ಕೈಗೆ ಸಿಗದ ಹುಡುಗಿ ಕ್ಯಾಮೆರಾಗೆ ಸಿಕ್ಕಳು 


Team Udayavani, Jul 11, 2017, 5:21 PM IST

camera.jpg

ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನಾನು ಸ್ವಯಂಸೇವಕನಾಗಿದ್ದೆ. ಸ್ವಯಂಸೇವಕರ ಲಿಸ್ಟಲ್ಲಿ ನನ್ನ ಹೆಸರಿದ್ದಿದ್ದು ನನಗೇ ಗೊತ್ತಿರಲಿಲ್ಲ. ಸ್ನೇಹಿತರು ನನಗೆ ತಿಳಿಯದಂತೆ ನನ್ನ ಹೆಸರನ್ನು ಸೇರಿಸಿಬಿಟ್ಟಿದ್ದರು. ಅವರಿಗೆ ಬೈದುಕೊಂಡೇ ಅಲ್ಲಿಗೆ ಹೋದರೆ, ಅಲ್ಲಿ ಬೆಳ್ಳಂಬೆಳಗ್ಗೆಯೇ ಚೆಂದ ಚೆಂದದ ಸ್ವಯಂಸೇವಕ ಹುಡುಗಿಯರು ನೆರೆದಿದ್ದರು. ಅವರನ್ನೆಲ್ಲಾ ನೋಡಿ, ಅವರ ಜೊತೆ ಕೆಲಸ ಮಾಡುವ ನನ್ನ ಭಾಗ್ಯವನ್ನು ನೆನೆದು ನನ್ನ ಕಾಲುಗಳು ನೆಲದ ಮೇಲೆ ನಿಲ್ಲಲೇ ಇಲ್ಲ.

ನನ್ನಲ್ಲಾ ಆಸೆಗಳಿಗೆ ತಣ್ಣೀರೆರಚುವಂತೆ ಅಲ್ಲಿ ನನ್ನ ಜೊತೆ ಕೆಲಸ ಮಾಡಲು ಸಿಕ್ಕ ಪಾರ್ಟ್‌ನರ್‌ ಹುಡುಗನಾಗಿದ್ದ. ನಾನೂ ಬೇಸರದಿಂದಲೇ ಕೆಲಸ ಮಾಡತೊಡಗಿದೆ. ಹುಡುಗಿಯರೆಲ್ಲಾ ಅತ್ತ ಕಡೆ ಕಿಲ ಕಿಲ ನಗುತ್ತಾ ಓಡಾಡುತ್ತಿದ್ದರೆ ನಾನು ಮಾತ್ರ ಇವನ ಜೊತೆ ಏಗುತ್ತಿದ್ದೆ. ಅಷ್ಟರಲ್ಲಿ ಆಪತಾºಂಧವನಂತೆ ಬಂದ ಒಬ್ಬ ನನ್ನ ಕೈಗೆ ಕ್ಯಾಮೆರಾ ಕೊಟ್ಟು “ಇನ್ನು ನಿನಗೆ ದಿನವಿಡೀ ಫೋಟೋ ತೆಗೆಯುವುದಷ್ಟೇ ಕೆಲಸ’ ಎಂದು ಹೇಳಿ ಪ್ರಮೋಷನ್‌ ನೀಡಿದ. ಆ ಮಹಾನುಭಾವನಿಗೆ ಮನದಲ್ಲೇ ವಂದಿಸಿ ಕ್ಯಾಮೆರಾ ನೇತು ಹಾಕಿಕೊಂಡು ಹೊರಟೆ. ಅಲ್ಲಿಯವರೆಗೆ ನಾನು ಕ್ಯಾಮೆರಾ ಬಳಸಿದ್ದೇ ಇಲ್ಲ. ಅದೇ ಮೊದಲ ಬಾರಿಯಾದರೂ ಏನೋ ದೊಡ್ಡ ಫೋಟೋಗ್ರಾಫ‌ರ್‌ ಎಂಬಂತೆ ಪೋಸು ಕೊಡುತ್ತಾ ಅತ್ತಿಂದಿತ್ತ ಅಡ್ಡಾಡಿದೆ. 

