ಜಿಪಿಎಸ್‌ ಹೋಗಿ ವಿಪಿಎಸ್‌ ಬರುತ್ತೆ!


Team Udayavani, Jul 8, 2019, 5:00 AM IST

n-8

ಒಂದಾನೊಂದು ಕಾಲದಲ್ಲಿ ಮೊದಲ ಬಾರಿ ವಿಳಾಸ ಹುಡುಕಿಕೊಂಡು ಹೊರಟಾಗ ದಾರಿಯಲ್ಲಿ ಸಿಗುವ ಜನರನ್ನೇ ನೆಚ್ಚಿಕೊಳ್ಳಬೇಕಿತ್ತು. ಎರಡು ಮೂರು ಬಾರಿಯಾದರೂ ದಾರಿಹೋಕರನ್ನು ಕೇಳಿಕೊಂಡು ತಲುಪಬೇಕಾದ ವಿಳಾಸ ತಲುಪುತ್ತಿದ್ದೆವು. ಆದರೆ ಆಮೇಲೆ ಬಂತು ನೋಡಿ ಜಿಪಿಎಸ್‌ ಜಮಾನಾ. ಈಗ ಸ್ಮಾರ್ಟ್‌ಫೋನ್‌ ಒಂದಿದ್ದರೆ ಸಾಕು. ಅದನ್ನು ಕೈಲಿ ಹಿಡಿದು ಅದು ದಿಕ್ಕು ತೋರಿಸಿದತ್ತ ನಡೆಯುತ್ತಾ ಬೇರೆ ಯಾರ ಸಹಾಯವೂ ಇಲ್ಲದೆ ವಿಳಾಸ ಹುಡುಕಿಕೊಳ್ಳುತ್ತಿದ್ದೇವೆ. ಇದರಿಂದ ದಾರಿಹೋಕರ ಮೇಲಿನ ಅವಲಂಬನೆಯಂತೂ ಕಡಿಮೆಯಾಗಿದೆ. ಅಲ್ಲದೆ ಅಪರಿಚಿತರನ್ನು ಹೇಗಪ್ಪಾ ಕೇಳುವುದು ಎಂಬ ಸಂಧಿಗ್ಧತೆಯೂ ತಪ್ಪಿದೆ.

ಜಿಪಿಎಸ್‌ ಎನ್ನುವುದು “ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌’ ಎನ್ನುವುದರ ಶಾರ್ಟ್‌ಫಾರ್ಮ್. ಅದು ಉಪಗ್ರಹ ಆಧಾರಿತ ಮಾರ್ಗದರ್ಶನ(ನ್ಯಾವಿಗೇಷನ್‌) ವ್ಯವಸ್ಥೆ. ಸೈನಿಕರಿಗೆ ಯುದ್ಧದ ಸಂದರ್ಭದಲ್ಲಿ ಉಪಯೋಗವಾಗಲಿ ಎಂಬ ಉದ್ದೇಶದಿಂದ ಜಿಪಿಎಸ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಅಮೆರಿಕ ಸೇನೆ ಮಾತ್ರವೇ ಮೊದಲು ಅದನ್ನು ಬಳಸುತ್ತಿತ್ತು. ನಂತರದ ದಿನಗಳಲ್ಲಿ ತಂತ್ರಜ್ಞಾನವನ್ನು ಸಾರ್ವಜನಿಕ ಬಳಕೆಗೂ ಮುಕ್ತವಾಗಿಸಿತು. ಸದ್ಯ ಗೂಗಲ್‌ ನ್ಯಾವಿಗೇಷನ್‌ ಕ್ಷೇತ್ರದಲ್ಲಿ ನಾಯಕ ಎನಿಸಿಕೊಂಡಿದೆ. ಕಾಲದಿಂದ ಕಾಲಕ್ಕೆ ಅದು ಜಿಪಿಎಸ್‌ ಆಧಾರಿತ ಗೂಗಲ್‌ ನಕಾಶೆ(ಗಾಗಲ್‌ ಮ್ಯಾಪ್ಸ್‌) ವ್ಯವಸ್ಥೆಯನ್ನು ಸುಧಾರಣೆಗೊಳಪಡಿಸುತ್ತಲೇ ಇರುತ್ತದೆ. ಹಾಗಿದ್ದೂ ಗೂಗಲ್‌ನ ಈ ವ್ಯವಸ್ಥೆ ನೂರಕ್ಕೆ ನೂರು ಪ್ರತಿಶತ ನಿಖರವಾಗಿಲ್ಲ. ವಿಳಾಸ ಹುಡುಕುವಲ್ಲಿ ಸಣ್ಣಪುಟ್ಟ ತಪ್ಪುಗಳು ಆಗುತ್ತಲೇ ಇರುತ್ತವೆ. ಮಾರುಕಟ್ಟೆಯಲ್ಲಿ ಗೂಗಲ್‌ ಮ್ಯಾಪ್ಸ್‌ನಂತೆಯೇ, ಮ್ಯಾಪ್‌ಕ್ವೆಸ್ಟ್‌, ಮ್ಯಾಪ್ಸ್‌ ಮಿ, ಮ್ಯಾಪ್ಸ್‌ ಫ್ಯಾಕ್ಟರ್‌ ಮುಂತಾದ ನ್ಯಾವಿಗೇಷನ್‌ ಸಂಸ್ಥೆಗಳೂ ಇವೆ.

