ಮನದ ತಂತಿಗಳನ್ನೆಲ್ಲಾ ಮೀಟಿನುಡಿಸಿದ್ದಳು “ಸಂಗೀತ’ವನ್ನು…


Team Udayavani, Feb 21, 2017, 3:45 AM IST

JOSH-FEB–2.jpg

ನನ್ನ ಮನದ ಕುತೂಹಲಕ್ಕೆ ಕೊನೆಯೇ ಇಲ್ಲವಾಯಿತು, ಪುಸ್ತಕ ಕೈಯಲ್ಲಿದ್ದರೂ ಓದದಾದೆ, ಕಣ್ಣಲ್ಲಿ ನಿದ್ರೆಯ ಸ್ಪಷ್ಟ ಸೂಚನೆಗಳಿದ್ದರೂ ಮಲಗದಾದೆ. ಹೀಗೇಕೆ ಆಗುತ್ತಿದೆ ಎಂದು ಯೋಚಿಸುವ ಮೊದಲೇ ನಾನು ಅವಳ ಮನದೊಳಗೆ ಮುಳುಗಿದ್ದೆ… ನಾಳೆಯವರೆಗೂ ಕಾಯುವುದು ಅತಿ ಕಷ್ಟ ಅನ್ನಿಸಿತು. ಮಧ್ಯಾಹ್ನ ಊಟ ಮುಗಿಸಿ ಟಿ.ವಿ ಕಡೆಗೆ ಕಣ್ಣು ಹಾಯಿಸುತ್ತಿದ್ದೆ, ಆಗಲೇ ಇನ್ನೊಮ್ಮೆ ಮೊಬೈಲ್‌ ರಿಂಗಣಿಸಿತು…

“ಓಹ್‌.. ನೀನು ಹರೀಶ್‌ ಅಲ್ವಾ..?’ ಒಂದು ದಿನ ಶಿವಮೊಗ್ಗ ಸಿಟಿಯಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕೇಳಿದಳು ಹುಡುಗಿಯೊಬ್ಬಳು. ನನಗವಳ ಪರಿಚಯವಿರಲಿಲ್ಲ. ಎಲ್ಲೋ ನೋಡಿದ ನೆನಪೂ ಇಲ್ಲ. ಸಾಮಾಜಿಕ ಜಾಲತಾಣದಲ್ಲೂ ಆ ಮುಖವನ್ನು ಎಂದಿಗೂ ನೋಡಿರಲಿಕ್ಕಿಲ್ಲ. ಅವಳು ಮತ್ತೆ ಕೇಳಿದಳು: “ನೀನು ಹರೀಶ್‌ ಅಲ್ವ?’ ನಾನು ಹೌದೆಂದೆ…ನನ್ನನ್ನು ಅವಳೇ ಮತ್ತೂಮ್ಮೆ ಕೇಳಿದಳು: “ನನ್ನ ನೆನಪಿದೆಯೇ?’. ನಾನು “ಇಲ್ಲ’ ಎಂದೆ. ಅವಳು “ಈ ಹುಡುಗರೇ ಹೀಗಿರಬಹುದು. ಎಷ್ಟೋ ಹುಡುಗಿಯರನ್ನು ದಿನವೂ ನೋಡುವ ನಿನಗೆ ನನ್ನ ನೆನಪೆಲ್ಲಿರಬೇಕು’ ಎಂದು ಹೂಮಳೆಯಂತಹ ಮುಗುಳುನಗೆ ಚೆಲ್ಲಿದಳು… ನಂತರ ಅವಳೇ ನೆನಪಿಸಿದಳು, ಒಂದು ದಿನ, ಎರಡು ವರ್ಷದ ಹಿಂದೆ ನಾನು ಓದಿದ ಕಾಲೇಜಿನಲ್ಲಿ ಜರುಗಿದ ವಿಜ್ಞಾನ ವಸ್ತುಪ್ರದರ್ಶನ ನೋಡಲು ತಾನು ಬಂದಾಗ ನನ್ನನ್ನು ಮಾತನಾಡಿಸಿದ್ದಳೆಂದು… ಆ ನೆನಪೆಲ್ಲಿರಬೇಕು ನನಗೆ? ಆ ದಿನ ಆ ಪ್ರದರ್ಶನ ನೋಡಲು ಬಂದಿದ್ದವರು ಒಬ್ಬರೇ? ಇಬ್ಬರೇ…!?

