ಮನಸೂರೆಗೊಂಡ ರಾಮ ನಿರ್ಯಾಣ- ಮೇಘ ಮಯೂರಿ


Team Udayavani, Sep 21, 2018, 6:00 AM IST

z-7.jpg

ಮುಚ್ಚಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷಕೂಟ ಮುಚ್ಚಾರು ಇವರು ಇತ್ತೀಚೆಗೆ ಸಾದರಪಡಿಸಿದ 16ನೇ ವರ್ಷದ ಯಕ್ಷ ಆಟ-ಕೂಟವು ಯಶಸ್ವಿಯಾಗಿ ಸಮಾಪಣೆಗೊಂಡಿತು. 

ಮಧ್ಯಾಹ್ನ 2ರಿಂದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಕುರಿಯ ಗಣಪತಿ ಶಾಸ್ತ್ರೀಯವರ ಭಾಗವತಿಕೆ; ಅಡೂರು ಗಣೇಶ್‌ ರಾವ್‌, ಮೋಹನ್‌ ಶೆಟ್ಟಿಗಾರ್‌ರವರ ಹಿಮ್ಮೇಳ ಹಾಗೂ ಸುಣ್ಣಂಬಳ, ರಂಗ ಭಟ್‌, ಜಬ್ಟಾರ್‌, ಕಾವಳಕಟ್ಟೆಯವರ ಅರ್ಥಗಾರಿಕೆಯೊಂದಿಗೆ ಹೊಸತೋಟ ಮಂಜುನಾಥ ಭಾಗವತ ವಿರಚಿತ “ಶ್ರೀರಾಮ ನಿರ್ಯಾಣ’ ತಾಳಮದ್ದಳೆ ನಡೆಯಿತು. ಅಯೋಧ್ಯೆಯಲ್ಲಿ ರಾಮ ಲಕ್ಷ್ಮಣರನ್ನು ಕಳಕೊಂಡ ಪ್ರಜೆಗಳಂತೆ ತಾಳಮದ್ದಳೆ ನೋಡಿದ ಪ್ರೇಕ್ಷಕರ ಕಣ್ಣುಗಳು ತುಂಬಿದ್ದವು. ನಂತರ ಪುರುಷೋತ್ತಮ ಪೂಂಜ ರಚಿಸಿದ ಸಾಲಿಗ್ರಾಮ ಮೇಳದಲ್ಲಿ ಜಯಭೇರಿ ಬಾರಿಸಿದ “ಮೇಘ-ಮಯೂರಿ’ ಪ್ರಸಂಗ ಪ್ರದರ್ಶನಗೊಂಡಿತು. 

ಮನದ ತುಮುಲಗಳನ್ನು ಬದಿಗಿಟ್ಟು ಯಾವುದೇ ಭಾವನೆಗಳಿಗೆ ಒಳಗಾಗದೆ, ವೈಯಕ್ತಿಕ ಜೀವನಕ್ಕಿಂತ ದೇಶ ಮೊದಲು ಎಂದು ಬದುಕುವ ದಂಡನಾಯಕ ಮೇಘ ಮತ್ತು ಆತನನ್ನು ಪ್ರೀತಿಸಿ ಕೈ ಹಿಡಿದು, ಗಂಡನಿಗೆ ಧೈರ್ಯ ತುಂಬುತ್ತಾ, ತನಗೇನು ಕಷ್ಟ ಬಂದರೂ ತಾನೋರ್ವ ದಂಡನಾಯಕನ ಪತ್ನಿ ಎಂದು ಹೆಮ್ಮೆಯಿಂದಲೇ ಬದುಕುವ ಮಯೂರಿ, ಇವರೀರ್ವರ ಜೀವನದಲ್ಲಿ ಕಿನ್ನರ ಜೋಗಿಯೋರ್ವನ ಭವಿಷ್ಯ ಹೇಗೆ ಸತ್ಯವಾಗುತ್ತದೆ ಎನ್ನುವ ಕಥೆಯೇ ಮೇಘ-ಮಯೂರಿ. 

