ಸತ್ಯ ಹರಿಶ್ಚಂದ್ರ – ಶೂರ್ಪನಖಾ ವಿವಾಹ ಮಕರಾಕ್ಷಕಾಳಗ 


Team Udayavani, Sep 21, 2018, 6:00 AM IST

z-5.jpg

ಬ್ರಾಮರೀ ಯಕ್ಷಮಿತ್ರರು ( ರಿ. ) ಮಂಗಳೂರು ಇದರ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚಿಗೆ ಮಂಗಳೂರಿನ ಪುರಭವನದಲ್ಲಿ ಜರಗಿದ ಯಕ್ಷಗಾನ ಆಖ್ಯಾನಗಳು ಹಲವು ವರ್ಷಗಳ ತನಕ ನೆನಪಲ್ಲುಳಿಯುವ ಉತ್ತಮ ಪ್ರಸ್ತುತಿಯ ಪ್ರದರ್ಶನ . ಸುಪ್ರಸಿದ್ಧ ಕಲಾವಿದರ ಸಂಯೋಜನೆಯೂ ಇದಕ್ಕೆ ಪೂರಕವಾಯಿತು . 

ಪ್ರಥಮ ಪ್ರಸಂಗ ಸತ್ಯ ಹರಿಶ್ಚಂದ್ರ ಚೆಂಡೆಯ ಝೇಂಕಾರಕ್ಕೆ ಅವಕಾಶವಿಲ್ಲದ , ಕರುಣರಸಕ್ಕೇ ಪ್ರಾಧಾನ್ಯ ಹೊಂದಿರುವ ಪ್ರಸಂಗ . ಹರಿಶ್ಚಂದ್ರನಾಗಿ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆಯವರು ಭಾವ, ರಸ, ಅಭಿನಯ ಹಾಗೂ ಸಂಭಾಷಣೆಯ ಸಮಪಾಕದಲ್ಲಿ ಪೌರಾಣಿಕ ಲೋಕವನ್ನೇ ಸೃಷ್ಟಿಸಿದರು. ಹೆಂಡತಿ ಮಕ್ಕಳನ್ನು ಮಾರಾಟ ಮಾಡುವ ಹರಿಶ್ಚಂದ್ರನ ಸತ್ಯಬದ್ಧತೆ , ತನ್ನನ್ನೇ ಮಾರಾಟ ಮಾಡುವ ವಚನಬದ್ಧತೆ ಹಾಗೂ ತನ್ನ ಸ್ವಂತ ಮಗನ ಹೆಣವನ್ನೂ ಸುಡಲಾಗದ ಕರ್ತವ್ಯಬದ್ಧತೆಯನ್ನು ಸಮುಚಿತವಾಗಿ ಪ್ರಸ್ತುತಗೊಳಿಸಿದರು . ಚಂದ್ರಮತಿಯಾಗಿ ಶಶಿಕಾಂತ ಶೆಟ್ಟರದು ಭಾವಪೂರ್ಣ ಅಭಿನಯ . ಹೆಂಡತಿ ಎಂಬ ಮಮಕಾರಕ್ಕೊಳಗಾಗಿ ಸತ್ಯದ ದಾರಿ ಬಿಡಬೇಡಿ ಎಂದು ಪತಿಗೇ ಧರ್ಮಸೂಕ್ಷ್ಮ ನೆನಪಿಸಿ ಪತಿಗೆ ಸಹಕಾರಿಯಾಗಿರುವುದೇ ಸತೀಧರ್ಮ ಎಂಬುದನ್ನು ಸಮರ್ಥಿಸಿಕೊಂಡರು . ರೋಹಿತಾಶ್ವನಾಗಿ ಮುಚ್ಚಾರು ಲೋಕೇಶರದ್ದು ಮನ ಮಿಡಿಯುವ ಪಾತ್ರ ನಿರ್ವಹಣೆ . ನಕ್ಷತ್ರಿಕನ ಪಾತ್ರದಲ್ಲಿ ಸೀತಾರಾಮ ಕುಮಾರ್‌ ಕಟೀಲುರವರು ಪಾತ್ರದ ಚಿತ್ರಣ ಚೆನ್ನಾಗಿ ಅಥೆìçಸಿಕೊಂಡಿರುವುದು ಕಂಡು ಬಂತು . ಹಾಸ್ಯದ ಸಿಂಚನವಿದ್ದರೂ ಪೀಡಿಸುವ ನಕ್ಷತ್ರಿಕನಿಗೇ ಒತ್ತುಕೊಟ್ಟು ಪಾತ್ರೋಚಿತವಾದ ಕ್ರೌರ್ಯವನ್ನು ಬಿಂಬಿಸಿದರು. ವಿಶ್ವಾಮಿತ್ರನಾಗಿ ಅನುಭವೀ ಕಲಾವಿದರಾದ ರಾಧಾಕೃಷ್ಣ ನಾವುಡ , ಹರಿಶ್ಚಂದ್ರನ ಸಖನಾಗಿ ದಿನೇಶ ಕೋಡಪದವು ಶುದ್ಧ ಯಕ್ಷಗಾನೀಯ ಹಾಸ್ಯದ ಮೂಲಕ ರಂಜಿಸಿದರು . ವಿಶ್ವಾಮಿತ್ರನ ಸೃಷ್ಟಿಯ ಮಾತಂಗ ಕನ್ಯೆಯರಾಗಿ ಅಕ್ಷಯ ಮಾರ್ನಾಡು ಹಾಗೂ ರಕ್ಷಿತ್‌ ಪಡ್ರೆಯವರ ನಾಟ್ಯ , ಅಭಿನಯ , ಮಾತುಗಾರಿಕೆಯಲ್ಲಿ ಪಾತ್ರೋಚಿತವಾದ ಸ್ಪರ್ಧೆ ಕಂಡು ಬಂತು . ವೇಷಭೂಷಣದಲ್ಲಿ ಸಹಜತೆ ಇದ್ದರೂ , ವಿಶ್ವಾಮಿತ್ರನ ಕೃತಕ ಸೃಷ್ಟಿಯ ಮಾತಂಗ ಕನ್ಯೆಯರಾದ ಕಾರಣ , ಮುಖವರ್ಣಿಕೆಯು ಹೊಗೆಕಪ್ಪು ವರ್ಣವಾಗಿದ್ದರೆ ಚೆನ್ನಾಗಿತ್ತು . 

