ಮಹಾಯೋಗಿ ರಾಮನಿಗೂ ವಿರಹವೇ?


Team Udayavani, Aug 20, 2019, 5:21 AM IST

w-9

ಚೈತ್ರಮಾಸ, ಪುನರ್ವಸು ನಕ್ಷತ್ರ, ನವಮಿ ತಿಥಿಯಲ್ಲಿ ಹುಟ್ಟಿದ ಶ್ರೀರಾಮ ಜೀವಿಸಿದ್ದ ಕಾಲಾವಧಿ ಯಾವುದು? ಅದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಈಗ ಐದು ಸಾವಿರ ವರ್ಷಗಳ ಹಿಂದೆ ದ್ವಾಪರಯುಗ ಮುಗಿದು ಕಲಿಯುಗ ಆರಂಭವಾಗಿದೆ. ದ್ವಾಪರಯುಗದ ಕಾಲಾವಧಿ 8,64,000 ವರ್ಷ. ಈ ಯುಗಕ್ಕೂ ಮುನ್ನ ಇದ್ದದ್ದು ತ್ರೇತಾಯುಗ. ಅದರ ಕಾಲಾವಧಿ 12,96,000 ವರ್ಷ. ಈ ಇಷ್ಟು ವರ್ಷಗಳ ನಡುವಿನ ಯಾವುದೋ ಕಾಲಾವಧಿಯಲ್ಲಿ ರಾಮ ಬದುಕಿದ್ದ ಎಂದು ಮಾತ್ರ ಹೇಳಬಹುದು. ಅಯೋಧ್ಯೆಯಲ್ಲಿ ಸಾವಿರಾರು ವರ್ಷಗಳ ಕಾಲ ರಾಮ ಆಡಳಿತ ನಡೆಸಿದ ಎಂದು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಒಬ್ಬ ವ್ಯಕ್ತಿ ನೂರು ವರ್ಷ ಬದುಕುವುದೇ ಅಸಂಭವವಾಗಿರುವ ಲೆಕ್ಕಾಚಾರವನ್ನಿಟ್ಟುಕೊಂಡು ನೋಡಿದರೆ, ಆತ ಸಾವಿರಾರು ವರ್ಷ ಬದುಕಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಸಹಜ. ಇದು ಸಾಧ್ಯ ಎಂದು ಭಾರತೀಯ ಯೋಗ ಪರಂಪರೆ ಹೇಳುತ್ತದೆ. ಯೋಗ ಪರಂಪರೆಯ ಲೆಕ್ಕಾಚಾರಗಳ ಅನ್ವಯ ಎಷ್ಟು ಸಾವಿರ ವರ್ಷ ಬೇಕಾದರೂ ಶರೀರವನ್ನಿಟ್ಟುಕೊಂಡು ಬಾಳಬಹುದು. ಆದರೆ ಇಲ್ಲಿನ ಸ್ವಾರಸ್ಯವೆಂದರೆ ಅಂತಹ ಅಸಾಮಾನ್ಯ ಶಕ್ತಿಯಿರುವ ಯೋಗಿಗಳಿಗೆ ಶರೀರದ ಹಂಗೇ ಇರುವುದಿಲ್ಲ. ಇನ್ನಷ್ಟು ಖಚಿತವಾಗಿ ಹೇಳುವುದಾದರೆ ತನ್ನನ್ನು ನಿರ್ಬಂಧಕ್ಕೊಳಪಡಿಸಬಲ್ಲ ಶರೀರವನ್ನು ಆತ ಬಹಳಕಾಲ ಉಳಿಸಿಕೊಳ್ಳುವುದಿಲ್ಲ. ಇನ್ನೂ ಖಚಿತವಾಗಿ ಹೇಳುವುದಾದರೆ ಬೇಕಾದಾಗ ಶರೀರಧಾರಣೆ ಮಾಡಬಲ್ಲ, ಬೇಡವಾದಾಗ ತ್ಯಜಿಸಬಲ್ಲ ಶಕ್ತಿಯಿರುವ ಯೋಗಿ ಸಾವಿರಾರು ವರ್ಷಗಳಿಂದ ಬದುಕಿದ್ದಾನೆ ಎಂದು ಹೇಳುವುದೇ ಅರ್ಥಹೀನ. ನಿಸ್ಸಂಶಯವಾಗಿ ಶ್ರೀರಾಮ ಒಬ್ಬ ಮಹಾಯೋಗಿ. ವಸಿಷ್ಠ ಮಹರ್ಷಿಗಳಂತಹ ಕುಲಗುರುಗಳು, ವಿಶ್ವಾಮಿತ್ರರಂತಹ ದೀಕ್ಷಾ ಗುರುಗಳು ಇದ್ದ ಶ್ರೀರಾಮ, ಸೀತೆಯನ್ನು ಕಳೆದುಕೊಂಡಾಗ ವರ್ತಿಸಿದ ರೀತಿ, ಅವಳನ್ನು ಪಡೆಯಲು ಅವನು ಹೋರಾಡಿದ್ದು, ಬದುಕಿನ ಎಲ್ಲ ಸಂದಿಗ್ಧಗಳಲ್ಲಿ ಸ್ವಂತಸುಖವನ್ನು ಗಣಿಸದೇ ತ್ಯಾಗವನ್ನೇ ಆಯ್ಕೆ ಮಾಡಿಕೊಂಡಿದ್ದು, ಆಳಿದರೆ ರಾಮನಂತೆ ಆಳಬೇಕು ಎಂಬ ಮಾದರಿ ಹಾಕಿಕೊಟ್ಟಿದ್ದು, ಆತ ಸತ್ತ ಇಷ್ಟು ಸಾವಿರ ವರ್ಷಗಳ ನಂತರವೂ ಅವನನ್ನು ಭಾರತೀಯರು ದೇವರಸ್ಥಾನದಲ್ಲಿ ಪೂಜಿಸುತ್ತಿರುವುದನ್ನು ನೋಡಿದರೆ ಆತ ಮಹಾಯೋಗಿ ಎನ್ನಲು ಯಾವುದೇ ಅಡ್ಡಿಗಳಿಲ್ಲ.

