ಎಂ.ಟಿ.ರಚಿಸಿದ ಮರಾಠಿ ಯಕ್ಷಗಾನ ಪ್ರಸಂಗಗಳು


Team Udayavani, Jun 14, 2019, 5:00 AM IST

u-2

ಯಕ್ಷಗಾನಕ್ಕೆ ಭಾಷಾಬಂಧನವಿಲ್ಲ. ಕನ್ನಡ ಭಾಷೆಗಷ್ಟೇ ಸೀಮಿತವಾಗಿದ್ದ ಯಕ್ಷಗಾನ ಪ್ರಸಂಗ ಪ್ರದರ್ಶನಗಳು ಇಂದು ತುಳು, ಮಲಯಾಳಂ, ಹಿಂದಿ, ಕೊಂಕಣಿ, ಹವ್ಯಕ,ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಿಗೂ ವಿಸ್ತರಿಸಿದೆ. ಈ ದಿಸೆಯಲ್ಲಿ ಇನ್ನೊಂದು ಪ್ರಯತ್ನ ಮರಾಠಿ ಭಾಷೆಯ ಯಕ್ಷಗಾನ.

ಮರಾಠಿ ಭಾಷೆಯ ಮೊದಲ ಯಕ್ಷಕವಿ ಮುಂಬಯಿಯ ಎಂ.ಟಿ.ಪೂಜಾರಿ. ಮೂಲತಃ ಉಡುಪಿ ಜಿಲ್ಲೆಯ ಬೈಲೂರಿನವರಾದ ಎಂ.ಟಿ.ಪೂಜಾರಿಯವರು ಬದುಕು ಕಟ್ಟಿಕೊಳ್ಳಲು ಮುಂಬಯಿಗೆ ತೆರಳಿದರು. ಮುಂಬಯಿಗೆ ಪ್ರಯಾಣಿಸುವಾಗ ಕಡಲತೀರದ ಯಕ್ಷಗಾನದ ಗಾಳಿಯನ್ನೇ ಉಸಿರಾಡುತ್ತಾ ಹೋದ ಪೂಜಾರಿಯವರು ಅಲ್ಲಿಯೂ ಯಕ್ಷಮಾತೆಯ ಪೂಜೆ ಕೈಗೊಂಡರು. ಅದರ ಪರಿಣಾಮ ತುಳು-ಕನ್ನಡ ಭಾಷೆಗಳಲ್ಲಿ ಪ್ರಸಂಗ ರಚನೆ. ಎಂ.ಟಿ.ಪೂಜಾರಿ ಅವರು ಬರೆದ ಇಪ್ಪತ್ತನಾಲ್ಕು ಪ್ರಸಂಗಗಳಲ್ಲಿ ಸುಮಾರು ಹನ್ನೆರಡು ಪ್ರಸಂಗಗಳು ಬೆಳಕು ಕಂಡಿವೆ. ಅದರಲ್ಲೊಂದು “ಪಂಡರ್‌ ಪುರ್‌ ಮಹಿಮ್‌. ಶ್ರೀ ಕ್ಷೇತ್ರ ಪಂಡರಾಪುರದ ಸ್ಥಳಪುರಾಣವನ್ನು “ಶ್ರೀ ಪಂಡರಪುರ ಮಹಾತ್ಮೆ’ ಎಂಬ ಪ್ರಸಂಗವಾಗಿಸಿ ಕನ್ನಡದಲ್ಲಿ ಬರೆದ ಪೂಜಾರಿಯವರು ಅದನ್ನು ಮರಾಠಿಗೆ ಭಾಷಾಂತರಿಸಿದರು. ಯಕ್ಷಗಾನದ ಅಂಶಗಣ, ಮಾತ್ರಾಗಣ ಛಂದಸ್ಸುಗಳಲ್ಲಿ ಮರಾಠೀ ಹಾಡುಗಳನ್ನು ಹೃದ್ಯವಾಗಿ ಹೊಸೆದಿದ್ದಾರೆ. ಮುಂಬಯಿಯ ಯಕ್ಷಗಾನ ಮಂಡಳಿಗಳಿಂದ ಈ ಪ್ರಸಂಗದ 10-18 ಪ್ರದರ್ಶನಗಳು ಈಗಾಗಲೇ ಬೆಳಕು ಕಂಡಿವೆ. ತುಳು-ಮರಾಠಿ ಎರಡೂ ಪಠ್ಯಗಳನ್ನು 2016ರಲ್ಲಿ ಪುಸ್ತಕ ರೂಪದಲ್ಲಿ ಹೊರತಂದ ಎಂ.ಟಿ.ಪೂಜಾರಿಯವರು ತನ್ನ ಪದ್ಯಗಳಿಗೆ ಅರ್ಥ ವಿವರಣೆಯನ್ನೂ ಜೊತೆಗೆ ನೀಡಿದ್ದಾರೆ. ಸುಭಗ ಸುಂದರ ಶೈಲಿಯ ಹಾಡು ಮತ್ತು ಅರ್ಥ ವಿವರಣೆ ಹೃದಯಕ್ಕೆ ಹತ್ತಿರವಾಗಿದೆ.

