30 ರೂಪಾಯ್ ಕೊಡೋಕೆ 60 ಕಿ.ಮೀ. ಬಂದ್ರು!
Team Udayavani, Feb 27, 2018, 6:35 AM IST
ಒಮ್ಮೆ ಯಾವುದೋ ಕೆಲಸಕ್ಕೆ ಚಿತ್ರದುರ್ಗಕ್ಕೆ ಹೋಗಿದ್ದೆ. ಅರವತ್ತು ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಎರಡು ಸಾವಿರದ ನೋಟನ್ನು ಹಿಡಿದುಕೊಂಡು ಎಲ್ಲರ ಬಳಿ ಚಿಲ್ಲರೆಗಾಗಿ ಕೇಳುತ್ತಿದ್ದರು. ಕೊನೆಗೆ ಅಲೆದೂ ಅಲೆದು ಸುಸ್ತಾಗಿ, ಅಲ್ಲಿಯೇ ನಿಂತಿದ್ದ ನನ್ನ ಬಳಿ ಬಂದು, “ಸಾರ್, ಚಿಲ್ರೆ ಇದ್ದರೆ ಕೊಡ್ರಿ. ಬಾಂಡ್ ಪೇಪರಿನವರಿಗೆ ಕೊಡಬೇಕು. ಇನ್ನೂ ಸ್ವಲ್ಪ ಹೊತ್ತಾದರೆ ನೋಟರಿ ಮನೆಗೋಗ್ತಾರೆ’ ಎಂದರು.
ನನ್ನ ಬಳಿಯೂ ಅಷ್ಟು ಚಿಲ್ಲರೆ ಇರಲಿಲ್ಲ. ಅವರ ಪೇಚಾಟ ನೋಡಿ “ನೋಟರಿಗೆ ಎಷ್ಟು ಕೊಡಬೇಕು?’ ಎಂದು ಕೇಳಿದೆ. “ಮೂವತ್ತು ರೂಪಾಯಿ’ ಅಂದರು. “ಅಷ್ಟೇ ತಾನೆ? ಎರಡು ಸಾವಿರಕ್ಕೆ ನನ್ನ ಹತ್ರಾನೂ ಚಿಲ್ರೆ ಇಲ್ಲ. ಆದರೆ, ಮೂವತ್ ರುಪಾಯಿ ಇದೆ. ತಗೊಳ್ಳಿ’ ಎನ್ನುತ್ತಾ ಅವರಿಗೆ ದುಡ್ಡು ಕೊಟ್ಟೆ. ಹಣ ಸಿಕ್ಕಿದ್ದೇ ತಡ ವೇಗವಾಗಿ ಕೋರ್ಟ್ ಕಡೆ ಹೋದವರು, ಕೆಲವೇ ನಿಮಿಷಗಳಲ್ಲಿ ವಾಪಸ್ ಬಂದು, “ನಿಮ್ಮ ಹೆಸರು, ಫೋನ್ ನಂಬರ್ ಕೊಡಿ ಸಾರ್’ ಎಂದರು. ನಾನು, ಇರಲಿ ಪರವಾಗಿಲ್ಲ ಎಂದರೂ ಕೇಳದೆ ಮಾಹಿತಿ ಪಡೆದರು. ಮಾರನೇ ದಿನ ಫೋನ್ ಮಾಡಿ, ನಮ್ಮೂರಿನ ವಿಳಾಸ ಖಾತ್ರಿಪಡಿಸಿಕೊಂಡು ಸುಮಾರು ಅರವತ್ತು ಕಿ.ಮೀ. ದೂರದಿಂದ ಬಂದು, ಮೂವತ್ತು ರೂಪಾಯಿ ಕೊಟ್ಟು ಹೋದರು. ಆ ಕ್ಷಣದಲ್ಲಿ ಅವರಿಗೆ ಏನೆಂದು ಹೇಳಬೇಕೋ ನನಗೆ ತಿಳಿಯಲಿಲ್ಲ, ಅವರ ಪ್ರಾಮಾಣಿಕತೆಗೆ ಮನದಲ್ಲೇ ಕೃತಜ್ಞತೆ ಸಲ್ಲಿಸುವುದನ್ನು ಬಿಟ್ಟು.
– ವೀರೇಶ್ ಮಾಡ್ಲಾಕನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