ಕಂದುತಲೆ- ಗುಟುರ


Team Udayavani, Jan 11, 2019, 11:30 PM IST

2556.jpg

ಈ ಹಕ್ಕಿ ಕುಟುರ್‌, ಕುಟುರ್‌ ಎಂದು ಏಕ ರೀತಿಯಲ್ಲಿ ಕೂಗುತ್ತದೆ. ಆ ಕಾರಣದಿಂದಲೇ ಇದಕ್ಕೆ ಕುಟರ್‌ ಹಕ್ಕಿ ಅಥವಾ ಗುಟರ್‌ ಹಕ್ಕಿ ಎಂದು ಕರೆಯಲಾಗುತ್ತದೆ. ಪಪ್ಪಾಯಿ, ಬಾಳೆ, ಮಾವಿನ ತೋಪುಗಳಲ್ಲಿ ಹೆಚ್ಚಾಗಿ ವಾಸಿಸುವ ಈ ಹಕ್ಕಿ, ಎರಡು ಅಥವಾ ನಾಲ್ಕು ಮೊಟ್ಟೆ ಇಡುತ್ತದೆ. 

ಇದಕ್ಕೆ ಮೈನಾ ಹ‌ಕ್ಕಿಯಷ್ಟು ದೊಡ್ಡದಾದ ದುಂಡಗಿನ ದೇಹವಿದೆ. ಇದು ಬಲವಾದ ದಪ್ಪ ಚುಂಚು ಹೊಂದಿರುವ ಹಕ್ಕಿ. ಕುರ್‌-ರ್‌-ರ್‌-ಕುಟುರ್‌, ಕುಟುರ್‌, ಕುಟರುರ್‌ಎಂದು ಏಕರೀತಿಯಲ್ಲಿ ಕೂಗುತ್ತಾ ಒಂದು ಇನ್ನೊಂದರೊಡನೆ ಸೇರುವುದರಿಂದ ಇದಕ್ಕೆ ಗುಟುರ್‌ ಇಲ್ಲವೇ ಕುಟೂರ್‌ ಹಕ್ಕಿ ಎಂಬ ಹೆಸರು ಬಂದಿದೆ. 

ಕಪ್ಪುಗುಟುರ, ಕೆಂಪುತಲೆ ಗುಟುರ, ಜುಟ್ಟಿನ ಗುಟುರ, ಬಿಳಿ ಕೆನ್ನೆಗುಟುರ, ತಾಮ್ರದ ಮೇಲೆ ಕುಟ್ಟಿದಂತೆ ಕೂಗುವ ಗುಟರ ಹಕ್ಕಿ… ಹೀಗೆ ಇದರಲ್ಲಿ ಭಿನ್ನ ಪ್ರಬೇಧಗಳಿವೆ. ಈ ಎಲ್ಲಾ ಪ್ರಬೇಧದ ಹಕ್ಕಿ ದುಂಡಗಾಗಿ ಉರುಟಾಗಿರುವುದು ವಿಶೇಷ. ಎಲ್ಲಾ ಹಕ್ಕಿಗಳಿಗೂ ಬಲವಾದ ಚುಂಚು, ಚುಂಚಿನ ಬುಡದಲ್ಲಿ  ಮೀಸೆಯಂಥ ಉದ್ದಕೂದಲು ಇರುತ್ತದೆ. ತಲೆ, ಕುತ್ತಿಗೆ, ಬೆನ್ನಿನ ಮೇಲ್ಭಾಗ, ಎದೆ ಹಳದಿ ಮಿಶ್ರಿತ ಕಂದು ಬಣ್ಣ ಇದೆ. ಬಾಲ ರೆಕ್ಕೆಯ ಕೆಳಭಾಗ ಅಂದರೆ, ರೆಕ್ಕೆ, ಪುಕ್ಕದ ಅಡಿಯಲ್ಲಿ ತಿಳಿ ನೀಲಿ ಬಣ್ಣದಿಂದ ಕೂಡಿರುತ್ತದೆ. ಕಣ್ಣಿನ ಸುತ್ತಲೂ ಚುಂಚಿನ ಬುಡದವರೆಗೆ ತಿಳಿ ಕಿತ್ತಳೆ ಬಣ್ಣ ಇದೆ. 

