ಯಾವುದೂ ಅತಿಯಾಗದಿರಲಿ ಎಲ್ಲವೂ ಮಿತಿಯಲ್ಲೇ ಇರಲಿ!


Team Udayavani, Sep 11, 2018, 6:00 AM IST

27.jpg

ಸಿಡುಕು ಮೂತಿ ಸಿದ್ದಪ್ಪನಿಗೆ,
ಹೇ ಹುಡುಗಾ! ಒಂದೇ ಒಂದು ಮಾತು; ನಂಗೊತ್ತು, ಇದನ್ನೆಲ್ಲಾ ಓದೋದಕ್ಕೆ  ನಿಂಗೆ ತಾಳ್ಮೆ ಇಲ್ಲ ಅಂತ. ಆದ್ರೂ ನಿನಗೋಸ್ಕರ ಈ ಪತ್ರ ಬರೀತಾ ಇದೀನಿ. ಪ್ಲೀಸ್‌ ಓದು… ನಿನಗೆ ಎಷ್ಟೊಂದೆಲ್ಲಾ ಹೇಳಬೇಕು, ನಿನ್ನೊಂದಿಗೆ ಹಗಲೆಲ್ಲಾ ಪಟಪಟ ಅಂತ ಮಾತಾಡಬೇಕು, ನಿನ್ನ ಕೋಪ ನೋಡಿ ಮೌನ ತಾಳಬೇಕು, ನಿನ್ನ ತುಟಿಯಂಚಲ್ಲಿ ಕಿರುನಗೆ ನೋಡಿ ಜೋರಾಗಿ ನಗಬೇಕು… ಇನ್ನೂ ಏನೇನೋ ಹುಚ್ಚು ಆಸೆಗಳನ್ನು ಮನದ ತುಂಬಾ ತುಂಬಿಕೊಂಡಿದ್ದೇನೆ. ಇವೆಲ್ಲವನ್ನೂ ನಿನ್ನ ಮುಂದೆ ನಿಂತು ಹೇಳ್ಬೇಕು ಅನ್ನಿಸುತ್ತೆ. ಆದ್ರೆ ಎಲ್ಲರೊಡನೆ ಅಳುಕಿಲ್ಲದೆ ಮಾತಾಡೋ ನಾನು, ನಿನ್ನ ಕಂಡಾಗ ಮೂಗಿಯಾಗಬಿಡ್ತೀನಿ. ಎದೆಯ ತುಂಬಾ ಏನೋ ಕಳವಳ, ಹೆದರಿಕೆ.. ಅದರೊಡನೆ ತಿಳಿಯದ ಸಂತಸ, ನಾಚಿಕೆ  ಮನೆಮಾಡಿರುತ್ತದೆ. ನಿನ್ನೊಂದಿಗೆ ಕಳೆದ ಗಂಟೆಗಳು ನನಗೆ ಮರೆಯಲಾಗದ ಕ್ಷಣಗಳು. ಯಾವಾಗಲೂ ನಿನ್ನ ಮಾತು ಕೇಳುತ್ತಲೇ ಇರೋಣ ಅನ್ನಿಸುತ್ತದೆ. 

ಆ ಮಾತುಗಳೇ ಅಲ್ವಾ ನಿನ್ನನ್ನು ನಂಗೆ ಸಿಗೋ ಹಾಗೆ ಮಾಡಿದ್ದು. ಅದೇ ಅಲ್ವಾ ನಮ್ಮಿಬ್ಬರ ಸ್ನೇಹಕ್ಕೆ ಸೇತುವೆ ಆದದ್ದು… ನಿನ್ನೊಡನೆ ನಡೆದ ಆ ಕ್ಷಣದಲ್ಲಿ ಉರಿಬಿಸಿಲು ಕೂಡ ತಂಪಾಗಿತ್ತು. ಕಲ್ಲು ಮುಳ್ಳಿನ ಹಾದಿ ಕೂಡ ಬರಿಗಾಲಿನಲ್ಲಿ ಇದ್ದಾಗಲೂ ಮೆತ್ತನೆಯ ಹೂವಿನ ಹಾದಿಯಂತೆ ಭಾಸವಾಗಿತ್ತು. 

