ಸಂಬಳಕ್ಕಿಂತ ಹೆಚ್ಚೆನಿಸಿತು ಅಮ್ಮನ ಕಿರುನಗು! 


Team Udayavani, Mar 27, 2018, 5:33 PM IST

5.jpg

ಆಗ ತಾನೇ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ್ದೆ. ಡಿಗ್ರಿಗೆ ಹೋಗುವ ಮೊದಲು ಮೂರು ತಿಂಗಳು ವಿರಾಮ ಸಿಕ್ಕಿತ್ತು. ಆ ಬಿಡುವಿನಲ್ಲಿ ಏನು ಮಾಡುವುದು ಎಂದು ತಲೆ ಕೆಡಿಸಿಕೊಂಡು ಕುಳಿತಿದ್ದೆ. ಅಷ್ಟರಲ್ಲೇ ನನ್ನ ಸ್ನೇಹಿತ ಬಂದು “ಮಗಾ… ಒಂದು ಕೆಲಸ ಇದೆ. ನೀನೂ ಬರ್ತೀಯಾ?’ ಎಂದು ಕೇಳಿದ. ಹೂಂ ಎಂದು ಒಪ್ಪಿಗೆ ನೀಡಿ, ಅಮ್ಮನ ಬಳಿ ಅನುಮತಿ ಕೇಳಿದೆ. ಮೊದಲು ನಿರಾಕರಣೆಯ ಮಾತಾಡಿದ ಅಮ್ಮ, ನಂತರ ಹಸಿರು ನಿಶಾನೆ ತೋರಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದೆ. ಆ ಕೆಲಸ ಬೇಸರ ಎನಿಸಿದರೂ, ಸಂಬಳಕ್ಕಾಗಿ ದುಡಿಯುವುದು ಅನಿವಾರ್ಯವೇ ಆಗಿತ್ತು. ಅಪ್ಪ ಕುಟುಂಬ ತೊರೆದಿದ್ದರಿಂದ, ಅಮ್ಮನ ಮೇಲೆ ಸಂಸಾರದ ಹೊರೆ ಬಿದ್ದಿತ್ತು. ಅಮ್ಮನಿಗೆ ಭಾರವಾಗದೇ, ನನ್ನ ಶಿಕ್ಷಣದ ಹೊರೆಯನ್ನು ನಾನೇ ಹೊರಬೇಕು ಎಂಬ ದೃಢ ನಿರ್ಣಯದಿಂದ ಕೆಲಸ ಮಾಡಿದೆ. ಮೊದಲ ತಿಂಗಳ ಸಂಬಳವೆಂದು 6 ಸಾವಿರ ರೂ. ಕೈ ಸೇರಿತು. ಅಷ್ಟನ್ನೂ ಅಮ್ಮನಿಗೆ ಕೊಟ್ಟಾಗ, ಅವರ ಮೊಗದಲ್ಲಿ ಕಿರುನಗುವೊಂದು ಮೂಡಿದ್ದನ್ನು ನೋಡಿ ನನ್ನ ಕಂಗಳಲ್ಲಿ ಆನಂದಬಾಷ್ಪ ಉಕ್ಕಿತ್ತು. ಆ ದೃಶ್ಯ ನನ್ನ ಜೀವನದ ಕೊನೆಯ ತನಕವೂ ಜೀವಂತವಾಗಿ ದಾಖಲಾಗಿರುತ್ತದೆ.

  ಎರಡು ತಿಂಗಳು ಚೆನ್ನಾಗಿ ದುಡಿದ ಮೇಲೆ, ನಾನು ನೀಡಿದ್ದ ಮೊದಲ ತಿಂಗಳ ಸಂಬಳವನ್ನೂ ಅಮ್ಮ ನನ್ನ ಕೈಗಿಟ್ಟು ಹೇಳಿದಳು: “ಈ ಹಣದಲ್ಲಿ ಮೊದಲು ಪದವಿಗೆ ಸೇರು. ಒಂದು ಸೈಕಲ್‌ ತೆಗೆದುಕೋ. ಅಗತ್ಯವಿದ್ದರೆ, ಮೊಬೈಲ್‌ ಕೊಂಡುಕೋ’.

  ಪದವಿ ಪೂರೈಸಿ, ಇಂದು ಸ್ನಾತಕೋತ್ತರ ಪದವಿಯನ್ನು ಮುಗಿಸುವ ಹಂತದಲ್ಲಿದ್ದೇನೆ. ಆ ಮೊದಲ ಸಂಬಳ, ಮೊದಲ ದುಡಿಮೆಯ ಸಂತೃಪ್ತಿ ಮತ್ತು ಅಮ್ಮನ ಹಾರೈಕೆಯ ಮಾತುಗಳು ಸದಾ ನೆನಪಾಗುತ್ತಲೇ ಇರುತ್ತವೆ.  

ಮನೋಹರ್‌ ಎಂ., ದೇವನಹಳ್ಳಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.