ಕಾಲು ಹಳದಿಬಣ್ಣ ಇದ್ದು, ಕಾಲಿನ ಬೆರಳುಗಳಲ್ಲಿ ಕಂದು ಬಣ್ಣದ ಉಗುರು ಇರುತ್ತದೆ. ಇದರ ಪುಟ್ಟ ಬಾಲ ಮರ ಏರುವಾಗ, ಮರದ ಟೊಂಗೆ ಕೊರೆಯುವಾಗ ಆಧಾರವಾಗಿ ನಿಲ್ಲಲು ಮೂರನೆ ಕಾಲಿನಂತೆ ಕಾರ್ಯ ನಿರ್ವಹಿಸುವುದು.  ಈ ಹಕ್ಕಿ 27 ಸೆಂ.ಮೀ. ನಷ್ಟು ದೊಡ್ಡದಾಗಿದೆ. ದೊಡ್ಡ ಚುಂಚು, ಚಿಕ್ಕಕುತ್ತಿಗೆ, ಚಿಕ್ಕ ಬಾಲ ಇದರ ಲಕ್ಷಣ. ಭಾರತದ ಹಕ್ಕಿ ಇದು.  ಶ್ರೀಲಂಕಾ, ಬಾಂಗ್ಲಾದೇಶ,  ಪಶ್ಚಿಮ ಘಟ್ಟದ ಭಾಗದಲ್ಲಿ
ರಾಜಸ್ಥಾನದ ಭರತಪುರಗಳಲ್ಲೂ ಕಂಡಿದ್ದು ದಾಖಲಾಗಿದೆ.  ಆಲ, ಅಶ್ವತ್ಥ, ಬಸರಿ ಮರಗಳಲ್ಲಿ ಹಣ್ಣು ಬಿಟ್ಟಾಗ ಏಕಾಂಗಿಯಾಗಿ ಇಲ್ಲವೇ 10 ರಿಂದ 20ರ ಗುಂಪಿನಲ್ಲೂ ಈ ಪಕ್ಷಿ ಕಾಣುವುದು. ಹಸಿರೆಲೆಯ ದೊಡ್ಡ ಮರಗಳಿರುವ ಕಾಡು. ಪಕ್ಕದ ತೋಟಪಟ್ಟಿ, ನಗರದ ಸುತ್ತಲಿನ ಉದ್ಯಾನವನಗಳು ಇವುಗಳಿಗೆ ಪ್ರಿಯ. ಅತ್ತಿ, ವಾಟೆ, ಹಾಲವಾಣ, ಮಾವಿನ ಇತ್ಯಾದಿ ಮರಗಳಲ್ಲಿ ಒಟ್ಟೆಕೊರೆದು ಗೂಡು ನಿರ್ಮಿಸಿ, ಅಲ್ಲಿ ಮೊಟ್ಟೆ ಇಟ್ಟು ಮರಿಮಾಡುತ್ತವೆ. ಬಳಸಿದ ಮರದ ಒಟ್ಟೆಯನ್ನೆ ಪುನಃ ಮೊಟ್ಟೆ ಇಡಲು ಬಳಸುವುದೂ ಇದೆ. ಪಪ್ಪಾಯಿ, ಬಾಳೆ, ಮಾವು ತೋಪುಗಳಲ್ಲಿ ಇವು ವಾಸಿಸುತ್ತವೆ. ಅರ್ಧತಿಂದ ಹಣ್ಣಿಗೆ ಬರುವಕೀಟ ಸಹ ಇದರ ಆಹಾರ. ಇಂತಹ ಕೊರೆದ ಮರದ ಒಟ್ಟೆಗಳಲ್ಲಿ 2-4 ಮೊಟ್ಟೆ ಇಡುತ್ತದೆ. ಸಾಮಾನ್ಯವಾಗಿ 3 ಮೊಟ್ಟೆ ಇಡುವುದೇ ಹೆಚ್ಚು. ಇದು ಮರದ ಮೂಲ ಟೊಂಗೆಯಲ್ಲಿ 2-15 ಮೀ. 

ಎತ್ತರದಲ್ಲಿ ಕೊರೆದು ತನ್ನಗೂಡನ್ನು ಮಾಡುತ್ತದೆ. ಫೆಬ್ರವರಿ-ಜೂನ್‌ಇದು ಮರಿಮಾಡುವ ಸಮಯ. ಗಂಡು, ಹೆಣ್ಣು ಒಂದೇ ರೀತಿ ಇರುತ್ತವೆ. ಗಂಡು ಹೆಣ್ಣು ಎರಡೂ ಸೇರಿ ಮರಿಗಳ ಪಾಲನೆ-ಪೋಷಣೆ ಮಾಡುವುದು. ಇದರಲ್ಲೇ ಆಫ್ರಿಕಾದ‌ಲ್ಲಿ ಜುಟ್ಟುಗುಟುರ, ಕೆಂಪುತಲೆ ಗುಟುರ, ಕಪ್ಪುಗುಟುರ  ಎಂಬ ಪ್ರಬೇಧವೂ ಇದೆ. ಗುಟುರದ ವಿವಿಧ ತಳಿಗಳ ಕೂಗಿನಲ್ಲಿ ಸ್ವಲ್ಪ ವ್ಯತ್ಯಾಸಇದೆ. ಇಂತಹ ಸೂಕ್ಷ್ಮ ವ್ಯತ್ಯಾಸ ಗ್ರಹಿಸುವ ಕೌಶಲ ಹುಟ್ಟಿನಿಂದಲೇ ಬರುವುದೋ ಅಥವಾ ತಂದೆ ತಾಯಿಯ ಕೂಗನ್ನು ಗಮನಿಸಿ ಇತರ ಪ್ರಬೇಧದ ಗುಟುರದ ಕೂಗನ್ನು, ವ್ಯತ್ಯಾಸವನ್ನು ತಿಳಿಯಲು ಮರಿಗಳು ಹೇಗೆ ಕಲಿಯುತ್ತವೆಯೋ ಎಂಬುದು ತಿಳಿದಿಲ್ಲ. ಈ ಸಂಬಂಧವಾಗಿ ಹೆಚ್ಚಿನ ಅಧ್ಯಯನಕ್ಕೆಯೋಗ್ಯ ವಿಷಯ. 

ಪಿ.ವಿ.ಭಟ್‌ ಮುರೂರು 

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.