ಫೆಡರರ್‌ಗೆ ಬೆವರಿಳಿಸಿದ ಭಾರತ ಸುಮಿತ್‌!

ವಿಶ್ವ ದಿಗ್ಗಜನ ನಡುಗಿಸಿದ ಮೊದಲ ಭಾರತೀಯ ಟೆನಿಸ್‌ ಆಟಗಾರ

Team Udayavani, Aug 31, 2019, 5:02 AM IST

Sumit-Nagal

ಭಾರತ ಟೆನಿಸ್‌ ಲೋಕದ ಇತಿಹಾಸದಲ್ಲಿ ನಾವು ಮೂರು ಖ್ಯಾತನಾಮರ ಹೆಸರನ್ನು ನೋಡಿದ್ದೇವೆ. ಲಿಯಾಂಡರ್‌ ಪೇಸ್‌, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ ಈ ದಿಗ್ಗಜರು.

ಈ ಮೂವರು ಸವ್ಯಸಾಚಿ ತಾರೆಯರಿಂದ ಭಾರತ ಟೆನಿಸ್‌ ಹೆಚ್ಚು ಶ್ರೀಮಂತಗೊಂಡಿದೆ. ಈ ದಿಗ್ಗಜರನ್ನು ಹೊರತುಪಡಿಸಿ ವಿಶ್ವ ಶ್ರೇಯಾಂಕಿತ ಆಟಗಾರರನ್ನೇ ನಡುಗಿಸಬಲ್ಲ ಭಾರತ ಮತ್ತೂರ್ವ ಸಿಂಗಲ್ಸ್‌ ತಾರೆ ಉದಯಿಸಿರಲಿಲ್ಲ. ಬಹುತೇಕ ಆ ನೋವಿನ ದಿನಗಳು ಕಡಿಮೆಯಾಗುವ ಸಾಧ್ಯತೆ ಗೊಚರಿಸುತ್ತಿದೆ. ಹೌದು, ಸುಮಿತ್‌ ನಗಾಲ್‌ ಎಂಬ ಅದ್ಭುತ ಪ್ರತಿಭೆ ದೇಶಕ್ಕೆ ಈಗ ಪರಿಚಯವಾಗಿದೆ. ಕಿರಿಯ ಆಟಗಾರ 20 ಗ್ರ್ಯಾನ್‌ಸ್ಲಾಮ್‌ ವಿಜೇತ ಸ್ವಿಜರ್ಲೆಂಡ್‌ನ‌ ರೋಜರ್‌ ಫೆಡರರ್‌ಗೆà ಬಿಸಿ ಮುಟ್ಟಿಸಿದ್ದಾರೆ. ವಿಶ್ವವ್ಯಾಪ್ತಿ ಸುದ್ದಿಯಾಗಿದ್ದಾರೆ. ಫೆಡರರ್‌ ವಿರುದ್ಧ 1 ಸೆಟ್‌ ಗೆದ್ದಿದ್ದಲ್ಲದೆ ಬಲಿಷ್ಠ ಆಟಗಾರನ ಬೆವರಿಳಿಸಿದ ನಗಾಲ್‌ ಆಟಕ್ಕೆ ಎಲ್ಲ ಕಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಿರಿಯ ಆಟಗಾರನ ಎದುರು ಕಷ್ಟಪಟ್ಟು ಗೆದ್ದ ಫೆಡರರ್‌ ಕೂಡ ಅಚ್ಚರಿಗೆ ಒಳಗಾಗಿದ್ದಾರೆ. ನಗಾಲ್‌ ಭವಿಷ್ಯದಲ್ಲಿ ದೊಡ್ಡ ಟೆನಿಸಿಗ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊದಲ ಸಿಂಗಲ್ಸ್‌ನಲ್ಲೇ ಗಮನ ಸೆಳೆದ:
ಸುಮಿತ್‌ ನಗಾಲ್‌ ಇದೇ ಮೊದಲ ಬಾರಿ ಪುರುಷರ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದಲ್ಲೇ ದೈತ್ಯ ಪ್ರತಿಭೆ ವಿರುದ್ಧ ಸೆಣಸಾಟಕ್ಕೆ ಇಳಿದಿದ್ದರು. ತನ್ನ ಎದುರು ಆಡುತ್ತಿರುವುದು 20 ಗ್ರ್ಯಾನ್‌ಸ್ಲಾಮ್‌ ವಿಜೇತ ಎಂದು ತಿಳಿದಿದ್ದರೂ ಸುಮಿತ್‌ ಕಿಂಚಿತ್ತೂ ಧೈರ್ಯ ಕಳೆದುಕೊಳ್ಳಲಿಲ್ಲ. ಸೋಲಿನ ನಡುವೆಯೂ ಅದ್ಭುತ ಫ‌ಲಿತಾಂಶ ಪಡೆದರು.