ರಾಮನನ್ನು ಮಹಾಯೋಗಿ ಎಂದು ಒಪ್ಪಿಕೊಂಡರೂ, ಆತ ಸಾವಿರಾರು ವರ್ಷಗಳ ಕಾಲ ಬದುಕಿದ್ದ ಎಂದು ಒಪ್ಪಿಕೊಳ್ಳುವುದು ಕಷ್ಟ. ಸಾಮಾನ್ಯವಾಗಿ ಉನ್ನತಯೋಗಿಗಳು ಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳುವುದಿಲ್ಲ, ಶರೀರವನ್ನು ಎಷ್ಟೇ ದೀರ್ಘ‌ಕಾಲ ಉಳಿಸಿಕೊಳ್ಳಬಲ್ಲವಾದರೂ ಜನರನೋಟದಿಂದ ಬೇಗನೆ ಮುಕ್ತರಾಗುತ್ತಾರೆ. ಹೇಗೆ ನೋಡಿದರೂ ಆತ ಸಾವಿರಾರು ವರ್ಷಗಳ ಬದುಕಿದ್ದ ಎಂಬುದರ ಅರ್ಥ ಬೇರೇನೋ ಇದೆ ಎನ್ನುವುದು ಖಚಿತ. ಹೌದು ಅರ್ಥ ಬೇರೆಯೇ ಇದೆ. ಭಾರತದಲ್ಲಿ ಗೋತ್ರ ಪರಂಪರೆ, ಗುರುಪರಂಪರೆ, ಪಿತೃಪರಂಪರೆಯಿದೆ. ಉದಾಹರಣೆಗೆ ರಾಮಾಯಣದಲ್ಲಿನ ಪರಶುರಾಮನ ಹೆಸರು ಮಹಾಭಾರತದಲ್ಲೂ ಕಾಣಿಸಿಕೊಳ್ಳುತ್ತದೆ. ಅದು ಹೇಗೆ ಸಾಧ್ಯ ಎಂದರೆ, ಅದು ಪರಶುರಾಮ ಅಲ್ಲ ಆತನ ಸಂತತಿ ಅಥವಾ ಗೋತ್ರದವರು ಎನ್ನಬಹುದು. ಆ ಗೋತ್ರದವರನ್ನು ಅದೇ ಹೆಸರಿನಿಂದ ಗುರ್ತಿಸುವುದು ಇದರ ಹಿಂದಿನ ತರ್ಕ. ಈ ದೃಷ್ಟಿಯಲ್ಲಿ ನೋಡಿದರೆ, ರಾಮನ ನಂತರ ಆಳಿದ ಆತನ ಸಂತತಿಯವರನ್ನೆಲ್ಲ ರಾಮ ಎಂಬ ಮಹಾಪುರುಷನ ಹೆಸರಿನಲ್ಲೇ ಗುರ್ತಿಸಲಾಗುತ್ತಿತ್ತು. ಹಾಗಾಗಿ ಆಳಿದ್ದು ಸಂತತಿಯವರಾದರೂ, ರಾಮನೇ ಹೆಸರೇ ಮುಖ್ಯವಾಯಿತು. ಇದರಲ್ಲಿ ಇನ್ನೊಂದು ಆಯಾಮವೂ ಇದೆ. ರಾಮ ಎಂಬ ಮಹಾತ್ಮ ಹಾಕಿಕೊಟ್ಟ ಆದರ್ಶ ಆಡಳಿತದ ಮಾದರಿಯನ್ನು, ಸಾವಿರಾರು ವರ್ಷಗಳ ಕಾಲ ಮುಂದಿನಪೀಳಿಗೆ ಅನುಸರಿಸಿರುವುದು ಅಸಂಭವವಲ್ಲ. ಹೀಗೆಯೂ ಜನರಪ್ರಜ್ಞೆಯಲ್ಲಿ ರಾಮ ಸಾವಿರಾರುವರ್ಷ ಬದುಕಿದ್ದರಿಂದ ಅದನ್ನು ರಾಮನೇ ಬದುಕಿದ ಎಂಬರ್ಥದಲ್ಲಿ ಹೇಳಿರಬಹುದು. ಇಂತಹ ರಾಮನಿಗೆ ಎದುರಾದ ವಿರಹವೇದನೆ ಹೇಗಿತ್ತು ಗೊತ್ತಾ?

ನಿರೂಪ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.