ಸ್ಮೈಲ್‌ ಕೊಟ್ರೆ ದೇವರಾಗ್ತೀರಿ…


Team Udayavani, Feb 20, 2018, 6:30 AM IST

smile-kotre.jpg

ಐದು ಸೆಕೆಂಡ್‌ ಸ್ಮೈಲ್‌ ಕೊಡೋದ್ರಿಂದ ಒಂದು ಫೋಟೋ ಚೆನ್ನಾಗಿ ಬರೋದಾದ್ರೆ, ಲೈಫ್ ಪೂರ್ತಿ ನಗ್ತಾ ಇದ್ರೆ ಜೀವನ ಎಷ್ಟು ಸುಂದರವಾಗಿರಬಹುದು ಅಲ್ವಾ? ಕೆಲವರು ಕಚಗುಳಿ ಇಟ್ಟಂತೆ ನಗು ಪಸರಿಸಿದ್ರೆ, ಇನ್ನು ಕೆಲವರು ಕಿರುನಗೆ ಬೀರುತ್ತಾರೆ. ನಗೋವಾಗ ಸಿಂಪಲ್ಲಾಗೊಂದು ಡಿಂಪಲ್‌ ಬಿದ್ರೆ ಹೇಳ್ಳೋದೇ ಬೇಡ. ಎಲ್ರೂ ಫಿದಾ ಆಗೋಗ್ತಾರೆ…

ನೀವು ನಗ್ತೀರಾ? ಹೇಗೆ ನಗ್ತೀರಾ? ಒಬ್ಬರೇ ನಗ್ತೀರಾ ಇಲ್ಲಾ ಗುಂಪಿನಲ್ಲಿ ಗೋವಿಂದ ಮಾಡ್ಕೊಂಡು ನಗ್ತೀರಾ? ನಗೋವಾಗ ಢಂ ಢಂ ಅಂತ ಸದ್ದು ಮಾಡ್ತೀರಾ? ಇಲ್ಲಾ ಒಳಗೊಳಗೆ ನಗ್ತೀರಾ? ಎಷ್ಟೇ ಬೇಡ ಅಂದರೂ ಫ‌ನ್ನಿ ಇನ್ಸಿಡೆಂಟ್‌ ಅನ್ನು ನೆನೆಸಿಕೊಂಡಾಗ ನಗು ಬಂದೇ ಬರುತ್ತೆ. ಆಗ ಎಲ್ಲರೂ ಹಾಯಾಗಿ, ಮನಃಪೂರ್ವಕವಾಗಿ, ಹೊಟ್ಟೆ ತುಂಬಾ ನಗ್ತೀವಿ. ಕೆಲವರ ಮುಗುಳುನಗೆಗೆ ಬೇಗನೆ ಬ್ರೇಕ್‌ ಬೀಳುತ್ತೆ.

ಮತ್ತೂಂದಿಷ್ಟು ಜನರ ನಗೆಗೆ ಸ್ಪೀಡ್‌ ಬ್ರೇಕರ್‌ ಇಲ್ಲವೇ ಇಲ್ಲ. ಇಂಥವರ ನಗೆಗೆ ಆ್ಯಕ್ಸಿಡೆಂಟ್‌ ಆಗೋದಂತೂ ನಿಜ. ಕೆಲವರು ಕಚಗುಳಿ ಇಟ್ಟಂತೆ ನಗು ಪಸರಿಸಿದ್ರೆ, ಇನ್ನು ಕೆಲವರು ಕಿರುನಗೆ ಬೀರುತ್ತಾರೆ. ನಗೋವಾಗ ಸಿಂಪಲ್ಲಾಗೊಂದು ಡಿಂಪಲ್‌ ಬಿದ್ರೆ ಹೇಳ್ಳೋದೇ ಬೇಡ. ಎಲ್ರೂ ಫಿದಾ ಆಗೋಗ್ತಾರೆ. ಮುದ್ದಾದ ಡಿಂಪಲ್‌ ನೋಡೋಕೆ ಕ್ಯೂ ನಿಂತರೂ ಅಚ್ಚರಿಪಡಬೇಕಿಲ್ಲ. 