ಕೌಕಭಟ್ಟನಾಗಿ ಅರುಣ ಜಾರ್ಕಳ ,ಪತ್ನಿಯಾಗಿ ಅಂಬಾಪ್ರಸಾದ್‌ ಪಾತಾಳ , ವೀರಬಾಹುವಾಗಿ ಉಬರಡ್ಕ ಉಮೇಶ ಶೆಟ್ಟರ ನಿರ್ವಹಣೆಯು ಪ್ರಸಂಗದ ಒಟ್ಟಂದದ ಪ್ರಸ್ತುತಿಗೆ ಪೂರಕವಾಯಿತು . ಕೊನೆಯಲ್ಲಿ ಈಶ್ವರನಾಗಿ ವಾದಿರಾಜ ಕಲ್ಲೂರಾಯರು ಹರಿಶ್ಚಂದ್ರನ ಸತ್ಯದ ಬದ್ಧತೆಯನ್ನು ವಿವರಿಸಿ ,ಪ್ರಸಂಗವನ್ನು ಉಪಸಂಹಾರಗೊಳಿಸಿದರು . ಪ್ರಪುಲ್ಲಚಂದ್ರ ನೆಲ್ಯಾಡಿ ಮತ್ತು ಪಟ್ಲ ಸತೀಶ ಶೆಟ್ಟರ ಸುಶ್ರಾವ್ಯವಾದ ಭಾಗವತಿಕೆ ಮನ ಸೆಳೆಯಿತು ಚೆಂಡೆ- ಮದ್ದಲೆ ವಾದನದಲ್ಲಿ ಗುರುಪ್ರಸಾದ್‌ ಬೊಳಿಂಜಡ್ಕ , ಚೈತನ್ಯಕೃಷ್ಣ ಪದ್ಯಾಣ ಗಮನ ಸೆಳೆದರು .

