ಬಾರೋ ಸಾಧಕರ ಕೇರಿಗೆ : ಭೂತಗನ್ನಡಿ ಕಲಿಸಿದ ಪಾಠ


Team Udayavani, Aug 25, 2020, 7:42 PM IST

ಬಾರೋ ಸಾಧಕರ ಕೇರಿಗೆ : ಭೂತಗನ್ನಡಿ ಕಲಿಸಿದ ಪಾಠ

ಹುಡುಗ ಚೂಟಿ. ನಿಂತಲ್ಲಿ ನಿಲ್ಲದ, ಕೂತಲ್ಲಿ ಕೂರದ, ಸದಾ ಒಂದಿಲ್ಲೊಂದು ಕೆಲಸ- ಕಿತಾಪತಿಗಳಲ್ಲಿ ಮುಳುಗಿಯೇ ಇರುವ ತುಂಟ. ಹಾಗೆಂದು ಓದಿನಲ್ಲೇನೂ ಹಿಂದಿರಲಿಲ್ಲ. ಒಮ್ಮೆ ಓದಿದ ಸಂಗತಿ ಅವನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಿತ್ತು. ಶಾಲೆಯಲ್ಲಿ ಸಹಪಾಠಿಗಳು ಪುಸ್ತಕದ ಮೊದಲ ಪುಟ ಮುಗಿಸುವಷ್ಟರಲ್ಲಿ, ಈತ ಕೊನೆಯ ಅಧ್ಯಾಯದ ಲೆಕ್ಕಗಳನ್ನೂ ಮಾಡಿಯಾಗಿರುತ್ತಿತ್ತು. ಇದೆಲ್ಲ ಸರಿ, ಆದರೆ ಹುಡುಗನಿಗೆ ಸದಾ ಚಡಪಡಿಕೆ. ಯಾವೊಂದು ವಿಷಯದಲ್ಲೂ ದೀರ್ಘ‌ಕಾಲ ನಿಲ್ಲದ ಏಕಾಗ್ರತೆ. ಒಂದು ಕೆಲಸ ಪ್ರಾರಂಭಿಸಿದರೆ ಸಾಕು, ಅದರ ನಡುವಿನಲ್ಲಿದ್ದಾಗಲೇ ಇನ್ನೊಂದಕ್ಕೆ ಜಿಗಿಯುತ್ತಿದ್ದ.

ಯಾವುದನ್ನೂ ಪೂರ್ಣಗೊಳಿಸಲಾಗದ ಅಸಮರ್ಥ ಎಂಬುದಕ್ಕಿಂತ, ಎಲ್ಲದರ ಬಗ್ಗೆಯೂ ಅತ್ಯಾಸಕ್ತನಾಗಿದ್ದ ಜಿಜ್ಞಾಸುವಾಗಿದ್ದುದೇ ಅದಕ್ಕೆ ಕಾರಣ. ಶಾಲೆಯಲ್ಲಿ ಮಾಸ್ತರರಾಗಿದ್ದ ತಂದೆಗೆ, ಮಗನ ಈ ಸ್ವಭಾವ ತಿಳಿಯದ್ದೇನಲ್ಲ. ಇವನನ್ನು ಹೀಗೇ ಬಿಟ್ಟರೆ, ಇವನ ಶಕ್ತಿ- ಸಾಮರ್ಥ್ಯಗಳೆಲ್ಲ ಹತ್ತುಕಡೆ ಹರಿದುಹಂಚಿಹೋಗಿ, ಕೊನೆಗೆ ಈತ ಜ್ಯಾಕ್‌ ಆಫ್ ಆಲ್, ಮಾಸ್ಟರ್‌ ಆಫ್ ನನ್‌ ಆಗಬಹುದು ಎಂದು ತೋರಿತವರಿಗೆ. ಒಂದು ದಿನ, ಚೆನ್ನಾಗಿ ಬಿಸಿಲು ಕಾಯುತ್ತಿದ್ದ ಹಗಲಿನಲ್ಲಿ ಅವರು ತನ್ನ ಮಗನನ್ನು ಮನೆಯಂಗಳಕ್ಕೆ ಕರೆತಂದರು. ನಿನಗೊಂದು ವಿಷಯ ತೋರಿಸುತ್ತೇನೆ ಎಂದು ಹೇಳಿ ತನ್ನ ಕಿಸೆಯಿಂದ ಒಂದು ಕಾಗದವನ್ನು ತೆಗೆದು, ಅದನ್ನು ಬಿಡಿಸಿ ಹಿಡಿದರು. ನಂತರ ಅದರ ಮೇಲೆ ಒಂದು ಭೂತಗನ್ನಡಿಯನ್ನು ಹಿಡಿದು ಅತ್ತ ಇತ್ತ ಆಡಿಸಿದರು. ಏನಾದರೂ ಗಮನಿಸಿದೆಯಾ? ಪ್ರಶ್ನಿಸಿದರು. ಏನು ಬದಲಾವಣೆ ಆಯ್ತು? ಏನೂ ಆಗಿಲ್ಲ. ಕಾಗದದ ಮೇಲೆ ಆ ಕನ್ನಡಿಯನ್ನ ಆಡಿಸ್ತಾ ಇದ್ದೀರಿ ಅಷ್ಟೆ ಎಂದ ಹುಡುಗ. ತಂದೆ ಈಗ ಭೂತಗನ್ನಡಿಯನ್ನು ಅತ್ತಿತ್ತ ಸರಿಸುವುದನ್ನು ನಿಲ್ಲಿಸಿ ಕಾಗದದ ಒಂದೇ ಭಾಗದಲ್ಲಿ ಸ್ಥಿರವಾಗಿ ನಿಲ್ಲಿಸಿ ಹಿಡಿದರು. ಕನ್ನಡಿಯ ಕೆಳಗಿದ್ದ ಕಾಗದ ಹೊಳೆಯಿತು.

