ಶ್ರೀ ಮಹಾಬಲ – ಲಲಿತ ಕಲಾ ಸಭಾ ಹಾಗೂ ಬಹುವಚನಂ ಸಾಂಸ್ಕೃತಿಕ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ
ಡಾ| ಶ್ರೀಶ ಕುಮಾರ್‌ ಅವರ ಸ್ವಗೃಹದ ಪದ್ಮಿನಿ ಸಭಾಂಗಣದಲ್ಲಿ ವಿ| ಅನೀಶ್‌ ಭಟ್ಟರ ಕರ್ನಾಟಕ ಸಂಗೀತ ಕಛೇರಿಯನ್ನು ಆಯೋಜಿಸ ಲಾಗಿತ್ತು. ಸುಮಾರು ಎರಡೂವರೆ ಗಂಟೆ ಅವಧಿಯ ಕಛೇರಿ ಇತ್ತೀಚೆಗಿನ ಪುತ್ತೂರು ಪರಿಸರದ ಯುವ ಸಾಧಕರಲ್ಲಿ ವಿಶೇಷವಾಗಿ ಪರಿಗಣಿಸ ಲ್ಪಡುತ್ತಿರುವ ಅನೀಶ್‌ ಅವರ ಕಠಿನ ಸಾಧನೆಯ ಅನಾವರಣವಾಗಿತ್ತು. 

ನಳಿನಕಾಂತಿಯ ವರ್ಣದೊಂದಿಗೆ ಪ್ರಾರಂಭಿಸಿ ಮುಂದೆ ಶ್ರೀಮುತ್ತು ಸ್ವಾಮಿ ದೀಕ್ಷಿತರ ವಲ್ಲಭನಾಯಕಸ್ಯದ ಮೂಲಕ ಸಾಗಿ ಆರೈಕೆಗಾಗಿ ನಟಬೈರವಿಯನ್ನು ಆಯ್ದುಕೊಂಡರು. ವೇದಿಕೆಗಳಲ್ಲಿ ಶ್ರೀವಲ್ಲಿ ದೇವ ಸೇನಾಪತೆ ಆಗೊಮ್ಮೆ ಈಗೊಮ್ಮೆ ಕೇಳಿಸಿಕೊಂಡರೂ ರಾಗ ವಿಸ್ತಾರ ವಿರಳವೇ. ಸುಲಭವಾಗಿ ಸಾರಮತಿಗೋ ಅಮೃತ ವಾಹಿನಿಗೋ ತುಸು ಜಾರಿಬಿಡಬಹುದಾದ ಅಪಾಯವಿದ್ದರೂ ಕಠಿನ ಸಾಧನೆಯಿಂದ ಅಪಾಯಗಳಿಗೆ ಸಿಲುಕದೆ ನಟಭೈರವಿಯನ್ನು ಸಮರ್ಪಕವಾಗಿ ನಿರೂಪಿಸಿ ಸಾಹಿತ್ಯ ವಿಸ್ತಾರವನ್ನೂ ಮಾಡಿ ಸುಂದರ ಆಯ್ದ ಕಲ್ಪನಾ ಸ್ವರಗಳ ಮೂಲಕ ಉತ್ತಮವಾಗಿಯೇ ನಿರೂಪಿಸಿದರು. ಶ್ರೀ ಮುತ್ತಯ್ಯ ಭಾಗವತರ ಸುಧಾಮಯಿಯನ್ನು ತುರುಸಿನಿಂದ ಮಂಡಿಸಿ, ಶ್ರೀ ಸ್ವಾತಿ ತಿರುನಾಳ್‌ರ ವಿಹಾರ ಮಾನಸವನ್ನು ಗಂಭೀರವಾಗಿ ಆಯ್ದುಕೊಂಡರು.

