ಬಾಲವಾಡಿಯ ಬಾಲರು


Team Udayavani, Mar 23, 2018, 7:30 AM IST

14.jpg

ನಾಯಿಮರಿ ನಾಯಿಮರಿ ತಿಂಡಿ ಬೇಕೇ’
“ಪುಟಾಣಿ ಕರುವೊಂದು ನಮ್ಮನೇಲಿದೆ’
“ಬಣ್ಣದ ತಗಡಿನ ತುತ್ತೂರಿ… ಕಾಸಿಗೆ ಕೊಂಡನು ಕಸ್ತೂರಿ’
“ತಟ್ಟು ಚಪ್ಪಾಳೆ… ಪುಟ್ಟ ಮಗು…’

ಹೀಗೆ ಒಂದಾದ ಮೇಲೊಂದರಂತೆ ಗೀತೆಗಳು ಸಾಗುತ್ತಿರುತ್ತವೆ. ಮಧುರವಾದ ಧ್ವನಿಗಳಿಂದ ಹೊರಬರುವ ಇಂತಹ ಗೀತೆಗಳಿಗೆ ಮತ್ತೂಂದಷ್ಟು ಪುಟ್ಟ ಹೆಜ್ಜೆಗಳು ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಾ ನರ್ತಿಸಲು ಆರಂಭಿಸಿದಾಗ ಎಲ್ಲರಿಗೂ ಸಂತಸ, ಸಂತೋಷ/ ಕುತೂಹಲ ದಣಿವರಿಯದ ಬಾಲ್ಯ ವಯಸ್ಸದು. ಒಬ್ಬ ಹೊಸ ಚೀಲ ಹಾಕಿಕೊಂಡು ಬಂದರೂ, ಹೊಸ ಬಟ್ಟೆ ಧರಿಸಿದರೂ, ಹೊಸಚೀಲ ಕೊಂಡರೂ ಉಳಿದ ಎಲ್ಲರಿಗೂ ಸಂತಸ. ಮತ್ತೆ ಆ ವಸ್ತುಗಳ ಬಣ್ಣದ ಮೇಲೆ ಮಾತ್ರ ವಿಮರ್ಶೆ ಹೊರತು ಬೆಲೆಯ ಮೇಲಲ್ಲ! (ಮೌಲ್ಯದ ಮೌಲ್ಯವು ತಿಳಿಯದ ವಯಸ್ಸು!) ಈ ಎಲ್ಲಾ ಚಟುವಟಿಕೆ ಮುಗಿದ ಬಳಿಕ ಅ… ಆ…. ಇ… ಈ… ಎಂದು ಗಟ್ಟಿಯಾಗಿ ಗಂಟಲು ಹರಿಯುವಂತೆ ಉಚ್ಚರಿಸುತ್ತಾ ಸ್ಲೇಟಿನ ಮೇಲೆ ಸಂಭ್ರಮದಿಂದ ಬರೆಯುವ ಶಬ್ದ, ಕೆಲವರಿಗೆ ಮಾತ್ರ ಇನ್ನೂ ಟೀಚರ್‌ ಕೈಹಿಡಿದು ಬರೆಸಬೇಕು. ಆಗ ನಾವು ಮಾತ್ರ ಸ್ವತಂತ್ರರಾಗಿ ಬರೆಯುತ್ತಿದ್ದೇವೆಂಬ ಹೆಮ್ಮೆ.

ಹೌದು! ಇದು ನಮ್ಮ ಬಾಲ್ಯದಲ್ಲಿನ ಬಾಲವಾಡಿಯ ಜೀವನ. ಆಡಳಿತಾತ್ಮಕವಾಗಿ “ಅಂಗನವಾಡಿ’ ಎಂಬ ಹೆಸರಿದ್ದರೂ ನಾವೆಲ್ಲಾ “ಬಾಲವಾಡಿ’ ಎಂದೇ ಕರೆಯುತ್ತಿದ್ದೆವು. ಮತ್ತು ಅದು ನಮಗೆ ಸಂತೋಷವೂ ಆಗಿತ್ತು. ಇಂತಿರ್ಪ ಬಾಲವಾಡಿಯ ಆ ನೆನಪು, ಬಾಲ್ಯ, ಆಟ-ಪಾಠಗಳೆಲ್ಲಾ ಇನ್ನೂ ನೆನಪಿದೆ. ಬಾಲ್ಯವೆಂದರೆ ಹಾಗೆಯೇ. ಸದಾ ಕುತೂಹಲದಿಂದ ಜಗತ್ತನ್ನು ನೋಡುವ ಜೀವನದ ಆರಂಭಿಕ ಹಂತವದು. ಇಂತಹ ಸಂದರ್ಭದಲ್ಲಿ ಬಾಲ್ಯದ ಜೀವನ, ಸುತ್ತಮುತ್ತಲ ಪರಿಸರ, ಪ್ರಾಥಮಿಕ ಶಿಕ್ಷಣಗಳು ಜೀವನದ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ.

