ಇಂಗ್ಲಿಷ್‌ನಲ್ಲಿ ನರಕಾಸುರ ಮೋಕ್ಷ


Team Udayavani, Oct 25, 2019, 3:58 AM IST

q-40

ಯಕ್ಷನಂದನ ಕುಳಾಯಿ ತಂಡವು ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾನಿಲಯದಲ್ಲಿ ನರಕಾಸುರ ಮೋಕ್ಷ ಯಕ್ಷಗಾನವನ್ನು ಇಂಗ್ಲೀಷ್‌ ಭಾಷೆಯಲ್ಲಿ ಪ್ರದರ್ಶಿಸಿತು. ಸಂಭಾಷಣೆ, ವಾದನ, ಹಿಮ್ಮೇಳ ಎಲ್ಲಾ ಆಂಗ್ಲ ಭಾಷೆಯಲ್ಲಿದ್ದು ಮೋಡಿ ಮಾಡಿತು.

ದೇವೇಂದ್ರ, ಅಗ್ನಿ, ವಾಯು, ಶ್ರೀಕೃಷ್ಣ, ಸತ್ಯಭಾಮೆ, ಮುರಾಸುರ, ನರಕಾಸುರನ ಮಾವ ಮತ್ತು ನರಕಾಸುರ ಇಷ್ಟೇ ಪಾತ್ರಗಳಲ್ಲಿ ಕಥೆ ಮೂಡಿಬಂದಿತ್ತು. ಒಂದೂವರೆ ಗಂಟೆ ಪ್ರೇಕ್ಷಕರು ಕಣ್ಣು ಕೀಳದಂತೆ ಮಂತ್ರಮುಗ್ಧರಾಗಿ ಕುಳಿತು ವೀಕ್ಷಿಸಿ, ಕೆಲವರು ಅನಿಸಿಕೆಗಳನ್ನೂ ಹೇಳಿದರು. ಪ್ರಶಾಂತ್‌ ಐತಾಳ್‌ ದೇವೇಂದ್ರನಾಗಿ ಒಡ್ಡೋಲಗವಿತ್ತರೆ, ನಂದನೇಶ ಹೆಬ್ಟಾರ್‌ ಹಾಗೂ ಸ್ಕಂದ ಕೊನ್ನಾರ್‌ ಅವರು ದೇವತೆಗಳಾಗಿ ದೇವರಾಜನಿಗೆ ಸಲಹೆ ಇತ್ತರು. ದೇವೇಂದ್ರ ನರಕಾಸುರನ ಪೀಡೆಯನ್ನು ನಿವಾರಿಸಲು ಆತನ ಮಾತಾಪಿತರೇ ಸರಿಯೆಂದು ತಿಳಿದು ದ್ವಾರಕೆಗೆ ಬಂದರು. ನರಕಾಸುರನಿಗೆ ವರವೇ ಹಾಗಿತ್ತು. ದೇವತೆಗಳ ಸೋಲು, ದೇವಮಾತೆ ಅದಿತಿ ದೇವಿಯ ಕರ್ಣಕುಂಡಲ ಮತ್ತು ವರುಣನ ಮಣಿಶೈಲದ ಸಹಿತ ಸುವಸ್ತುಗಳನ್ನೆಲ್ಲಾ ಒಯ್ದುದನ್ನು ಶ್ರೀಕೃಷ್ಣನಲ್ಲಿ ( ವರ್ಕಾಡಿ ರವಿ ಅಲೆವೂರಾಯ) ದೂರುತ್ತಾರೆ.ಅ