ನಿನ್ನ ಹೆಜ್ಜೆಗಳನ್ನು ಹಿಂಬಾಲಿಸಿ ಬರುವಾಗ, ದೂರದಲ್ಲಿ ನನಗೋಸ್ಕರಾನೇ ಯಾರೋ ಹಾಡುತ್ತಿದ್ದರೇನೋ ಅನ್ನೋ ಹಾಗೆ ಒಂದು ಹಾಡು ಕೇಳುತ್ತಿತ್ತು. “ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೇ ಸಪ್ತಪದಿ…’ ಎಂದು. ಹೌದು ಅನ್ನಿಸ್ತಿದೆ ಹುಡುಗ. ನಿನ್ನ ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ನಡೆಯುವಾಗ ಲೋಕವನ್ನೇ ಮರೆತಿದ್ದೆ. ಮಗುವಂತೆ ಹಿಂಬಾಲಿಸಿ ನಿನ್ನ ಹಿಂದೆ ಬರುವಾಗ ನನ್ನ ಪಪ್ಪನ ನೆನಪಾಗುತ್ತಿತ್ತು.   

ಹುಡುಗ, ನಾನು ನಿನ್ನನ್ನು ಮಗುವಿನ ಥರ ನೋಡಿಕೊಳ್ಳುತ್ತೇನೆ. ಪ್ಲೀಸ್‌, ನನ್ನನ್ನು ನೀನು ನನ್ನ ಪಪ್ಪನ ತರಹ ಕಾಪಾಡ್ತೀಯ ಅಲ್ವಾ? ನಿನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೇನೆ. ಅದನ್ನು ಉಳಿಸಿಕೊಳ್ತೀಯ ಅಲ್ವಾ? ಆ…ನಾನು ನಿನ್ನ ಜೊತೆ ಇದ್ದರೆ ನಿನ್ನ  ಜೀವನ  ಸುಖದ ಹಾಸಿಗೆ ಅಂತ ನಾನು ಹೇಳಲ್ಲ. ಆದ್ರೆ ಏನೇ ಕಷ್ಟ ಬರ್ಲಿ, ನಾನು ನಿನ್ನ ಜೊತೆಯಲ್ಲೇ ಇರುತ್ತೇನೆ.

ಎಲ್ಲರಂತೆ ನಾನು ಸುಂದರಿ ಏನಲ್ಲ. ನನ್ನ ಮುಖದಲ್ಲಿ ಕಲೆ ಇರಬಹುದೇನೋ, ಆದರೆ ನನ್ನ ಪ್ರೀತಿಯಲ್ಲಿ ಮಾತ್ರ ಎಳ್ಳಷ್ಟೂ  ಕಲೆಯಿಲ್ಲ. 
ಮತ್ತೆ… ನಿನಗೆ ಏನೇನ್‌ ಇಷ್ಟಾನೋ ಅದೆಲ್ಲ ಹಾಗೇ ಇರಲಿ. ಆದರೆ ನಿನ್ನ ಕೆಲವೊಂದು ಇಷ್ಟಗಳ ಮೇಲೆ ಗಮನವಿರಲಿ. ಕೆಟ್ಟದ್ದನ್ನು ಮಾಡುವ ಮುಂಚೆ ಹತ್ತು ಸಲ ಯೋಚಿಸು. ನಿನಗಾಗಿ ಒಂದು ಜೀವ ಇರುತ್ತೆ ಅಂತ .ಅತಿಯಾಗಿ ಯಾವುದನ್ನೂ  ಮಾಡಬೇಡ ಎಲ್ಲವೂ ಮಿತವಾಗಿರಲಿ. ಯಾವಾಗಲೂ ಸಿಡುಕು ಮೂತಿ ಸಿದ್ದಪ್ಪನ ತರಹ ಇರೋದನ್ನ ಬಿಟ್ಟು ಸ್ವಲ್ಪ ನಗು ಮಾರಾಯ, ನಿನ್ನ ಗಂಟೇನೂ ಹೋಗಲ್ಲ. ನಗ್ತಿàಯಾ ಅಲ್ವಾ? ಪ್ಲೀಸ್‌ ಕಣೋ… ನನಗೋಸ್ಕರ ನಗು ನೋಡೋಣ ಒಮ್ಮೆ,

ಎಲ್ಲಿ ಒಂದು ಸಲ ನಗು… ಹಾಂ ಹೀಗೆ. ಯಾವಾಗಲೂ ಹೀಗೆ ನಗ್ತಾ ಇರು.. ನೀನು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳುತ್ತೀಯಾ ಅಂದ್ರೆ, ಅದೇ ಏರ್‌ಸೆಲ್‌ ನಂಬರ್‌ಗೆ ಕಾಲ್‌ ಮಾಡು. ಎಲ್ಲಾ ಮರೆತು ನಿನ್ನ ಕರೆಗಾಗಿ ಕಾಯ್ತಾ ಇದ್ದೇನೆ. 
ಇಂತಿ ನಿನ್ನ ಮುದ್ದು ಪೆದ್ದು ಗೆಳತಿ…

ಅಪೂರ್ವ ನಾಗರಾಜ್‌ 

ಟಾಪ್ ನ್ಯೂಸ್

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.