ಮುಂದೆ ಪ್ರಧಾನವಾಗಿ ಹೇಮಾವತಿಯನ್ನು ಶ್ರೀ ದೀಕ್ಷಿತರ ಶ್ರೀ ಕಾಂತಿಮತಿಗಾಗಿ ಆರಿಸಿಕೊಂಡರು. ರಾಗವಿಸ್ತಾರ ಕ್ಷೇತ್ರದಲ್ಲಿ ತನ್ನ ಸಾಧನೆಯ ತುಸು ಪರಿಚಯ ಮಾಡಿಕೊಟ್ಟ ಕಲಾವಿದರು ರಾಗದ ಪೂರ್ಣ ಛಾಯೆ ತರುವಲ್ಲಿ ಸಫ‌ಲರಾದರು. ಗಂಭೀರವಾಗಿ ಸಾಗಿದ ಕೃತಿ ಪ್ರಸ್ತುತಿ ಪರ್ಯಾಪ್ತವಾದ ಕಲ್ಪನಾ ಸ್ವರಗಳೊಂದಿಗೆ ಕಾರ್ಯಕ್ರಮದ ಪ್ರಧಾನ ಅಂಗವಾಗಿ ಮೂಡಿಬಂದಿತು. 

ಮುಂದೆ ರಾಗಂ ತಾನಂ ಪಲ್ಲವಿಗಾಗಿ ಚಾರುಕೇಶಿಯನ್ನು ಆರಿಸಿ ಸೀಮಿತ ಅವಧಿಯಲ್ಲಿ ಮಂಡಿಸಿ ತಾನದಲ್ಲಿ ವಿವರವಾಗಿ ಅನಾವರಣಗೊಳಿಸಿದರು. ತ್ರಿಶ್ರ ತ್ರಿಪುಟದ ಪಲ್ಲವಿಯನ್ನು ಮಂಡಿಸಿ ವಿಸ್ತರಿಸುವಾಗ ಸಾಮಾನ್ಯ ಸಾಂಪ್ರದಾಯಿಕ ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸಿ ತಾಳ ಹಾಗೂ ಸಾಹಿತ್ಯಗಳ ವಿವಿಧ ಸ್ತರಗಳಲ್ಲೂ ಕಲ್ಪನಾ ಸ್ವರಗಳನ್ನೂ ಆಯ್ದು ಉತ್ತಮವಾಗಿ ನಿರೂಪಿಸಿದರು. 

ದೈವದತ್ತವಾದ ಸಂಗೀತವನ್ನು ಸಾಧನೆಯ ಮೂಲಕ ಒಲಿಸಿಕೊಳ್ಳುವ ಇವರ ಪ್ರಯತ್ನಕ್ಕೆ ಎಲ್ಲ ಸಂಗೀತ ಪ್ರೇಮಿಗಳ ಆಶೀರ್ವಾದ ಬೇಕು. ವಯಲಿನ್‌ ವಾದನದಲ್ಲಿ ಸಹಕರಿಸಿದ ವಿಶ್ವಜಿತ್‌ ಹಾಗೂ ಮೃದಂಗದಲ್ಲಿ ಸಹಕರಿಸಿದ ಸುನಾದಕೃಷ್ಣ ಈರ್ವರೂ ಅಭಿನಂದನಾರ್ಹರು. ಸಿಂಧುಭೈರವಿಯ ಭಜನೆಯೊಂದಿಗೆ ಮುಕ್ತಾಯವಾದ ಕಾರ್ಯಕ್ರಮ ದಲ್ಲಿ ಆಯ್ದ ರಸಿಕರು ಸಾಕ್ಷಿಯಾಗಿ ಅಂತ್ಯದವರೆಗೂ ಇದ್ದು ಸಹಕರಿಸಿ ದುದು ಗಮನಾರ್ಹ. ಎಳೆಯರ ಇಂತಹ ಕಾರ್ಯಕ್ರಮಗಳು ಸಾಧ್ಯವಾದೆಡೆಗಳಲ್ಲಿ ನಡೆಯುವಂತಾದರೆ ಉತ್ತಮ. ಸಂಯೋಜಕರಾದ ಡಾ| ಶ್ರೀಶ ಕುಮಾರ್‌ ಹಾಗೂ ಡಾ| ಶ್ರೀಪ್ರಕಾಶ್‌ ಅವರಿಗೆ ವಿಶೇಷ ಕೃತಜ್ಞತೆಗಳು ಸಲ್ಲಬೇಕು.

ವಿ| ರಾಮಕೃಷ್ಣ  ಭಟ್ಟ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.