ಗಿರಿಯ ಮಡಿಲಲ್ಲಿ ವನ ನಿನಾದ


Team Udayavani, Jan 27, 2017, 3:45 AM IST

26-KALA-1.jpg

ಪಶ್ಚಿಮ ಘಟ್ಟವೇ ಒಂದು ನಿಸರ್ಗ ಸಹಜ ಗ್ಯಾಲರಿಯಾಗಿದ್ದು ಅಲ್ಲಿ ಪ್ರತಿಯೊಂದು ದೃಶ್ಯಕ್ಕೂ ಅಗೋಚರವಾದ ಕಲಾತ್ಮಕ ಚೌಕಟ್ಟಿದೆ. ಕಾಣುವ ಕಣ್ಣು, ಗ್ರಹಿಸುವ ಮನಸ್ಸಿದ್ದರೆ ಪಶ್ಚಿಮಘಟ್ಟದ ಎಲ್ಲ ದೃಶ್ಯಗಳೂ ಕಲಾತ್ಮಕ ಸೌಂದರ್ಯದ ವಿವಿಧ ಆಯಾಮಗಳನ್ನು ತೆರೆದು ತೋರಿಸುತ್ತವೆ. ಗಿರಿಗಳನ್ನು ಚುಂಬಿಸುವ ಶ್ವೇತ ಮೇಘ ಮಾಲೆ, ಮುಂಜಾನೆಯ ಇಬ್ಬನಿ ದಿಬ್ಬಣ, ಗಾಳಿಗೆ ಮಂಜು ಸಂಚರಿಸುತ್ತಾ ಮಸುಕಾಗಿದ್ದ ಗಿರಿಗಳು ನಿಧಾನಕ್ಕೆ ಕಡು ಹಸಿರು ಬಣ್ಣಕ್ಕೆ ಬದಲಾವಣೆಯಾಗುವುದನ್ನು ಕಂಡರೆ ನಿಸರ್ಗದ ಕಾಣದ ಕುಂಚವು ಬೃಹತ್‌ ಕ್ಯಾನ್ವಾಸ್‌ನಲ್ಲಿ ರಚಿಸುವ ಚಿತ್ರಗಳು ದಿಗೂಢರನ್ನಾಗಿಸುತ್ತವೆ.  

ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದರು ತಮ್ಮ ವರ್ಣಕುಂಚಗಳನ್ನು ಬೆನ್ನಿಗೇರಿಸಿ ಹೊರಟದ್ದು ಪಶ್ಚಿಮಘಟ್ಟದ ಚಾರ್ಮಾಡಿಘಾಟಿಯ ತುತ್ತತುದಿಯ ಅಲೇಖಾನ ಹೊರಟ್ಟಿ ಅರಣ್ಯ ಪ್ರದೇಶಕ್ಕೆ. ಕಾಫಿ ತೋಟದ ಘಮವನ್ನು ಶೋಧಿಸಿ ಅಡವಿ ಯೊಳಗಿನ ಚಳಿಯನ್ನು ಭೇದಿಸಿ ಕಾನನದಾಚೆಯ ಪುಟ್ಟಹಳ್ಳಿ ಹೊರಟ್ಟಿಗೆ ಬಂದಾಗ ಸೂರ್ಯನು ಕಿರಣಗಳನ್ನು ಚಾಚುತ್ತಾ ನಮ್ಮನ್ನು ವೀಕ್ಷಿಸುತ್ತಿದ್ದ. ಆ ದೃಶ್ಯಗಳನ್ನು ಕ್ಯಾನ್ವಾಸ್‌ನಲ್ಲಿ ಸೆರೆ ಹಿಡಿಯಬೇಕೆಂದು ಹೊರಟ ಚಾವಡಿಯ 22 ಕಲಾವಿದರು ಹೊರಟ್ಟಿಯ ಮನೋಹರವಾದ ಕಣಿವೆ ದೃಶ್ಯಗಳನ್ನು ಆಗಲೇ ಮನಸ್ಸಿನೊಳಗೆ ತುಂಬಿಕೊಂಡಿದ್ದರು.  