ಜಿಪಿಎಸ್‌ ತಂತ್ರಜ್ಞಾನದಲ್ಲಿ ಸಣ್ಣಪುಟ್ಟ ತಪ್ಪುಗಳಾಗಲು ಕೆಲ ಕಾರಣಗಳನ್ನು ಪಟ್ಟಿ ಮಾಡಬಹುದಾದರೆ ದುರ್ಬಲ ಸ್ಯಾಟಲೈಟ್‌ ಸಿಗ್ನಲ್‌, ಮ್ಯಾಪ್‌ಗ್ಳು ದಿನದಿನಕ್ಕೂ ಅಪ್‌ಡೇಟ್‌ ಆಗದಿರುವುದು. ಹೀಗಾಗಿ ಜಿಪಿಎಸ್‌ಗೆ ಪರ್ಯಾಯ ತಂತ್ರಜ್ಞಾನದ ಕುರಿತು ಸಂಶೋಧನೆಗಳು ಹಿಂದಿನಿಂದಲೇ ಆಗುತ್ತಿವೆ. ಅವುಗಳಲ್ಲೊಂದು ವಿ.ಪಿ.ಎಸ್‌.(ವಿಶುವಲ್‌ ಪೊಸಿಷನಿಂಗ್‌ ಸಿಸ್ಟಮ್‌). ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ವಿ.ಪಿ.ಎಸ್‌ ತಂತ್ರಜ್ಞಾನ ಜಿಪಿಎಸ್‌ಗಿಂತ ನಿಖರವಾಗಿ ವಿಳಾಸವನ್ನು ಹುಡುಕುತ್ತದೆ ಎಂದು ಹೇಳಲಾಗಿದೆ. ಹೇಗೆಂದರೆ ಉಪಗ್ರಹ ಸಿಗ್ನಲ್‌ಗ‌ಳ ಸಹಾಯದಿಂದ ಮಾತ್ರವೇ ಇದು ಮಾರ್ಗ ತೋರುವುದಿಲ್ಲ. ಅದರ ಜೊತೆಗೆ ಫೋನಿನ ಕ್ಯಾಮೆರಾದ ಸಹಾಯವನ್ನು ಈ ತಂತ್ರಜ್ಞಾನ ಪಡೆದುಕೊಳ್ಳುತ್ತದೆ. ಕ್ಯಾಮೆರಾದಲ್ಲಸಿ ಕಂಡುಬರುವ ದೃಶ್ಯಾವಳಿಯ ಸಹಾಯದಿಂದ ಬಳಕೆದಾರ ಯಾವ ಜಾಗದಲ್ಲಿ ನಿಂತಿದ್ದಾನೆ ಎಂಬುದನ್ನು ಖಚಿತವಾಗಿ ಪತ್ತೆ ಹಚ್ಚಿ ಅಲ್ಲಿಂದ ತಲುಪಬೇಕಾಗಿರುವ ವಿಳಾಸಕ್ಕೆ ದಾರಿ ತೋರುತ್ತದೆ. ಕ್ಯಾಮೆರಾದಲ್ಲಿ ಕಂಡು ಬರುವ ಅಂಗಡಿ, ಕಟ್ಟಡಗಳನ್ನು ಸಂಸ್ಕರಣೆಗೆ ಒಳಪಡಿಸಿ ಬಳಕೆದಾರ ಇರುವ ಸ್ಥಳವನ್ನು ಪತ್ತೆ ಹಚ್ಚುತ್ತದೆ ಈ ತಂತ್ರಜ್ಞಾನ. ಇಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತದೆ. ಜಿಪಿಎಸ್‌ ತಂತ್ರಜ್ಞಾನ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆಯೋ ಅವೆಲ್ಲವನ್ನೂ ಮೀರುತ್ತದೆ ವಿಪಿಎಸ್‌ ತಂತ್ರಜ್ಞಾನ. ಇದರಿಂದ ಕ್ಯಾಮೆರಾ ತನ್ನ ಲೆನ್ಸ್‌ನಲ್ಲಿ ಕಾಣುವ ದೃಶ್ಯಾವಳಿಯನ್ನು ತನ್ನ ಡೇಟಾಸೆಂಟರ್‌ಗೆ ವರ್ಗಾಯಿಸಿ ಆ ಪ್ರದೇಶವನ್ನು ನಿಖರವಾಗಿ ಪತ್ತೆ ಹಚ್ಚುತ್ತದೆ.

ಈಗಾಗಲೇ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಕೋಟ್ಯಂತರ ದುಡ್ಡನ್ನು ಈ ತಂತ್ರಜ್ಞಾನದ ಸಂಶೋಧನೆಗಾಗಿ ವಿನಿಯೋಗಿಸುತ್ತಿದೆ. ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಅದಕ್ಕೆಂದೇ ರೂಪಿಸಲಾದ ಉಪಕರಣಗಳಲ್ಲಿ, ಮೊಬೈಲುಗಳಲ್ಲಿ ಕಾಣಬಹುದಾಗಿದೆ.

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.