ಪರಿವರ್ತನೆ ಬಯಸಿದ ಬೀದಿನಾಟಕಗಳು

ಸುಮನಸಾ ಕೊಡವೂರು ಪ್ರಸ್ತುತಿ

Team Udayavani, May 31, 2019, 6:00 AM IST

v-4

ಬೀದಿನಾಟಕ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಲ್ಲಿ ಸಹಕಾರಿಯಾಗಿದೆ. ಏಕೆಂದರೆ ಇಲ್ಲಿ ನಟರೇ ಪ್ರೇಕ್ಷಕರು ಹಾಗೂ ನೋಡಲು ಬಂದ ಪ್ರೇಕ್ಷಕರಲ್ಲಿ ಯಾರೊಬ್ಬನೂ ನಟನಾಗಬಹುದು. ಬೀದಿ ನಾಟಕದ ವಸ್ತು ಅವನಿಗೆ ತುಂಬಾ ಹತ್ತಿರವಾಗಿರಬಹುದು ಅಥವಾ ಅವನದ್ದೇ ಆಗಿರಬಹುದು.

ಬೀದಿ ನಾಟಕಗಳಿಂದ ಪರಿಣಾಮಕಾರಿ ಸಂದೇಶ ನೀಡಲು ಸಾಧ್ಯವಾಗುತ್ತದೆ. ಬಣ್ಣ, ಸಂಗೀತ, ಧ್ವನಿವರ್ಧಕ ಇತ್ಯಾದಿ ಪೂರಕ ಪರಿಕರಗಳ ಹೊರತಾಗಿಯೂ ಬೀದಿನಾಟಕ ಒಂದು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿ ಬೆಳೆದುಬಂದಿದೆ. ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯರಲ್ಲಿ ದೇಶಾಭಿಮಾನ ಹಾಗೂ ಸ್ವಾತಂತ್ರ್ಯದ ಹಂಬಲ ಮೈಗೂಡಿಸುವಲ್ಲಿ ಬೀದಿನಾಟಕಗಳು ಪ್ರಮುಖ ಪಾತ್ರ ವಹಿಸಿದವು ಎನ್ನಲಾಗುತ್ತದೆ. ರಂಗಮಂಚ, ಪರದೆ ಇತ್ಯಾದಿಗಳ ಅವಶ್ಯಕತೆ ಇಲ್ಲದಿರುವುದರಿಂದ ಪೋಲೀಸರ ಕಣ್ತಪ್ಪಿಸಿ ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹಬ್ಬಿಸಲು ನಾಟಕದ ಈ ಪ್ರಕಾರ ನೆರವಾಯ್ತು. ಅಂದು ಪುನರ್ಜನ್ಮ ಪಡೆದ ಬೀದಿನಾಟಕ ಮುಂದೆಯೂ ಉಳಿದು ಬೆಳೆದು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಲ್ಲಿ ಸಹಕಾರಿಯಾಗಿದೆ. ಏಕೆಂದರೆ ಇಲ್ಲಿ ನಟರೇ ಪ್ರೇಕ್ಷಕರು ಹಾಗೂ ನೋಡಲು ಬಂದ ಪ್ರೇಕ್ಷಕರಲ್ಲಿ ಯಾರೊಬ್ಬನೂ ನಟನಾಗಬಹುದು. ಬೀದಿ ನಾಟಕದ ವಸ್ತು ಅವನಿಗೆ ತುಂಬಾ ಹತ್ತಿರವಾಗಿರಬಹುದು ಅಥವಾ ಅವನದ್ದೇ ಆಗಿರಬಹುದು.