ಹಿರಿಯ ಕಲಾವಿದ ಗಣೇಶ್‌ ಸೋಮಯಾಜಿ ತಮ್ಮ ಜಲ ವರ್ಣದ ಚಮತ್ಕಾರದೊಂದಿಗೆ ಅಲ್ಲಿನ ಕಾನನ ದೃಶ್ಯಗಳನ್ನು ತಮ್ಮ ಕುಂಚ – ಕ್ಯಾನ್ವಾಸ್‌ನಲ್ಲಿ ಸೆರೆ ಹಿಡಿದರು. ಜತೆಯಲ್ಲೇ ಕಮಾಲ್‌ ಅವರು ಕಾಫಿ ತೋಟ, ಕಾನನ ದೊಂದಿಗೆ ಬೆರೆತ ಮರಗಿಡಗಳನ್ನು ಚಿತ್ರಿಸಿದರು. ತಿಲಕ್‌ರಾಜ್‌ ಅಡವಿಯ ನಡುವೆ ಇರುವ ಮುರುಕಲು ಮನೆ, ಹರಕಲು ಬೇಲಿಯ ದೃಶ್ಯಗಳನ್ನು ಸೆರೆಹಿಡಿದರೆ, ಸುಧೀರ್‌ ಕಾವೂರು ಕಾಡಿನ ಹಾಡಿಯಲ್ಲಿ ನೆರಳು ಬೆಳಕಿನ ಸಂಗಮ ವನ್ನು ಸಾದರ ಪಡಿಸಿದರು. ವೀಣಾ ಮಧುಸೂದನ್‌ ಕಾಫಿ ತೋಟದ ಹಸಿರು ಎಲೆಗಳ ನಡುವೆ ಅರಳಿದ ಕೆಂಪು ಹೂವಿನ ಕಂಪನ್ನು ಚಿತ್ರಿಸಿದರೆ ವಿದ್ಯಾ ಕಾಮತ್‌ ಕಾಫಿ ಕಣಿವೆಯ ನಡುವಿನ ಅಂಶುಧರನನ್ನು, ನವೀನ್‌ ಕೋಡಿಕಲ್‌ ಘಟ್ಟದ ಕಂದರವನ್ನು ಚಿತ್ರಿಸಿದರು. ಯುವ ಕಲಾವಿದ ಡೆಸ್ಮಂಡ್‌ ಹಳ್ಳಿಯ ಹಳ್ಳದ ಒಪ್ಪ ಓರಣವನ್ನು ಬರೆದರು. 

ಕಾನನದ ಹೂರಣವನ್ನು ಬಣ್ಣಗಳಲ್ಲಿ ಹಿಡಿದಿರಿಸುವ ಪ್ರಯತ್ನ ಮಾಡಿದ ಕರಾವಳಿ ಚಿತ್ರ ಕಲಾ ಚಾವಡಿಯ ಈ “ವನನಿನಾದ ಕಲಾ ಶಿಬಿರ’ವು ಪಶ್ಚಿಮ ಘಟ್ಟದ ದೃಶ್ಯಾವಳಿಗಳಲ್ಲಿರುವ ರಮಣೀಯತೆಯನ್ನು ಅಭಿವ್ಯಕ್ತಪಡಿಸಿತ್ತು. ಹೊರಟ್ಟಿ ಕಾನನ ಕಣಿವೆಯ ಸುಂದರ ದೃಶ್ಯಗಳು ಮಾತ್ರವಲ್ಲ, ಅಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗ ದವರ ರೋಚಕ ಬದುಕು ಕೂಡ ಕಲಾವಿದರ ಕಲಾಕೃತಿಗಳಿಗೆ ಆಹಾರವಾದವು.   

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.