ಅಷ್ಟರದ್ದಾಗಲೇ ನನ್ನ ಹೃದಯಮಿಡಿತ ಜೋರಾಗಿತ್ತು. ಜಿಟಿಜಿಟಿ ಮಳೆ ಜಿನುಗುತ್ತಿತ್ತು ಮೈಮೇಲೆ. ಮುಂಗಾರು ಮಳೆಯ ನೈಜ ದರ್ಶನವಾಗುತ್ತಿತ್ತು ಮಲೆನಾಡಿನಲ್ಲಿ. ನಾನು ಪರಿಚಿತ ನಾಗಬೇಕೆಂದುಕೊಂಡೆ- “ನಿಮ್ಮ ಹೆಸರು?’ ಎಂದು ಮುಗಟಛಿವಾಗಿ ಕೇಳಿದೆ, ಅವಳೂ ನಿಸ್ಸಂಕೋಚವಾಗಿ ಹೇಳಿದಳು. ಬಳುಕೋ ಬಳ್ಳಿಯಂತಹ ಮೈಮಾಟ, ಪಕ್ಕಾ ಗ್ರಾಮೀಣ ಉಡುಪು- ಶೈಲಿ, ನಖಶಿಖಾಂತದವರೆಗೂ ಬೆಳೆದಿದ್ದ ಕೂದಲು, ಆ ಮುಖದ ತುಂಬೆಲ್ಲಾ ಹರಡಿದ್ದ ಮುಗುಳುನಗು, ಮೂಗುತಿ ಸುಂದರಿ, ಐದೂವರೆ ಅಡಿ ಎತ್ತರದ ನೀಳಕಾಯ, ಬೊಟ್ಟಿಟ್ಟು ಕುಂಕುಮವಿಟ್ಟಿದ್ದ ಹಣೆ, ವಾವ್‌, ನಾನು ನನ್ನ ಮನದಲ್ಲಿ ಹೇಗೆ ಬಯಸಿದ್ದೆನೋ, ಹಾಗೆ ಇರುವ ಹುಡುಗಿ ಪ್ರತ್ಯಕ್ಷವಾಗಿದ್ದಳು ಕಣ್ಣ ಮುಂದೆ, ನಂಬದಾದೆ ನನ್ನ ಕಣ್ಣುಗಳನ್ನೇ!!!

ಅವಳ ಹೆಸರನ್ನಾಗಲೇ ಹೇಳಿದ್ದಳು. ಸಂಗೀತಾ! ಅದಾಗಲೇ ನನ್ನ ಮನಸ್ಸಿನ ತಂತಿಗಳನ್ನೆಲ್ಲಾ ಮೀಟಿ ನುಡಿಸಿದ್ದಳು “ಸಂಗೀತ’ವನ್ನು, ಹೀಗೆ ಪರಿಚಯವಾಯಿತು…

ಪಕ್ಕದಲ್ಲೇ ಇದ್ದ ಕೆಫೆಯಲ್ಲಿ ಮುಂಗಾರು ಮಳೆಯ ಆ ಸಮಯ, ಹಿತವಾದ ತಂಗಾಳಿ, ಚಳಿಗಳ ನಡುವೆ ಕಾμ ಕುಡಿಯುತ್ತಾ ಮಾತಿನಲ್ಲಿ ಮಗ್ನಳಾಗಿದ್ದಳು.. ಮಾತು ಸ್ವಲ್ಪ ಹೆಚ್ಚೇ.. ಮಳೆನಿಂತರೂ ಮಾತುಗಳು ನಿಲ್ಲುವ ಸೂಚನೆಯಿಲ್ಲ, ಪೋನ್‌ ನಂಬರ್‌ ಹಸ್ತಾಂತರವಾಯಿತು, ವಾಟ್ಸಾಪ್‌ ಸಂದೇಶಗಳ ವಿನಿಮಯವೂ ಆಯಿತು. ಇದ್ದಕ್ಕಿದ್ದಂತೆ ಒಂದು ದಿನ ರಾತ್ರಿ 10.30ಕ್ಕೆ     ಮೊಬೈಲ್‌ ರಿಂಗಣಿಸಿತು.. sangeeeeeeeeetha ಎಂದು ಬರೆದಿದ್ದ ನಂಬರ್‌ ಕಣ್ಣಿಗೆ ಬಿತ್ತು!! ರಿಸೀವ್‌ ಮಾಡಿದೆ, ಉಭಯ ಕುಶಲೋಪರಿಯ ಮಾತುಗಳು ಕೇಳಿಬಂದವು.

“ಏನೋ ಹೇಳಬೇಕಿತ್ತು…’

“ಏನು?’

“ಏನಿಲ್ಲ, ನಾಳೆ ಹೇಳುವೆ..!’ ಎಂದು ಮಾತು ಮುಗಿಸಿದ್ದಳು.