ಸಿಕ್ಕ ಸಿಕ್ಕ ಫೋಟೋಗಳನ್ನು ಕ್ಲಿಕ್ಕಿಸತೊಡಗಿದ್ದ ಸಂದರ್ಭದಲ್ಲಿ ಕಣ್ಣಿಗೆ ಬಿದ್ದಳು ನೋಡಿ ಒಬ್ಬಳು ಸ್ವಯಂಸೇವಕ ಸುಂದರಿ! ಆ ಕ್ಷಣಕ್ಕೆ ನನ್ನ ಹೃದಯಬಡಿತವೇ ನಿಂತುಹೋಯಿತು. ಏನಾದರೂ ಆಗಲಿ, ನನ್ನ ಕೈಯಿಂದ ಕ್ಯಾಮೆರಾ ಕಿತ್ತುಕೊಂಡರೂ ಚಿಂತೆಯಿಲ್ಲ, ಅವಳ ಫೋಟೋಗಳನ್ನೇ ನಾನು ಕ್ಲಿಕ್ಕಿಸುತ್ತೇನೆ ಎಂದು ಪಣ ತೊಟ್ಟೆ. ಮೊದಲು ಅವಳ ಪರಿಚಯ ಮಾಡಿಕೊಳ್ಳಬೇಕಲ್ಲ… ಬಳಿಗೆ ಹೋಗಿ ಮಾತನಾಡಿಸಿದೆ. ಅವಳು ಸಾಫ್ಟ್ವೇರ್‌ ಕಂಪನಿ ಉದ್ಯೋಗಿಯೆಂದು ಗೊತ್ತಾಯಿತು. ಒಂದೆರಡು ಚಟಾಕಿಯನ್ನೂ ಹಾರಿಸಿದೆ. ಅವಳು ಮನಸೋ ಇಚ್ಚೆ ನಕ್ಕಳು.

ಅವಳ ಮೊಬೈಲ್‌ ನಂಬರ್‌ ಕೇಳ್ಳೋಣ ಅಂದುಕೊಂಡೆ. ಆಮೇಲೆ ಹಿಂಜರಿದೆ. ನಾನಾಗಿಯೇ ಕೇಳಿ ಸುಮ್ಮನೆ ನನ್ನ ಸ್ಕೋಪು ಕಳೆದುಕೊಳ್ಳೋದು ಬೇಡಾ ಅಂತ. ಅದೂ ಅಲ್ಲದೆ ಅಷ್ಟು ಚೆಂದಕ್ಕಿರುವ ಹುಡುಗಿಯನ್ನು ಈ ಹಿಂದೆ ಅದೆಷ್ಟು ಮಂದಿ ಹುಡುಗರು ಅಪ್ರೋಚ್‌ ಮಾಡಿರುತ್ತಾರೋ ಎಂದೂ ಯೋಚಿಸಿದೆ. ಅದಕ್ಕೇ ನನ್ನ ಕೇಸ್‌ನಲ್ಲಿ ಅವಳೇ ನನ್ನ ನಂಬರ್‌ ಕೇಳಿ ಪಡೆದುಕೊಳ್ಳುವಂತೆ ಮಾಡಬೇಕು ಅಂತ ಡಿಸೈಡ್‌ ಮಾಡಿದೆ.

