ಸೀತಾರಾಮ ಶೆಟ್ಟಿಯವರಿಗೆ ಗೌರವಾರ್ಪಣೆ


Team Udayavani, Sep 20, 2019, 5:00 AM IST

t-11

ತುಳು ರಂಗಭೂಮಿ ಮತ್ತು ತುಳು ಸಿನೆಮಾ ರಂಗದಲ್ಲಿ ಆರು ದಶಕಗಳ ಕಾಲ ಹಿನ್ನಲೆ ವ್ಯವಸ್ಥೆ, ನಿರ್ಮಾಣ ಕಾರ್ಯದಲ್ಲಿ ದುಡಿದು, ನಟಿಸಿ ಬದುಕು ಸವೆಸಿದ ರಂಗಕರ್ಮಿ ಜೆ. ಸೀತಾರಾಮ ಶೆಟ್ಟರಿಗೆ ಈಗ 80ರ ವರುಷ. ಅವರ ಅಭಿಮಾನಿ ಬಳಗ ಮಂಗಳೂರು ಪ‌ುರಭವನದಲ್ಲಿ ಸೆ. 22ರಂದು 80ನೇ ವರ್ಷದ ನೆನಪಿಗೆ ಗೌರವ ಸರ್ಮಪಣೆ ಸಮಾರಂಭವನ್ನು ಹಮ್ಮಿಕೊಂಡಿದೆ.

19ನೇ ಪ್ರಾಯದಲ್ಲೇ ರಂಗಭೂಮಿಗೆ ಕಾಲಿಟ್ಟ ಸೀತಾರಾಮ ಶೆಟ್ಟಿಯವರು ದಿ. ಕೆ.ಎನ್‌. ಟೇಲರ್‌ರವರ‌ ಜತೆ ಹೆಗಲಿಗೆ ಹೆಗಲು ಕೊಟ್ಟು ದುಡಿದು, ನಟಿಸಿದವರು. ಟೇಲರರ ಮತ್ತು ಶೆಟ್ಟರ ಸ್ನೇಹ ಸಂಗಮದ ಬೆಸುಗೆ ನಾಟಕದ ಕಥೆ ಹುಟ್ಟಿಕೊಳ್ಳುತ್ತಾ ಗಟ್ಟಿಯಾಯಿತು. ಇವರಿಬ್ಬರೊಳಗೆ ಯಾವಾಗಲೂ ನಾಟಕದ ಕತೆಯ ವಿಚಾರವೇ. ಅಲ್ಲಿಂದಲೇ ಶುರುವಾಯಿತು ಗಣೇಶ ನಾಟಕ ಸಭಾ ಸಂಘ ಸ್ಥಾಪನೆಯ ನಿರ್ಧಾರ. ಅದು 1958ರ ವರ್ಷ, ಆಗಿನಿಂದಲೇ ಶುರುವಾಯಿತು ಸೀತಾರಾಮರ ಕಲಾರಂಗದ ಜರ್ನಿ.

ನಾಟಕದ ವ್ಯವಸ್ಥೆ, ರಂಗ ಸಿದ್ಧತೆ, ಪ್ರದರ್ಶನದ ಹೂಣೆಗಾರಿಕೆ, ಕಲಾವಿದರನ್ನು ಒಟ್ಟು ಸೇರಿಸುವ ಮೊದಲಾದ ರಂಗ ಕಾರ್ಯಗಳ ಪರಿಣತರ ಸಾಲಿನಲ್ಲಿ ಸೀತಾರಾಮ ಒಬ್ಬರು. ಅಲ್ಲದೆ ಅಪತ್‌ಭಾಂಧವ ನಟನಾಗಿ ಅಭಿನಯಿಸಿರುವುದು ಇವರ ವಿಶೇಷತೆಯಲ್ಲಿ ಒಂದು. ನಾಟಕದ ಮೇಲಿರುವ ಗೌರವ ಶ್ರದ್ಧೆ,ನಿಷ್ಠೆ,ಪ್ರಾಮಾಣಿಕ ದುಡಿಮೆ ಸ್ವಾಮಿ ಭಕ್ತಿ ಇವೆಲ್ಲವು ಅವರಲ್ಲಿರುವ ಮೆಚ್ಚುವ‌ ಗುಣ.