ಈ ಕಾರಣಕ್ಕಾಗಿಯೇ ಸುಮನಸಾ ಕೊಡವೂರು ಇವರು ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬೀದಿನಾಟಕ ಸ್ಪರ್ಧೆ ಯಶಸ್ವಿಯಾಯಿತು. ಮೊದಲ ತಂಡ ಅಭಿನಯಿಸಿದ ಬೀದಿ ನಾಟಕದಲ್ಲಿ ಸಾಂಕೇತಿಕವಾಗಿ ಬಣ್ಣ ಹಚ್ಚಿಕೊಂಡ ವಿದ್ಯಾರ್ಥಿಗಳು ಹೆಣ್ಣಿನ ಶೋಷಣೆ ಬಗ್ಗೆ ವಿವಿಧ ಆಯಾಮಗಳನ್ನು ಪ್ರದರ್ಶಿಸಿ, ಇಂದಿನ ಆಧುನಿಕ ಯುಗದಲ್ಲೂ ಮನೆಯಿಂದ ಹೊರಗೆ ಹೊರಟ ಹೆಣ್ಣು ಸುರಕ್ಷಿತವಾಗಿ ಮನೆಗೆ ಹಿಂತಿರುಗುವ ಖಾತರಿಯಿಲ್ಲ ಎನ್ನುವುದನ್ನು ನವಿರಾಗಿ ಸಾದರಪಡಿಸಿದರು. ಸಾರ್ವಜನಿಕವಾಗಿ ಸ್ತ್ರೀ ಸ್ವಾತಂತ್ರ್ಯ ಹಾಗೂ ಮಹಿಳಾ ರಕ್ಷಣೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಪುಢಾರಿಗಳು, ಸಮಾಜ ಲಂಪಟರು ಆಂತರಿಕವಾಗಿ ಸ್ತ್ರೀ ಶೋಷಣೆಯ ಖಳ ನಾಯಕರೆಂಬ ಗೋಮುಖ ವ್ಯಾಘ್ರರು ಎನ್ನುವುದನ್ನು ನಿರೂಪಿಸಿ ಮೆಚ್ಚುಗೆ ಗಳಿಸಿದರು. ಇನ್ನೊಂದು ತಂಡ ಪೊಳ್ಳು ಜಾತ್ಯತೀತವಾದ, ಕೋಮುವಾದ ದೇಶದ ಅತಿ ದೊಡ್ಡ ಶತ್ರುಗಳೆಂದು ನಿರೂಪಿಸಿತು. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ-ಜಾತಿಗಳ ವಿರುದ್ಧ, ಧರ್ಮ ವಿಂಗಡಣೆ ಹಾಗೂ ಪಕ್ಷಪಾತ ಧೋರಣೆಗಳಿಂದ ಜನರ ನಡುವೆ ವಿಷಬೀಜ ಬಿತ್ತಿ ಅದರ ಲಾಭ ಪಡೆದು ಓಟಿನ ಲೆಕ್ಕಾಚಾರ ಹಾಕುವ ಗೋಸುಂಬೆಗಳ ಮುಖವಾಡ ಕಳಚುವ ಪ್ರಯತ್ನ ಮಾಡಿತು.

ಮಗದೊಂದು ತಂಡ ಬೀದಿನಾಟಕದ ಮೂಲಕ ಮೂಢನಂಬಿಕೆಗಳ ವಿರುದ್ಧ ಯುದ್ಧ ಸಾರಿತು. ಕುಡುಕ ಗಂಡನ ದಬ್ಟಾಳಿಕೆಯಿಂದ ನೊಂದ ಹೆಂಡತಿ, ಅನಾರೋಗ್ಯ ಪೀಡಿತಳಾದ ಮಗಳ ಚಿಕಿತ್ಸೆಗೆ ಪರದಾಡುತ್ತಿರುವ ಕರುಳು ಹಿಂಡುವ ದೃಶ್ಯ, ಸ್ತ್ರೀ ಶೋಷಣೆಯ ಮತ್ತೂಂದು ಮುಖವನ್ನು ತೆರೆದಿಟ್ಟಿತು.

ಸಾಸಿವೆ ಡಬ್ಬದಲ್ಲಿ ಅಡಗಿಸಿಟ್ಟ ದುಗ್ಗಾಣಿಯನ್ನೂ ಕಸಿದೊಯ್ದು ಕುಡಿದು ಬಂದು ತನ್ನ ಕುಡಿತದ ಪ್ರಾಯೋಜಕರ ಮೇಲೆಯೂ ಕ್ರೌರ್ಯ ಪ್ರದರ್ಶಿಸುವ ಪತಿ, ಆಪದಾºಂಧವನಂತೆ ಬಂದು ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸುವ ಸಂಬಂಧಿಯನ್ನು ಅಪಾರ್ಥ ಮಾಡಿಕೊಂಡು ಗಲಾಟೆ ಮಾಡುವ, ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಕಲ್ಪಿಸುವ ಗಂಡನೊಡನೆ ಹೆಣಗಾಡುವ ಸತಿ, ಮಗಳನ್ನು ಆಸ್ಪತ್ರೆಗೆ ಸೇರಿಸುವ ಬದಲು ಮಂತ್ರವಾದಿಯನ್ನು ಕರೆಸಿ ಮಾಟ-ಮಂತ್ರಕ್ಕಾಗಿ ಹಣ ವ್ಯಯಿಸುವ ಮೂಢನಂಬಿಕೆ ಮುಂತಾದವು ಹಳ್ಳಿ ಜೀವನದ ಅನಾಗರಿಕತೆಯನ್ನು ಪ್ರದರ್ಶಿಸಿತು. ಹೀಗೆ ಸಾಮಾಜಿಕ ಜೀವನದ ವಿವಿಧ ಆಗು-ಹೋಗುಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಎಲ್ಲಾ ತಂಡದವರ ಒಕ್ಕೊರಲ ಹಕ್ಕೊತ್ತಾಯ ಒಂದೇ ಆಗಿತ್ತು- ಅದುವೇ ಪರಿವರ್ತನೆ ಬೇಕು-ಬದಲಾಗಬೇಕು ಭಾರತ- ಪರಿವರ್ತನೆ ಜಗದ ನಿಯಮ.

ಜನನಿ ಭಾಸ್ಕರ ಕೊಡವೂರು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.