ಸ್ವಲ್ಪ ಹೊತ್ತಿನಲ್ಲಿ ಅಲ್ಲಿ ಬೆಂಕಿ ಕಾಣಿಸಿಕೊಂಡಿತು. ಹಾಗೆ ಹುಟ್ಟಿದ ಬೆಂಕಿ ಜ್ವಾಲೆಯಾಗಿ ಬೆಳಗಿ, ಕೊನೆಗೆ ಕಾಗದವನ್ನು ಸುಟ್ಟಿತು. ನೋಡಿದೆಯಾ? ನನ್ನ ಕೈಯಲ್ಲಿ ಕಾಗದ, ಕನ್ನಡಿ ಎರಡೂ ಇದ್ದವು. ಕನ್ನಡಿಯನ್ನು ಅತ್ತಿತ್ತ ಆಡಿಸುತ್ತಿದ್ದಾಗ ಕಾಗದದ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಆದರೆ ಒಂದೇ ಕಡೆ ಸ್ಥಿರವಾಗಿ ನಿಲ್ಲಿಸಿ ಬೆಳಕನ್ನು ಕೇಂದ್ರೀಕರಿಸಿದಾಗ ಮಾತ್ರ ಆ ಕಿರಣಗಳೆಲ್ಲ ಒತ್ತಾಗಿಬಂದು ಬೆಂಕಿ ಹುಟ್ಟಿಕೊಂಡಿತು. ಬೆಂಕಿಯನ್ನು ಹುಟ್ಟಿಸುವ ಸಾಮರ್ಥ್ಯ ಕನ್ನಡಿಗೆ ಇದೆ ಎಂದು ತಿಳಿಯುವುದು ಅದನ್ನು ಸ್ಥಿರವಾಗಿ ನಿಲ್ಲಿಸಿದಾಗ ಮಾತ್ರ. ಯಾವುದೇ ಕೆಲಸ ಸಾಧಿಸಬೇಕಾದರೆ, ಮನಸ್ಸು ಕೂಡ ಈ ಕನ್ನಡಿಯಂತೆ ಸ್ಥಿರವಾಗಿರಬೇಕು ಎಂದರು ತಂದೆ.

* * *

ಅವರು ಅಂದು ಕಲಿಸಿದ ಆ ಬಹುಮುಖ್ಯ ಭೂತಗನ್ನಡಿಯ ಪಾಠ, ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು ಎಂದು ನೆನಪಿಸಿಕೊಂಡರು ಡಾ. ಸಿ.ವಿ. ರಾಮನ್‌, ನೊಬೆಲ್‌ ಪ್ರಶಸ್ತಿ ಪಡೆದ ನಂತರ ನಡೆದ ಒಂದು ಅಭಿನಂದನೆ ಕಾರ್ಯಕ್ರಮದಲ್ಲಿ.­

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.