ಪ್ರೇಮವೆಂಬ ಸಮ್ಮೋಹಿನಿ, ಪ್ರೇಮಕ್ಕೆ ಜಯವಾಗಲಿ, ಪ್ರೇಮಿಗಳಿಗೂ!


Team Udayavani, Feb 14, 2017, 3:50 AM IST

lead-2.jpg

 “ಪ್ರೇಮ’ ಕೇವಲ ಹುಡುಗ ಹುಡುಗಿಯರ ಮಧ್ಯೆ ಸಂಭವಿಸುವ ಕ್ರಿಯೆ ಅಲ್ಲ, ಅದು ಸರ್ವಾಂತರ್ಯಾಮಿ! ಪ್ರೇಮ ಅಲಿಯಾಸ್ ಪ್ರೀತಿ ಉರ್ಫ್ ಲವ್ ಇದೆಯಲ್ಲಾ ಅಷ್ಟು ಸಾಮಾನ್ಯದ ಸಂಗತಿಯಲ್ಲ ಬಿಡಿ. ಮೊದ ಮೊದಲು ಭಯವಾಗುವ, ಹೆದರಿಸುತ್ತಲೇ ಹೆಗಲೇರುವ , ಅತೀವ ಆಕರ್ಷಕ ಸಮ್ಮೋಹಿನಿ. ಹದಿನಾರರ ವಯಸ್ಸಿನ ಹುಚ್ಚು ಕೋಡಿ ಮನಸ್ಸಿನ ನೂರು ಕ್ಯಾಂಡಲ್ ಬಲ್ಬ್ ಪ್ರೀತಿ. ಏಕಾಂತದಲ್ಲಿ ಅಂತರಾಳದಲ್ಲಿ ಎದೆಯ ಒಳಸುಳಿಯಲ್ಲಿ ನಮಗೇ ಗೊತ್ತಿಲ್ಲದೆ ಪ್ರವಹಿಸುವ ಅಸ್ಪಷ್ಟ ಭಾವ ಚೈತ್ರ ಯಾನ ಪ್ರೀತಿ. ಮನುಷ್ಯ ರಷ್ಟೇ ಅಲ್ಲದೇ ಸಕಲ ಚರಾಚರ ಗಳ ನಡುವೆ ಸದಾ ಹರಿವ ಜೀವದ್ರವ್ಯ ಪ್ರೇರಕ ಪ್ರೀತಿ. ಹಗಲೆನ್ನದೆ ಇರುಳೆನ್ನದೆ ಸಕಲರನ್ನು ಕಾವ ಅಮೃತದ ಬಿಂದು ಈ ಸೀದಾ ಸಾದಾ ಪ್ರೀತಿ. ದೇಶ, ಕಾಲ, ಧರ್ಮ, ಜಾತಿ, ಅಂತಸ್ತು, ಭಾಷೆ, ವರ್ಣ ಎಲ್ಲವನ್ನೂ ಮೀರಿ ನಿಲ್ಲಬಲ್ಲ ಶಕ್ತಿ ಇರುವುದು ಮಾತ್ರ ಪ್ರೀತಿಗೆ ಎಂದರೆ ಅಚ್ಚರಿ ಪಡಬೇಕಿಲ್ಲ. ತಾಯಂತೆ ಪೊರೆವ, ತಂದೆಯಂತೆ ಕಾವ ಪ್ರೀತಿಗೆ ಶರಣು ಶರಣಾರ್ಥಿ.

