ಐದು ಎಕರೆ  “ಬ್ರಹ್ಮಾಂಡ’ ಕೃಷಿ


Team Udayavani, Jul 17, 2017, 2:45 AM IST

brahmanda-krishi.jpg

ಆ ಹೊಲಕ್ಕೆ ಕಾಲಿಟ್ಟರೆ ಕೃಷಿ ಬ್ರಹ್ಮಾಂಡದ ದರ್ಶನ ಭಾಗ್ಯ, ಹೆಜ್ಜೆಗೊಂದು ಪ್ರಯೋಗ, ಸಸ್ಯ ಸಂಕುಲದ ವಿಜೃಂಭಣೆ, ಆಹಾರ ಧಾನ್ಯ, ಹಣ್ಣು-ಹೂ, ಔಷಧ ಸಸ್ಯ, ಜೇನು, ವಾಣಿಜ್ಯ ಬೆಳೆ ಹೀಗೆ ಮಹತ್ವದ ಜೀವ ವೈವಿಧ್ಯತೆ ಪ್ರಯೋಗ ನೋಡಬೇಕಾದರೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾನಕೊಡ್ಲು ಗ್ರಾಮಕ್ಕೆ ಬರಬೇಕು. ಇಲ್ಲಿನ ಪ್ರಸಾದ ರಾಮಾ ಹೆಗಡೆ ಐದು ಎಕರೆಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 

ರಾಮಾ ಹೆಗಡೆಗೆ 19 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.   ಐದು ಎಕರೆ ಜಮೀನಿನಲ್ಲಿ ಅಡಿಕೆ, ಮೆಣಸು, ತೆಂಗು ಅಲ್ಲದೆ ಸುಮಾರು 80-90 ವಿಧದ ಹಣ್ಣಿನ ಗಿಡ-ಮರಗಳಿವೆ. ಒಟ್ಟಾರೆ 600ಕ್ಕೂ ಅಧಿಕ ಸಸ್ಯಗಳಿವೆ. ಬಟನ್‌, ಸೂಜಿ, ಕಪ್ಪು ಹೀಗೆ ಸುಮಾರು 9 ರೀತಿಯ ಮೆಣಸಿನಕಾಯಿ ಇಲ್ಲಿದೆ. ಸುಮಾರು 15 ತಳಿಗಳ ಕಾಳು ಮೆಣಸು. ಕಾಳು ಮೆಣಸಿನಲ್ಲಿ ತಮ್ಮದೇ ಬುಶ್‌ ಪದ್ಧತಿಯೊಂದಿಗೆ ಅತಿಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಸುಮಾರು 50 ಅಡಿ ಎತ್ತರಕ್ಕೆ ಮೆಣಸು ಬೆಳೆಸಿ ಒಂದೇ ಬಳ್ಳಿಯಿಂದ ಸುಮಾರು 14 ಕೆ.ಜಿ.ಯಷ್ಟು ಮೆಣಸು ಫ‌ಸಲು ಪಡೆದು ಬೆರಗು ಮೂಡಿಸಿದ್ದಾರೆ. 

ಶಾನ ಬಾಳೆ, ಬೂದ ಶಾನ, ಸಕ್ಕರೆ ಬಾಳೆ, ಚಂದ್ರ ಬಾಳೆ(ಕೆಂಪು), ರಸಬಾಳೆ, ಮೈಸೂರು ಮಿಟ್ಲ, ನೇಂದ್ರ ಬಾಳೆ ಹೀಗೆ 10 ತಳಿಯ ಬಾಳೆ ಬೆಳೆದಿದ್ದಾರೆ. ಸೀತಾಫ‌ಲ, ರಾಮಫ‌ಲ, ಹನುಮಾನಫ‌ಲ, ತೈವಾನ್‌ ಸೀತಾಫ‌ಲ, ಬೀಟ್‌ರೂಟ್‌ ಪೇರಲ, ಕಪ್ಪುಮಾವು, ನೆರಳೆ, ಕೆಂಪು ನೇರಳೆ, ಹಲಸು, ಫ್ಯಾಶನ್‌ ಫ‌ೂÅಟ್‌, ಶಿಮ್ಲಾ ಸೇಬು, ಪಿಕಾನ್‌ ಬದಾಮಿ ಗಿಡಗಳೂ ಇವೆ. ಸುಮಾರು 120 ಮಾವಿನ ಗಿಡಗಳಲ್ಲಿ 40 ವಿವಿಧ ಅಪ್ಪೆ ಮಿಡಿ ಇದ್ದರೆ, 30 ವಿಧದ ಮಾವಿನ ಹಣ್ಣುಗಳ ತಳಿ, ಬನಾರಸ ನೆಲ್ಲಿ, ಬೆಟ್ಟದ ನೆಲ್ಲಿಯೂ ಇದೆ.

ವೀಳ್ಯದೆಲೆಯಲ್ಲಿ ಪಾನ್‌ ಮಸಾಲ, ರಾಣಿ, ಬನಾರಸ, ಲಕ್ಕಿವಳ್ಳಿ, ಅಂಬಾಡಿ ತಳಿ ಇದ್ದರೆ, ಅಡಿಕೆಯಲ್ಲಿ ನಾಲ್ಕು ತಳಿ, ಇದಲ್ಲದೆ ತರಕಾರಿ, ವಾಣಿಜ್ಯ, ಮಸಾಲೆ ಹಾಗೂ ಔಷಧಿ ಇನ್ನಿತರ ಸಸ್ಯಗಳಾಗಿ ಏಲಕ್ಕಿ, ಮುಸಂಡ, ಕ್ಷಮಪತ್ರೆ, ರಕ್ತ ಚಂದನ, ಸಿಯಾವಟೆ,  ಸರ್ವ ಸಾಂಬಾರು, ಮಹೆಂದಿ, ಕಪ್ಪುಲಕ್ಕಿ, ಹಿಪ್ಲಿ ಅಲ್ಲದೆ ಸುಮಾರು 1ಎಕರೆಯಲ್ಲಿ 4 ತಳಿಗಳ 400 ದಾಲಿcನ್ನಿ ಗಿಡ ಬೆಳೆದಿದ್ದಾರೆ.

ಕೃಷಿಯಲ್ಲಿ ಪ್ರಯೋಗದ ಹಸಿವು ಇನ್ನೂ ಇಂಗಿಲ್ಲ. ಕೃಷಿಗೆ ಬೆನ್ನು ಮಾಡಿ ಬೆಂಗಳೂರಿನಲ್ಲಿ ನೌಕರಿ ಮಾಡುವವರ ಬದುಕನ್ನು ನೋಡಿದ್ದೇನೆ. ಅವರಿಗಿಂತ ಸಾವಿರ ಪಾಲು ಉತ್ತಮ ಜೀವನ ನಮ್ಮದೆಂಬ ಖುಷಿ, ಸಂತಸವಿದೆ. ಎನ್ನುತ್ತಾರೆ ಪ್ರಸಾದ ರಾಮಾ ಹೆಗಡೆ ಅವರಿಗೆ ರಾಜ್ಯ ಸರಕಾರದ ಕೃಷಿ ಪಂಡಿತ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.  

ಮಾಹಿತಿಗೆ: 08419-257815, 9480410770.

– ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.