ರವಿಯೇ, ನಿನಗೆ ಪ್ರಣಾಮ


Team Udayavani, Feb 1, 2020, 6:05 AM IST

raviye

ಒರಿಸ್ಸಾದ ಕೊನಾರ್ಕ ಸೂರ್ಯ ದೇಗುಲ ವಿಶ್ವಖ್ಯಾತಿ. ಜಗತ್ತಿನ ಏಕೈಕ ಸೂರ್ಯ ದೇಗುಲ ಅಂತಲೇ ಅದನ್ನು ಕರೆಯಲಾಗುತ್ತದೆ. ನಿಮಗೆ ಗೊತ್ತೇ? ಸೂರ್ಯನಿಗೆ ಇನ್ನೊಂದು ದೇಗುಲವಿದೆ. ಅದಿರುವುದು ನಮ್ಮ ಕರುನಾಡಿನ, ಕಾವೇರಿ ನದಿಯ ತಟದಲ್ಲಿ…

ಸೂರ್ಯದೇವನ ಆ ಕತೆ ಬಲು ಜನಪ್ರಿಯ. ಸೂರ್ಯನು ಛಾಯಾದೇವಿಯನ್ನು ಮದುವೆಯಾಗಿ, ಯಮ ಮತ್ತು ಶನಿಯ ಜನನಕ್ಕೆ ಕಾರಣನಾಗುತ್ತಾನೆ. ಶುಕ್ರಾಚಾರ್ಯರ ಪುತ್ರಿ ಸಂಜ್ಞಾದೇವಿಯ ಜೊತೆ 2ನೇ ಮದುವೆಯಾಗುತ್ತಾನೆ. ಇವರಿಗೆ ವೈವಸುತ ಎಂಬ ಮಗ, ಯಮುನೆ ಎಂಬ ಪುತ್ರಿ ಜನಿಸುತ್ತಾರೆ. ಯಮುನೆ ಪ್ರಾಪ್ತ ವಯಸ್ಸಿಗೆ ಬಂದಾಗ, ಜಗದೇಕ ಸುಂದರಿಯಾಗಿ ಖ್ಯಾತಿ ಪಡೆಯುತ್ತಾಳೆ. ಈಕೆಯ ಸೌಂದರ್ಯಕ್ಕೆ ಸೂರ್ಯ ದೇವನೇ ಮೋಹಪರವಶ­ನಾಗುತ್ತಾನೆ. ಇದರಿಂದಾಗಿ ಸೂರ್ಯ ತನ್ನ ಸಹಚರ ದೇವತೆಗಳಿಂದಲೇ ಬಹಿಷ್ಕಾರಕ್ಕೆ ಒಳಗಾಗುವನು.

ಸೂರ್ಯನು ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಪಾಪವನ್ನು ಕಳಕೊಳ್ಳಲು ಶಿವನನ್ನು ಕುರಿತು ತಪಸ್ಸು ಮಾಡಲು ದಂಡಕಾರಣ್ಯ ಸೇರುತ್ತಾನೆ. ನರ್ಮದಾ ನದಿಯಲ್ಲಿ ಸ್ನಾನ ಮಾಡಿ ನದಿಯಿಂದ ಲಿಂಗವೊಂದನ್ನು ತೆಗೆದುಕೊಂಡು ಸಾಧ್ಯವಾದಷ್ಟು ದೂರ ಪ್ರಯಾಣ ಮಾಡುವನು. ಮುಂದೆ ಸಾಗಲಾಗದೆ, ಪ್ರಯಾಣವನ್ನು ಮೊಟಕುಗೊಳಿಸಿ ಲಿಂಗ ಪ್ರತಿಷ್ಠಾಪಿಸುತ್ತಾನೆ. ಹೀಗಾಗಿ, ಸೂರ್ಯ ಪ್ರತಿಷ್ಠಾಪಿಸಿದ ಲಿಂಗ ಅರ್ಕೇಶ್ವರ ಎಂದಾಯಿತಂತೆ. ಇದುವೇ ಮೈಸೂರು ಸನಿಹದ ಎಡತೊರೆಯ ಅರ್ಕೇಶ್ವರ ದೇವಾಲಯ ಎಂಬುದು ಪುರಾಣ ಕತೆ.