ಊರಿಂದ ಊರಿಗೆ ದೋಣಿಯಲ್ಲಿ ಪ್ರಯಾಣಿಸಿ, ಎತ್ತಿನಗಾಡಿಯಲ್ಲಿ ರಂಗ ಪರಿಕರಗಳನ್ನು ಸಾಗಿಸಿಕೊಂಡು, ವಿದ್ಯುತ್‌ ಇಲ್ಲದ ಕಡೆಗಳಲ್ಲಿ ಗ್ಯಾಸ್‌ಲೈಟ್‌ ಪ್ರಕಾಶದಲ್ಲಿ ನಾಟಕವಾಡುತ್ತಿದ್ದ ಕಷ್ಟಕರವಾದ ಆ ದಿನಗಳಿಂದ ಹಿಡಿದು ಈಗಿನ ಅಧುನಿಕ ನಾಟಕ ರಂಗಭೂಮಿಯ ವ್ಯವಸಾಯದಲ್ಲೂ ನುರಿತ ಸೀತಾರಾಮರು. ಹಳ್ಳಿ, ಗ್ರಾಮ, ಪಟ್ಟಣ, ಜಿಲ್ಲೆ, ರಾಜ್ಯ ಸುತ್ತಾಡಿ ನಾಟಕ ಪ್ರದರ್ಶನದ ವ್ಯವಸ್ಥೆಗೊಳಿಸುವ ರಂಗಕರ್ಮಿಯಾಗಿ ಜೀವನ ಪೂರ್ತಿ ಕಳೆದರು.

ಇವರು ರಂಗ ಕಾರ್ಯದಲ್ಲಿ ದುಡಿದು, ಅಭಿನಯಿಸಿರುವ ಒಟ್ಟು ನಾಟಕಗಳ ಸಂಖ್ಯೆ ಮೂರು ಸಾವಿರ ದಾಟಬಹುದು. ಇವುಗಳಲ್ಲಿ ಅಧಿಕವಾಗಿ ಕೆ.ಎನ್‌. ಟೇಲರ್‌ರವರದೇ ಹೆಚ್ಚು, ಅಲ್ಲದೆ ಕೆಮೂ¤ರು ದೊಡ್ಡಣ ಶೆಟ್ಟಿ, ವಿಶು ಕುಮಾರ್‌, ಕೆ.ಬಿ. ಭಂಡಾರಿ, ದಾಮೋದರ ಬಂಗೇರ, ವಸಂತ ಕದ್ರಿ, ಪರ್ಸಿ ಉರ್ವ, ದೇವದಾಸ್‌ ಕಾಪಿಕಾಡ್‌, ಮನೋಹರ್‌ ಪ್ರಸಾದ್‌, ಜೆ.ಜೆ. ವರ್ಮ, ವಾಸುದೇವ ಕಾಮತ್‌, ಯಶವಂತ ಬೋಳೂರು ಮೊದಲಾದ ಇನ್ನೂ ಅನೇಕ ಲೇಖಕರ ನಾಟಕಗಳು. ಹಾಗೆಯೇ ಚಲನಚಿತ್ರದಲ್ಲೂ ಸೇವೆ ಸಲ್ಲಿಸಿರುವ ಸೀತಾರಾಮರು ತಮ್ಮದೇ ಆದ ತುಳು ನಾಟಕ ಸಭಾ ಎಂಬ ಕಲಾ ತಂಡ ಕಟ್ಟಿದ್ದಾರೆ. ಈ ಮೂಲಕ ಕೆಲವು ನಾಟಕಗಳನ್ನು ನಿರ್ದೇಶಿಸಿ, ಹೊಸ ಕಲಾವಿದರನ್ನು, ಸಂಗೀತಗಾರರನ್ನು ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಇವರಿಗಿದೆ.

ತಮ್ಮ ಲಕ್ಷ್ಮಣ, ಮಂಗಳೂರು

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.