ನೃತ್ಯ ರೂಪಕದಲ್ಲಿ ನಡೆಯಿತು ಶ್ರೀನಿವಾಸ ಕಲ್ಯಾಣ 


Team Udayavani, Jan 4, 2019, 12:30 AM IST

x-56.jpg

ಭಾವವಿಲ್ಲದೆ ನೃತ್ಯವೂ ಪರಿಪೂರ್ಣವಾಗಲು ಸಾಧ್ಯವಿಲ್ಲ. ನೃತ್ಯರೂಪಕವು ಯಶಸ್ವಿಯಾಗಬೇಕಾದರೆ ಪಾತ್ರದೊಳಗೆ ಪಾತ್ರಧಾರಿಯ ಪರಕಾಯ ಪ್ರವೇಶ‌ವಾಗಬೇಕು. ಪೌರಾಣಿಕ ಹಿನ್ನಲೆಯುಳ್ಳ ಒಂದು ಮಹಾಕಥೆಯನ್ನು ಕಾಲಮಿತಿಯಲ್ಲಿ ಮೂಲಸ್ವರೂಪಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸಂಪೂರ್ಣವಾಗಿ ಜನರೆದುರು ತೆರೆದಿರಿಸಬೇಕು .ಕಥೆಯೊಂದನ್ನು ಸಂಗೀತ ರಾಗ, ಶ್ರುತಿ, ತಾಳದ ಜೊತೆಯಲ್ಲಿ ಭಾವಾಭಿನಯದ ಮೂಲಕ ಜನರ ಮುಂದೆ ಪ್ರಸ್ತುತಪಡಿಸಬೇಕು.ಅಂತಹ ಪ್ರಯೋಗವೊಂದ‌ನ್ನು ಶ್ರೀ ಶಾರದಾ ಕಲಾ ಕೇಂದ್ರದ ನೃತ್ಯ ತಂಡವು ಪ್ರದರ್ಶಿಸಿ ಯಶಸ್ವಿಯಾಗಿದೆ. 

ಶ್ರೀ ಶಾರದಾ ಕಲಾ ಕೇಂದ್ರದ ಹಿರಿಯ ಕಲಾವಿದರಾದ ವಿ| ಗೋಪಾಲಕೃಷ್ಣ ವೀರಮಂಗಲ ಇವರು ರಚಿಸಿದ ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕವು ಗುರು ವಿ| ಸುದರ್ಶನ್‌ ಎಂ.ಎಲ್‌. ಭಟ್‌ ಇವರ ರಾಗ ಸಂಯೋಜನೆಯೊಂದಿಗೆ ಯಶಸ್ವಿಯಾಗಿ ನಾಲ್ಕನೇ ಬಾರಿಗೆ ಬೆಳ್ಳಾರೆಯಲ್ಲಿ ಪ್ರದರ್ಶನಗೊಂಡಿದೆ ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠನೆಂದು ತಿಳಿಯಲು ತ್ರಿಲೋಕಗಳಿಗೆ ತೆರಳುವ ಭ್ರಗು ಮಹರ್ಷಿಯು ಬ್ರಹ್ಮ ಮತ್ತು ಶಿವನ ಕಡಗಣನೆಯಿಂದ ಕೋಪಗೊಂಡು ಅವರಿಗೆ ಶಾಪವಿತ್ತು ನಂತರ ವಿಷ್ಣುವನ್ನು ನೋಡಲು ವೈಕುಂಠದತ್ತ ಪ್ರಯಾಣಿಸುತ್ತಾನೆ. 

ಕ್ಷೀರಸಾಗರದಲ್ಲಿ ಸತಿ ಲಕ್ಷೀಯೊಂದಿಗೆ ಯೋಗನಿದ್ರೆಯಲ್ಲಿರುವುದನ್ನು ಕಂಡ ಭ್ರಗು ಮಹರ್ಷಿಯು ಕೋಪದಿಂದ ಆತನ ಹೃದಯಕ್ಕೆ ತುಳಿಯುವ ದೃಶ್ಯದೊಂದಿಗೆ ನೃತ್ಯ ರೂಪಕವು ಪ್ರಾರಂಭವಾಗುತ್ತದೆ . ಭ್ರಗು ಮಹರ್ಷಿಯ ಕ್ರೋಧವನ್ನು ಬಹಳ ಪರಿಣಾಮಕಾರಿಯಾಗಿ ಪ್ರಕಟಪಡಿಸಿದ ಪಾತ್ರಧಾರಿಯು ರೂಪಕಕ್ಕೆ ವೇಗ ಹಾಗೂ ತೂಕವನ್ನು ನೀಡಿದರು . 

