ಸಮಕಾಲೀನ ಸ್ಥಿತಿಯ ಕೈಗನ್ನಡಿ ಅಂಧಯುಗ


Team Udayavani, Jan 19, 2018, 3:11 PM IST

19-64.jpg

 ಹಿಂದಿಯ ಲೇಖಕ ಧರ್ಮವೀರ ಭಾರತಿಯವರು ಬರೆದ ಯುದ್ಧ ವಿರೋಧಿ ನಾಟಕ ಅಂಧಯುಗ. ಮಹಾಭಾರತ ಯುದ್ಧದ ಕೊನೆಯ ದಿನವನ್ನು ರೂಪಕವಾಗಿಟ್ಟುಕೊಂಡು ದೇಶ ವಿಭಜನೆಯಾದ ಕಾಲದಲ್ಲಿ ಉಂಟಾದ ಕಲಹ, ಹಿಂಸೆ, ರಕ್ತಪಾತಗಳ ಹಿಂದಿನ‌ ಅಮಾನವೀತೆಯನ್ನೂ ,ಕ್ರೌರ್ಯವನ್ನೂ ಚಿತ್ರಿಸುವುದು ಈ ನಾಟಕದ ಉದ್ದೇಶ. ಶಿಕಾರಿಪುರ ಗುಡಿತಂಡದ ಕಲಾವಿದರು ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ಅಭಿನಯಿಸಿ ತೋರಿಸಿದರು. ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ತಿಪ್ಪೇಸ್ವಾಮಿ ಅನುವಾದಿಸಿದ ನಾಟಕವನ್ನು ಇಕ್ಬಾಲ್‌ ಅಹಮದ್‌ ನಿರ್ದೇಶಿಸಿದರು. 

ಸ್ವಾರ್ಥ, ಸೇಡು,ಅಸೂಯೆಗಳಿಗೆ ಜ್ವಲಂತ ಉದಾಹರಣೆ ಅಶ್ವತ್ಥಾಮ. ಈ ಗುಣಗಳನ್ನು ಹೊತ್ತುಕೊಂಡೇ ಚಿರಂಜೀವಿಯಾಗುವ ಆತ ಮನುಷ್ಯ ಕುಲಕ್ಕೆ ಒಂದು ಕೆಟ್ಟ ಮಾದರಿಯಾಗಿ ನಿಲ್ಲುತ್ತಾನೆ. ಯುಧಿಷ್ಠಿರನ ಮೇಲೆ ಸೇಡು ತೀರಿಸಿಕೊಳ್ಳಲು ಅಶ್ವತ್ಥಾಮ ಕುದಿಯುತ್ತಿರುತ್ತಾನೆ. ಯುದ್ಧದ ಕೊನೆಯ ದಿವಸ ಪಾಂಡವರು ಗೆಲ್ಲುವ ಸೂಚನೆ ಕಂಡಾಗ ಅದನ್ನು ಸಹಿಸಕೊಳ್ಳಲಾರದೆ ವಿದುರ, ಮಾತುಲ, ಕೃತವರ್ಮರು ಎಷ್ಟು ಹೇಳಿದರೂ ಕೇಳದೆ, ಧರ್ಮಜನೂ ಯುದ್ಧದಲ್ಲಿ ಅಧರ್ಮದ ದಾರಿಯಲ್ಲೇ ನಡೆದಿರುವಾಗ ತನಗೆ ಧರ್ಮದ ಹಂಗೇಕೆ ಎನ್ನುತ್ತ, ಪಾಂಡವರು ಗಾಢ ನಿದ್ದೆಯಲ್ಲಿರುವ ಹೊತ್ತು ನೋಡಿ ಅವರನ್ನು ಕೊಲ್ಲಬೇಕೆಂದು ಶಿಬಿರಕ್ಕೆ ರೋಷಾವೇಶನಾಗಿ ನುಗ್ಗುತ್ತಾನೆ. ಆದರೆ ಕತ್ತಲಲ್ಲಿ ಪಾಂಡವರ ಐದು ಮಕ್ಕಳನ್ನು ಕೊಂದು ಶಿಶು ಹತ್ಯೆ ಪಾಪಗೈಯುತ್ತಾನೆ. ವ್ಯಾಸರ ಶಾಪಕ್ಕೆ ಗುರಿಯಾಗಿ ರೋಗರುಜಿನಗಳನ್ನು ಹೊತ್ತುಕೊಂಡು ಬದುಕುವ ನರಕ ಸದೃಶ ಬಾಳು ಆತನದಾಗುತ್ತದೆ. ಹಿಂದು ಮುಂದು ಯೋಚಿಸದೆ ಪಾಪದ ಕೆಲಸಗಳಿಗೆ ಮುನ್ನುಗ್ಗುವ ಮೂಲಕ ಅಂಧಯುಗದ ಸೃಷ್ಟಿಗೆ ಕಾರಣರಾಗುವವರಿಗೆ ಅಶ್ವತ್ಥಾಮನೊಂದು ಪಾಠ.  ತಂದೆ,ತಾಯಿ ಮತ್ತು ಅಣ್ಣಂದಿರನ್ನು ಪ್ರತಿಭಟಿಸಿ ಯುದ್ಧಕ್ಕೆ ಸೇರದೇ ನಿಂತವನು ದೃತರಾಷ್ಟ್ರನ ದಾಸಿಪುತ್ರ ಯುಯುತ್ಸು. ಆದರೆ ನೂರು ಮಂದಿ ಕೌರವರೂ ಸತ್ತು ಹೋಗಿ ಉಳಿದ ಒಬ್ಬನೇ ಒಬ್ಬ ಮಗನ ಸಾವಿಗೆ ಹೊಟ್ಟೆಕಿಚ್ಚಿನ ಬೆಂಕಿಯಲ್ಲಿ ಉರಿಯುವ ಗಾಂಧಾರಿ ಕಾರಣಳಾಗುತ್ತಾಳೆ. ಪಾಂಡವರ ಗೆಲುವನ್ನು ಸಹಿಸಿಕೊಳ್ಳಲಾರದೆ ಅವರನ್ನು ಭೇಟಿಯಾಗುವ ನೆಪದಲ್ಲಿ ಯುಯುತ್ಸುವಿನ ಜತೆಗೆ ಅವರ ಶಿಬಿರಕ್ಕೆ ಹೋಗಿ, ಅವರನ್ನು ತನ್ನ ನೋಟದಿಂದಲೇ ಕೊಲ್ಲುವೆನೆಂದು ಕಣ್ಣಿನ ಪಟ್ಟಿ ಬಿಚ್ಚಿಕೊಳ್ಳುವ ಆಕೆಯ ಮುಂದೆ ಮೊದಲು ಕಾಣಿಸಿಕೊಳ್ಳುವ ಯುಯುತ್ಸು ಸಾವಿಗೀಡಾಗುವುದು ಬಹು ದೊಡ್ಡ ದುರಂತ. 