ಒಂದು ರೂಪಾಯಿಗೆ ಸಿಗೋ ಪೆಪ್ಪರ್‌ವೆುಂಟನ್ನು ಸ್ಕೂಲ್‌ಗೆ ಹೋಗೋ ಮಗುವಿಗೆ ಕೊಟ್ಟುಬಿಡಿ. ಅದಕ್ಕಾಗೋ ಖುಷಿ ನೋಡಿದ ಮೇಲಂತೂ ನೀವು ಈ ಲೋಕವನ್ನು ಮರೆತು ಖುಷಿಯಲ್ಲೇ ತೇಲಾಡ್ತೀರಿ. ನಾವು ಮೊಬೈಲ್‌ಗೆ ಬಂದ ಎಷ್ಟೋ ಮೆಸೇಜ್‌ಗಳನ್ನು ಫಾರ್ವರ್ಡ್‌ ಮಾಡ್ತೇವೆ. ಆದ್ರೆ ಸ್ಮೈಲನ್ನು ಫಾರ್ವರ್ಡ್‌ ಮಾಡೋಕೆ ಮಾತ್ರ ಜ್ಯೂಸ್‌ ಜ್ಯೂಸ್‌ ಚಿಕ್ಕು ಜ್ಯೂಸ್‌ ಅಲ್ಲ… ಕಂಜೂಸ್‌ ಬುದ್ಧಿ ತೋರಿಸ್ತೇವೆ.

ಕೆಲವು ದಿನಗಳಿಂದ ಕೋಳಿಜಗಳವಾಗಿ ಮಾತು ಬಿಟ್ಟವರು ಸಿಕ್ಕಿದರೆ ಹಾಗೇ ಶುಭ್ರ ನಗೆಯನ್ನು ಅವರೆಡೆಗೆ ಚೆಲ್ಲಿ. ಹೊಚ್ಚ ಹೊಸ ನಗು ಹಳೆಯ ನೋವಿನ ಕನ್ನಡಿಯನ್ನು ಒಡೆಯುವುದರಲ್ಲಿ ಎರಡು ಮಾತಿಲ್ಲ. ಒಂದಿಷ್ಟು ಜನ, ಸ್ಮೈಲ್‌ ಕೊಟ್ರೆ ಸ್ಮೈಲ್‌ ಅನ್ನೇ ಗುಳುಂ ಮಾಡಿ ನೋಡ್ತಾರೆ. ಸ್ಮೈಲ್‌ಗೆ ಪ್ರಮೋಶನ್‌ ಕೊಡಲ್ಲ. ಕಡೇಪಕ್ಷ ಆ ನಗುವಿನ ಮಹಿಮೆಯನ್ನು ಅರಿಯುವ ಗೋಜಿಗೂ ಅವರು ಹೋಗುವುದಿಲ್ಲ. ಇಂಥ ನಗುವನ್ನು “ಒನ್‌ ವೇ’ ಗುಂಪಿಗೆ ಸೇರಿಸಬಹುದು. 

ಈ ನಗುವನ್ನೇ ಮುಂದಿಟ್ಟುಕೊಂಡು ಟಾಸ್ಕ್ಗಳನ್ನೂ ಆಯೋಜಿಸಬಹುದು. ನೀವು ನಿತ್ಯ ಹೋಗುವ ಬಸ್ಸಿನಲ್ಲಿ ಇದನ್ನು ಕಾರ್ಯರೂಪಕ್ಕೆ ತರಬಹುದು. ಸಹಪ್ರಯಾಣಿಕರೊಬ್ಬರಿಗೆ ಇವತ್ತು ನೀವು ಮೊದಲು ಸ್ಮೈಲ್‌ ಕೊಟ್ರೆ, ನಾಳೆ ಅವರು ಮೊದಲು ಸ್ಮೈಲ್‌ ಕೊಡ್ಬೇಕು. ಒಂದಿನ ನೀವು, ಮತ್ತೂಂದು ದಿನ ಅವರು. ದೆಹಲಿಯಲ್ಲಿದ್ದಂತೆ ಸಮ- ಬೆಸ ವ್ಯವಸ್ಥೆ. ಅಲ್ಲಿನ ವಾತಾವರಣದಂತೆ, ನಮ್ಮ ವಾತಾವರಣದಲ್ಲಿನ ನಗುವಿಗೇನೂ ದಕ್ಕೆ ಬಂದಿಲ್ಲ.