ಕತೆಯ ಮಧ್ಯದಲ್ಲಿ ಬರುವ ನರ್ತಕಿಯರ ಲಾಸ್ಯ ನೃತ್ಯಗಳ ಸಂಯೋಜನೆ ಉತ್ತಮವಾಗಿತ್ತು . ಚೋಳ ರಾಜನ ಅರಮನೆಯ ಚಿತ್ರಣ ಸೊಗಸಾಗಿತ್ತು. ಗೋಪಾಲಕನ ನೃತ್ಯವು ಹಳ್ಳಿ ಸೊಗಡನ್ನು ಎತ್ತಿ ತೋರಿಸುವಂತಿತ್ತು . ಬಕುಲಾದೇವಿಯ ಪಾತ್ರವೂ ಮಾತೃ ವಾತ್ಸಲ್ಯದ ಸಂಕೇತವಾಗಿತ್ತು . ಶ್ರೀನಿವಾಸ ತನ್ನ ಮಗನಾಗಿರದಿದ್ದರೂ, ತನ್ನ ಕುಂಟುಕಾಲನಿಂದ ನಡೆಯುತ್ತಾ ಆತನಿಗಾಗಿ ತನ್ನ ಸಂಪೂರ್ಣ ಮಾತೃವಾತ್ಸಲ್ಯವನ್ನು ಧಾರೆಯೆರೆಯುವ ಬಕುಲಾ ದೇವಿಯ ಪಾತ್ರ ಮನಮೋಹಕವಾಗಿ ಮೂಡಿ ಬಂತು. 

 ಸ್ವರಗಳ ಏರಿಳಿತಕ್ಕೆ ಅನುಗುಣವಾಗಿ ರಂಗ ಮಂಚವು ಖಾಲಿಯಾಗದೆ ಇರುವಂತೆ ನೋಡಿಕೊಳ್ಳುವುದರ ಜೊತೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನೃತ್ಯ ರೂಪಕದ ಕೇಂದ್ರಬಿಂದುವಾಗಿರುವ‌ ಶ್ರೀನಿವಾಸ ಮತ್ತು ಪದ್ಮಾವತಿಯವರ ನವಿರು ಪ್ರೇಮಸಲ್ಲಾಪ ,ಅಗಲುವಿಕೆಯ ವಿರಹ ವಿನೂತನವಾಗಿ ಕಂಡು ಬಂದಿದೆ . ಶ್ರೀನಿವಾಸನು ತನ್ನ ಪ್ರಿಯತಮೆ ಪದ್ಮಾವತಿಯ ಗುಂಗಲ್ಲಿ ಇರುವ ನವಿರು ಪ್ರೇಮದ ದೃಶ್ಯ ಮನಮೋಹಕವಾಗಿತ್ತು . ಶ್ರೀನಿವಾಸ ಹಾಗೂ ಪದ್ಮಾವತಿಯ ಪಾತ್ರದಲ್ಲಿ ಅಭಿನಯಿಸಿದ ತಂಡದ ಹಿರಿಯ ಕಲಾವಿದರು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.ಇವರಿಬ್ಬರನ್ನು ಕೊಂಡಿಯಂತೆ ಬೆಸೆಯುವ ಹಾಲಕ್ಕಿಯ ಪಾತ್ರವು ನೃತ್ಯ ರೂಪಕದಲ್ಲಿ ಮಿಂಚಿನಂತೆ ಬಂದು ಮಾಯವಾದರೂ ರಂಜಿಸಿತು. ನಟುವಾಂಗದಲ್ಲಿ ಸುದರ್ಶನ್‌ ಎಂ.ಎಲ್‌. ಭಟ್‌ , ಮೃದಂಗದಲ್ಲಿ ವಿ| ಶ್ಯಾಮ್‌ ಭಟ್‌ ಸುಳ್ಯ ಮತ್ತು ವಯಲಿನ್‌ನಲ್ಲಿ ಡಾ| ರಾಮಕೃಷ್ಣ ಇವರು ಸಹಕಾರ ನೀಡಿದರು. 

ಅಕ್ಷತಾ ಶ್ರೀವತ್ಸ 

ಟಾಪ್ ನ್ಯೂಸ್

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.