ಅದಕ್ಕೇ ಅವಳಿಗೆ ತಿಳಿಯದಂತೆ ಅವಳ ಫೋಟೋ ಕ್ಲಿಕ್ಕಿಸಿದೆ. ತುಂಬಾ ಚೆನ್ನಾಗಿ ಮೂಡಿಬಂದ ಪೋಟೋವನ್ನು ಅವಳಿಗೆ ತೋರಿಸಲೇಬೇಕು ಅಂದುಕೊಂಡೆ. ಆದರೆ ಅವಳಿಗೆ ಗೊತ್ತಿಲ್ಲದಂತೆ ತೆಗೆದಿದ್ದರಿಂದ ಅವಳೆಲ್ಲಿ ಬೈದುಬಿಡುತ್ತಾಳ್ಳೋ ಅಂತ ಅದಕ್ಕೂ ಸಿದ್ಧನಾಗಿಯೇ ಅವಳ ಹತ್ತಿರ ಹೋಗಿ ಫೋಟೋ ತೋರಿಸಿದೆ. ಅವಳು “ವ್ಹಾವ್‌’ ಎಂದು ಕುಣಿದಾಡಿದಳು. ಅವಳೇ ಖುಷಿ ಪಟ್ಟ ಮೇಲೆ ಮೇಲಿಂದ ಮೇಲೆ ಪೋಟೋಗಳನ್ನು ಕ್ಲಿಕ್ಕಿಸತೊಡಗಿದೆ. ಅನೇಕ ಸಲ ಗ್ರೂಪ್‌ ಪೋಟೋ ಅಂತ ಹೇಳಿ ಸ್ವಯಂಸೇವಕರನ್ನೆಲ್ಲಾ ನಿಲ್ಲಿಸಿ ಬರಿ ಅವಳನ್ನು ಮಾತ್ರ ಸೆರೆಹಿಡಿಯುತ್ತಿದ್ದೆ. 

ಅವಳ ಫೋಟೋಗಳನ್ನು ನೋಡಿ ಅವಳು ಅವುಗಳನ್ನು ವಾಟ್ಸಾಪ್‌ ಮಾಡುವಂತೆ ದುಂಬಾಲು ಬಿದ್ದಳು. ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲಪ್ಪಾ ಅಂದುಕೊಂಡೆ. ಫೋಟೋಗಳನ್ನು ಕೊಡಲು ಕ್ಯಾಮೆರಾ ನನ್ನದಲ್ಲವಲ್ಲ, ಆದರೆ ಕ್ಯಾಮೆರಾ ನನ್ನದೇ ಎಂದುಕೊಂಡಿದ್ದ ಅವಳಿಗೆ ನಿರಾಸೆ ಮಾಡಲು ಮನಸ್ಸಾಗಲಿಲ್ಲ. ಅದಕ್ಕೇ ಆ ವಿಷಯ ಅಲ್ಲಿಗೆ ಮುಚ್ಚಿಟ್ಟು ನನ್ನದೇ ಮೊಬೈಲಿನಲ್ಲಿ ಫೋಟೋ ಕ್ಲಿಕ್ಕಿಸಲು ಶುರುಮಾಡಿದೆ. ಆ ಪೋಟೋಗಳನ್ನೂ ಅವಳು ಮೆಚ್ಚಿಕೊಂಡಳು. ಈಗ ಅವಳೇ ನನ್ನ ನಂಬರ್‌ ಕೇಳಿ ಪಡೆದು, ಒಂದು ಮಿಸ್‌ಕಾಲ್‌ ಕೊಟ್ಟು ನಂಬರ್‌ ಸೇವ್‌ ಮಾಡಿಕೊಳ್ಳುವಂತೆ ಹೇಳಿದಳು. ಅಂತೂ ಅವಳೇ ನನ್ನ ನಂಬರ್‌ ಕೇಳುವಂತೆ ಮಾಡುವಲ್ಲಿ ನಾನು ಸಫ‌ಲನಾಗಿದ್ದೆ. 
ಅವಳೀಗ ನನ್ನ ಬೆಸ್ಟ್‌ ಫ್ರೆಂಡ್‌!

– ಮೋಹನ ಬಿ.ಎಂ., ಮೈಸೂರು

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.