ಯಕ್ಷ ದೇಗುಲಕ್ಕೆ ಹದಿನಾರರ ಸಂಭ್ರಮ 


Team Udayavani, Jul 13, 2018, 6:00 AM IST

b-7.jpg

ಯಕ್ಷಗಾನ ಕಲೆಯನ್ನು ಉಳಿಸಬೇಕು, ಬೆಳೆಸಬೇಕು ಎಂಬ ಸದಾಶಯದಿಂದ ಕಾಂತಾವರದಲ್ಲಿ 2003ರಲ್ಲಿ ಸ್ಥಾಪನೆಯಾದ ಶ್ರೀಯಕ್ಷ ದೇಗುಲ ಕಾಂತಾವರ ಸಾರ್ಥಕ ಹೆಜ್ಜೆಗುರುತುಗಳನ್ನು ಮೂಡಿಸುತ್ತ ಮುನ್ನಡೆಯುತ್ತಿದೆ. ಇದರ ಸೂತ್ರಧಾರಿ, ನಿರ್ದೇಶಕ ಕಲಾವಿದ, ನಾಟ್ಯಗುರು ಮಹಾವೀರ ಪಾಂಡಿ. ಮೊದಲ ಹತ್ತು ವರ್ಷಗಳಲ್ಲಿ ಹೊಸ ಹೊಸ ಕಲಾವಿದರ ಸೇರ್ಪಡೆಯೊಂದಿಗೆ ವರ್ಷಂಪ್ರತಿ ತಾಳಮದ್ದಲೆ ಕೂಟಗಳನ್ನು ನಡೆಸುತ್ತ ಬಂದ ಸಂಸ್ಥೆ 2012ರಲ್ಲಿ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ| ಜೀವಂಧರ ಬಲ್ಲಾಳ್‌ ಬಾರಾಡಿಬೀಡು ಅವರ ಗೌರವಾಧ್ಯಕ್ಷತೆಯೊಂದಿಗೆ ನೋಂದಾಯಿಸಲ್ಪಟ್ಟಿತು. ದಶಮಾನೋತ್ಸವ ಸಂದರ್ಭ ತೆಂಕುತಿಟ್ಟಿನ ಖ್ಯಾತ ಪುಂಡು ವೇಷಧಾರಿ ಪುತ್ತೂರು ಬಿ. ಶ್ರೀಧರ ಭಂಡಾರಿಯವನ್ನು ನಿಧಿ ಸಮರ್ಪಣೆಯೊಂದಿಗೆ ಸಮ್ಮಾನಿಸಲಾಗಿತ್ತು. 

ಮುಂದಿನ ವರ್ಷಗಳಲ್ಲಿ ಯಕ್ಷಗಾನ ಕಲಿಯುವ ಆಸಕ್ತಿ ಹೊಂದಿದ ಸುಮಾರು 40 ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಶನಿವಾರ, ರವಿವಾರಗಳಲ್ಲಿ ಉಚಿತ ಯಕ್ಷ ಶಿಕ್ಷಣ ಶಿಬಿರಗಳನ್ನು ನಡೆಸುತ್ತ ಬರಲಾಗಿದೆ. ಪ್ರಸಂಗ ಪಠಣ ಶಿಬಿರ, ಬಣ್ಣಗಾರಿಕೆ, ಅರ್ಥಗಾರಿಕೆ, ನಾಟ್ಯಗಾರಿಕೆ ಹೀಗೆ ಸರ್ವಾಂಗೀಣ ಕಲಾವಿದರನ್ನಾಗಿ ರೂಪಿಸುವಲ್ಲಿ ಪಾಂಡಿಯವರ ಶ್ರಮ ಉಲ್ಲೇಖನೀಯ. ಸಂಸ್ಥೆಯ ಅಧ್ಯಕ್ಷ ಕೆ. ಶ್ರೀಪತಿ ರಾವ್‌ ಮತ್ತು ಸಂಗಡಿಗರು ಪಾಂಡಿಯವರೊಂದಿಗೆ ಸಹಕರಿಸುತ್ತ ಬಂದಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಸಂಸ್ಥೆಯ ವಾರ್ಷಿಕೋತ್ಸವವನ್ನು ತಾಳಮದ್ದಳೆ ಕೂಟ, ಬಾಲಕಲಾವಿದರಿಂದ ಬಯಲಾಟ, ಅಗಲಿದ ಕಲಾವಿದರ ಸಂಸ್ಮರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದೇ ಮೊದಲಾದ ಕಾರ್ಯಕಲಾಪಗಳನ್ನು ನಡೆಸುತ್ತ ಬರಲಾಗಿದೆ. 

 ಇದೀಗ, ಜು. 15ರಂದು ಹದಿನಾರನೇ ವಾರ್ಷಿಕೋತ್ಸವ. ಬೆಳಗ್ಗೆ 10ರಿಂದ ನಿರಂತರ 12 ತಾಸುಗಳ “ಯಕ್ಷೋಲ್ಲಾಸ 2018′ ಕಾರ್ಯಕ್ರಮ. ಏಕವ್ಯಕ್ತಿ ಯಕ್ಷ ಪ್ರಯೋಗ: ಪೂರ್ವರಂಗ, ಪ್ರಸಂಗ ರೂಪಕ (ದೀವಿತ್‌ ಕೆ. ಎಸ್‌.ಪೆರಾಡಿ), ರಾಧಾ ವಿಲಾಸ ನೃತ್ಯ (ಡಾ| ವರ್ಷಾ ಶೆಟ್ಟಿ, ದಿಶಾ ಶೆಟ್ಟಿ ಸುರತ್ಕಲ್‌), “ಇಂದ್ರ ಕೀಲಕ ಊರ್ವಶೀ ಶಾಪ’ ತಾಳಮದ್ದಳೆ ಕೂಟ, ಉಜಿರೆ ಅಶೋಕ ಭಟ್ಟ ಮತ್ತು ಜಬ್ಟಾರ್‌ ಸಮೋ ಇವರಿಗೆ ಸಮ್ಮಾನ, ಏಳು ಮಂದಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ, ಸಂಜೆ “ಗರುಡ ಗರ್ವಭಂಗ’ ಬಯಲಾಟ ಸಂಯೋಜಿಸಲಾಗಿದೆ. ಪುಣಿಚಿತ್ತಾಯ, ಕನ್ನಡಿಕಟ್ಟೆ, ಉಳಿತ್ತಾಯ, ಪಡ್ರೆ, ಬೊಳಿಂಜಡ್ಕ, ಜಬ್ಟಾರ್‌, ಕನ್ಯಾಡಿ, ರಮಣಾಚಾರ್‌, ಉಜಿರೆ, ಸಂಕದಗುಂಡಿ, ರಂಗಾ ಭಟ್‌, ಕೊಂಕಣಾಜೆ, ಪೊಳಲಿ, ರವಿರಾಜ್‌ ಮೊದಲಾದವರು ಭಾಗವಹಿಸಲಿದ್ದಾರೆ. 

ಧನುರ್ಧರ 

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.