ಇವರು ಬರೆದು ಪ್ರಕಟಿಸಿದ ಇನ್ನೊಂದು ಮರಾಠಿ ಯಕ್ಷಗಾನ ಪ್ರಸಂಗ “ಶ್ರೀ ದೇವೀ ಮಹಾತೆ¾’. ಈ ಪ್ರಸಂಗದಲ್ಲಿ ಎರಡು ರಾಕ್ಷಸ ವಧಾ ಪ್ರಸಂಗಗಳಿವೆ. ಮಹಿಷಾಸುರ ವಧೆ ಮತ್ತು ಮಹಾಮಾಯೆ ಕೌಶಿಕಿ. ಈ ಪ್ರಸಂಗ ಕೂಡಾ ಹಲವು ಪ್ರಯೋಗಗಳನ್ನು ಕಂಡಿದೆ, ಮುದ್ರಣಗೊಂಡಿದೆ.

ತೆಂಕುತಿಟ್ಟಿನ ರಂಗಸ್ಥಳದಲ್ಲಿ ಮೊದಲ ಪ್ರದರ್ಶನ ಕಂಡ ಮರಾಠಿ ಯಕ್ಷಗಾನ “ಪಂಡರ್‌ ಪುರ್‌ ಮಹಿಮ್‌’ ಪ್ರಸಂಗವನ್ನು ಮತ್ತು ಶ್ರೀ ದೇವೀ ಮಹಾತ್ಮೆ ಪ್ರಸಂಗವನ್ನು ಮಹಾರಾಷ್ಟ್ರದ ಕಲಾಭಿಮಾನಿಗಳು ಮೆಚ್ಚಿಕೊಂಡಾಡಿದ್ದಾರೆ. ಇದು ಕಲಾ ವಿಸ್ತರಣೆಯ ಭರವಸೆಯ ಹೆಜ್ಜೆ. ಯಕ್ಷಗಾನ ಭಾಷಾ ಸರಸ್ವತಿಗೆ “ಮರಾಠಿ’ ಭಾಷಾ ಕೃತಿ ರತ್ನದಿಂದ ಮೌಲಿಕ ಉಡುಗೊರೆಯನ್ನು ನೀಡಿದ ಮುಂಬಯಿಯ ಪ್ರಸಂಗಕರ್ತ ಎಂ.ಟಿ.ಪೂಜಾರಿ ಅವರ ಹೆಸರು ಮರಾಠಿ ಯಕ್ಷಗಾನದ ಇತಿಹಾಸದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

– ತಾರಾನಾಥ ವರ್ಕಾಡಿ

ಟಾಪ್ ನ್ಯೂಸ್

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.