![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಕೃಷಿ ಡಾಕ್ಟರ್; ಸಮಸ್ಯೆಗೆ ಒಂದು ಪರಿಹಾರ
Team Udayavani, Mar 16, 2020, 4:36 AM IST
![Mango](https://www.udayavani.com/wp-content/uploads/2020/03/Mango-620x413.jpg)
ಮಾವು ಬೆಳೆಯಲ್ಲಿ ಅಲ್ಟ್ರಾ ಹೈಡೆನ್ಸಿಟಿ ಬೇಸಾಯದ ಕುರಿತು ಹಾಗೂ ಸೂಕ್ತ ತಳಿಗಳ ಬಗ್ಗೆ ಮಾಹಿತಿ ನೀಡಿ
– ಹನುಮಂತಪ್ಪ, ಕುಂದಗೋಳ
“ಹಣ್ಣುಗಳ ರಾಜ’ ಎಂದೇ ಕರೆಯಲಾಗುವ ಮಾವು ಭಾರತದ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದರಲ್ಲಿ ಎ ಮತ್ತು ಸಿ ಜೀವ ಸತ್ವಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ಬೆಳೆಯಲ್ಲಿ “ಅಲ್ಟ್ರಾ ಹೈಡೆನ್ಸಿಟಿ ಬೇಸಾಯ’, ಅಂದರೆ ಅಧಿಕ ಸಾಂದ್ರತೆಯಲ್ಲಿ ಮಾವಿನ ಗಿಡಗಳನ್ನು ಬೆಳೆಸುವುದು ಹೆಚ್ಚಿನ ಇಳುವರಿಗೆ ಕಾರಣವಾಗುತ್ತದೆ. ಈ ಕಾರಣಕ್ಕೇ ಈ ಪದ್ಧತಿ ಜನಪ್ರಿಯವಾಗಿದೆ. 5×5 ಮೀ., 7.5×7.5 ಮೀ. ಅಥವಾ 6×6 ಮೀ. ಅಂತರ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಪ್ರತಿ ಎಕರೆಗೆ ಗಿಡಗಳ ಸಂಖ್ಯೆ ಹೆಚ್ಚಾಗುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಅದಕ್ಕಾಗಿ ಸೂಕ್ತವಾದ ಗಿಡ ಬೇರು ಹೊಂದಿದ ತಳಿಗಳಾದ ನೆಕ್ಕರೆ, ಬಪ್ಪಕಾಯಿ, ಆಮ್ರಪಲ್ಲಿ, ತೋತಾಪುರಿ, ರೆಡ್ಸ್ಮಾಲ್ ಹಾಗೂ ಒಲೂರ ಉಪಯೋಗಿಸಬೇಕು. ಈ ಬೆಳೆಯನ್ನು ಜೂನ್ ಜುಲೈ ತಿಂಗಳುಗಳಲ್ಲಿ ಸಸಿಗಳನ್ನು ನಾಟಿ ಮಾಡಲು ಒಳ್ಳೆಯ ಸಮಯ. ಸಸ್ಯ ಪ್ರಚೋದಕ (ಸಿಸಿಸಿ 1000 ಪಿ.ಪಿ.ಎಂ = 1 ಮಿ.ಲೀ/ ಲೀಟರ್ ನೀರಿಗೆ)ವನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಚಾಟನಿ ಮಾಡುವುದರ ಜೊತೆಗೆ ಉಪಯೋಗ ಮಾಡಬೇಕು. ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪರಿಣತರಿಂದ ವಿಶಿಷ್ಟ ತಾಂತ್ರಿಕ ಸಲಹೆಯನ್ನು ಪಡೆಯುವುದು ಅತ್ಯವಶ್ಯಕ.
– ಡಾ. ಅಶೋಕ್ ಪಿ.,
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.