ನನ್ನ ಮನದ ಕುತೂಹಲಕ್ಕೆ ಕೊನೆಯೇ ಇಲ್ಲವಾಯಿತು, ಪುಸ್ತಕ ಕೈಯಲ್ಲಿದ್ದರೂ ಓದದಾದೆ, ಕಣ್ಣಲ್ಲಿ ನಿದ್ರೆಯ ಸೂಚನೆಗಳಿದ್ದರೂ ಮಲಗದಾದೆ. ಹೀಗೇಕೆ ಆಗುತ್ತಿದೆ ಎಂದು ಯೋಚಿಸುವ ಮೊದಲೇ ನಾನು ಅವಳ ಮನದೊಳಗೆ ಮುಳುಗಿದ್ದೆ..ನಾಳೆಯವರೆಗೂ ಕಾಯುವುದು ಅತಿ ಕಷ್ಟ, ಮಧ್ಯಾಹ್ನ ಊಟ ಮುಗಿಸಿ ಟಿ.ವಿ ಕಡೆಗೆ ಕಣ್ಣು ಹಾಯಿಸುತ್ತಿದ್ದೆ,ಇನ್ನೊಮ್ಮೆ ಮೊಬೈಲ್‌  ರಿಂಗಣಿಸಿತು..!!! ಎಂದೂ ಕಾಣದ ಹರುಷ ಇಂದು ನಾನು ಕಂಡೆನಲ್ಲ ಎಂಬ ಸವಿನಾದದ ರಿಂಗ್‌ ಟೋನ್‌ ಕೇಳಿಸಿತು.. ನೋಡಿದೆ,sangeeeeeetha, ರಿಸೀವ್‌ ಮಾಡಿದೆ!

“ಹೇಗಿದಿಯಾ?’ ಎಂದಳು,

“ಚೆನ್ನಾಗಿದ್ದೀನಿ.. ನಿನ್ನೆ ಏನೋ ಹೇಳಬೇಕೆಂದಿದ್ದೆ

ನೀರವ ಮೌನ ಆ ಕಡೆ.

“ನನ್ನ ಜೀವನದ ಕೊನೆಯವರೆಗೂ ಜೊತೆಯಾಗಿರು’

“ಓಕೆ ಆಯಿತು’ ಎಂದೆ. ಆಗಲ್ಲ ಎಂದು ಹೇಳಿ ಯಾರ ಮನಸ್ಸನ್ನೂ ನೋಯಿಸುವ ಮನಸ್ಥಿತಿಯವನಲ್ಲ ನಾನು. ಆದರೆ ಆ ಬೆಡಗಿ ಯಾಕೆ ಹೀಗೆ ಹೇಳಿದಳು? ಎಂದು ಯೋಚಿಸಿದೆ, ಯೋಚಿಸುತ್ತಾ ಕುಳಿತೆ… ವಿಭಿನ್ನ ಪ್ರಶ್ನೆಗಳೇ ಎದುರಾಗತೊಡಗಿದವು… ಇದೆಲ್ಲದರ ನಡುವೆ ಹತ್ತುದಿನಗಳ ಕಾಲ ಅವಳ ಕಡೆಯಿಂದ ಸಂದೇಶಗಳೇ ಇಲ್ಲ. ಎಂದೂ ಕಾಣದ ಹರುಷ ಅಂದು ನಾನು ಕಾಣಲೇ ಇಲ್ಲ’. ಹನ್ನೊಂದನೆಯ ದಿನ ಕಂಡೆ ಆ ಹರುಷವ… ಅವಳ ಕಾಲ್‌ ಬಂದಿತ್ತು. ಮಾತುಗಳು ಬದಲಾಗಿದ್ದವು, ವಿನೋದದಿಂದ ಮಾತನಾಡಿದೆ. “ಈ ಜನ್ಮದಲ್ಲಿ ನಿನಗೆ ಬುದ್ದಿ ಬರಲ್ಲ’ ಎನ್ನುವ ಅವಳ ಮಾಮೂಲಿ ಡಯಲಾಗ್‌ ಹೇಳಿದಳು. ಅವಳ ಆ ಮುಗ್ಧತೆಯೇ ನಾನು ಅವಳಿಗೆ ಮನಸೋಲಲು ಕಾರಣವಾಗಿತ್ತು…

ಹೀಗೇ ಮುಂದುವರೆದಿತ್ತು ಟೆಲಿಫೋನ್‌ ಗೆಳತಿಯ ಮಾತು, ಮುಗುಳು ನಗು, ಮನದ ಮಾತುಗಳು ಬರಲಾರಂಭಿಸಿದ್ದವು. ಆಗಿದ್ದ ಧಾಟಿ, ನಿಸ್ಸಂಕೋಚದ ಮಾತುಗಳು ಇಂದಿಗೂ ಮುಂದುವರೆದಿವೆ. ಪ್ರೀತಿಯ ಮಾತುಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ. ನಾನೇ ಏಕೋ ಮಾತನಾಡಲು ತಡವರಿಸುತ್ತೇನೆ, ಮನಸ್ಸಿನ ಹಠವೋ? ಗುರಿಯಡೆಗಿನ ಛಲವೋ? ಗೊತ್ತಿಲ್ಲ!! ಒಟ್ಟಿನಲ್ಲಿ ಎಂದಿಗೂ ಅವಳಷ್ಟು ನಾನು ಮಾತನಾಡಲಾರೆ. ನನಗೇನೋ ಅವಳು ಬದಲಾಗಿದ್ದಾಳೆ ಅನಿಸುತ್ತದೆ. ಆದರೆ ಬದಲಾಗಿದ್ದು ಅವಳ್ಳೋ? ನಾನೋ?
ತಿಳಿಯದು..

ಬಹುಷಃ ನಾನೇ ಇರಬೇಕು… !!!

– ಹರೀಶ್‌, ಸಾಗರ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.