ಕನ್ನಡಿಕಟ್ಟೆ , ಕಕ್ಕೆಪದವು ಅವರ ಭಾಗವತಿಕೆ, ಬೊಳಿಂಜಡ್ಕ, ಮಿಜಾರು ದಯಾನಂದ, ಚೈತನ್ಯರ ಹಿಮ್ಮೇಳದಲ್ಲಿ ಕಲಾವಿದರ ಮನೋಜ್ಞ ಅಭಿನಯದ ಮೂಲಕ ಜನಮನ ಸೂರೆಗೊಂಡಿತು. ಸಾವನ್ನು ಅಪ್ಪುವುದಕ್ಕೆ ಸದಾ ಸಿದ್ಧನಾಗಿ ನಿಂತ ಯೋಧನ ಮದುವೆಯಾದರೆ ಕೈಗೆ ಹಚ್ಚಿದ ಮದರಂಗಿ ಮಾಸುವ ಮುನ್ನ ಕೈ ಬಳೆ ಚೂರಾದೀತು ಎಂಬ ವಾಸ್ತವವನ್ನು ಬಿಚ್ಚಿಡುವ ಕೆಚ್ಚೆದೆಯ ಯೋಧನಾಗಿ ಸುಬ್ರಾಯ ಹೊಳ್ಳರು, ತಾಳಿ ಕಟ್ಟಿದಾಕ್ಷಣ ವಿಧವೆಯಾದರೂ ಜೀವನ ಪರ್ಯಂತ ಯೋಧನ ಮಡದಿಯೆಂದು ಕೆಚ್ಚಿನಿಂದ ಬದುಕುವೆನೆಂದು, ಅದಕ್ಕಿಂತ ಹೆಚ್ಚಿನದ್ದು ಹೆಣ್ಣಾದವಳಿಗೆ ಬೇಕಿಲ್ಲ ಎಂದು ಬೆಚ್ಚಗೆ ನುಡಿಯುವ ಧೀರೆಯಾಗಿ ಹಿಲಿಯಾಣರವರ ಮೊದಲಾರ್ಧದ ಮೇಘ-ಮಯೂರಿ ಪಾತ್ರ ಮನಸ್ಸನ್ನು ಸೂರೆಗೊಂಡಿತು. 

ಬಳಿಕ ಮೇಘ – ಮಯೂರಿ ಪಾತ್ರ ಮಾಡಿದ ಸುಣ್ಣಂಬಳ ಹಾಗೂ ಶಶಿಕಾಂತ ಶೆಟ್ಟಿಯವರು ಮನ ಮಿಡಿಯುವ ಅಭಿನಯ ನೀಡಿದರು. ತುಂಬು ಗರ್ಣಿಣಿ ಮಡದಿಯನ್ನು ಬಿಟ್ಟು ರಣರಂಗಕ್ಕೆ ತೆರಳುವ ಪತಿಯನ್ನು , ರಣರಂಗಕ್ಕೆ ಹೊರಟ ಯೋಧ, ಪ್ರಸವಕ್ಕೆ ಹೊರಟ ಹೆಣ್ಣು ಬದುಕಿ ಬರುವ ಸಾಧ್ಯತೆ ಕಡಿಮೆ. ನೆರೆಯ ನೀರ ಮಧ್ಯೆ ನಿಂತಿರುವ ನಮ್ಮಿಬ್ಬರ ಬದುಕು ಕೊಚ್ಚಿ ಹೋಗಲೂ ಬಹುದು, ಮರಳಿ ಒಂದುಗೂಡಲೂ ಬಹುದು. ಎಲ್ಲವೂ ದೈವಚಿತ್ತ ಎಂದು ಧೈರ್ಯ ತುಂಬುವ ಸನ್ನಿವೇಶವನ್ನು ಈ ಇಬ್ಬರು ಕಲಾವಿದರು ಮನೋಜ್ಞವಾಗಿ ಚಿತ್ರಿಸಿದರು. 

 ವಿಜೃಂಭಿಸುವ ಕಂಠ, ವಿಶಿಷ್ಟ ಮುಖವರ್ಣಿಕೆಯ ಹಾವಭಾವದೊಂದಿಗೆ ಖಳನಾಯಕ ರಣತುಂಗನ ಪಾತ್ರಕ್ಕೆ ರವಿರಾಜ ಪನೆಯಾಲರು ಜೀವ ತುಂಬಿದರು.ಪೆರ್ಮುದೆ ಹಾಗೂ ಗಣೇಶ್‌ ಕನ್ನಡಿಕಟ್ಟೆಯವರ ಚೊಕ್ಕದಾದ ಪಾತ್ರ ನಿರ್ವಹಣೆ; ದಿಗಿಣ ವೀರರಾದ ಶಶಿಧರ್‌ ಕನ್ಯಾನ ಹಾಗೂ ಲೋಕೇಶ್‌ ಮುಚ್ಚಾರುರವರ ಪ್ರಚಂಡ ಪುಂಡು ವೇಷ; ಬಂಟ್ವಾಳ, ಮಿಜಾರು, ಮೋಹನ್‌ ಮುಚ್ಚಾರು, ಪ್ರಜ್ವಲ್‌ರವರ ಉತ್ತಮ ಹಾಸ್ಯ; ಕೊನೆ ಗಳಿಗೆಯಲ್ಲಿ ದಿವಾಕರ್‌ ರೈ ಹಾಗೂ ರಕ್ಷಿತ್‌ ರೈಯವರ ಶಶಾಂಕ – ಮಾಳವಿಕಾ ಜೋಡಿ ರಂಗದಲ್ಲಿ ಮಿಂಚಿನ ಸಂಚಾರ ಮೂಡಿಸಿತು. ಇತರ ಎಲ್ಲಾ ಕಲಾವಿದರ ಉತ್ಕೃಷ್ಟ ನಿರ್ವಹಣೆ ಪ್ರದರ್ಶನವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. 

  ಆರ್‌. ಕೆ. ಕೊಳಂಬೆ

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.