ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…


Team Udayavani, Sep 22, 2020, 9:10 PM IST

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

ಆ ಘಟನೆಯನ್ನು ನೆನಪು ಮಾಡಿಕೊಂಡರೆ, ಚಳಿಯಲ್ಲೂ ಮೈ ಬೆವರುತ್ತದೆ. ಅದೇ ಸಂದರ್ಭದಲ್ಲಿ ಒಂದಷ್ಟು ಖುಷಿಯೂ ಆಗುತ್ತದೆ. ಕಾರಣ, ನಮ್ಮ ನಮ್ಮ ಮಿತಿಗಳ ಅರಿವಿದ್ದೂ ಅವಳನ್ನು ಕುರಿತುಕನಸು ಕಂಡಿದ್ದು! ಅವಳು ಮಾತಾಡುವುದಿಲ್ಲ ಎಂದು ಗೊತ್ತಿದ್ದರೂ, ಹೇಗಾದರೂ ಮಾಡಿ ಮಾತಾಡಿಸಬೇಕು ಎಂದು ಆಸೆಪಟ್ಟಿದ್ದು ನೆನಪಾಗುತ್ತದೆ.

ಎಲ್ಲಿಯ ಅವಳು, ಎಲ್ಲಿಯ ನಾನು? ಶ್ರೀಮಂತರ ಮನೆಯ  ಒಬ್ಬಳೇ ಮಗಳು ಅವಳು. ರೂಪುವಂತೆ ಬೇರೆ. ನನ್ನ ವಾರಿಗೆಯ ಹಲವರು, ನಮ್ಮ ಸೀನಿಯರ್‌ಗಳಾಗಿದ್ದ ಕೆಲವರು ಅವಳ ಹಿಂದೆ ಬಿದ್ದಿದ್ದರು. ಆದರೆ, ಅವಳಿಗೆ ಪ್ರೀತಿಯ ವಿಷಯವನ್ನು ಹೇಳಲು ಯಾರೂ ಮನಸ್ಸು ಮಾಡಿರಲಿಲ್ಲ. ನನಗೋ ಎಂಥದೋ ಹುಚ್ಚು ಧೈರ್ಯ. ಸಾಲದ್ದಕ್ಕೆ ಕವನಗಳನ್ನು ಬರೆಯುತ್ತಿದ್ದೆ. ಅದನ್ನವಳು ಮೆಚ್ಚಿಕೊಂಡಿದ್ದಳು. ಅದೇ ನನಗೆ ಪ್ಲಸ್‌ ಪಾಯಿಂಟ್‌ ಆಗಿತ್ತು. ನನ್ನ ಅವಸರದ ಮಾತುಕೇಳಿ, ಅವಳೇನಾದರೂ ಮಾತು ಬಿಟ್ಟರೆ ಎಂಬ ಅನುಮಾನವೊಂದು ಹೀಗೆ ಬಂದು ಹಾಗೆ ಮಾಯವಾಯಿತು. ಅಂಥದೇನೂ ಆಗುವುದಿಲ್ಲ ಎಂದು ನನಗೆ ನಾನೇ ಹೇಳಿಕೊಂಡು, ನನ್ನ ಪ್ರೇಮದ ಪರಿಯನ್ನು ಅವಳಿಗೆ ದಾಟಿಸಲು ನಿರ್ಧರಿಸಿಯೇಬಿಟ್ಟೆ.

ಮಳೆಗಾಲದ ಅದೊಂದು ಬೆಳಗು, ಹಳೆಯಕೊಡೆ ಹಿಡಿದುಕೊಂಡು ಶಾಲೆಗೆ ಹೋಗುತ್ತಿದ್ದೆ. ಮಳೆ ಒಂದೇ ಸಮನೆ ಸುರಿಯುತಲಿತ್ತು.ಕೊಡೆ ಹಿಡಿದಿದ್ದರೂ, ಅರ್ಧ ಮೈ ಒದ್ದೆಯಾಗಿತ್ತು. ನನಗದರ ಪರಿವೆ ಇರಲಿಲ್ಲ. ರಾತ್ರಿ ಇಡೀ ನಿದ್ದೆಗೆಟ್ಟು ಅವಳಿಗೊಂದು ಪತ್ರ ಬರೆದಿದ್ದೆ. ಅದನ್ನು ಅವಳಿಗೆ ಓದಿ ಹೇಳುವ ಆತುರ ನನಗಿತ್ತು. ಎದುರು ಸಿಕ್ಕಾಗ, ಅವತ್ತು ಅವಳೇನು ಮಾತಾಡಿದಳು, ನಾನೇನು ಮಾತಾಡಿದೆ ಒಂದೂ ನೆನಪಿಲ್ಲ. ಅವಳಿಗೆ ಪತ್ರ ದಾಟಿಸುವ ತಂತ್ರದ ಭಾಗವಾಗಿ ನನ್ನೊಳಗೆ ನೂರಾರು ಯೋಜನೆಗಳಿದ್ದವು. ಆದರೆ ಅವನ್ನು ಕಾರ್ಯರೂಪಕ್ಕೆ ತರಲು ಮನಸ್ಸು ಹೆದರುತ್ತಿತ್ತು. ಶಾಲೆ ಮುಗಿದರೂ ಮಳೆನಿಲ್ಲಲಿಲ್ಲ.ಕೊಡೆ ಬಿಚ್ಚಿ ಇಬ್ಬರೂ ಮನೆಯ ಹಾದಿ ಹಿಡಿದೆವು. ನಾನವತ್ತು ಮಳೆಗೆ ಒದ್ದೆಯಾಗಿದ್ದೆನೊ ಅಥವಾ ಭಯದಿಂದ ಒದ್ದೆಯಾಗಿದ್ದೆನೊ ಗೊತ್ತಾಗಲಿಲ್ಲ. ಹೇಗಿದ್ದರೂ ಈಗ ಜೊತೆಯಾಗಿ ನಡೆಯುತ್ತಿದ್ದೇವೆ.

ಈ ಸಂದರ್ಭದಲ್ಲಿಯೇ ಧೈರ್ಯ ಮಾಡಿ ಅವಳಿಗೆ ಪತ್ರವನ್ನುಕೊಡುವುದು ಒಳ್ಳೆಯದು ಎಂದು ಒಳಮನಸ್ಸು ಪಿಸುಗುಟ್ಟಿತು. ಹತ್ತು ಬಾರಿ ಯೋಚಿಸಿ, ಆಗಿದ್ದಾಗಲಿ ಎಂಬ ನಿರ್ಧಾರಕ್ಕೆ ಬಂದು, ಉದ್ವೇಗದಿಂದ ಹೊಡೆದುಕೊಳ್ಳುತ್ತಿದ್ದ ಎದೆಬಡಿತವನ್ನುಕಂಟ್ರೋಲ್‌ಗೆ ತಂದುಕೊಂಡು, ಅವಳಿಗೆ ಆ ಪತ್ರವನ್ನುಕೊಟ್ಟುಬಿಡುವುದೇ ಸರಿಯೆಂದು ಬ್ಯಾಗಿಗೆ ಕೈ ಹಾಕಿದರೆ, ಪತ್ರಕೈಗೆ ಸಿಗಲಿಲ್ಲ. ತೂತಾಗಿದ್ದ ಬ್ಯಾಗ್‌ನಿಂದ ಅದು ದಾರಿ ಮಧ್ಯದಲ್ಲೆಲ್ಲೋ ಬಿದ್ದು ಬಹಳ ಸಮಯವಾಗಿತ್ತು…

 

ಕುಮಾರ ಸೀಟಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.