ಬದುಕಿಗೆ ಸಿಹಿಯಾದ ಮೆಣಸಿನಕಾಯಿ…


Team Udayavani, Nov 30, 2020, 4:01 PM IST

pepper

ರೈತರ ಪಾಲಿಗೆ ಇದು ಕಷ್ಟದ ಕಾಲ.ಕಾರಣ, ಒಂದೆಡೆಕೊರೊನಾದಕಾಟ. ಇನ್ನೊಂದುಕಡೆ ಅತಿವೃಷ್ಟಿ/ ಅನಾವೃಷ್ಟಿಯ ಆಟ. ಇದರ ಮಧ್ಯೆಯೂ ರೈತರು ಬದುಕಬೇಕು. ಏನಾದರೂ ಬೆಳೆಯಬೇಕು. ಆ ಬೆಳೆಯನ್ನು ಮಾರಾಟ ಮಾಡಿ 3 ಹೊತ್ತಿನ ಅನ್ನಕ್ಕೆ, ಒಂದಷ್ಟು ಖರ್ಚಿಗೆ ದಾರಿ ಮಾಡಿಕೊಳ್ಳಬೇಕು. ಯಾವುದೇ ಬೆಳೆಯ ಉದಾಹರಣೆ ತೆಗೆದುಕೊಂಡರೂ ಅದನ್ನು ನಾಟಿ ಮಾಡಿ,ಕಳೆ ತೆಗೆದು,ಕೀಟಗಳಿಂದ ಜೋಪಾನ ಮಾಡಿ ಕಡೆಗೊಮ್ಮೆ ಫ‌ಸಲು ಕೈಗೆ ಬಂತು ಅನ್ನುವ ಹೊತ್ತಿಗೆ ಆರು ತಿಂಗಳುಗಳೇ ಕಳೆದು ಹೋಗಿರುತ್ತವೆ.

ಈ ಸಂದರ್ಭದಲ್ಲಿ ರೈತನ ಬೆಳೆಗೆ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ಗ್ಯಾರಂಟಿಯನ್ನು ಯಾರೂ ಕೊಡುವುದಿಲ್ಲ. ವಾಸ್ತವ ಹೀಗಿರುವಾಗ,ಕಡಿಮೆ ಖರ್ಚಿನಲ್ಲಿ ಮುಗಿದುಹೋಗುವ,ಕಡಿಮೆ ಅವಧಿಯಲ್ಲಿ ಫ‌ಸಲು ನೀಡುವ ಬೆಳೆ ತೆಗೆಯಲು ಮುಂದಾಗುವುದು ಜಾಣತನ. ಅಲ್ಪಾವಧಿಯಲ್ಲಿ ಫ‌ಸಲು ನೀಡುವ, ವರ್ಷವಿಡೀ ಬೇಡಿಕೆಯನ್ನೂ ಪಡೆದಿರುವ ಬೆಳೆ ಯಾವುದು ಗೊತ್ತೇ? ಮೆಣಸಿನಕಾಯಿ! ಖಾರದ ಮೆಣಸಿನಕಾಯಿ ಬೆಳೆದು ಬದುಕನ್ನುಸಿಹಿ ಮಾಡಿಕೊಳ್ಳಬಹುದು ಎಂಬುದನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹುಣಶೀಕಟ್ಟಿ ಗ್ರಾಮದ ಯುವ ರೈತ ರುದ್ರಪ್ಪ ಹಂಚಿನಮನಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ದೆಹಲಿ ಚಲೋ: ಪ್ರತಿಭಟನೆ ನಡೆವೆಯೂ ಗಡಿಯಲ್ಲಿ ಗುರುನಾನಕ್ ಜಯಂತಿ, ಯೋಧರಿಗೆ ಪ್ರಸಾದ ವಿತರಣೆ

ಸಸಿಗಳನ್ನು ತಂದರೆ ಅದರ ಬೆಲೆ ದುಬಾರಿಯಾಗಿ, ಅದನ್ನು ಭರಿಸುವುದಕ್ಕೂ ಕಷ್ಟವಾಗಬಹುದು ಅನ್ನಿಸಿದಾಗ, ತನ್ನ ಹೊಲದಲ್ಲಿ ಹತ್ತು ಮಡಿಗಳನ್ನು ಮಾಡಿ ಅಲ್ಲಿಯೇ ಸಸಿ ಬೆಳೆಸಿದ್ದಾರೆ. ಹನಿ ನೀರಾವರಿ ಮೂಲಕ ಮಡಿಗಳಿಗೆ ನೀರು ಪೂರೈಕೆಯಾಗಿದೆ.

ಅದಕ್ಕೆ ಸಾವಯವ ಗೊಬ್ಬರ,ಕಳಿತ ಗೊಬ್ಬರ, ಬೇವಿನ ಹಿಂಡಿ ಪೂರೈಸಿದ್ದಾರೆ. ಹತ್ತು ಮಡಿಗಳಲ್ಲಿ ಬೆಳೆದ ಸಸಿಗಳು ಒಂದು ಎಕರೆಗೆ ಸಾಕಾಗುತ್ತವೆ. ಸಸಿಗಳು ಹೊಲದಲ್ಲಿ ಗಿಡವಾಗಲು ಒಂದೂವರೆ ತಿಂಗಳು ಬೇಕು. ನಂತರ ಕಾಯಿ ಬಿಡಲು ಪ್ರಾರಂಭಿಸುತ್ತವೆ. ಗಿಡಗಳಿಗೆ ಚೆನ್ನಾಗಿ ನೀರು ಹಾಗೂ ಗೊಬ್ಬರ ಹಾಕಿದರೆ, ಹತ್ತು ಸಲ ಮೆಣಸಿನಕಾಯಿಗಳನ್ನು ಕೊಯ್ಯಬಹುದು.

ಎಲ್ಲಾ ಊರುಗಳಲ್ಲೂ ವರ್ಷವಿಡೀ ಒಂದಲ್ಲ ಒಂದು ಶುಭಕಾರ್ಯಗಳು ನಡೆಯುತ್ತಲೇ ಇರುತ್ತವೆ. ಯಾವಕಾರ್ಯಕ್ರಮವೇ ಆದರೂ ಅಲ್ಲಿ ಅಡುಗೆ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಜೊತೆಗೆ ದಿನನಿತ್ಯದ ಅಡುಗೆಯಲ್ಲಿ ಮೆಣಸಿನಕಾಯಿ ಬಳಕೆ ಅನಿವಾರ್ಯ ಆಗಿರುವುದರಿಂದ, ಈ ಉತ್ಪನ್ನಕ್ಕೆ ಮಾರುಕಟ್ಟೆ ಸಿಕ್ಕೇ ಸಿಗುತ್ತದೆ. ಮೆಣಸಿನಕಾಯಿಕೃಷಿ ನಾಲ್ಕು ತಿಂಗಳ ಬೆಳೆಯಾದ್ದರಿಂದ ಅದನ್ನು ಬೆಳೆಸುವುದುಕಷ್ಟವಿಲ್ಲ ಅನ್ನುತ್ತಾರೆ ರುದ್ರಪ್ಪ.

 ಜಗದೀಶ. ಎಂ ಸಂಗಣ್ಣವರ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.