ಬಸ್‌ ಸ್ಟಾಪಿನ ಬಳಿ ಚಿಟ್ಟೆ


Team Udayavani, Oct 10, 2017, 12:05 PM IST

10-16.jpg

ಬೀಸುವ ತಂಗಾಳಿಯಲ್ಲಿ, ಜಿನುಗುವ ಮಳೆಯಲ್ಲಿ ಕೋಲ್ಮಿಂಚಿನಂತೆ ಬಂದು ಹೃದಯ ಸೇರಿದ ಹುಡುಗಿಯೇ, ಹುಣ್ಣಿಮೆಯ ಚಂದ್ರನಿಗಾಗಿ ಸಾಗರದ ಅಲೆಗಳು ಕಾದು ಕುಳಿತಂತೆ, ನೀ ಬರುವ ದಾರಿಯನ್ನು ಕಾಯುತ್ತಲೇ ಇದ್ದೇನೆ. ಪತ್ರಿಕಾಲಯದಿಂದ ಕೆಲಸ ಮುಗಿಸಿಕೊಂಡು ಬರಬೇಕಾದರೆ ತಡರಾತ್ರಿಯಾಗಿತ್ತು. ಹಾಸ್ಟೆಲ್‌ನತ್ತ ಹೆಜ್ಜೆ ಹಾಕಲು ಸುಸ್ತಾಗಿತ್ತು. ಪ್ರತಿದಿನ ಬಸ್‌ನಿಲ್ದಾಣಕ್ಕೆ ಬಂದಾಗ ಬಸ್‌ಗಾಗಿ ಕಾಯುತ್ತ ಒಬ್ಬರು, ಇಲ್ಲವೇ ಇಬ್ಬರು ನಿಂತಿರುತ್ತಿದ್ದರು. ಆದರೆ, ಅಂದು ಬಸ್‌ನಿಲ್ದಾಣದಲ್ಲಿ ಯಾರೂ ಇರಲಿಲ್ಲ. ಅಯ್ಯೋ.. ಬಸ್‌ ಕೈಕೊಟ್ಟಿತಲ್ಲಾ ಎಂದುಕೊಳ್ಳುತ್ತಾ ಮುಂದೆ ಬರುತ್ತಿದ್ದಂತೆ ಮಿಣುಕು ಬೆಳಕಿನಲ್ಲಿ ಕೆಂಗುಲಾಬಿಯ ಬಟ್ಟೆಯ ಬಿಳಿ ಚಿಟ್ಟೆಯೊಂದು ನಿಂತಂತೆ ಕಾಣುತ್ತಿತ್ತು. ಸುರಿಯುತ್ತಿರುವ ಮಳೆಯನ್ನು ಬೈದುಕೊಳ್ಳುತ್ತಾ ಅತ್ತಕಡೆ ಬಂದ ತಕ್ಷಣ ಎದೆಯಲ್ಲೇನೋ ತಲ್ಲಣ. ಸುಸ್ತೆಲ್ಲವೂ ಮಾಯವಾಗಿ, ಎದೆಗೆ ನೋವಾಗದಂತೆ ಹೂವಿನ ಬಾಣವನ್ನು ಹೊಡೆದಂತಾಯಿತು.

ಇಷ್ಟು ದಿನದಲ್ಲಿ ನಿನ್ನಂಥ ಚೆಲುವೆಯನ್ನು ನಾನು ನೋಡಿರಲೇ ಇಲ್ಲ. ಕನಸಿನಲ್ಲಿ ಬರುವ ಕನ್ಯೆಯೂ ನಿನ್ನಷ್ಟು ಅಂದವಾಗಿರಲಾರಳೇನೊ. ಆಕಾಶದ ದಾರಿಯಲ್ಲಿ ವಿಹಾರಕ್ಕೆಂದು ಬಂದ ದೇವಕನ್ಯೆ, ದಾರಿ ತಪ್ಪಿ ಇಲ್ಲಿಗೆ ಬಂದಿರುವಳೇ ಎಂದೆನಿಸಿತು. ಸುರಿಯುತ್ತಿರುವ ಮಳೆಗೆ ಮೈಯೊಡ್ಡಿ ನಿಂತಿದ್ದ ನಿನ್ನನ್ನು ನೋಡಿ ಅಂದೇ ನಿರ್ಧರಿಸಿ ಬಿಟ್ಟೆ, ನಮ್ಮಮ್ಮನ ಸೊಸೆ ನೀನೇ ಎಂದು. ಮೊದಲ ನೋಟದಲ್ಲೇ ನೀನು ಅದೆಷ್ಟು ಇಷ್ಟವಾದೆ ಅಂದ್ರೆ, ಆಗಲೇ ನಿನ್ನ ಜೊತೆ ಮಾತನಾಡಿ ನನ್ನ ಪ್ರೀತಿಯನ್ನು ಹೇಳಿಕೊಂಡು ಬಿಡಬೇಕೆಂದೆನಿಸಿತು. ಮೆಲು ಧ್ವನಿಯಲ್ಲಿ, “ಮಳೆ ಬರ್ತಿದೆ, ಈ ಕಡೆಗೆ ಬನ್ನಿ’ ಎಂದು ಹೇಳಿದೆ. ನೀನು ನಿಧಾನವಾಗಿ ನನ್ನ ಕಡೆ ತಿರುಗಿದಾಗ ಎದೆಯ ಬಡಿತ ಇನ್ನೂ ಹೆಚ್ಚಾಗಿತ್ತು. 

ಮಳೆಯಲಿ, ಚಳಿಯಲಿ ನಿನ್ನ ಜೊತೆ ನಿಂತಿದ್ದಕ್ಕೆ ಏನೋ ಒಂದು ಖುಷಿ. ಆಗ ನೀನು ಕೊಟ್ಟ ಸ್ಮೈಲ್‌ ಹೃದಯದಾಳಕ್ಕಿಳಿದು ಸಸಿಯಾಗಿದ್ದ ಪ್ರೀತಿಗೆ ನೀರೆರೆಯಿತು. ನಿನ್ನೊಂದಿಗೆ ಮಾ ತಾಡುತ್ತ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಅಷ್ಟರಲ್ಲಿ ನಿನ್ನ ಬಸ್‌ ಬಂದೇ ಬಿಟ್ಟಿತು. “ನಾನು ಹೊರಡ್ತೀನಿ. ಮತ್ತೆ ಸಿಗೋಣ’ ಎಂದು ನೀನು ಹೇಳಿ ಹೋದ ಮೇಲೆ, ನೆನಪಾಗಿದ್ದು ನಾನು ನಿನ್ನ ಹೆಸರನ್ನು ಕೇಳಲೇ ಇಲ್ಲವಲ್ಲ ಎಂದು. 

ಮತ್ತೆ ಸಿಗೋಣ ಎಂದು ಹೇಳಿ ಹೋದ ನಿನ್ನ ಬರುವಿಕೆಗಾಗಿ ನಾನು ಪ್ರತಿದಿನ ಕಾಯುತ್ತಲೇ ಇದ್ದೇನೆ.  ನಿನ್ನ ಪ್ರೇಮಕ್ಕಾಗಿ ಕಾಯುತ್ತಿರುವ ದಾರಿಹೋಕ

ಮಹಾಂತೇಶ ದೊಡವಾಡ

ಟಾಪ್ ನ್ಯೂಸ್

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

1-aaa

Pen drive case; ಇಂದೇ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಮುಂದೆ ಶರಣು?

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ

canada

Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

1-wwwqewq

RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ

1-aaa

Pen drive case; ಇಂದೇ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಮುಂದೆ ಶರಣು?

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.