ಫೆಡರರ್‌ ಅಭಿಮಾನಿಗಳಿಗೆ ಶಾಕ್‌:
ಸುಮಿತ್‌ ನಗಾಲ್‌ ಮುಖ್ಯ ಸುತ್ತಿಗೆ ಪ್ರವೇಶ ಪಡೆದಾಗ ಈತ ಫೆಡರರ್‌ ವಿರುದ್ಧ ಸುಲಭವಾಗಿ ಸೋಲು ಅನುಭವಿಸುತ್ತಾನೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಆದರೆ 22 ವರ್ಷದ ನವದೆಹಲಿ ಆಟಗಾರ ನಗಾಲ್‌ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. 190ನೇ ಶ್ರೇಯಾಂಕಿತ ಭಾರತೀಯ ಆಟಗಾರ ವಿಶ್ವ 3ನೇ ಶ್ರೇಯಾಂಕಿತ ಆಟಗಾರರನ್ನು ಮೊದಲ ಸೆಟ್‌ನಲ್ಲಿ 6-4 ಅಂತರದಿಂದ ಸೋಲಿಸಿ 1-0 ಅಚ್ಚರಿಯ ಮುನ್ನಡೆ ಪಡೆದಿದ್ದರು. ಬಹುಶಃ ಎಳೆಯ ಹುಡುಗನಿಂದ ಇಂತಹದೊಂದು ಪ್ರಬಲ ಸ್ಪರ್ಧೆಯನ್ನು 38 ವರ್ಷದ ರೋಜರ್‌ ಫೆಡರರ್‌ ನಿರೀಕ್ಷಿಸಿರಲಿಲ್ಲ. ಒಟ್ಟಾರೆ ಹೋರಾಟ 2 ಗಂಟೆ 50 ನಿಮಿಷ ಸಾಗಿತು. ಸಾಕಷ್ಟು ಪರದಾಟ ನಡೆಸಿದ ನಂತರ ಫೆಡರರ್‌ ಮುಂದಿನ ಸೆಟ್‌ ಗೆದ್ದು ಸಮಾಧಾನಕ್ಕೆ ಒಳಗಾದರು. ಆದರೆ ಆ ಗೆಲುವಿಗಾಗಿ ಹುಡುಗನ ಎದುರು ಬರೋಬ್ಬರಿ ಮ್ಯಾರಾಥಾನ್‌ ಸೆಣಸಾಟ ನಡೆಸಬೇಕಾಯಿತು.
ಭಾರತದ ಟೆನಿಸ್‌ ಮಟ್ಟಿಗೆ ಇದು ಅತಿ ಮಹತ್ವದ ಸಾಧನೆ. ಇಲ್ಲಿಯವರೆಗೆ ಒಟ್ಟಾರೆ ನಾಲ್ಕು ಗ್ರ್ಯಾನ್‌ಸ್ಲಾéಮ್‌ಗಳಲ್ಲಿ ಆಡಿರುವ ಆಟಗಾರರ ಸಂಖ್ಯೆಯೇ 5. ಅದರಲ್ಲಿ ಒಂದು ಸೆಟ್ಟನ್ನು ಗೆಲ್ಲಲು ನಾಲ್ವರಿಗೆ ಸಾಧ್ಯವಾಗಿದೆ. ಅದರಲ್ಲಿ ನಗಾಲ್‌ ಒಬ್ಬರು. ಇದರಲ್ಲಿ ಗಮನಾರ್ಹ ಸಂಗತಿಯೆಂದರೆ, ಇಂತಹ ಸಾಧನೆಯನ್ನು ನಗಾಲ್‌, ರೋಜರ್‌ ಫೆಡರರ್‌ ವಿರುದ್ಧ ಮಾಡಿದ್ದಾರೆನ್ನುವುದು.