 ಪ್ರೀತಿಯನ್ನು ಪ್ರೀತಿಯಂದ ಪ್ರೀತ್ಸಿ ಎಂಬುದು ಸವಕಲು ಡೈಲಾಗು. ಅಕ್ಷರಶಃ ಪ್ರೀತಿಯ ಇರುವಿಕೆ, ಅದರ ಜೀವಂತಿಕೆಗಳನ್ನು ಕಂಡುಕೊಂಡು ಬದುಕುವುದರಲ್ಲಿ ನಿಜವಾದ ಅರ್ಥವಿದೆ. ನಮ್ಮನ್ನು ಕಾಡುವ, ಕೆಣಕುವ ಇನ್ನೊಂದು ಜೀವಿದೆ ಎಂಬುದೇ ಜಗತ್ತಿನ ಅಚ್ಚರಿಗಳಲ್ಲಿ ಒಂದಾದ ವಿಷಯ. ನಮ್ಮ ಪಾಲಿಗೆ ಬಂದದ್ದನ್ನೆÇÉಾ ಸ್ವೀಕರಿಸಿ, ಮೇಲು ಕೀಳು ಎಂಬ ಭಾವ ತೊರೆದು ಬದುಕುವುದರಲ್ಲಿ ನಿಜವಾದ ಅರ್ಥವಿದೆ.
   
   //ಮಾವು ನಾವು, ಬೇವು ನಾವು ;
                    ನೋವು ನಲಿವು ನಮ್ಮವು.
     ಹೂವು ನಾವು, ಹಸಿರು ನಾವು, 
                    ಬೇವು ಬೆಲ್ಲ ನಮ್ಮವು.//

 ಯಾವುದೋ ಯಾತನೆ, ಚಿಂತೆ, ಭಯ, ಮುಜುಗರ, ಸಂಕೋಚ ಇವೆಲ್ಲವನ್ನೂ ಹೋಗಲಾಡಿಸಿ ಮನಸ್ಸನ್ನು ಹಗುರಗೊಳಿಸಿ ಆಕಾಶದಲ್ಲಿ ತೇಲುವಂತೆ ಮಾಡುವ ಮಾಯಾ ಲಾಂದ್ರ ಪ್ರೀತಿ. ಒಂದೇವೊಂದು ಪ್ರೀತಿಯ ಮಾತು, ಹೆಗಲ ಮೇಲೆ ಕೈ ಇಟ್ಟ ಸ್ಪರ್ಷ ಇಷ್ಟು ಸಾಕು ಎÇÉಾ ಖಾಯಿಲೆ ದೂರಾಗಲು. ಆತ್ಮೀಯತೆ, ಅಕ್ಕರೆ, ಸನಿಹ, ಸಾನಿಧ್ಯಗಳು ತುಂಬಿಕೊಡುವ ಉತ್ಸಾಹದಲ್ಲಿ ಪ್ರೀತಿಯ ಉತ್ಕಟತೆ ಇದೆ. ಬದುಕು ಒಬ್ಬರೇ ಇರುವ ತನಕ ಹೇಗೋ ಸಾಗಿಬಿಡುತ್ತದೆ. ಹರೆಯದಲ್ಲಿ ಜೋಡಿಯಾಗಿ ಬದುಕಿನ ಬಂಡಿ ಎಳೆಯುವ ಹೊತ್ತು ಶುರುವಾದಾಗಲೆ ನಾವು ಎಷ್ಟು ಸಮರ್ಥರು ಎಂಬುದು ಅರಿವಿಗೆ ಬರುತ್ತದೆ. ಸಂಗಾತಿಯನ್ನು ಸ್ವಾಗತಿಸಲೇಬೇಕಲ್ಲ ಬದುಕಿನ ಒಂದು ಕಾಲಘಟ್ಟದಲ್ಲಿ.

    //ನನ್ನ ಕೈ ಹಿಡಿದವಳೆ, 
     ಮಾಂದಳಿರ ಮೈಯವಳೆ,
      ದೂರ ನಿಲ್ಲುವರು ಏಕೆ ಚೈತ್ರದೊಳಗೆ?
     ಕೋಗಿಲೆಯ ಹಾಡಿನಲಿ
    ತಳಿರು ಸಿರಿಬೀಡಿನಲಿ
    ಒಲವ ಚಿಮ್ಮುತ ಬಾರೆ ನನ್ನ ಬಳಿಗೆ.//

– ಕಂಡಕ್ಟರ್‌ ಸೋಮು

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.