ಕಾವ್ಯರೂಪದಲ್ಲಿರುವ ಈ ನಾಟಕದಲ್ಲಿ ನಿಧಾನ ಗತಿಯಲ್ಲಿದ್ದ ಸಂಭಾಷಣೆಗಳ ನಿರ್ವಹಣೆಯು ವಸ್ತುವಿನ ದುರಂತಪೂರ್ಣ ಧ್ವನಿಗೆ ಪೂರಕವಾಗಿತ್ತು. ನಟರ ಅಭಾವದಿಂದಾಗಿ ಒಬ್ಬೊಬ್ಬ ನಟರು ಎರಡೆರಡು ಪಾತ್ರಗಳನ್ನು ನಿರ್ವಹಿಸಿದರು. ಪ್ರಹರಿ, ಧೃತರಾಷ್ಟ್ರ, ಗಾಂಧಾರಿ, ಸಂಜಯ, ವಿದುರ, ವ್ಯಾಸ, ಮಾತುಲ, ಕೃತವರ್ಮ ಎಲ್ಲರೂ ಅಭಿನಯ, ಹಾವಭಾವ ಮತ್ತು ಚಲನವಲನಗಳಲ್ಲಿ ಪಾತ್ರೋಚಿತ ಎಚ್ಚರಿಕೆ ವಹಿಸಿದರು. ಒಂದೇ ರೀತಿಯ ಆಲೋಚನೆ ಮತ್ತು ಉದ್ದೇಶಗಳಿರುವ ಪಾತ್ರಗಳನ್ನು ಹಗ್ಗದ ಸೂತ್ರದಿಂದ ಬಂಧಿಸಿದ್ದು ಸಾಂಕೇತಿಕವಾಗಿದ್ದು, ತಮ್ಮ ಅಂಧತೆಯ ಮಿತಿಗಳಿಂದ ಬಿಡಿಸಿಕೊಳ್ಳಲಾಗದ ಅವರ ಮಾನಸಿಕ ಸ್ಥಿತಿಯನ್ನು ಅದು ಸೂಚಿಸಿತು. ಸಾರ್ವತ್ರಿಕ ಸಂದೇಶವಿರುವ ನಾಟಕವಾದ್ದರಿಂದ ವೇಷ ಭೂಷಣಗಳಲ್ಲಿ ಭಾರತೀಯತೆಗಿಂತ ಪಾಶ್ಚಾತ್ಯ ಕ್ರಮವನ್ನೇ ಹೆಚ್ಚು ಅನುಸರಿಸಲಾಗಿತ್ತು. ನಿರೂಪಕನಂತೆ ಅಲ್ಲಲ್ಲಿ ರಂಗದ ಮೇಲೆ ಕಥೆ ಹೇಳುತ್ತ ಬಂದ ಸಮರ್ಥ ಗಾಯಕನಿಂದ ಮೂಡಿಬಂದ ಜಾನಪದ ದಾಟಿಯ ಹಾಡುಗಳು ಸುಶ್ರಾವ್ಯವಾಗಿದ್ದವು. ಯಾವುದೇ ರಂಗಸಜ್ಜಿಕೆಯಿಲ್ಲದೆ,ಉದ್ದಕ್ಕೂ ಸರಳ ಬೆಳಕಿನ ಪ್ರಯೋಗ ಮತ್ತು ಹಿನ್ನೆಲೆಯ ಶಬ್ದಗಳ‌ ಮೂಲಕ ನಾಟಕ ಪ್ರದರ್ಶಿತಗೊಂಡಿತು. ತಾಂತ್ರಿಕತೆಗಿಂತ ಹೆಚ್ಚು ಅಭಿನಯಕ್ಕೆ ಅವಕಾಶ ನೀಡಿದ ನಾಟಕವಿದು. 

ಡಾ| ಪಾರ್ವತಿ ಜಿ.ಐತಾಳ್‌ 

ಟಾಪ್ ನ್ಯೂಸ್

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.