ಭಯ ಪಡೆದು ದೇವತೆಗಳು ಹಿಂತೆರಳುತ್ತಾರೆ. ಕೃಷ್ಣ ಯುದ್ಧಕ್ಕೆ ಹೊರಟಾಗ ಭಾಮೆ ಬಂದು ತಡೆಯುತ್ತಾಳೆ. ವೃಂದಾ ಕೊನ್ನಾರ್‌ ಅವರು ಸ್ತ್ರೀಪಾತ್ರದ ಸೂಕ್ಷ್ಮ, ನಯನಾಜೂಕುಗಳನ್ನು ಪ್ರದರ್ಶಿಸುತ್ತಾ ಬೇರೆ ಬೇರೆ ತಾಳಗಳಿಗೆ ಹೆಜ್ಜೆಹಾಕಿ ಕೌತುಕಗೊಳಿಸಿದರು. ಪ್ರಾಗೊತಿಷಕ್ಕೆ ಬಂದ ಕೃಷ್ಣ ಭಾಮೆಯರು, ಮುರಾಸುರನನ್ನು ವಧಿಸುತ್ತಾರೆ. ಡಾ|ಸತ್ಯಮೂರ್ತಿ ಐತಾಳರು ಮುರಾಸುರನ ಪಾತ್ರದಲ್ಲಿ ಪ್ರೌಢಿಮೆಯನ್ನು ಪ್ರದರ್ಶಿಸಿದರು. ಬಲಾನ್ವಿತ ಮಂತ್ರಿ ಮುರಾಸುರ ಅಳಿದ ವಾರ್ತೆಯನ್ನು ದೂತರು ನರಕನಿಗೆ ತಿಳಿಸುತ್ತಾರೆ. ಸಂದೇಶ ಚರನಾಗಿ ಸಂತೋಷ ಐತಾಳರು ಹಾಸ್ಯ ಮಾತುಗಳಿಂದ ರಂಜಿಸಿದರು. ನರಕಾಸುರನಾಗಿ ನಾಗೇಶ ಕಾರಂತರು ಅದ್ಭುತವಾಗಿ ನಟಿಸಿ ಕೇಶಾವರಿ ಪಾತ್ರವನ್ನು ಗೆಲ್ಲಿಸಿದರು.

ಶರಣಾಗುವ ದೃಶ್ಯದಲ್ಲಂತೂ ಬಿಕ್ಕಳಿಸಿ ಅಳುತ್ತಾ ಪ್ರೇಕ್ಷಕರಲ್ಲೂ ಅಳುಮೂಡಿಸಿ ನರಕನನ್ನು ಸಾಯಿಸಿದರು. ತಂದೆ ತಾಯಿಯರ ರಕ್ಷಣೆ ಇಲ್ಲದೆ ಬೆಳೆಯುವ ಮಗು ಹೇಗೆ ಅದಕ್ಷನಾಗಿ-ಅಧರ್ಮಿಯಾಗಿ ಸಮಾಜ ಕಂಟಕನಾಗುತ್ತಾನೆ ಎಂಬ ಸಂದೇಶವನ್ನು ನೀಡಿ, ಬದುಕು ನರಕನಂತಾಗಬಾರದೆಂಬ ಕಾರಣಕ್ಕೆ ಈ ದಿನಕ್ಕೆ ನರಕಚತುರ್ದಶಿಯಾಗಲಿ ಎಂದು ದೇವರಲ್ಲಿ ಬೇಡಿ ಮೋಕ್ಷಗಾಮಿಯಾಗುತ್ತಾನೆ. ಶ್ರೀಕೃಷ್ಣ – ಭಾಮೆಯರು ಆತನನ್ನು ಹರಸಿ 16,000 ರಾಜಕುಮಾರಿಯರನ್ನು ಸೆರೆಯಿಂದ ಬಿಡಿಸುತ್ತಾರೆ. ಅನಾಥರಾದ ಅವರಿಗೆ ನಾಥನಾಗಿ ಪತಿತೋದ್ಧಾರಕನಾಗುತ್ತಾ, ಲೋಕಕ್ಕೇ ಮಂಗಳ ಕೋರುತ್ತಾರೆ ಭಾಮಾ-ಕೃಷ್ಣರು ಎಂಬಲ್ಲಿಗೆ ಕಥೆ ಮುಗಿಯಿತು. ಹಿಮ್ಮೇಳದಲ್ಲಿ ಹರಿಪ್ರಸಾದ ಕಾರಂತ, ಅರ್ಜುನ ಕೊಡೇಲ್, ಅವಿನಾಶ ಬೈಪಡಿತ್ತಾಯರು ಸಹಕರಿಸಿದರು.

ಸುಂದರ ಐತಾಳ್‌ ಪಿ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.