ಅರ್ಕೇಶ್ವರ ದೇವಾಲಯದ ಸಮೀಪ 9ನೇ ಶತಮಾನದ ಗಂಗರ ಶಾಸನ ದೊರೆತಿದೆ. ಅಂಗೈಕಾರನ್‌ ಎಂಬಾತ ಈಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಕೊಟ್ಟ. ನಂತರ 11ನೇ ಶತಮಾನದಲ್ಲಿ ರಾಜೇಂದ್ರ ಚೋಳ ಈ ಪ್ರದೇಶವನ್ನು ವಶಪಡಿಸಿಕೊಂಡನು. ಈ ಕಾಲದಲ್ಲಿ ಮೀನಾಕ್ಷಿ ಅಮ್ಮನವರ ದೇಗುಲವನ್ನು ನಿರ್ಮಿಸಿರಬಹುದೆಂದು ಹೇಳಲಾಗಿದೆ. ದೇವಾಲಯವು ಚೋಳರ ಕಾಲದಲ್ಲಿಯೇ ಬಹುತೇಕ ನಿರ್ಮಾಣವಾಗಿದೆ ಎನ್ನಲಾಗಿದೆ. ಮೈಸೂರು ಅರಸರ ಕಾಲದಲ್ಲಿ ಪ್ರವೇಶ ದ್ವಾರ ರಾಜಗೋಪುರ ನಿರ್ಮಾಣವಾಗಿದ್ದು, 5 ಅಂತಸ್ತುಗಳ ಗೋಪುರದಲ್ಲಿ ದ್ವಾರಪಾಲಕರ ಗಾರೆಯ ಶಿಲ್ಪಗಳು ಅತ್ಯಾಕರ್ಷಕವಾಗಿವೆ. ಮೇಲ್ಭಾಗದಲ್ಲಿ ಪಂಚಕಲಶ ಹಾಗೂ ಕೊಂಬುಗಳಿವೆ.

ಗರ್ಭಗುಡಿಯಲ್ಲಿ ಅರ್ಕೇಶ್ವರನ ಶಿವಲಿಂಗವಿದೆ. ಒಳಾಂಗಣದ ಸುತ್ತಲೂ 40 ಲಿಂಗಗಳಿದ್ದು, ಮೂಲ ಶೈವಾಗಮದ ರೀತಿಯಲ್ಲಿ ಇಲ್ಲಿ ನಿತ್ಯವೂ ಪೂಜೆ ನಡೆಯುತ್ತಿದೆ. ದೇವಾಲಯದ ಪ್ರಾಕಾರದಲ್ಲಿ ಮೀನಾಕ್ಷಿ ಅಮ್ಮನವರ ಗುಡಿ ಇದ್ದು, ದೇವಾಲಯದ ಮುಂದೆ ಮಂಟಪ, ಗರುಡಗಂಭವಿದೆ. ಪ್ರತಿವರ್ಷ ಶಿವರಾತ್ರಿಯಂದು ಬೆಳಗ್ಗೆ ಸೂರ್ಯನ ಕಿರಣಗಳು ಗರ್ಭಗುಡಿಯ ಅರ್ಕೇಶ್ವರ ಲಿಂಗದ ಮೇಲೆ ಬೀಳುವುದನ್ನು ಕಾಣಲು ಜನರು ಆಗಮಿಸುವರು. ರಥಸಪ್ತಮಿಯಂದು ರಥೋತ್ಸವವು ವಿಜೃಂಭಣೆಯಿಂದ ಜರುಗುವುದು.

ದರುಶನಕೆ ದಾರಿ…: ಎಡತೊರೆಯು ಮೈಸೂರು- ಹಾಸನ ರಾಜ್ಯ ಹೆದ್ದಾರಿಯ ಲ್ಲಿದ್ದು, ಕೃಷ್ಣರಾಜನಗರದಿಂದ 3 ಕಿ.ಮೀ ದೂರದಲ್ಲಿದೆ. ಬಸ್‌ ಹಾಗೂ ಆಟೋ ಸೌಲಭ್ಯಗಳಿವೆ.

* ಸಿದ್ದೇಶ್‌ ಸಣ್ಣಗಿರಿ

ಟಾಪ್ ನ್ಯೂಸ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.