ನಾವು ಬಾಲವಾಡಿಯಲ್ಲಿರುವಾಗ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನ, ಗಾಂಧಿ ಜಯಂತಿಯ ದಿನಗಳಲ್ಲಂತೂ ಅಪಾರ ಸಂತಸ. ನೃತ್ಯ, ಗೀತೆ, ಗಾಯನದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಮನೆಗೆ ಮರಳುವಾಗ ಒಂದೊಂದು ಲಡ್ಡು , ಚಾಕಲೇಟ್‌ನೊಂದಿಗೆ ತೆರಳಿದರೆ ಕಾರ್ಯಕ್ರಮ ಯಶಸ್ವಿಯಾದಂತೆ. ಇನ್ನುಳಿದಂತೆ ಇತರ ದಿನಗಳಲ್ಲಿ ಕ್ರಿಕೆಟ್‌ ಚೆಂಡಿನಾಕಾರದ ಗುಂಡಗಿನ ಸಿಹಿತಿಂಡಿ (ಸರ್ಕಾರದಿಂದ ಪುಡಿ ರೂಪದಲ್ಲಿ ದೊರೆಯುತ್ತಿದ್ದ ಆಹಾರಕ್ಕೆ ಬಿಸಿನೀರು ಹಾಕಿ ದೊಡ್ಡ ಉಂಡೆಯಾಕಾರದಲ್ಲಿ ಕಟ್ಟುತ್ತಿದ್ದರು) ಅದಂತೂ ನಮ್ಮ ಪರಮಶ್ರೇಷ್ಠ ತಿನಿಸಾಗಿತ್ತು. (ಇಂದಿನಂತೆ ಹಾಲು, ಮೊಟ್ಟೆ ಇರಲಿಲ್ಲ).

ಬಾಲವಾಡಿಯಲ್ಲಿ ಆಡುತ್ತಿದ್ದ ಚಿನ್ನಿದಾಂಡು, ಕೆರೆ-ದಡ, ಲಗೋರಿ, ಕುಂಟೆಬಿಲ್ಲೆಗಳಂತೂ ನಮ್ಮ ಪಾಲಿನ ಶ್ರೇಷ್ಠ ಕ್ರೀಡೆಗಳಂತೆ! ಮಳೆಗಾಲದಲ್ಲಿ ನೀರಮೇಲೆ ಬಿಡುತ್ತಿದ್ದ ದೋಣಿ, ಕಾಗದದಿಂದ ಮಾಡುತ್ತಿದ್ದ ಗಾಳಿಪಟ, ನಾವೇ ಟೀಚರ್‌ ಆಗಿ ಬದಲಾಗುತ್ತಿದ್ದ ಕ್ಷಣ. ಇವುಗಳೆಲ್ಲಾ ಅವಿಸ್ಮರಣೀಯ ಕ್ಷಣಗಳು.

ಇಂದು ಎಲ್‌ಕೆಜಿ, ಯುಕೆಜಿ ಎಂದು ಶಿಕ್ಷಣದ ನಿಜವಾದ ಕೆಜಿ (ತೂಕ)ಯ ನಷ್ಟವನ್ನು ಅನುಭವಿಸುತ್ತಿರುವ ಪುಟಾಣಿ ಮಕ್ಕಳು ಮೊಬೈಲ್‌, ವೀಡಿಯೋ ಗೇಮ್‌ಗಳ ನಡುವೆ ಮರೆಯಾಗಿರುವ ಕುಂಟೆಬಿಲ್ಲೆಯನ್ನು ಆಲೋಚಿಸುವಾಗ ಅನ್ನಿಸುತ್ತದೆ, ನಾನು ನಿಜವಾಗಿಯೂ ಅದೃಷ್ಟವಂತ!

 ವಿನಯ್‌ ಆರ್‌. ಭಟ್‌ ತೃತೀಯ ಬಿ.ಕಾಂ.,  ಭುವನೇಂದ್ರ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.