ಮಂಗಗಳಿಗೆ ಲೇಸರ್ ಗನ್
ಮಣ್ಣು ಹೊನ್ನು ಮೆಶಿನ್ನು
Team Udayavani, Aug 5, 2019, 5:00 AM IST
ಬೆಳೆಗಳಿಗೆ ಮಂಗಗಳ ಹಾವಳಿ ಕೆಲವೆಡೆ ಎಷ್ಟು ಅತಿಯಾಗಿದೆ ಎಂದರೆ, ಕೆಲವೊಂದು ಭಾಗಗಳಲ್ಲಿ ಕೃಷಿಕರು ಬೇಸಾಯ ಮಾಡುವುದನ್ನೇ ಬಿಟ್ಟಿದ್ದಾರೆ. ಇದು ಆಶ್ಚರ್ಯವೆನಿಸಿದರೂ ನಿಜ. ವರ್ಷದ ಎಲ್ಲ ಋತುಮಾನಗಳಲ್ಲಿಯೂ ಇವುಗಳ ಕಾಟ ಇದ್ದದ್ದೇ. ಮಂಗಗಳನ್ನು ಹಿಡಿಯಲು ಬೋನು ಇಡುವುದು, ಕುಡಿಕೆಯಲ್ಲಿ ಕಳಿತ ಹಣ್ಣು ತುಂಬಿ ಸತ್ತ ಹಾವುಇಡುವುದು, ಗರ್ನಾಲು ಸಿಡಿಸುವುದು, ರೈಫಲ್ನಿಂದ ಗುಂಡು ಹಾರಿಸುವುದು, ಪರಿಣಿತರಿಂದ ಅವುಗಳನ್ನು ಹಿಡಿಸಿ ಕಾಡಿಗೆ ಬಿಡುವುದು, ಹುಲಿ ಪ್ರತಿಮೆ ಇಡುವುದು, ನಾಯಿಗಳಿಗೆ ಹುಲಿ ವೇಷ ಬಳಿದು ತಿರುಗಾಡಲು ಬಿಡುವುದು ಹೀಗೆ ನಾನಾ ಉಪಾಯಗಳನ್ನು ಕೃಷಿಕರು ಮಾಡಿದ್ದಾರೆ. ಅವುಗಳು ಸ್ವಲ್ಪ ಕಾಲ ಮಾತ್ರ ಪರಿಣಾಮಕಾರಿ ಎನ್ನುವ ಅಭಿಪ್ರಾಯ ಕೃಷಿಕ ವರ್ಗದವರಲ್ಲಿದೆ.
ಇದರಿಂದಾಗಿ ಹೊಸ ಉಪಾಯಗಳಿಗೆ ಮೊರೆ ಹೋಗುತ್ತಲೇ ಇರಬೇಕಾಗುತ್ತದೆ. ಆ ರೀತಿ ಕಂಡುಕೊಂಡ ಉಪಾಯವೇ ಲೇಸರ್ ಗನ್. ದಕ್ಷಿಣಕನ್ನಡದ ಪುತ್ತೂರು- ಸುಳ್ಯದ ನಡುವೆ ಸಿಗುವ ಇಲ್ಲಿನ ಪಾಲ್ತಾಡ್ ಎಂಬಲ್ಲಿ ಶಿವಸುಬ್ರಮಣ್ಯ ಎಂಬುವವರು ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದಾರೆ. ಅವರು ಪ್ರಧಾನವಾಗಿ ಅಡಿಕೆ- ತೆಂಗು- ಬಾಳೆ ಮತ್ತು ಮೆಣಸು ಬೆಳೆಯುತ್ತಾರೆ. ಬೆಳೆಯನ್ನು ಮಂಗಗಳಿಂದ ರಕ್ಷಿಸಿಕೊಳ್ಳುವುದೇ ಅವರಿಗಿದ್ದ ದೊಡ್ಡ ಸಮಸ್ಯೆ. ಆಗ ಅವರಿಗೆ ಲೇಸರ್ ಗನ್ ಬಗ್ಗೆ ತಿಳಿದುಬಂದಿದೆ. ಆನ್ಲೈನ್ ಮೂಲಕ ಅದನ್ನು ತರಿಸಿಕೊಂಡರು. ಪುಟ್ಟ ಟಾರ್ಚ್ ಥರ ಇರುವ ಲೇಸರ್ ಗನ್ಅನ್ನು ಬಳಸುವುದು ತುಂಬಾ ಸುಲಭ ಕೂಡ. ಪುಟ್ಟದಾದರೂ ಅದರ ಸಾಮರ್ಥ್ಯ ದೊಡ್ಡದು. ಸುಮಾರು ಒಂದು ಕಿಲೋಮೀಟರ್ಗಳಿಗಿಂತಲೂ ಹೆಚ್ಚು ದೂರ ಇದರ ಬೆಳಕು ಹಾಯುತ್ತದೆ. ರೀಚಾರ್ಜೆಬಲ್ ಬ್ಯಾಟರಿಗಳ ಸಹಾಯದೊಂದಿಗೆ ಅದು ಕಾರ್ಯ ನಿರ್ವಹಿಸುತ್ತದೆ. ಅದೊಂದು ದಿನ ಬೆಳ್ಳಂಬೆಳಗ್ಗೆ ತೋಟಕ್ಕೆ ದಾಳಿ ಇಟ್ಟಿದ್ದ ಮಂಗಗಳ ಗದ್ದಲ ಕಂಡು ಲೇಸರ್ ಗನ್ ಅನ್ನು ಮೊದಲ ಬಾರಿ ಹಿಂಡಿನತ್ತ ಪ್ರಯೋಗಿಸಿದ್ದರು.ಆ ಬೆಳಕು ಚಿಮ್ಮುತ್ತಿದಂತೆ ಗಾಬರಿಗೊಂಡ ಮಂಗಗಳು ಪರಾರಿಯಾದವು.
ವಿ. ಸೂ: ಲೇಸರ್ ಗನ್ ಅನ್ನು ದೂರದಲ್ಲೇ ನಿಂತು ಬಳಸಬೇಕು
ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