ಹೀಗೆ ನಿತ್ಯವೂ ನಗುವಿನ ವಿನಿಮಯವಾದರೆ, ನಿಮ್ಮಿಬ್ಬರ ನಡುವೆ ಸ್ನೇಹದ ಸೇತುವೆಯೊಂದು ನಿರ್ಮಾಣವಾಗುತ್ತದೆ. “ಅಪರಿಚಿತ’ ಪದದ ಮೊದಲ ಅಕ್ಷರ “ಅ’ ಅಳಿಸಿಹೋಗಿ, ಬಾಂಧವ್ಯ ಚಿಗುರುತ್ತದೆ. ಇನ್ನು ಈ ನಗು ಅನೇಕ ಸಲ ಆರ್ಟಿಫಿಶಿಯಲ್ಲು ಅಂತನ್ನಿಸಿಕೊಳ್ಳುವುದೂ ಇದೆ. ವಿಮಾನದಲ್ಲಿ ಗಗನಸಖೀ ನಗುತ್ತಾಳೆ ನೋಡಿ, ಹಾಗೆ. ಆಕೆಗೆ ನಗು ಎನ್ನುವುದು ಕರ್ತವ್ಯದ ಒಂದು ಭಾಗ.

ಅವಳ ಒಂದೊಂದು ನಗುವೂ ಒಳಗೆಷ್ಟೇ ನೋವಿರಲಿ, ಸಂಕಟವಿರಲಿ, ಇಷ್ಟವಿರಲಿ- ಇಲ್ಲದಿರಲಿ, ನಗುತ್ತಲೇ ಇರಬೇಕು. ಇದು ಯಾವತ್ತೂ ನೈಸರ್ಗಿಕ ನಗು ಅಂತನ್ನಿಸಿಕೊಳ್ಳುವುದೇ ಇಲ್ಲ. ಈಗ ಎಲೆಕ್ಷನ್‌ ಬೇರೆ ಹತ್ತಿರ ಬರುತ್ತಿದೆ. ನಮ್ಮೆಲ್ಲರ ವೋಟ್‌ ಅನ್ನು ನಿರೀಕ್ಷಿಸುತ್ತಿರುವ ರಾಜಕಾರಣಿ ನಮ್ಮತ್ತ ಕೈಮುಗಿಯುತ್ತಾ ನಗುತ್ತಾನಲ್ಲ, ಆ ನಗು ಕೂಡ ಆರ್ಟಿಫಿಶಿಯಲ್ಲೇ. ಆತನ ನಗುವಿನಲ್ಲಿ ಸ್ವಾರ್ಥ ಮಿಸುಕಾಡುತ್ತಿರುತ್ತದೆ. 

ಸದಾಕಾಲ ಮಂದಹಾಸ ಬೀರುವವರನ್ನು ನೋಡಿದಾಗ ನಾವು ಕೂಡ ಅವರ ಹಾಗೆಯೇ ಇರಬೇಕು ಅಂತ ಅನ್ನಿಸುತ್ತೆ. ಆದ್ರೆ ಹುಟ್ಟುಬುದ್ಧಿ ಬೆಟ್ಟ ಹತ್ತಿದರೂ ಹೋಗದೆಂಬಂತೆ ನಾವು ಮೂತಿ ಸಿಂಡರಿಸಿಕೊಳ್ಳುವುದನ್ನು ಎಂದೂ ನಿಲ್ಲಿಸಲ್ಲ. ಐದು ಸೆಕೆಂಡ್‌ ಸ್ಮೈಲ್‌ ಕೊಡೋದ್ರಿಂದ ಒಂದು ಫೋಟೋ ಚೆನ್ನಾಗಿ ಬರೋದಾದ್ರೆ, ಲೈಫ್ ಪೂರ್ತಿ ನಗ್ತಾ ಇದ್ರೆ ಜೀವನ ಎಷ್ಟು ಸುಂದರವಾಗಿರಬಹುದು ಅಲ್ವಾ? ಇದನ್ನು ಕೇಳಿದಾಗ ನನಗೂ ನಗೋಣ ಅಂತ ಅನ್ಸುತ್ತೆ. ನನ್‌ ಜೊತೆ ನೀವೂ ನಗ್ತೀರಿ ತಾನೆ?

* ಸೋನಿಕಾ ಆರ್‌. ನಾವೇಲ್‌ಕಾರ್‌

ಟಾಪ್ ನ್ಯೂಸ್

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.