ಫೇಸ್‌ ಬುಕ್‌ ಗೆಳೆಯನ ಜತೆ ವಿಂಬಲ್ಡನ್‌ ಗೆದ್ದಿದ್ದ ನಗಾಲ್‌
2015ರಲ್ಲಿ ಟೆನಿಸ್‌ ವಿಶ್ವಕಪ್‌ ಎಂದೇ ಖ್ಯಾತಿ ಪಡೆದಿದ್ದ ವಿಂಬಲ್ಡನ್‌ ಪಂದ್ಯಾವಳಿಯ ಡಬಲ್ಸ್‌ನಲ್ಲಿ ನಗಾಲ್‌ ಗೆದ್ದು ಐತಿಹಾಸಿನ ಸಾಧನೆ ಮಾಡಿದ್ದರು. ಆಗ ಅವರಿಗೆ 17 ವರ್ಷ ಆಗಿತ್ತು. ವಿಯೆಟ್ನಾಂ ಯುವ ಪ್ರತಿಭೆ ನಾಮ್‌ ಹೊವಾಂಗ್‌ ಲೀ ಜತೆಗೂಡಿ ಚಾಂಪಿಯನ್‌ ಆಗಿದ್ದರು. ವಿಶೇಷವೆಂದರೆ ಈ ಇಬ್ಬರಿಗೂ ಫೇಸ್‌ಬುಕ್‌ನಲ್ಲಿ ಪರಸ್ಪರ ಪರಿಚಯವಾಗಿತ್ತು. ಕೊನೆಗೂ ಕಿರಿಯರ ವಿಂಬಲ್ಡನ್‌ನಲ್ಲಿ ಒಟ್ಟಾಗಿ ಡಬಲ್ಸ್‌ ಆಡುವ ನಿರ್ಧಾರಕ್ಕೆ ಬಂದಿದ್ದರು. ನೋಡನೋಡುತ್ತಿದ್ದಂತೆ ಇಬ್ಬರೂ ದೈತ್ಯ ಆಟಗಾರರನ್ನೆಲ್ಲ ಸೋಲಿಸಿ ಫೈನಲ್‌ ಹಂತಕ್ಕೆ ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನಲ್ಲಿ ಅಮೆರಿಕದ ರಿಲ್ಲಿ ಒಪೆಲ್ಯಾ, ಜಪಾನ್‌ನ ಅಕೀರಾ ಸ್ಯಾಂಟಲೀನ್‌ ಜೋಡಿಯನ್ನು 7-6, 6-4 ಅಂತರದಿಂದ ಸೋಲಿಸಿದರು. ಈ ಹಿಂದೆ ಭಾರತದ ಖ್ಯಾತ ಟೆನಿಸಿಗರಾದ ರಾಮನಾಥನ್‌ ರಾಮಕೃಷ್ಣನ್‌. ಲಿಯಾಂಡರ್‌ ಪೇಸ್‌, ಸಾನಿಯಾ ಮಿರ್ಜಾ, ಯೂಕಿ ಭಾಂಬ್ರಿ ಅವರು ವಿಂಬಲ್ಡನ್‌ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಇತರೆ ಸಾಧಕರಾಗಿದ್ದಾರೆ.

ನಗಾಲ್‌ಗೆ ಅದ್ಭುತ ಭವಿಷ್ಯವಿದೆ: ಫೆಡರರ್‌
ಪಂದ್ಯದಲ್ಲಿ ಸೋತರೂ ದಂತಕಥೆ, ರೋಜರ್‌ ಫೆಡರರ್‌ರಿಂದ ನಗಾಲ್‌ ಹೊಗಳಿಸಿಕೊಂಡಿದ್ದಾರೆ. ನಗಾಲ್‌ಗೆ ಏನು ಮಾಡಬೇಕೆಂದು ಗೊತ್ತಿದೆ. ಆದ್ದರಿಂದ ಅವರಿಗೆ ಅದ್ಭುತ ಭವಿಷ್ಯವಿದೆ. ಹೌದು, ಇದೇನು ಭಾರೀ ಅಚ್ಚರಿ ಹುಟ್ಟಿಸಿದ ಪಂದ್ಯವಲ್ಲ. ಆದರೆ ಆಟದಲ್ಲಿ ಬಹಳ ಸ್ಥಿರತೆಯಿತ್ತು. ನಗಾಲ್‌ ತುಂಬಾ ಅದ್ಭುತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು. ಅವರ ವಿಶೇಷವೇನೆಂದರೆ ಸಂದರ್ಭವನ್ನು ನಿಭಾಯಿಸುವ ಕಲೆ. ಶ್ರೇಷ್ಠ ಆಟವನ್ನು ಆಡುವುದು ಸುಲಭವೇನಲ್ಲ. ಅಂತಹ ಸವಾಲನ್ನು ನಗಾಲ್‌ ಸರಿಯಾಗಿ ಬಳಸಿಕೊಂಡಿದ್ದಾರೆ ಎಂದು ಫೆಡರರ್‌ ಮನಸ್ಸು ಬಿಚ್ಚಿ ಹೇಳಿದ್ದಾರೆ. ಪಂದ್ಯದ ವೇಳೆ ತಾನು ಸ್ವಲ್ಪ ನಿಧಾನವಾಗಿದ್ದೆ, ಅನಂತರ ಚುರುಕಾದೆ ಎಂದು ಫೆಡರರ್‌ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.