ಎರಡನೇ ಪ್ರಸಂಗ ಶೂರ್ಪನಖಾ ವಿವಾಹ ಅಪರೂಪದ ಪ್ರಸಂಗ . ಪ್ರೇಕ್ಷಕರ ಅತಿ ನಿರೀಕ್ಷೆಯ ವಿದ್ಯುಜಿಹ್ವನ ಪಾತ್ರದಲ್ಲಿ ಯುವ ಕಲಾವಿದ ಪ್ರಜ್ವಲ್‌ ಕುಮಾರ್‌ ಗುರುವಾಯನಕೆರೆ ಅಬ್ಬರದ ಪ್ರವೇಶ ಕೊಟ್ಟು ಹಾಸ್ಯಮಿಶ್ರಿತ ಸಂಭಾಷಣೆಯ ಮೂಲಕ ರಂಜಿಸಿದರು . ಪ್ರಹಸ್ತನಾಗಿ ಉಜ್ರೆ ನಾರಾಯಣ ತಿಳಿ ಹಾಸ್ಯವನ್ನು ಬಳಸಿ , ಪಾತ್ರದ ಘನತೆಯನ್ನು ಉಳಿಸಿ ಪ್ರಬುದ್ಧತೆ ಮೆರೆದರು . ರಾವಣನಾಗಿ ಹರಿನಾರಾಯಣ ಭಟ್‌ , ಎಡನೀರು ಪರಂಪರೆಯ ಶೈಲಿಯಲ್ಲೇ ಪಾತ್ರ ನಿರ್ವಹಿಸಿದರು . ಶೂರ್ಪನಖೀಯಾಗಿ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರರು ಸಾಂಪ್ರದಾಯಿಕ ಹೆಣ್ಣುಬಣ್ಣದ ಚಿತ್ರಣ ನೀಡಿದರು . ಭಾಗವತಿಕೆಯಲ್ಲಿ ರಾಮಕೃಷ್ಣ ಮಯ್ಯ , ಚೆಂಡೆ – ಮದ್ದಲೆ ವಾದನದಲ್ಲಿ ನೆಕ್ಕರೆಮೂಲೆ ಹಾಗೂ ಅಡೂರು ಗಣೇಶರ ನಿರ್ವಹಣೆ ಪ್ರಸಂಗದ ಯಶಸ್ಸಿಗೆ ಕಾರಣವಾಯಿತು. ಕೊನೆಯ ಪ್ರಸಂಗ ಮಕರಾಕ್ಷ ಕಾಳಗ ಮೂರನೇ ಕಾಲಗತಿಗನುಸಾರವಾಗಿ ವೇಗವಾಗಿ ಸಾಗಿತು . ಪೂರ್ವಾರ್ಧದ ಮಕರಾಕ್ಷನಾಗಿ ಸುಬ್ರಾಯ ಹೊಳ್ಳರು ಉತ್ತಮವಾಗಿ ನಿರ್ವಹಿಸಿದರು . 

ಉತ್ತರಾರ್ಧದ ಮಕರಾಕ್ಷನಾಗಿ ಸಂತೋಷ್‌ ಮಾನ್ಯರ ಅಬ್ಬರದ ಪ್ರವೇಶದೊಂದಿಗೆ ವೀರರಸದ ಉತ್ಕರ್ಷೆಯಾಯಿತು . ಶ್ರೀರಾಮನಾಗಿ ದಿನೇಶ್‌ ಶೆಟ್ಟಿ ಕಾವಳಕಟ್ಟೆ ಉತ್ತಮ ಅಭಿನಯ , ಮಾತುಗಾರಿಕೆಯ ಮೂಲಕ ಪಾತ್ರದ ಘನತೆಯನ್ನು ಮೆರೆದರು . ರಾಜೇಶ್‌ ಆಚಾರ್ಯ , ರಾಹುಲ್‌ ಕುಡ್ಲ , ವೆಂಕಟೇಶ ಕಲ್ಲುಗುಂಡಿ , ಕಿಶೋರ್‌ ಕೊಮ್ಮೆ , ರಾಜೇಶ್‌ ನಿಟ್ಟೆಯವರ ನಿರ್ವಹಣೆ ಪ್ರಸಂಗಕ್ಕೆ ಪೂರಕವಾಯಿತು .ಕುಂಭ – ನಿಕುಂಭರಾಗಿ ದಿವಾಕರ ರೈ ಹಾಗೂ ಶಶಿಧರ ಕುಲಾಲರು ಪೈಪೋಟಿಯ ನಾಟ್ಯ , ಧಿಗಿಣದ ಮೂಲಕ ವೀರರಸದ ಪ್ರಸ್ತುತಿ ನೀಡಿದರು . ಪ್ರಸಂಗದ ಪ್ರಾರಂಭದಲ್ಲೇ ಬಲಿಪ ಪ್ರಸಾದ ಭಟ್‌ ಹಾಗೂ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರು ಏರು ಕಂಠದಲ್ಲಿ ಬಲಿಪ ಶೈಲಿಯಲ್ಲಿ ದ್ವಂದ್ವ ಭಾಗವತಿಕೆಯ ಮೂಲಕ ಮನ ಗೆದ್ದರು . ಮದ್ದಲೆಯಲ್ಲಿ ನೆಕ್ಕರೆಮೂಲೆ ಹಾಗೂ ಚೆಂಡೆವಾದನದಲ್ಲಿ ಅಡೂರು ಗಣೇಶ್‌ ಹಾಗೂ ಅಡೂರು ಲಕ್ಷ್ಮೀನಾರಾಯಣ ರಾವ್‌ ದ್ವಂದ್ವ ವಾದನದಿಂದ ಚಪ್ಪಾಳೆ ಗಿಟ್ಟಿಸಿದರು . ಚಕ್ರತಾಳದಲ್ಲಿ ರಾಜೇಂದ್ರಕೃಷ್ಣಸಹಕರಿಸಿದರು .

ಎಂ.ಶಾಂತರಾಮ ಕುಡ್ವ 

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.